Posts

Showing posts from September, 2023

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

Image
✍️Madhav. K. Anjar ನನ್ನ ಹೃದಯ ಹಗುರಗೊಳಿಸಲಷ್ಟೇ..... ನೋವನ್ನು ಮರೆಸಿ ನನ್ನನ್ನು ನಾನು ಉಳಿಸುತ್ತ ಮಗುವಿನ ಅಗಲುವಿಕೆಯ ಸಾಂತ್ವನ ಬಿಟ್ಟು ಮತ್ತೇನು ಸಾಧ್ಯ ಭಗವಂತ 🙏🏿ಕ್ಷಮಿಸು.  (ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ! ನೀವೆಲ್ಲರೂ ಕ್ಷೇಮವಾಗಿರಿ, ದೇವರು ನನ್ನನ್ನು ಬಹಳವಾಗಿ ಇಷ್ಟಪಟ್ಟ ನನಗೆ ಆತನ ಪಾದ ಸೇರಲು ಅವಕಾಶ ಕೊಡಿ.... ನಾನೆಲ್ಲಿದ್ದರೂ ನಿಮ್ಮೊಳಗಿರುವೆ, ಬೇಸರ ಬೇಡ, ನನ್ನ ಅಪ್ಪ ಅಮ್ಮನ ಹೃದಯದಲ್ಲಿ ಹಾಯಾಗಿರುವೆ, ಅವರು ತಂದು ಕೊಟ್ಟ ಪ್ರತೀ ಉಡುಗೊರೆ, ಎಲ್ಲವೂ ನನಗೆ ತುಂಬಾ ಖುಷಿ ಕೊಟ್ಟಿದೆ,  ಆದರೇನು ಮಾಡಲಿ ದೇವರು ಸುಮಾರು ತಿಂಗಳ ಹಿಂದೆಯೇ ಬರಹೇಳುತಿದ್ದ,   ಬರಲಾರೆ ಎಂದು ಹೇಳಿದರೂ ಕೇಳಲಿಲ್ಲ ಕರೆದುಬಿಟ್ಟ. ಆ ಪುಟ್ಟ ಹೆಜ್ಜೆಗಳನ್ನೀಡುತ್ತ, ಅಂಗಳದಲ್ಲಿ ಅಣ್ಣ ತಮ್ಮ ತಂಗಿಯ ಜೊತೆಯಾಗಿ ಕಣ್ಣಮುಚ್ಚಾಲೆ, ಆಡಿದ ನೆನಪುಗಳು, ಅಪ್ಪ ಅಮ್ಮ ಗೆಳೆಯ ಗೆಳತಿಯರೊಂದಿಗೆ ಆಟವಾಡಿ ಸುಸ್ತಾಗಿ ರಾತ್ರಿ ಕನಸಲ್ಲೂ ನನ್ನ ಪ್ರೀತಿಯ ಎಲ್ಲರನ್ನು ನೋಡುತಿದ್ದೆ, ನಿಮ್ಮೆಲರ ನಗು ಆಶೀರ್ವಾದ ಚಿಕ್ಕ ನನ್ನ ಬದುಕಿನಲ್ಲಿ ಅಚ್ಚಳಿಯದೆ ಉಳಿಯಿತು. ನಾನೇನು ತೊಂದರೆ ಮಾಡಿದ್ದರೂ ಕ್ಷಮಿಸಿ...... ನನಗೆ ಕೊನೆಯ ಕ್ಷಣದಲ್ಲಿ ನೋವನ್ನು ತಡೆಯುವ ಶಕ್ತಿ ಆ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.

Image
✍️Madhav. K. Anjar  (ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್.   ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ. ಅಂತರಾಷ್ಟ್ರೀಯ ಮಟ್ಟದಲ್ಲಿ ದನಿಯಾಗತೊಡಗಿದ ಸೌಜನ್ಯ ಪರ ನ್ಯಾಯ ಹೋರಾಟ. ಈ ಹಿಂದಿನ ಲೇಖನದಂತೆ ಕಲೆಯೊಂದು ಶಕ್ತಿ, ವಿವಿಧ ಕಲೆ ವಿವಿಧ ರೂಪದಲ್ಲಿ ಜನರನ್ನು ತಲುಪುತ್ತದೆ ಮತ್ತು ಜನರನ್ನು ರಂಜಿಸಿ, ಉತ್ತಮವಾದ ಸಂದೇಶವನ್ನು ಮನಸ್ಸಿಗೆ ಮುಟ್ಟುವಂತೆ ಮಾಡುತ್ತದೆ.       ಒಂದು ಸುಂದರವಾದ ಕುಟುಂಬದಲ್ಲಿನ ಪ್ರೀತಿ, ಪ್ರೇಮ ಮತ್ತು ಮೊಬೈಲ್ ಬಳಕೆಯೊಂದಿಗೆ ಭಗ್ನ ಪ್ರೇಮಿಯ ಬಲೆಯಲ್ಲಿ ಸಿಕ್ಕಿ ಒಂದು ದುರಂತ ಅಂತ್ಯ ಕಂಡ ಹೆಣ್ಣು. ಹೌದು ಇದೆಷ್ಟೋ ಮನೆಯಲ್ಲಿ ನಡೆಯುವ ಘಟನೆಗಳು, ಕೆಲವೊಂದು ಪ್ರೇಮ ಪ್ರಕರಣಗಳು ಸುಖ ಅಂತ್ಯ ಕಂಡರೂ, ಹಲವಾರು ಪ್ರೇಮ ಪ್ರಕರಣಗಳು ದುರಂತ ಅಂತ್ಯ ಕಂಡಿರೋ ಘಟನೆಗಳು ಈ ಸಮಾಜದಲ್ಲಿ ನಡೆಯುತ್ತಿದೆ. ಪ್ರೀತಿಯ ಅಣ್ಣನ ಒಂದು ಮೊಬೈಲ್ ಕೊಡುಗೆ ತಂಗಿಯ ಜೀವನದಲ್ಲಿ ಬದಲಾವಣೆ, ಓದು ಬರಹ ಬದಿಗಿಟ್ಟು ಅಪರಿಚಿತನ ಪ್ರೇಮದ ಬಲೆಗೆ ಸಿಕ್ಕಿ ಕೊನೆಗೆ ಪ್ರೇಮಿಯಿಂದ ಮತ್ತು ಅವನ ಸ್ನೇಹಿತರಿಂದ ಅತ್ಯಾಚಾರ ಮತ್ತು ಹತ್ಯೆಯಾದ ಮುಗ್ದ

ಮುದ್ದಿನ ಚೆಂದುಳ್ಳಿ

ನಿನ್ನ ನೋಡಲು ಹಂಬಲವು ಎನಗೆ ನಿನ್ನ ಕಾಣಲು ಬಯಕೆಯು ಎನಗೆ ನೆನಪುಗಳ ಸೆರೆಯಲ್ಲಿ ಕನಸುಗಳ ಪುಟದಲ್ಲಿ ಹೃದಯದ ಮಾತುಗಳ ಆಲಿಸುವ ಸುಖವಿಲ್ಲಿ, ನಿನ ಕಣ್ಣುಗಳ ರೆಪ್ಪೆಯ ತುಂಟಾಟಕೆ ನಿನ್ನ ಹೆಜ್ಜೆಗುರುತುಗಳ ಹುಡುಕಾಟಕೆ ಚಡಪಡಿಕೆ ನನ್ನಲಿ ಬಳಿ ಬಂದು ನಿಲ್ಲೆಯ? ಮುದ್ದಿನ ಚೆಂದುಳ್ಳಿ!       ✍️ಮಾಧವ. ಕೆ. ಅಂಜಾರು 

(ಲೇಖನ -100), "ಕುವೈಟ್ ಕಲಾ ಮಾಣಿಕ್ಯ" ಒಬ್ಬ ಕಲಾಗಾರನ ನಿಜವಾದ ಜೀವನ ಕ್ರಮ, ಶ್ರಮ ಮತ್ತು ಸಾಧನೆಯ ಹಾದಿ, ಕಲೆ ಎಂಬುವುದು ಎಲ್ಲರಿಗೂ ಒಲಿಯುವುದಿಲ್ಲ ಆದರೆ ಒಂದಲ್ಲ ಒಂದು ರೀತಿಯ ಕಲೆಯ ಶಕ್ತಿ ಪ್ರತಿಯೊಬ್ಬರಲ್ಲೂ ಇರುತ್ತದೆ

Image
(ಲೇಖನ -100), "ಕುವೈಟ್ ಕಲಾ ಮಾಣಿಕ್ಯ"  ಒಬ್ಬ ಕಲಾಗಾರನ ನಿಜವಾದ ಜೀವನ ಕ್ರಮ, ಶ್ರಮ ಮತ್ತು ಸಾಧನೆಯ ಹಾದಿ, ಕಲೆ ಎಂಬುವುದು ಎಲ್ಲರಿಗೂ ಒಲಿಯುವುದಿಲ್ಲ ಆದರೆ ಒಂದಲ್ಲ ಒಂದು ರೀತಿಯ ಕಲೆಯ ಶಕ್ತಿ ಪ್ರತಿಯೊಬ್ಬರಲ್ಲೂ ಇರುತ್ತದೆ. ಕೆಲವರು ಕನಸಾಗಿ ತೆಗೆದುಕೊಂಡರೆ ಇನ್ನು ಕೆಲವರು ಹವ್ಯಾಸವಾಗಿ ತೆಗೆದುಕೊಂಡು ಬರ ಬರುತ್ತಾ ಬಹಳಷ್ಟು ಎತ್ತರಕ್ಕೆ ಬೆಳೆದು ಜೀವನದಲ್ಲಿ ದೊಡ್ಡ ಸಾಧನೆಯನ್ನು ಮಾಡುತ್ತಾರೆ. ಒಂದು ಕಡೆಯಲ್ಲಿ ಆತ್ಮ ತೃಪ್ತಿ,ಒಂದು ಕಡೆಯಲ್ಲಿ ಸಾಧನೆಯ ಮೆಟ್ಟಿಲು ಹತ್ತುವ ಖುಷಿ. ಇವೆರಡನ್ನು ಗಳಿಸಲು ಪ್ರತಿಯೊಬ್ಬ ಕಲಾಸಕ್ತಿಯ ವ್ಯಕ್ತಿ ತನ್ನ ಸಮಯವನ್ನು ಯಾವ ರೀತಿಯಲ್ಲಿ ಉಪಯೋಗಿಸುತ್ತಾರೆ ಅನ್ನುವುದನ್ನು ಯೋಚಿಸಲು ಸಾಧ್ಯವಿಲ್ಲ. ನಿಮಗೆ ಸಮಯ ಎಲ್ಲಿ ಸಿಗುತ್ತದೆ? ನೀವು ಇದನ್ನೆಲ್ಲಾ ಹೇಗೆ ಮಾಡುತ್ತೀರಿ ಎಂದು ಕೇಳುವ ಕೆಲವು ಜನರು ಪ್ರತ್ಯಕ್ಷ ಮತ್ತು ಪ್ರೋತ್ಸಾಹ ಕೊಟ್ಟು ಕಲೆಯನ್ನು ಮತ್ತು ಕಲಾಗಾರರನ್ನು ಬೆಳೆಸುತ್ತಾರೆ ಮತ್ತು ಉಳಿಸುತ್ತಾರೆ.         ಕುವೈಟ್ ಎಂಬ ಮರುಭೂಮಿಯಲ್ಲಿ, ಕೇವಲ ಕೆಲವೇ ಪಟ್ಟಣ, ಅದರೊಳಗೆ ಹುದುಗಿರುವ ಕಲೆಗಾಗಾರರು, ಹಲವಾರು ಸಂಘಟನೆಗಳು ಏರ್ಪಡಿಸುವ ಕಾರ್ಯಕ್ರಮಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಪಡುವ ಖುಷಿ ಬಹಳಷ್ಟು ಇದೆ. ಕಥೆ, ನಿರೂಪಣೆ, ಬರಹ, ನೃತ್ಯ, ನಟನೆ, ಚಿತ್ರ, ಇಂತಹ ಅನೇಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಸಮಾಜದ ನೆಮ್ಮದಿಗೆ ಕಾರಣರಾಗುವ ಈ ಪ್ರತೀ ಕಲಾವಿದರಿಗೆ ನಾವು ತಲೆ

(ಲೇಖನ -99)ಭಾರತದ ಕೃಷಿ ಪದ್ಧತಿ ಹವಾಗುಣಗಳಿಗೆ ಅನುಸಾರವಾಗಿ ಮಾತ್ರ ಕೃಷಿ ಬೆಳೆಯುವುದನ್ನು ಹೆಚ್ಚಾಗಿ ಅವಲಂಬಿತವಾಗಿದೆ

✍️Madhav. K. Anjar   (ಲೇಖನ - 99) ಭಾರತದ ಕೃಷಿ ಪದ್ಧತಿ ಹವಾಗುಣಗಳಿಗೆ ಅನುಸಾರವಾಗಿ ಮಾತ್ರ ಕೃಷಿ ಬೆಳೆಯುವುದನ್ನು  ಹೆಚ್ಚಾಗಿ ಅವಲಂಬಿತವಾಗಿದೆ. ಭಾರತದ ಕೃಷಿ ಮತ್ತು ಜಪಾನ್ ದೇಶದ  ಕೃಷಿ ಪದ್ಧತಿಗೆ  ಹೋಲಿಕೆಯನ್ನು ಮಾಡಿದಾಗ  ಮಾನವ ಅವಲಂಬಿತ  ಕೃಷಿ ಪದ್ಧತಿ ಭಾರತ ದೇಶದಲ್ಲಿ ಹೆಚ್ಚಾಗಿದೆ. ಇದರಿಂದ ರೈತರಿಗೆ ತನ್ನ  ಬೆಳೆಯನ್ನು ಉತ್ತಮ ಲಾಭದಲ್ಲಿ  ಪಡೆದುಕೊಳ್ಳಲು  ಸಾಧ್ಯವಾಗುತ್ತಿಲ್ಲ. ಅದರಲ್ಲೂ ಕಾಲಾವಸ್ಥೆಗೆ ತಕ್ಕಂತೆ ಬೆಳೆಯುವ ಬೆಳೆಗಳಲ್ಲಿ  ಹವಾಮಾನದ  ವೈಪರಿತ್ಯ  ಮತ್ತು ಪ್ರಕೃತಿ  ವಿಕೋಪಗಳಿಂದ  ಉಂಟಾಗುವ ಅಡಚಣೆಗಳಿಂದ ರೈತರು ತಾನು ಬೆಳೆದ  ಬೆಳೆಯನ್ನು ಕಟಾವಿಗಿಂತ ಮುಂಚೆ  ಕಳೆದುಕೊಳ್ಳುತ್ತಾರೆ. ಇಂದಿಗೂ ಸಣ್ಣ ರೈತರುಗಳ ಕಷ್ಟಗಳು  ಹೇಳತೀರದು. ಸಣ್ಣ ರೈತರು ವರ್ಷಕ್ಕೆರಡು ಬಾರಿ ಕೃಷಿ ಮಾಡುವ ಸಂದರ್ಭಗಳು ಕೂಡ  ವಿರಳವಾಗುತ್ತಿದೆ. ಸರ್ಕಾರ  ಬೇಕಾದಷ್ಟು ಉಪಕರಣಗಳನ್ನು ತಂದಿದ್ದರೂ  ಇನ್ನೂ ಎಲ್ಲಾ ರೈತರಿಗೆ  ತಲುಪಿಸುವಲ್ಲಿ  ವಿಫಲವಾಗಿದೆ ಎಂದು ಕಾಣುತ್ತಿದೆ. ರೈತರ ಮನೆಗೆ ಸರ್ಕಾರದ ಸವಲತ್ತು,  ಅಥವಾ ವಿವಿಧ ರೂಪದ  ಕೃಷಿ ಪದ್ಧತಿಯ ವಿಧಾನಗಳನ್ನು ಹೇಳಿಕೊಡುವುದು  ಇಲ್ಲವಾಗಿದೆ. ಮಾಹಿತಿಗಳು ಬಂದಿದ್ದರೂ ಕೂಡ  ಕೆಲವೇ ಕೆಲವು ಜನರಿಗೆ  ಸರ್ಕಾರದ ಸವಲತ್ತು, ಕೃಷಿ ಉಪಕರಣಗಳು, ಮಾಹಿತಿಗಳು  ರವಾನಿಯಾಗುತ್ತದೆ. ಇಂದಿನ ಜನಾಂಗಕ್ಕೆ  ಕೃಷಿ ಎಂಬ ಪದವನ್ನು ಕೇಳುವಾಗಲೇ  ಕಷ್ಟವೆನಿಸಿಕೊಳ್ಳುತ್ತದೆ. ಹಣವನ್ನು ಬೇರೆ ಬೇರೆ ರೂಪ

(ಲೇಖನ - 98) ಜೀವನ ಚಕ್ರ - ಹುಟ್ಟು ಮತ್ತು ಸಾವಿನ ನಡುವೆ ಬದುಕು ನಡೆಸುವುದು ಜೀವನವಾದರೆ, ಹುಟ್ಟು ಮತ್ತು ಸಾವಿನ ನಡುವೆ ಮಾಡುವ ತಪ್ಪು ಒಪ್ಪುಗಳು ಕರ್ಮಗಳಾಗುತ್ತವೆ. ಜೀವನವನ್ನು ಕೇವಲವಾಗಿ ಒಂದು ಸುತ್ತು ಅಥವಾ 24 ಗಂಟೆಗೆ ಹೋಲಿಸಬಹುದು

✍️Madhav. K. Anjar  (ಲೇಖನ - 98) ಜೀವನ ಚಕ್ರ - ಹುಟ್ಟು ಮತ್ತು ಸಾವಿನ ನಡುವೆ ಬದುಕು ನಡೆಸುವುದು ಜೀವನವಾದರೆ, ಹುಟ್ಟು ಮತ್ತು ಸಾವಿನ ನಡುವೆ ಮಾಡುವ ತಪ್ಪು ಒಪ್ಪುಗಳು ಕರ್ಮಗಳಾಗುತ್ತವೆ. ಜೀವನವನ್ನು ಕೇವಲವಾಗಿ ಒಂದು ಸುತ್ತು ಅಥವಾ 24 ಗಂಟೆಗೆ ಹೋಲಿಸಬಹುದು, ಇಪ್ಪತ್ತನಾಲ್ಕು ತಾಸುಗಳಲ್ಲಿ ನಾವೆದ್ದು, ಮಿಂದು, ತಿಂದು, ಕೆಲಸ ಕಾರ್ಯಗಳನ್ನು ಮಾಡಿ ವಿಶ್ರಾಂತಿಗಾಗಿ ಮಲಗಿ ಮತ್ತೆ ಮೇಲೆದ್ದರೆ ಮತ್ತೆ 24 ತಾಸು ಓಡಾಡಬಹುದೇನೆಂಬ ಭರವಸೆ. ಇನ್ನು ಸೂರ್ಯೋದಯದ ಮುಂದೆ ಏಳದೆ ಹೋದರೆ ಜೀವನವೆಂಬ ಪದಕ್ಕೆ ಪೂರ್ಣವಿರಾಮ. ಎಷ್ಟು ಕ್ಷಣಿಕವಲ್ಲವೇ? ಇಂದು ಬದುಕಿದ್ದ ಮನುಷ್ಯ, ಅಥವಾ ಯಾವುದೇ ಜೀವಿಗಳು ನಾಳೆ ಎಂಬ ಭರವಸೆಯಲ್ಲಿ ಬದುಕುತ್ತವೆ ಹೊರತು ನಾಳೆ ಎಂಬುವುದು ನಮ್ಮದಾಗಿರುತ್ತದೆ ಎಂದು ಖಂಡಿತವಾಗಿ ಹೇಳಲಾಗುವುದಿಲ್ಲ. ಆದರೆ ಕೆಲವು ಅವಿವೇಕಿ ಮನುಷ್ಯರ ಲಕ್ಷಣಗಳು ಅಮೃತ ಕುಡಿದ ದೇವರಂತೆ ಇರುತ್ತದೆ ಅಲ್ಲವೇ? ನಾನು ಎಂಬುವುದನ್ನು ಕೂಗಿ ಹೇಳುತ್ತಾ, ಅವನು ಎಂಬುವುದನ್ನು ದ್ವೇಷ ಸಾದಿಸುತ್ತ, ಹಿಡಿತವಿಲ್ಲದ ನಾಲಿಗೆಯೊಂದಿಗೆ ತನಗೆ ಬೇಕಾದಂತೆ ಬಣ್ಣ ಬದಲಾಯಿಸಿ ನಾಟಕೀಯವಾಗಿ ಬದುಕು ನಡೆಸುವ ಕೆಲವು ಕಳ್ಳ ಮನುಜರು ಹಳ್ಳಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ದಿನಕಳೆಯುತ್ತಾರೆ.         ಗೊಸುಂಬೆ ಬಣ್ಣ ತಾನು ಹೋದಲ್ಲೆಲ್ಲ ಬದಲಾಯಿಸುವಂತೆ ನಿಮ್ಮ ಜೀವನದಲ್ಲೂ ಇಂತಹ ಕೆಲವರನ್ನು ನೋಡಿರಬಹುದು. ಅಂತಹ ವ್ಯಕ್ತಿತ್ವವುಳ್ಳ ವ್ಯಕ್ತಿ ತಾನಲ್ಲದೆ

( ಲೇಖನ 97 ), ಹೇಗಾದರೂ ಮಾಡಿ ಹಣ ಮಾಡಬೇಕು, ಹಣವಂತರಾಗಿ ಬಿಟ್ಟರೆ ಯಾರಿಗೂ ಏನನ್ನೂ ಮಾಡಲು ಸಾಧ್ಯವಿಲ್ಲ. ಹಣಕ್ಕಾಗಿ ಹೆಣವೂ ಬಾಯಿ ಬಿಡುತ್ತದೆ ಹೇಳುತ್ತಾ, ದಿನ ಕಳೆದಂತೆ ದುರಾಲೋಚನೆಯ ಹಾದಿ ಹಿಡಿದು ಅತೀ ಹೆಚ್ಚಿನ ಜನರು

✍️Madhav. K. Anjar ( ಲೇಖನ 97 ),  ಹೇಗಾದರೂ ಮಾಡಿ ಹಣ ಮಾಡಬೇಕು, ಹಣವಂತರಾಗಿ ಬಿಟ್ಟರೆ ಯಾರಿಗೂ ಏನನ್ನೂ ಮಾಡಲು ಸಾಧ್ಯವಿಲ್ಲ. ಹಣಕ್ಕಾಗಿ ಹೆಣವೂ ಬಾಯಿ ಬಿಡುತ್ತದೆ ಹೇಳುತ್ತಾ, ದಿನ ಕಳೆದಂತೆ ದುರಾಲೋಚನೆಯ ಹಾದಿ ಹಿಡಿದು ಅತೀ ಹೆಚ್ಚಿನ ಜನರು ಮಾಡಬಾರದ ಕೆಲಸಕ್ಕೆ ಕೈ ಹಾಕಿ ಕೆಲವರು ಗೆದ್ದಂತೆ ತೋರಿದರೂ ಇನ್ನು ಕೆಲವರು ಅದಕ್ಕೆ ತಕ್ಕಂತೆ ಶಿಕ್ಷೆಯನ್ನೂ ಅನುಭವಿಸುತ್ತಾರೆ. ಈ ಹಣವೆಂಬುವುದು ಮಾನ, ಮರ್ಯಾದೆ, ಸಂಬಂಧ, ಗೌರವ, ನಾಚಿಕೆ ಎಲ್ಲವನ್ನೂ ಮೀರಿಸುವ ಶಕ್ತಿಯನ್ನು ಹೊಂದಿದೆ. ಬರೇ ಹಣದ ಆಸೆಗೆ ಒಳಗಾಗುವ ಜನರು ಯಾವ ಹೀನ ಕೃತ್ಯವನ್ನು ಮಾಡುವುದಕ್ಕೂ ತಯಾರಾಗಿರುತ್ತಾರೆ. ಹಣವಿದ್ದರೆ ಯಾರಿಗೆ ಬೇಕು ಮಾನ ಮರ್ಯಾದೆ? ಅದನಿಟ್ಟುಕೊಂಡು ನಮಗೇನಾಗಬೇಕು? ಎಲ್ಲದಕ್ಕೂ ಹಣ ಮುಖ್ಯ, ಸಮಾಜ ನಮಗೇನು ಕೊಡುತ್ತದೆ? ಮೊದಲು ಹಣ ಮಾಡಬೇಕು ಆಮೇಲೆ ಎಲ್ಲವೂ ಸಿಗುತ್ತದೆ ಅನ್ನುವವರೂ ಇರುತ್ತಾರೆ. ಹಣ ಜೀವನಕ್ಕಾಗಿ ಬಹಳಷ್ಟು ಅಗತ್ಯ, ನ್ಯಾಯಯುತ ಸಂಪಾದನೆಯಲ್ಲಿ ಹಣವಂತರಾಗುವುದು ಸಜ್ಜನರು ಬಯಸಿದರೆ, ಅನ್ಯಾಯಯುತ ಸಂಪಾದನೆ ದುರ್ಜನರು ಮಾಡುತ್ತಾರೆ!  ಇಲ್ಲಿ ಯೋಚನೆಗಳಿಗೆ ಅನುಸಾರವಾಗಿ ಹಣವೆಂಬ ಮಾಯಕ್ಕೆ ಬಲಿಯಾಗುತ್ತಾರೆ.          ಎಲ್ಲರೂ ಒಳ್ಳೆಯವರಾದರೆ ಸಾಧ್ಯವಿದೆಯೇ? ಎಲ್ಲರೂ ಕೆಟ್ಟವರಾದರೂ ಬದುಕಲು ಸಾಧ್ಯವಿದೆಯೇ? ಬಹಳಷ್ಟು ಕಷ್ಟ ಇತ್ತೀಚಿನ ದಿನಗಳಲ್ಲಿ ಪ್ರಾಮಾಣಿಕ ಜನರ ಸಂಖ್ಯೆ ಬಹಳ ವಿರಳವಾಗುತ್ತಿದೆ, ನಂಬಿಕೆಗಳು ಇಲ್ಲವಾಗುತ್ತಿವೆ, ಬಾಂಧವ್ಯ,

(ಲೇಖನ -95) ನಿನ್ನ ಮಾತು ಕೊನೆಯ ಮಾತಾಗಬಹುದು, ನಿನ್ನ ಹೆಜ್ಜೆ ಕಟ್ಟ ಕಡೆಯ ಹೆಜ್ಜೆಯಾಗಬಹುದು, ನಿನ್ನ ನಗು ಕೊನೆಯ ನಗುವಾಗಬಹುದು,

 (ಲೇಖನ -95) ನಿನ್ನ ಮಾತು ಕೊನೆಯ ಮಾತಾಗಬಹುದು,  ನಿನ್ನ ಹೆಜ್ಜೆ ಕಟ್ಟ ಕಡೆಯ ಹೆಜ್ಜೆಯಾಗಬಹುದು, ನಿನ್ನ ನಗು  ಕೊನೆಯ ನಗುವಾಗಬಹುದು,  ನಿನ್ನ ಕನಸು ಕೊನೆಯ ಕನಸಾಗಬಹುದು, ನಿನ್ನ ನೋಟ  ಕೊನೆಯ ನೋಟವಾಗಬಹುದು, ಬದುಕಿನ ಬಂಡಿ  ಓಡುತ್ತಿರುವಾಗಲೇ  ನಿಂತು ಬಿಡಬಹುದು. ಯಾರಿಗೂ  ಏನನ್ನೂ ಮಾಡಲು ಸಾಧ್ಯವಿಲ್ಲ. ನಿನ್ನಲ್ಲಿರುವ  ಅಧಿಕಾರಗಳು  ಪ್ರಯೋಜನಕ್ಕೆ ಬರದು, ನಿನ್ನಲಿರುವ  ಹಣ ಐಶ್ವರ್ಯಗಳು  ಉಪಯೋಗಕ್ಕೆ ಬರದು, ನಿನ್ನಲ್ಲಿರುವ  ಎಲ್ಲಾ ಸಂಬಂಧಗಳು  ಕೈ ಚೆಲ್ಲಿ ಕುಳಿತುಕೊಳ್ಳಲುಬಹುದು. ಜೊತೆಯಲ್ಲಿದ್ದ  ಎಲ್ಲವೂ  ನಿಂತು ಹೋಗಬಹುದು. ನಾನು ನನ್ನದು, ನಮ್ಮವರು, ಎಲ್ಲವೂ  ಶೂನ್ಯವಾಗಬಹುದು. ಬದುಕೆಂಬ  ದೋಣಿಯು ಬೀರುಗಾಳಿಗೆ ಸಿಕ್ಕಿ ದಡ ಸೇರುವ ಮುನ್ನವೇ  ಮುಳುಗಬಹುದು. ಭರವಸೆಯ ಜೀವನ  ನಿನ್ನದಾಗಿರಲಿ, ಪ್ರಾಮಾಣಿಕ ಜೀವನ  ನಿನ್ನದಾಗಿರಲಿ,  ಅನ್ಯರ ಜೀವಕ್ಕೆ  ಬೆಲೆ ಕೊಡುವ ಜೀವನ  ನಿನ್ನದಾಗಿರಲಿ, ಅತಿಯಾಸೆಗೆ ಬೀಳದೆ  ನೆಮ್ಮದಿಯ ಬದುಕು  ಸಾಗಿಸುವ  ದಾರಿ   ನಿನ್ನದಾಗಿರಲಿ. ಸತ್ಯದ ಹೆಜ್ಜೆ  ನಿನ್ನ ಹೆಜ್ಜೆಯಾಗಲಿ,  ಗೌರವದ ಬದುಕು ನಿನ್ನದಾಗಿರಲಿ, ಮಾನವನಾಗಿ ಬಾಳುವ  ಧೈರ್ಯ ನಿನಗಿರಲಿ. ಅವರಿವರ ಮನೆಗೆ ಕನ್ನ ಹಾಕಬೇಡ, ಅವರಿವರ ಮನಸಿಗೆ  ಕಲ್ಲು ಹಾಕಬೇಡ, ಅವರಿವರ  ದಾರಿಗೆ  ಮುಳ್ಳು ಹಾಕಬೇಡ, ಅವರಿವರ ಕನಸಿಗೆ ಅಡ್ಡಗೋಡೆ ಆಗಬೇಡ. ಪ್ರಪಂಚದಲ್ಲಿ ನೀನೊಬ್ಬನೇ ಇರುವುದೆಂದು  ತಿಳಿದುಕೊಳ್ಳಬೇಡ, ಈ ಪ್ರಪಂಚವು  ಬಹಳಷ್ಟು ವಿಶಾಲವಾದುದು ಎ

ನಿನಗಾಗಿ ನಾನಿರುವೆ

ಮುದ್ದಾದ ಮೊಗದಲಿ ಮುಗುಳುನಗೆ ಕಂಡಾಗ ಸದ್ದುಮಾಡದೇ ಬಂದು ಮುತ್ತಿನ ಸುರಿಮಳೆಯನ್ನೀಯುವೆ ನಿದ್ದೆಯಲು ನಿನ್ನ ಜೊತೆ ಕನಸಾಗಿ ನಾ ಬರುವೆ, ಕದ್ದು ಮುಚ್ಚಿ ನಿನ್ನಯ ಸೌಂದರ್ಯವ  ಸವಿಯುವೆ ಚಂದಿರನಾಗಿ ನಾ ಬಂದು  ನಿನ್ನ ಮೊಗವ ಝಳಪಿಸುವೆ ಜೀವನದ ಪ್ರತೀ ಕ್ಷಣವೂ ನಿನಗಾಗಿ ನಾನಿರುವೆ        ✍️ಮಾಧವ. ಕೆ. ಅಂಜಾರು 

(ಲೇಖನ -96)ನನ್ನ ಪ್ರೀತಿಯ ಅಣ್ಣನಿಗೆ ಪ್ರೀತಿಯ ನಮಸ್ಕಾರಗಳು, ನೀನು ಕ್ಷೇಮವಾಗಿದ್ದೀ ಎಂದು ಭಾವಿಸುತ್ತೇನೆ. ಮನೆಯಲ್ಲಿ ನಾವೆಲ್ಲರೂ ಸೌಖ್ಯವಾಗಿದ್ದೇವೆ,

✍️Madhav. K. Anjaru  (ಲೇಖನ -96)ನನ್ನ ಪ್ರೀತಿಯ ಅಣ್ಣನಿಗೆ ಪ್ರೀತಿಯ ನಮಸ್ಕಾರಗಳು, ನೀನು ಕ್ಷೇಮವಾಗಿದ್ದೀ ಎಂದು ಭಾವಿಸುತ್ತೇನೆ. ಮನೆಯಲ್ಲಿ ನಾವೆಲ್ಲರೂ ಸೌಖ್ಯವಾಗಿದ್ದೇವೆ, ನಿನಗೆ ಒಂದು ಸಂತೋಷದ ಸುದ್ದಿ ತಿಳಿಸಲು ಈ ಪತ್ರವನ್ನು ಬರೆಯುತ್ತಿದ್ದೇನೆ, ನಿನ್ನ ನೆನಪು ಸದಾ ಕಾಡುತ್ತಿರುತ್ತದೆ. ನೀನಿಲ್ಲದೆ ಇಲ್ಲಿ ನಮಗೆ  ಬಹಳ ಬೇಸರವಾಗುತ್ತದೆ. ಹಬ್ಬ ಜಾತ್ರೆ ಮತ್ತು ಯಕ್ಷಗಾನ ದೇವರ ಕೆಲಸಗಳು ಆಗುತ್ತಿರುವಾಗ ನಿನ್ನ ನೆನಪಾಗುತ್ತದೆ. ನೀನು ನಮ್ಮೊಂದಿಗೆ ಇರುವಾಗ ಅದೇನು ಧೈರ್ಯ ನಮಗೇನು ಚಿಂತೆ ಇರಲಿಲ್ಲ. ಇವಾಗ ನಮಗೆ ಸ್ವಲ್ಪ ಕಷ್ಟವಾಗುತ್ತದೆ ಆದರೂ ಪರವಾಗಿಲ್ಲ ನೀನು ನಮಗಾಗಿ ದೂರವಿದ್ದೀಯ ತುಂಬಾ ಜಾಗ್ರತೆ ಮಾಡಿಕೊಳ್ಳು ಊರಿನ ಬಗ್ಗೆ ಜಾಸ್ತಿ ಚಿಂತಿಸಬೇಡ ನಾವೆಲ್ಲರೂ ಒಟ್ಟಿಗೆ ಇದ್ದೇವೆ ನೀನು ತುಂಬಾ ಜಾಗ್ರತೆ ಮಾಡುತ್ತಿರು. ನಿನ್ನ ಹುಟ್ಟುಹಬ್ಬದಂದು ನಾವು ಮನೆಯಲ್ಲಿ ಪಾಯಸ ತಿಂಡಿ ಗಳನ್ನು ಮಾಡುತ್ತೇವೆ. ನಮ್ಮ ಪರವಾಗಿ ನೀನು ಕೂಡ ಚೆನ್ನಾಗಿ ಆಹಾರವನ್ನು ತೆಗೆದುಕೊಳ್ಳುತ್ತಿರು. ಹಾಗೆಯೇ ಪತ್ರ ಬರೆಯುತ್ತ ವಿಷಯವನ್ನು ಹೇಳಲು ಮರೆತುಬಿಟ್ಟೆ ಅದೇನೆಂದರೆ ನಾನು ನನ್ನ ತರಗತಿಯಲ್ಲಿ ಫಸ್ಟ್ ಕ್ಲಾಸ್ ಪಾಸಾಗಿದ್ದೇನೆ ಇನ್ನು ಮುಂದೆ ಚೆನ್ನಾಗಿ ಓದಬೇಕೆಂಬ ಆಸೆ........         ಹೌದು ಇಂತಹ ಅನೇಕ ಪತ್ರಗಳನ್ನು ನಮ್ಮ ಬದುಕಿನಲ್ಲಿ ನೋಡಿ ಓದಿ ಸಂತೋಷ ಪಟ್ಟ ದಿನಗಳು ಇಂದು ಬರಲು ಸಾಧ್ಯವೇ ಇಲ್ಲ ಯಾಕೆಂದರೆ ಇಂದು ನಾವುಗಳು ಬಹಳಷ್ಟು ಮುಂದುವ

ಹಾಡುವೆ ನಿನಗಾಗಿ

ಹಾಡುವೆ ನಿನಗಾಗಿ ಓಡಾಡುವೆ ನಿನಗಾಗಿ ಪ್ರೀತಿಯ ಗೋಪುರದೊಳಗೆ ಕಾಯುವೆ ನಿನಗಾಗಿ, ಬರೆಯುವೆ ನಿನಗಾಗಿ ಕುಣಿದಾಡುವೆ ನಿನಗಾಗಿ ಹಗಲಿರುಳು ಜೊತೆಗಿರಲು ಹಂಬಲಿಸುವೆ ನಿನಗಾಗಿ ನಗುವೇ ನಿನಗಾಗಿ ಜೀವನ ನಿನಗಾಗಿ ವಿಶ್ರಾಂತಿಯಿಲ್ಲದೆ ಢವಡವಿಸುವ ಈ ಹೃದಯವೇ ನಿನಗಾಗಿ         ✍️ಮಾಧವ. ಕೆ. ಅಂಜಾರು 

(ಲೇಖನ -94 ) ನನ್ನೊಂದಿಗೆ ನನ್ನ ಸಹಪಾಠಿ ಕೂಡ ಕಾರಲ್ಲಿ ಮಾತನಾಡುತ್ತಾ ಹೋಗುತ್ತಿರುವಾಗ ರೋಗಿಯ ಗೆಳೆಯನ ಮಾತುಗಳನ್ನು ಕೇಳಿದಾಗ ಭಯವಾಯಿತು

✍️Madhav. K. Anjar   (ಲೇಖನ -94 )  ಸಮಯಕ್ಕೆ ತಕ್ಕಂತೆ ಬದಲಾಗುವ ಜನರು ಈ ಪ್ರಪಂಚದಲ್ಲಿ, ಕಪಟ ಪ್ರೀತಿ ವಾತ್ಸಲ್ಯ ಮೋಹ, ಸಂಬಂಧಗಳನ್ನು  ಮಾಡಿ ನಿಜವಾದ ಸಮಸ್ಯೆಗಳು ಎದುರಾದಾಗ  ನಿನಗಾಗಿ ನಾನಿದ್ದೇನೆ, ನಿನ್ನ ನನ್ನ ಪ್ರೀತಿಯ ಗೆಳೆಯ, ಗೆಳತಿ, ನೀನು ನನ್ನ ಪ್ರೀತಿಯ ಗಂಡ, ಹೆಂಡತಿ, ನನ್ನ ಪ್ರೀತಿಯ ಅಪ್ಪ ಅಮ್ಮ, ಎಂಬೆಲ್ಲ ಮಾತುಗಳನ್ನ ಹೇಳುತ್ತಾ ಕೊನೆಗೆ ಈ ಎಲ್ಲಾ ಮಾತುಗಳನ್ನು ಗಾಳಿಗೆ ತೂರಿ ಬಣ್ಣ ಬದಲಾಯಿಸಿರುವ ಅದೆಷ್ಟೊ ನಿದರ್ಶನಗಳು ನಮ್ಮ  ಕಣ್ಣ ಮುಂದೆ. ಇಲ್ಲಿ ಯಾರು ಯಾರಿಗೋಸ್ಕರ ಯಾವ ರೀತಿಯಲ್ಲಿ  ಬದುಕುತ್ತಿರುತ್ತಾರೆ ಅನ್ನೋದೇ ಸಂಶಯವಾಗಿರುತ್ತದೆ. ಹಣವಿರುವಾಗ, ಸಂಪಾದನೆ ಇರುವಾಗ ಇದ್ದಂತಹ ಪ್ರೀತಿ  ಒಮ್ಮೆಲೆ ಮಾಯವಾಗುವ ಘಟನೆಗಳು  ನಮ್ಮ ಜೀವನದಲ್ಲಿ  ಕಾಣುತ್ತಿರುತ್ತೇವೆ. ಜವಾಬ್ದಾರಿಯುತ  ತಂದೆಯೊಬ್ಬನು  ವಿದೇಶ ಪ್ರಯಾಣ ಮಾಡಿ  ತನ್ನ ಜೀವನವನ್ನೇ  ಹೆಂಡತಿ ಮಕ್ಕಳಿಗಾಗಿ  ಮುಡಿಪಾಗಿಟ್ಟು  ತನ್ನೆರಡು ಮಕ್ಕಳನ್ನು  ಉತ್ತಮ ವಿದ್ಯಾಭ್ಯಾಸಕೊಟ್ಟು, ಸಂಪಾದನೆಗೆ  ತಯಾರಿ ಮಾಡಿದ  ಅಪ್ಪನನ್ನೇ  ನೋಡಲು ಬಯಸದೆ ಇರುವ  ಹೆಂಡತಿ ಮಕ್ಕಳು. ಎಲ್ಲರಂತೆ ನನ್ನ ಮಕ್ಕಳು ಒಳ್ಳೆ ವಿದ್ಯಾಭ್ಯಾಸವನ್ನು ಕಲಿತು ಇಂಜಿನಿಯರ್ ಡಾಕ್ಟರ್ ಆಗಬೇಕೆಂಬ ಬಯಕೆಯಿಂದ  ತನ್ನ ಸಂಪೂರ್ಣ ಸಂಪಾದನೆಯನ್ನು  ಮಕ್ಕಳಿಗಾಗಿ ವ್ಯಯಿಸಿದ ವ್ಯಕ್ತಿ ಒಮ್ಮೆಲೆ  ಪಾರ್ಶುವಾಯುಗೆ ತುತ್ತಾಗಿ ಆಸ್ಪತ್ರೆಗೆ ಸೇರಿದಾಗ  ಅತಿಯಾಗಿ ಪ್ರೀತಿಸುತ್ತಿದ್ದ  ಹೆಂಡತಿ  ಮಕ್ಕಳು ಹೆ

(ಲೇಖನ -93) ನಗಬೇಕಿದ್ದರೆ ಇವತ್ತು ನಕ್ಕು ಬಿಡು, ಒಳ್ಳೆಯ ತಿನಸು ತಿನ್ನಬೇಕಿದ್ದರೆ ಇಂದೇ ತಿಂದು ಬಿಡು, ಹಾಡಿ ಕುಣಿಯುತ ಬಾಳಬೇಕಿದ್ದರೆ ಇಂದು ಮಾಡಿ ಬಿಡು, ನಾಳೆ ಎಂಬುವುದ ಅರಿತವರಿಲ್ಲ,

Image
 (ಲೇಖನ -93) ಬೆಂಕಿ, ನೀರು, ಗಾಳಿ ಇದರಲ್ಲಿ ಪೌರುಷವನ್ನು  ತೋರಿಸಬೇಡ, ಪ್ರಕೃತಿಯ ಶಕ್ತಿಗೆ  ಸೆಡ್ಡು ಹೊಡೆಯಬೇಡ, ಸಮಾಜದಲ್ಲಿ ಮಾನವ ಹುಳು ಜೀವಿ ಒಮ್ಮೊಮ್ಮೆ  ತನ್ನ ಸ್ತಿಮಿತವನ್ನು ಕಳೆದುಕೊಂಡು ತನ್ನದೇ ಜೀವವನ್ನು  ಪ್ರಕೃತಿಯ  ತೆಕ್ಕೆಗೆ ಹಾಕಿಕೊಳ್ಳುತ್ತಾನೆ.  ಸಾವನ್ನು  ಆಹ್ವಾನ ಮಾಡಿ  ಜೀವ ಕಳೆದುಕೊಳ್ಳುವವರು ಸಾಕಷ್ಟು ಇದ್ದಾರೆ,  ಕೆಲವರು ಆಕಸ್ಮಿಕವಾಗಿ  ಪ್ರಕೃತಿಯ ಕೋಪಕ್ಕೆ ಬಲಿಯಾಗುತ್ತಾರೆ, ಇನ್ನು ಕೆಲವರು  ತಿಳಿದು ತಿಳಿಯದೆ ನಾನಾಥರಗಳಲ್ಲಿ ಜೀವವನ್ನು  ಕಳೆದುಕೊಳ್ಳುತ್ತಾರೆ. ಸಾವು ಯಾರಿಗೂ ಯಾವತ್ತು ಕೂಡ ಬರಬಹುದು ಅದು ಸಹಜ, ಆದರೆ ನಿರ್ಲಕ್ಷದಿಂದ ಸಾಯುವ ಜೀವಗಳು ತುಂಬಾನೇ ಇದೆ. ವಿಧಿಯ ಬರಹ ದೇವರು ಎಲ್ಲಿ ಬರೆದಿದ್ದಾನೋ ಅಲ್ಲಿ ಸಾಯುತ್ತಾನೆ ಎಂಬುವುದು ಮಾತಾದರೆ, ದೇವರು ಕೊಟ್ಟ ಬುದ್ದಿಯನ್ನು ಉಪಯೋಗಿಸದೆ ಅಹಂಕಾರಕ್ಕೆ ಒಳಗಾಗಿ ಸಾಯುವವರು ಕೂಡ ಒಂದೆಡೆ ಇರುತ್ತಾರೆ. ಯಾರದೋ ತಪ್ಪಿನಿಂದ ಸಾವನ್ನಪ್ಪುವ ಜನ, ಉದ್ದೇಶದಿಂದ ಮಾಡುವ ಕೊಲೆ, ತನ್ನ ನಿರ್ಲಕ್ಷದಿಂದ ಅಪಘಾತ ನಡೆಸಿ ಇನ್ನೊಬ್ಬರ ಜೀವ ಬಲಿ ತೆಗೆದುಕೊಳ್ಳುವ ಸಂಧರ್ಭಗಳು ಕೂಡ ನೀವುಗಳು ಅಲ್ಲಲ್ಲಿ ನೋಡುತ್ತಾ ಇರುತ್ತಿರಿ. ಇಲ್ಲಿ ತಪ್ಪುಗಳು ಗೊತ್ತಿದ್ದೂ ಮತ್ತು ಗೊತ್ತಿಲ್ಲದೇ ಕೂಡ ನಡೆಯುತ್ತಾ ಇರುತ್ತದೆ. ಆದರೆ ಹೆಚ್ಚಿನವು ಅಜಾಗರೂಕತೆಯಿಂದ ನಡೆಯುವಂತದ್ದು.       ಉದಾಹರಣೆಗೆ, ನದಿ ತೀರ, ಸಮುದ್ರ ತೀರ, ಜಲಪಾತಗಳ ಅತೀ ತೀರಕ್ಕೆ ಹೋಗಿ ಫೋಟೋ, ವಿಡಿಯೋ ಅಥವಾ ಇನ್ನಿ