( ಲೇಖನ -122) ಭೂ - ಕೈಲಾಸ

(ಲೇಖನ -122) ಭೂ - ಕೈಲಾಸ, ಕಲಾ ವೈಭವ - ಕುವೈತ್ ಕನ್ನಡ ಕೂಟದಿಂದ ಆಯೋಜಿಸಲ್ಪಟ್ಟ  ದಾಸೋತ್ಸವ ಶೇಕಡಾ ನೂರರಷ್ಟು ಮನ ತಣಿಸಿತು, ಕಲಾ ಮಾತೆಯರು , ಕಲಾಗಾರರು ರೋಮಾಂಚನಗೊಳಿಸಿದ ದೃಶ್ಯಗಳ ಹಿಂದೆ ಸದ್ದಿಲ್ಲದೇ ಶ್ರಮವಹಿಸಿದ "ಶ್ರೀ ಸತೀಶ್ ಆಚಾರ್ಯ "ಇವರ ನಿರ್ದೇಶನ ಪ್ರೇಕ್ಷಕವರ್ಗದ ಹುಬ್ಬೆರಿಸಿತ್ತು,  ಭೂ ಕೈಲಾಸದ ಪ್ರತಿಯೊಂದು ಭಾಗ ಚಪ್ಪಾಳೆಯೊಂದಿಗೆ ಮುಂದುವರಿಯುತಿತ್ತು. ಆರಂಭದಿಂದ ಕೊನೆಯವರೆಗೂ ಅಚ್ಚುಕಟ್ಟಾಗಿ ನಡೆದ ಕಾರ್ಯಕ್ರಮ ಚಿಣ್ಣರಿಂದ ಹಿರಿಯರವರೆಗೂ ಬಹಳಷ್ಟು ಸ್ಪಷ್ಟ ಮತ್ತು ಸಂತಸದ ವಾತಾವರಣದಿಂದ ಕೂಡಿತ್ತು.



       ರಾಮಾಯಣ, ಮಹಾಭಾರತದ ತುಣುಕುಗಳೊಂದಿಗೆ,ಭಕ್ತಿ ಮತ್ತು ರಸದೌತಣದ ಹಬ್ಬ ಕುವೈಟ್ ಕನ್ನಡ ಕೂಟದ ಮೆರುಗನ್ನು ಇನ್ನಷ್ಟು ಹೆಚ್ಚುಗೊಳಿಸಿತ್ತು. ಬಣ್ಣ ಬಣ್ಣದ ಉಡುಗೆ ತೊಡುಗೆ, ಪರಸ್ಪರರ ನಗು ಮುಖದ ಸಂಧರ್ಭಗಳೊಂದಿಗೆ ಕಾರ್ಯಕ್ರಮ ತೆರೆಕಂಡಿತು. ಇಲ್ಲಿ ಆಡಳಿತ ಮಂಡಳಿ, ಸರ್ವ ಸದಸ್ಯರ ನಿಸ್ವಾರ್ಥ ಸೇವೆ ಕನ್ನಡ ಕೂಟದ ಗೌರವ ದ್ವಿಗುಣಗೊಳಿಸುತ್ತಲೇ ಇದೆ. ಪ್ರತಿಯೊಬ್ಬರಲ್ಲೂ ಕಲೆಎಂಬುದಿದೆ ಹಾಗಾಗಿ ಪ್ರತೀ ಸದಸ್ಯರು ಮತ್ತು ಅವರ ಮಕ್ಕಳೂ ಒಂದಲ್ಲ ಒಂದು ರೀತಿಯಲ್ಲಿ ಭಾಗವಹಿಸಿ ಕಲೆಯನ್ನು ಉಳಿಸಿ ಬೆಳೆಸಲು ಸಹಾಯವಾಗುತ್ತಿದ್ದಾರೆ. ಭಜನೆ, ನಿರೂಪಣೆ, ಸಾತ್ವಿಕ ಆಹಾರ ಎಲ್ಲವೂ ಅಚ್ಚುಕಟ್ಟಾಗಿ ನಡೆದು ಕೂಟದ ಶಿಸ್ತನ್ನು ತೋರಿಸುತಿತ್ತು.



        ಬಾಲ್ಯದ ಸಮಯದಲ್ಲಿ ಕೇಳುತಿದ್ದ ಹರಿಕಥೆಯನ್ನು ವಿಶೇಷ ರೀತಿಯಲ್ಲಿ ಪ್ರಸ್ತುತ ಪಡಿಸಿ, ಹರಿಕಥೆಯನ್ನು ಕಣ್ಣೆದುರಿಗೆ ತಂದು ತೋರಿಸಿದ ಅದ್ಭುತ ಕ್ಷಣಗಳು ಇವಾಗಲೂ ಕಣ್ಮುಂದೆ ಇದೆ, ಮತ್ತು ಮರೆಯಲಾಗದ ಸಂಧರ್ಭ ಕೂಡ. ಒಬ್ಬ ನಿರ್ದೇಶಕನ ಆಲೋಚನೆ, ಅದಕ್ಕೆ ಬೇಕಾಗುವ ಪರಿಕಲ್ಪನೆ, ಸಮಯ, ಶ್ರಮ ಎಲ್ಲವನ್ನೂ ನಿಯತ್ತಿನಿಂದ ಮಾಡಿದ ಪ್ರತಿಫಲ ಪ್ರೇಕ್ಷಕರನ್ನು ಎದ್ದು ನಿಲ್ಲುವಂತೆ ಮಾಡಿತು. ಭಾಗವಹಿಸಿದ ಪ್ರತೀ ಸದಸ್ಯರು ತಮ್ಮ ಸಂಪೂರ್ಣ ಶಕ್ತಿಯನ್ನು ಉಪಯೋಗಿಸಿ ಕಾರ್ಯಕ್ರಮವನ್ನು ಜಯವಾಗಿಸಿದ್ದಾರೆ. 



       ರಕ್ತೇಶ್ವರಿ ಯ ನರ್ತನ, ಶಿವ ಪಾರ್ವತಿ, ಮಂಡೋಧರಿ ರಾವಣ ರ ಮುಖ್ಯ ಪಾತ್ರ, ನಾರದ ಮುನಿಯ ನಡೆ, ಮಾಯೆಯ ಚಾಣಕ್ಷತೆ ಭೂ ಕೈಲಾಸವನ್ನು ಶೃಷ್ಟಿಸಿದ ರೀತಿ ಇದೆಲ್ಲವೂ ಪ್ರತೀ ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದಂತೆ ಮಾಡಿತು. ಗೋಕರ್ಣ ಕ್ಷೇತ್ರದ ಶಿವ ಲಿಂಗ ಸಾಕ್ಷಾತ್ ಶಿವ ದೇವರ ನೆಲೆಎಂಬುದನ್ನು ಇನ್ನಷ್ಟು ಮನವರಿಕೆ ಮಾಡಿಸಿದ ಎಲ್ಲಾ ಕಲಾಗಾರರಿಗೆ ಮತ್ತು ನಿರ್ದೇಶಕರಿಗೆ ಮತ್ತೊಮ್ಮೆ ಅಭಿನಂದನೆಗಳು. 



      ಭಕ್ತಿ ಪರವಶನಾಗಿಸಿದ ಭಜನಾ ಕಾರ್ಯಕ್ರಮ, ಸುಮಧುರ ಕಂಠದ ಪ್ರತೀ ಗಾಯಕರು ಹಾಗೂ ಹೊಸ ಭಜನೆಗೆ ಸಾಹಿತ್ಯ ನೀಡಿದ ಶ್ರೀ ತಾರೇಂದ್ರ ಶೆಟ್ಟಿಗಾರ್, ಹಾರ್ಮೋನಿಯಂ ಮತ್ತು ಉತ್ತಮ ನಿರ್ದೇಶಕ ಶ್ರೀ ಸುರೇಶ ಸಾಲ್ಯಾನ್ ಇವರ ಸಹಾಯದೊಂದಿಗೆ ಪ್ರದರ್ಶನಗೊಂಡಿತು.




          ಕನ್ನಡ ಮಣ್ಣಿನ ಕಂಪನು ಸೂಸುವ ಕುವೈಟ್ ಕನ್ನಡ ಕೂಟ, ಕನ್ನಡಾಂಬೆಯ ಆಶೀರ್ವಾದವನ್ನು ಇನ್ನಷ್ಟು ಪಡೆಯಲಿ. ಎಲ್ಲಾದರೂ ಇರು ಎಂತಾದರು ಇರು ಎಂದೆದಿಗೂ ನೀ ಕನ್ನಡವಾಗಿರು, ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಎಂಬಂತೆ ನಡೆಯುತ್ತಿರುವ, ಕುವೈಟ್ ಕನ್ನಡ ಕೂಟಕ್ಕೆ ಜಯವಾಗುತ್ತಲೆ ಇರಲಿ.

          ✍🏿ಮಾಧವ. ಕೆ. ಅಂಜಾರು 

        

          

Comments

Post a Comment

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.

(ಲೇಖನ -100), "ಕುವೈಟ್ ಕಲಾ ಮಾಣಿಕ್ಯ" ಒಬ್ಬ ಕಲಾಗಾರನ ನಿಜವಾದ ಜೀವನ ಕ್ರಮ, ಶ್ರಮ ಮತ್ತು ಸಾಧನೆಯ ಹಾದಿ, ಕಲೆ ಎಂಬುವುದು ಎಲ್ಲರಿಗೂ ಒಲಿಯುವುದಿಲ್ಲ ಆದರೆ ಒಂದಲ್ಲ ಒಂದು ರೀತಿಯ ಕಲೆಯ ಶಕ್ತಿ ಪ್ರತಿಯೊಬ್ಬರಲ್ಲೂ ಇರುತ್ತದೆ