Posts

Showing posts from November, 2020

ಆಳ್ವಿಕೆ (ಕವನ -61)

ಸೃಷ್ಟಿಯಕುರಿತು ಎಳ್ಳಷ್ಟೂ ಅರಿಯದ ನಾವು ಬ್ರಹ್ಮಾಂಡ ಆಳುವಂತೆ ನಡೆದುಕೊಳ್ಳುತ್ತೇವೆ! ನಾಳೆಯಬಗ್ಗೆ ಏನೆಂದು ತಿಳಿಯದ ನಾವು ಪ್ರಪಂಚ ಹಿಡಿದುಕೊಂಡಂತೆ  ನಟನೆಮಾಡುತ್ತೇವೆ! ಮಾನವ ಜನ್ಮ ಶ್ರೇಷ್ಠವೆನ್ನುವ ನಾವು ಮನುಷತ್ವ ಮರೆತು ಜೀವನ ಮಾಡುತ್ತಿದ್ದೇವೆ?      ✍️ ಮಾಧವ ಅಂಜಾರು 🌷   

ಮಲ್ಲಿಗೆ ಕವನ -63)

ಆ ಹಂಸ ನಡುಗೆ ಪ್ರೀತಿಯ ಮುಗುಳ್ನಗೆ ನೀ ಹಾಕುವ ಹೆಜ್ಜೆಗೆ ಹೃದಯ ಹಾಡಿತು ಮೆಲ್ಲಗೆ ಕಣ್ಣ ನೋಟದ ಬಗೆ ಬಿಚ್ಚುಮನಸಿನ ನಾಚಿಕೆ ಸದ್ದಿಲ್ಲದೇ ಬಂದುಸೇರಿದೆ ಬಯಕೆಗಳು ಬಗೆ ಬಗೆ ಚಂದಿರನ ಮೊಗ ನಿನಗೆ ಸೂರ್ಯನ ಹೊಳಪು ಹೇಗೆ ಬಂದು ಬಿಡೆಯ ಮಲ್ಲಿಗೆ ಚೆಲುವೆ ನೀ ಎನ್ನ ಸಂಪಿಗೆ       ✍️ಮಾಧವ ಅಂಜಾರು 🌷

ವರ್ತನೆ (ಕವನ -64)

ವರ್ತನೆ ಸರಿಯಿರದಿದ್ದರೆ ಯಾವ ಸ್ಥಾನವಿದ್ದರೇನು? ನರ್ತನ ಅರಿಯದಿದ್ದರೆ ತಾಳದ ಅಗತ್ಯವೇನು? ಜವಾಬ್ದಾರಿ ತಿಳಿಯದಿದ್ದರೆ ಬದುಕಿಗೆ ಅರ್ಥವೇನು ? ಅಹಂಕಾರ ತುಂಬಿದ್ದರೆ ಕನಸಿಗೆ ಅರ್ಥವೇನು? ಮಾತು ಅರಿಯದಿದ್ದರೆ ವಿದ್ಯೆಯ ಬೆಲೆಯೇನು? ಸರಿತಪ್ಪು ತಿಳಿಯದಿದ್ದರೆ ಮಾನವಜನ್ಮ ಬೇಕೇನು?     ✍️ಮಾಧವ ಅಂಜಾರು 🌷

ಚಿಂತೆ ಚಿಂತೆ (ಕವನ -65)

ಮದುವೆಯಾದವರು ಯಾಕಪ್ಪ ಮದುವೆಯಾದೆ ಅಂತ ಗುಣುಗಬೇಡಿ ಮದುವೆಯಾಗದವರು ಮದುವೆಯಾಗಲಿಲ್ಲ ಎಂದು ಚಿಂತಿಸಬೇಡಿ! ಮಕ್ಕಳಾಗದವರು ಮಕ್ಕಲಿಲ್ಲ ಎಂಬ ಚಿಂತೆಯಲಿ ಮುಳುಗಬೇಡಿ ಮಕ್ಕಳಿದ್ದವರು ಹೆಣ್ಣು ಗಂಡೆಂದು ಆಯ್ಕೆಗೆ ತೊಡಗಬೇಡಿ ಕೈಹಿಡಿದವರು ಬಿಟ್ಟುಬಿಟ್ಟರೆಂದು ದಿನಾ ಮರುಗಬೇಡಿ! ನಿಮ್ಮ ಒಳ್ಳೆತನವ ಮತ್ತವರಿಗೆ ಮಾರಿಬಿಡಬೇಡಿ ಸತ್ಯವಂತನಾಗಿ ಬದುಕಲು ಹಿಂಜರಿಯಬೇಡಿ ನಮ್ಮನ್ನು ಕಾಯುವವನೊಬ್ಬ ಇದ್ದಾನೆ ಮರೆಯಬೇಡಿ!           ✍️ಮಾಧವ ಅಂಜಾರು 🙏

ಗೋಡೆ (ಕವನ -66)

ಬಿಳಿಯಾದ ಕೂದಲಿಗೆ ಬಣ್ಣ ಹಚ್ಚೋರು ನಾವು ಬಿಳಿಯಾಗಿರೋ ಮನಸಿಗೆ ಮಸಿಬಳಿಯೋರು ನಾವು ಕೊಳೆಯಾದ ಗೋಡೆಗೆ  ಸುಣ್ಣ ಬಳಿಯೋರು ನಾವು ಹಳೆಯದಾದ ಕಟ್ಟಡಕೆ  ಬಣ್ಣ ಹಾಕೋರು ನಾವು ನೋವಾಗಿರೋ ಮನಸಿಗೆ ಬರೆ ಎಳೆಯೋರು ನಾವು ದಣಿದಿರೋ ಜೀವಕೆ ತುಳಿಯೋರು ನಾವು ನಿಜವಾದ ಮಾನವೀಯತೆ ಮರೆತವರು ನಾವು ಮನುಜನ ಸ್ಥಾನಕೆ ಕಲ್ಮಶವೇ ನಾವು?       ✍️ಮಾಧವ ಅಂಜಾರು 🌷

ಮುಗಿಯದಷ್ಟು (ಕವನ -67)

  ಮನುಷ್ಯನ ಆಯಸ್ಸು ಕಡಿಮೆಯಾಗುತಿದ್ದಂತೆ ಆಸೆಗಳು ಸಾವಿರಾರು ವರುಷ ಬದುಕುವಂತೆ ಮುಗಿಯದಷ್ಟು! ಮನುಷ್ಯನ ಪ್ರೀತಿ ಕಡಿಮೆಯಾಗುತಿದ್ದಂತೆ ಪಾಪಗಳು ಸಾವಿರಾರು ವರುಷ ಕಳೆದರೂ ಮುಗಿಯದಷ್ಟು!    ✍️ಮಾಧವ ಅಂಜಾರು 🌷

ಪ್ರೋತ್ಸಾಹ (ಕವನ -68)

ಮೊತ್ತೊಬ್ಬರ ಬಗ್ಗೆ ಹೇಳುವುದಾದರೆ ಒಳ್ಳೆಯ ಗುಣಮಾತ್ರ ಹೇಳಿ ಮತ್ತೊಬ್ಬರ ಬಗ್ಗೆ ತೆಗಳುವುದಾದರೆ ನಿಮ್ಮ ಮನಸೊಳಗೆ ವಿಮರ್ಶಿಸಿಕೊಳ್ಳಿ! ನಿಮಗೊಬ್ಬರು ಕೆಟ್ಟದನ್ನು ಮಾಡಿದ್ದರೆ ಅವರಷ್ಟಕ್ಕೆ ಬಿಟ್ಟುಬಿಡಿ ಒಳಿತನ್ನು ಮಾಡಿದ್ದರೆ ಅವರೊಂದಿಗೆ ಇದ್ದುಬಿಡಿ ತೆಗಳುವವನಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಬೆನ್ನು ತಟ್ಟಿ ಪ್ರೋತ್ಸಾಹಿಸುವವನ ಮರೆಯಲೇಬೇಡಿ!       ✍️ಮಾಧವ ಅಂಜಾರು 🌷

ದಾನ ಮಾಡಿ (ಕವನ -69)

  ದಾನ ಮಾಡಿ ********** ಹಲ್ಲಿರುವಾಗ ನಕ್ಕುಬಿಡಿ ಹಲ್ಲಿಲ್ಲದಾಗ ಚಿಂತೆಬಿಡಿ ಹಲ್ಲಿರುವಾಗ ತಿನ್ನಲಿಚ್ಚಿಸಿದನು ಆವಾಗಲೇ ತಿಂದುಬಿಡಿ ಕೈಯಲಿ  ಬಲವಿರುವಾಗ ದಾನಗಳನು ಮಾಡಿಬಿಡಿ ಬಾಯಿ ತೊದಲುವ ಮುನ್ನ ಒಳಿತನ್ನಾದರೂ ಮಾತಾಡಿ ಪ್ರೀತಿಯಿದ್ದರೆ ತೋರಿಸಿಬಿಡಿ ಸಿಟ್ಟಿದ್ದರೆ ಹೇಳಿಬಿಡಿ ಏನೂ ಇಲ್ಲದಿದ್ದರೂ ಸಂಸ್ಕಾರ ಉಳಿಸಿಬಿಡಿ         ✍️ಮಾಧವ ಅಂಜಾರು 🌷

ವಿಚಾರ (ಕವನ -70)

  ವಿಚಾರ ****** ಬದುಕಿರುವಾಗ ಹೇಗಿದ್ದೀಯ? ಎಂದು ಕೇಳದವರು ಸತ್ತಾಗ ಹೇಗೆ ಸತ್ತ ಎಂದು ಕೇಳಿಬಿಟ್ಟರು! ಹಸಿವಾದಾಗ ಊಟ ಮಾಡಿದಿಯಾ ಎಂದು ಕೇಳದವರು ಊಟ ಮಾಡಿದಾಗ ಊಟವಾಯಿತ? ಎಂದು ಕೇಳಿಬಿಟ್ಟರು! ಹಣವಿಲ್ಲದಾಗ ಹಣ ಬೇಕಾ ಎಂದು ಕೇಳದವರು ಹಣಗಳಿಸಿದಾಗ ಹೆಣವಾಗುವವರೆಗೆ ಕಾಯ್ದುಬಿಟ್ಟರು!              ✍️ಮಾಧವ ಅಂಜಾರು 🌷

ಮಾತು (ಕವನ -71)

  ಮಾತು ***** ಮುತ್ತಿನಂತಹ  ಮಾತು ಹೆಚ್ಚುಮಾಡಿದಾಗ ಮುತ್ತಿನ ಹೊಳಪು ಮುಖದಲಿ, ಸುತ್ತಿ ಬಳಸುವ ಮಾತು ಅತಿಯಾದಾಗ ಕತ್ತಲೆ ಜಗತ್ತು ಸುತ್ತಲಲಿ, ಮಿತ ಮಾತು ಹಿತ ನೀಡುವುದು ಸಹಜ ಅತಿಮಾತು ಮತಿ ಕೆಡಿಸುವುದು ನಿಜ ಹೆಚ್ಚಾಗಿ ಬೇಡ ಮನುಜ ಮಾತು ತಪ್ಪಬೇಡ ಪ್ರತಿನಿಮಿಷ        ✍️ಮಾಧವ ಅಂಜಾರು 🌷

ಭಾಗ್ಯ (ಕವನ -72)

  ಭಾಗ್ಯ ***** ನೀನೆನ್ನ ಗೆಳೆಯನಾಗಿದ್ದರೆ ಅದೆನ್ನ ಭಾಗ್ಯ ನೀನೆನ್ನ ಗೆಳತಿಯಾಗಿದ್ದರೆ ಅದೂ ಎನ್ನ ಸೌಭಾಗ್ಯ, ನೀ ಎನ್ನ ಪ್ರೀತಿಸುತಿದ್ದರೆ ಅದೆನ್ನ ಭಾಗ್ಯ ನೀ ಎನ್ನ ದ್ವೇಷಿಸುತಿದ್ದರೆ ಅದೆನ್ನ ದೌರ್ಭಾಗ್ಯ, ನೀನೆನ್ನ ರಕ್ಷಕನಾಗಿದ್ದರೆ ಅದೂ ದೊಡ್ಡ ಭಾಗ್ಯ ನೀನೆನ್ನ ಪ್ರೇಕ್ಷಕನಾಗಿದ್ದರೆ ನಾ ಪಡೆದ ಭಾಗ್ಯ        ✍️ಮಾಧವ ಅಂಜಾರು 🌷

ಭೂಷಣ (ಕವನ -73)

  ಭೂಷಣ ****** ಎನ್ನ ನೆಮ್ಮದಿ ಕಳೆಯುವವರ ನೆಮ್ಮದಿ ಕೆಡಿಸಲಾರೆ ಎನ್ನ ನಗು ನಿಲ್ಲಿಸುವವರ ನಗು ನಿಲ್ಲಿಸಲಾರೆ! ಎನ್ನ ಬೆಳೆಸಿ ಉಳಿಸಿದವರ ಎಂದಿಗೂ ಮರೆಯಲಾರೆ ಎನ್ನ ನಂಬಿ ಇರುವವರ ಎಂದೆಂದೂ ಬಿಡಲಾರೆ! ಎನ್ನತನವು ಎನಗೆ ಭೂಷಣ ಎನ್ನ ತಂದೆ ತಾಯಿಯ ಪ್ರೀತಿ ಉಳಿಸುತಲಿದೆನ್ನ ಪ್ರಾಣ ನನ್ನೊಂದಿಗೆ ಇರಲಿ ದೇವ ಗುಣ!     ✍️ಮಾಧವ ಅಂಜಾರು 🙏

ಪರದೇಶದ ತುತ್ತು (ಲೇಖನ - 47)

 ಪರದೇಶದ ತುತ್ತು ***************  ನಾವಂದುಕೊಂಡಂತೆ ಪ್ರಪಂಚವಿಲ್ಲ, ಜೀವನ ಬೇವು ಬೆಲ್ಲ ಇವೆಲ್ಲ ಹೇಳುವುದಕ್ಕೆ ಕೇಳುವುದಕ್ಕೆ ಬಹಳ ಸುಲಭವಾಗಿದ್ದರೂ ಕೂಡ ಈ ಮಾತು  ಅದೆಷ್ಟು ಒಳಾರ್ಥವನ್ನು ಹೊಂದಿರುತ್ತದೆ. ಜೀವನ ಸಾಗಿಸಲು ಹುಟ್ಟಿದಂದಿನಿಂದ ಪ್ರಯತ್ನ ಪ್ರಯತ್ನ ಪ್ರಯತ್ನ, ಕೆಲವರು ಹುಟ್ಟುವಾಗಲೇ ಬಡತನ ಹೊಂದಿದ್ದರೆ ಕೆಲವರು ಹುಟ್ಟಿದಾಗಲೇ ಐಶ್ವರ್ಯವನ್ನು ಹೊಂದಿರುತ್ತಾರೆ. ಐಶ್ವರ್ಯ ಇದ್ದರೂ ಇರದಿದ್ದರೂ ದುಡಿಮೆ ಅನ್ನೋದು ಪ್ರತಿಯೊಂದು ಮಾನವನ ಕರ್ತವ್ಯ. ದುಡ್ಡಿರುವ ಮನುಷ್ಯ ದುಡಿಯದಿದ್ದರೆ ಅವನ ಗೌರವವನ್ನು ಅವನೇ ಕಳೆದುಕೊಳ್ಳುತ್ತಾನೆ, ಬಡತನದಲ್ಲಿರುವ ಮನುಷ್ಯ ದುಡಿಯದಿದ್ದರೆ ತುತ್ತು ಅನ್ನಕ್ಕೆ ಪರದಾಡುವ ಸ್ಥಿತಿ ಜಾಸ್ತಿಯಾಗಿರುತ್ತದೆ.  ಕೆಲವೊಂದು ವಿಷಯಗಳು ಸತತ ಪ್ರಯತ್ನ ಗುರಿಯೊಂದಿಗೆ ನಡೆದು  ಬಿಟ್ಟರೆ,  ಇನ್ನು ಕೆಲವು ವಿಷಯಗಳು ನಮಗರಿವಿಲ್ಲದಂತೆಯೇ ಬಂದುಬಿಡುತ್ತದೆ. ಒಂದಲ್ಲ ಒಂದು ರೀತಿಯಲ್ಲಿ ಪ್ರಯತ್ನವನ್ನು ಮಾಡುತ್ತಿದ್ದರೆ ಜೀವನದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಯಶಸ್ಸು ಸಿಗದಿದ್ದರೂ ಜೀವನ ಮುಗಿಸುವಲ್ಲಿ ಸಶಕ್ತರಾಗುತ್ತೇವೆ. ಪರದೇಶ ಪಯಣ ದುಡಿಮೆಗಾಗಿ ಮಾಡಿದ್ದರೆ,  ಇಷ್ಟವಿದ್ದು ಇಷ್ಟವಿಲ್ಲದೆ ನಡೆದ ಪಯಣ ವಾಗಿರಬಹುದು. ಹೊರ ದೇಶವೆಂದರೆ ಅನ್ನಕೊಡುವ ದೇಶವಾದರೂ ಗಳಿಸುವ ಅನ್ನಕ್ಕಾಗಿ  ಪರಿತಪಿಸುವ ಪರಿ ಅದೆಷ್ಟು ಕಷ್ಟ ನೋವುಗಳನ್ನು ಹೊಂದಿರುತ್ತದೆ. ನೋಡುವವರ ಕಣ್ಣಿಗೆ ಹೊರ ದೇಶವೆಂದು ಅದ್ದೂರಿಯಾಗಿ ಕಂಡರು ಕಡಲಾಚೆ