ಕೈ ಬೀಸಿ ಕರೆದ ಚಂದಿರಮಾಮ,

ಭರತ ಭೂಮಿಯ ಚಂದಿರ ಯಾನ
ಜಗವೇ ಮೆಚ್ಚಿದ ಸುಂದರ ಯಾನ
ದಣಿವರಿಯದ ಇಸ್ರೋ ನಡೆಗೆ
ಮಣಿದುಬಿಟ್ಟನೆ? ಸುಂದರಜಾಣ!
ಅದೆಷ್ಟು ಸುಂದರ ಚಂದಿರನಂಗಳ
ಭರತ ಖಂಡಕೆ ನೀಡಿತು ಮಂಗಳ
ಪ್ರಗ್ಯಾನ್ ಪಾದದ ಪುಟ್ಟ ನಡೆಗೆ
ನಕ್ಕು ನಲಿದಾಡಿದ ನಮ್ಮಯ ಚಂದಿರ
ಮರಿಮಕ್ಕಳ ಚೆಂದಮಾಮ
ಇನ್ನೂ ಹತ್ತಿರ ನಮ್ಮಯ ಮಾಮ
ಅಮಾವಾಸ್ಯೆ ಹುಣ್ಣಿಮೆಯೆನ್ನದೆ
ಕೈ ಬೀಸಿ ಕರೆದ ಚಂದಿರಮಾಮ,
ಭಾರತ ದೇಶಕೆ ತವರೂರಾಯ್ತು 
ಭುವಿಯ ನೆಚ್ಚಿನ ಚಂದಮಾಮ 
ಇನ್ನು ಭಯವಿಲ್ಲ ನಿನ್ನಲಿ ಮಾಮ
ಭರವಸೆ ನಿನ್ನಲಿ ಬರುವೆ ನಾ ಮಾಮ!
ಹರಸುತ್ತಿರು ಭಾರತಮಣ್ಣಿಗೆ
ಸಿಗುತ್ತಲಿರು ಭಾರತೀಯರ ಕಣ್ಣಿಗೆ
ಇಂದು ಮುಂದು ಎಂದೆಂದೂ
ಕರೆಯೋಲೆಯ ಕೊಡುತ್ತಿರು
ಇಸ್ರೋ ವಿಜ್ಞಾನಿಗಳಿಗೆ!
ಬರುತ್ತಾಲಿರಲಿ ಸುಂದರ ಘಳಿಗೆ
ಕನಸಿನ ಮನೆಗೆ ನಿನ್ನಯ ಕೊಡುಗೆ
ನಮ್ಮೊಂದಿಗಿರಲಿ ನಿನ್ನ ಪ್ರೀತಿಯ ನಗೆ.
               ✍️ಮಾಧವ. ಕೆ. ಅಂಜಾರು 



















Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.

(ಲೇಖನ -100), "ಕುವೈಟ್ ಕಲಾ ಮಾಣಿಕ್ಯ" ಒಬ್ಬ ಕಲಾಗಾರನ ನಿಜವಾದ ಜೀವನ ಕ್ರಮ, ಶ್ರಮ ಮತ್ತು ಸಾಧನೆಯ ಹಾದಿ, ಕಲೆ ಎಂಬುವುದು ಎಲ್ಲರಿಗೂ ಒಲಿಯುವುದಿಲ್ಲ ಆದರೆ ಒಂದಲ್ಲ ಒಂದು ರೀತಿಯ ಕಲೆಯ ಶಕ್ತಿ ಪ್ರತಿಯೊಬ್ಬರಲ್ಲೂ ಇರುತ್ತದೆ