Posts

Showing posts from August, 2020

(ಲೇಖನ -26)ಮದುವೆಯ ನಂತರ -ಗಂಡಾಂತರ

Image
ಮದುವೆಯಾದ ನಂತರ ಪಾಲಿಸಬೇಕಾದ ಮುಖ್ಯ ವಿಷಯಗಳು  ಮದುವೆ ಎಂದರೆ ಏಕಾಂತ ಜೀವನದಿಂದ  ಪ್ರಬುದ್ಧತೆಗೆ ಬಂದು  ಜವಾಬ್ದಾರಿಯೊಂದಿಗೆ  ಒಂದು ಹೆಣ್ಣನ್ನು- ಗಂಡ ನ್ನು ವರಿಸಿಕೊಂಡು  ಸಂಸಾರ ನಡೆಸಲು  ಅಣಿಯಾಗುವುದು,  ಅವಿವಾಹಿತ ಅಥವಾ  ಅವಿವಾಹಿತೆಯೊಬ್ಬರು ವೈವಾಹಿಕ ಜೀವನಕ್ಕೆ ಕಾಲಿಟ್ಟು ಎರಡು ಮನಸುಗಳನ್ನು , ಹೃದಯಗಳನ್ನು ಏರಿಳಿತ ಬರದಂತೆ ನೋಡಿಕೊಂಡು ಉಸಿರಿರುವ ತನಕ ಜೊತೆಯಾಗಿ ಬಾಳುವ ರೀತಿ ರಿವಾಜು.   ಇಂದಿನ ದಿನಗಳಲ್ಲಿ ಮದುವೆ ಅನ್ನೋದು ಪೈಪೋಟಿ ನಡೆಸಿ ಆಚರಿಸುವ ಕಾರ್ಯಕ್ರಮವಾಗಿ ಮಾರ್ಪಡುತ್ತಿದೆ. ಮದುವೆಯ ನಿಜವಾದ ಅರ್ಥಗಳನ್ನೇ ಅರಿಯದೆ ಕೇವಲ ಮೋಜಿಗಾಗಿ ಮದುವೆ ಎಂಬ ಅರ್ಥದಲ್ಲಿ ಅದ್ದೂರಿಯಾಗಿ ಮದುವೆಗಳು ನಡೆದು ಕೇವಲ ಒಂದು ವರುಷ - ಎರಡು ವರುಷಗಳ ಒಳಗೆ ಮತ್ತು ಅದಕ್ಕಿಂತಲೂ ಕಡಿಮೆ ದಿನಗಳಲ್ಲಿ ವಿಚ್ಛೇದನೆ ಹಾದಿ ಹಿಡಿದು ಒಂಟಿಜೀವನ ಅಥವಾ ಮರುಮದುವೆಯ ಕಡೆ ಹೋಗಿ ಸಂಪೂರ್ಣ ಜೀವನವನ್ನು ನಾಶಪಡಿಸಿಕೊಳ್ಳುತ್ತಾರೆ.   ಮದುವೆಯ ಮುನ್ನ ಗಂಡು ಮತ್ತು ಹೆಣ್ಣು ಹಲವು ಆಸೆ, ಕನಸುಗಳನ್ನು ಕಾಣುತ್ತಾ ಮದುವೆಯ ನಂತರ ಸಂಗಾತಿಯ ಗುಣಗಳನ್ನು ತಿಳಿದುಕೊಳ್ಳುವಲ್ಲಿ ವಿಫಲರಾಗಿ, ಸಣ್ಣ ಸಣ್ಣ ತಪ್ಪುಗಳನ್ನು ತಿದ್ದಿಕೊಳ್ಳದೆ ಒಬ್ಬೊರಿಗೊಬ್ಬರು ಸಂಶಯದ ವಾತಾವರಣ ಸೃಷ್ಟಿಸಿಕೊಂಡು,  ಸಪ್ತಪದಿ ಅನ್ನುವ ಪದದ ಅರ್ಥವನ್ನೇ ತಿಳಿಯದೆ ಹೆಣ್ಣೊಂದು ಬೇಗನೆ ತವರು ಮನೆಗೆ ಹೋಗಿ ತನ್ನ ಗಂಡ ಸರಿಯಿಲ್ಲ,  ಅವನಿಗೆ ಉದ್ಯೋಗವಿಲ್ಲ, ಅವನು ಕುಡಿಯುತ್ತಾನೆ, ಅವನಿಗೆ ಸರಿಯ

(ಲೇಖನ -27)ಕತ್ತಲ -ನೆತ್ತರು

Image
ಕತ್ತಲ  ನೆತ್ತರು  ಜೀವನಪಾಠ ಬರೆದಷ್ಟು ಮುಗಿಯದು  ಓದಿದಷ್ಟೂ ಸಾಲದು ಹೊಸ ಹೊಸ ಅಧ್ಯಾಯಗಳ ಸರಮಾಲೆ ನಮಗೆ ಸಿಗುತ್ತಲೇ ಇರುತ್ತದೆ. ಪ್ರತಿಯೊಬ್ಬ ಮನುಷ್ಯ ತನ್ನ ಜೀವನದ ಅವಧಿಯಲ್ಲಿ ಪಾಠವನ್ನು ಕಲಿಯುತ್ತಲೇ ಇರುತ್ತಾನೆ , ಹೊಸ ಅನುಭವಗಳನ್ನು ಅನುಭವಿಸುತ್ತ ಇರುತ್ತಾನೆ . ಒಬ್ಬೊಬರು  ಒಂದೊಂದು ಸಮಯಕ್ಕೆ ಮರೆಯಲಾಗದ ಪಾಠ ಕಲಿತರೆ , ಕೆಲವರು ಜೀವನಪೂರ್ತಿ ಇನ್ನೊಬ್ಬರಿಗೆ ಪಾಠ ಕಲಿಸಲು ಪ್ರಯತ್ನಿಸುತ್ತಾರೆ , ಕೆಲವರು ತಾನೊಬ್ಬನೇ ಶ್ರೇಷ್ಠ ಎಂಬಂತೆ ತನ್ನನ್ನು ತಾನು ತೋರ್ಪಡಿಸುವ ಅಹಂಕಾರವನ್ನು ಹೊಂದಿರುತ್ತಾರೆ . ಅವರವರ ಜೀವನದ ಗುಟ್ಟು ಅವರಿಗೆ ಮಾತ್ರ ಗೊತ್ತಿರುತ್ತದೆ  ಮತ್ತು ಒಳಿತು ಕೆಡುಕಿನ ಕೊಡವನ್ನು ತುಂಬಿಸಿಕೊಳ್ಳುತ್ತಿರುತ್ತಾರೆ .  ನನ್ನ ಅನುಭವ ತಪ್ಪಾಗಿರಲೂಬಹುದು ಆದರೆ ಸಹಜವಾಗಿ ಮನುಜ , ಮಾಹಿತಿ , ಅನುಭವಗಳ ಕೊರತೆಯಿಂದ ತಪ್ಪುಗಳನ್ನು ಮಾಡಬಹುದು ಆದರೆ  ಬುದ್ದಿವಂತನೆಂದು-  ತಿಳಿದು ಮಾಡುವ ತಪ್ಪಿಗೆ ಯಾವ ಮದ್ದು ಕೂಡ ನಾಟುವುದಿಲ್ಲ ಹಾಗೆಯೆ ಅವನತಿ ಹಾದಿ ಹೊಂದದಿರೋದಿಲ್ಲ.  ಮತ್ತು ಮಾಡಿದ ತಪ್ಪುಗಳನ್ನು ಸರಿ ಮಾಡಿ ಮುಂದುವರೆದರೆ ಸ್ವಲ್ಪಮಟ್ಟಿಗೆ ತನ್ನ ಜೀವನವನ್ನು ಮುಂದುವರೆಸಿ ನಡೆಯಲೂಬಹುದು .  ಮೋಸ ,ವಂಚನೆ , ಕೊಲೆ ,ದರೋಡೆ ,ವಿಸ್ವಾಸ ದ್ರೋಹ , ಪಿತೃ ದ್ರೋಹ , ಸಂಬಂಧಗಳ ದ್ರೋಹ ನಮ್ಮ ಸುತ್ತಮುತ್ತಲೂ ಕಾಣುತ್ತಲೇ ಇದ್ದೇವೆ ಆದರೆ ಪ್ರಪಂಚದಲ್ಲಿ ನಡೆಯುವ ಒಂದೊಂದು ಘಟನೆಗಳು ಪಾಠವೆಂದು ತಿಳಿದುಕೊಳ್ಳಲು ಕೂಡ ಕಷ್ಟ. ಯಾವ ಸಮಯ

ಕವಿ -ಗಿಣಿ (ಕವನ -91)

  ಕವಿ - ಗಿಣಿ ******** ಗಿಣಿಯು ನೀನೆ ರಾಣಿಯು ನೀನೇ ಕವಿಕಂಡ ಸೌಂದರ್ಯದ ಚೆಂಗುಲಾಬಿ ನೀನೆ,  ರವಿಯಂತೆ ನಾನು ಭುವಿಯಂತೆ ನೀನು ಆಟವಾಡುವ  ತವಕ ಎನ ಮನದಲಿ ನೀನು ಮರೆಯಲ್ಲಿ   ನಿಂತು ಹೃದಯವ ಕೊರೆದರೆ ಸರಿಯಾಗಿ ಸಿಗುವುದೇ ಬಯಸಿದ ಪ್ರೀತಿಯು ಬಳಿಬಂದು ಹಣೆಸವರು ಪಿಸುಗುಟ್ಟು ನನ್ನ ಹೆಸರು ಉಸಿರಲ್ಲಿ ಉಸಿರಾಗಿ ಹೇಳಿಬಿಡು ನೀ ನನ್ನುಸಿರು ✍️ಮಾಧವ ನಾಯ್ಕ್ ಅಂಜಾರು 🙏

(ಲೇಖನ -29)ಸಂಕೋಲೆ ತಕ್ಕಡಿ

Image
  ಸಂಕೋಲೆಯ ತಕ್ಕಡಿ ಸಂಕೋಲೆಯ ತಕ್ಕಡಿ ಸರಿದೂಗಿಸಲು ಸಮಯ ಬೇಕಾಗುತ್ತದೆ,  ತೂಗಿ ಕೊಡುವ ವಸ್ತುಗಳು ನಿಖರವಾಗಿರಬೇಕಾಗಿದ್ದರೆ ತೂಗುವವನು ಜಾಣ್ಮೆಯಿಂದ,  ಸಮಾಧಾನದಿಂದ ಇರಲೇಬೇಕು ಇಲ್ಲವಾದಲ್ಲಿ ತೂಕ ಸರಿಯಾಗುವುದಿಲ್ಲ. ಬೆಲೆಯೂ ಸರಿಯಾಗಿರುವುದಿಲ್ಲ.  ನಮ್ಮ ಜೀವನವು ಕೂಡ  ಒಂದು ತರ ಮನಸುಗಳನ್ನು  ಕೊಂಡು ಕೊಳ್ಳುವಿಕೆ,  ಸರಿದೂಗುವಿಕೆ,  ಜಾಗ್ರತೆಯಿಂದ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಕೈಯಲ್ಲಿ ಇರುತ್ತದೆ.  ಆದರೆ ಇದರಲ್ಲಿ ಪ್ರತಿಯೊಬ್ಬ ಸಂಸಾರದ ಸದಸ್ಯನ ಪಾತ್ರ ಮಹತ್ವ ಪಡೆದಿರುತ್ತದೆ.  ಒಂದು ಸಂಸಾರದಲಿ ಒಬ್ಬ ಕೂಡ ಏರಿಳಿತ ಆದರೂ ಕೂಡ ಎಲ್ಲರೂ ತೊಂದರೆಗೆ ಒಳಗಾಗುವ ಪ್ರಸಂಗಗಳು ನಡೆಯುತ್ತವೆ.  ತೂಗು ತಕ್ಕಡಿಯು ಅಲುಗಾಡುತ್ತಲೇ ಇರುತ್ತದೆ.  ಸಾಮನ್ಯವಾಗಿ,  ನಮ್ಮ ದಿನಚರಿಗಳಲ್ಲಿ ನಡೆಯುವ ಮನಸ್ತಾಪ,  ಕೋಪಗಳಿಗೆ ಸ್ವತಃ ಕಾರಣರಾಗದಂತೆ ನೋಡಿಕೊಂಡು ಸಂಸಾರವನ್ನು ಒಳ್ಳೆಯ ರೀತಿಯಲ್ಲಿ ಕೊಂಡುಹೋಗುವ ಜವಾಬ್ದಾರಿ ಪ್ರತೀ ಸದಸ್ಯನದ್ದು ಆಗಿರುತ್ತದೆ. ಇಂದಿನ ಡಿಜಿಟಲ್ ಯುಗದಲ್ಲಿ ಇದ್ಯಾವುದೂ ನಡೆಯುತ್ತಿಲ್ಲ,  ನಡೆಯುತ್ತಿದ್ದರೂ ಬಹಳ ವಿರಳ ಸಂಖ್ಯೆಯಲ್ಲಿ ಇವೆ.  ಸಂಸ್ಕಾರದ ಅಡಿಯಲ್ಲಿ ಬದುಕದೆ ಇರುವ ಜೀವ ಸಂಸಾರ ನಡೆಸಲು ಹರಸಾಹಸ ಪಡೆಯಬೇಕಾಗುತ್ತದೆ.  ಒಂದುವೇಳೆ ಸಂಸ್ಕಾರವಿಲ್ಲದೆ ಬದುಕಿದರೂ ಸಂಸಾರ ನಡೆಸುವಲ್ಲಿ ವಿಫಲರಾಗುತ್ತಾರೆ.  ಪ್ರಪಂಚದಲ್ಲಿ ಟೆಕ್ನಾಲಜಿ  ಎಷ್ಟೇ ಮುಂದುವರಿದರೂ   ಸಂಸ್ಕಾರ ಅರಿಯದೆ  ಇರುವ ಸದಸ್ಯನು ಬೂದಿ ಮುಚ್ಚಿದ

(ಲೇಖನ -28)ಭರವಸೆಯ ಬದುಕು

Image
 ಭರವಸೆಯೇ  ಬದುಕು   ಈ ಪ್ರಪಂಚದಲ್ಲಿ ಪ್ರತಿಯೊಬ್ಬ ಮನುಷ್ಯನು ತನಗಾಗಿ ತನ್ನವರಿಗಾಗಿ ಬದುಕನ್ನು ಸಾಗಿಸುತ್ತಾ ಜೀವನದ ಪ್ರತಿಯೊಂದು ಏರಿಳಿತಗಳನ್ನು ಅನುಭವಿಸುತ್ತಾ ತನ್ನ ಜೀವನಕ್ಕೆ ವಿದಾಯ ಹೇಳುತ್ತಾನೆ. ಆದರೆ ಬದುಕಿನ ದಾರಿಯಲ್ಲಿ ನಡೆಯುವ ಪ್ರತಿಯೊಂದು ಸಿಹಿ ಕಹಿ ನೆನಪುಗಳು ಮಾತ್ರ ಜೀವನದ ಪಾಠವಾಗಿ ಉಳಿಯುತ್ತದೆ.  ಹೌದು, ಇನ್ನೊಬ್ಬರಿಗಾಗಿ ಬದುಕುವರು ಬಹಳ ವಿರಳ, ಇನ್ನೊಬ್ಬರಿಗಾಗಿ ಬದುಕಿದವನು ನೋವನ್ನು ಅನುಭವಿಸುವುದು ತುಂಬಾ ಜಾಸ್ತಿನೇ. ಸಂಸಾರದ ಸಾಗರದಲ್ಲಿ ಬಾಂಧವ್ಯಗಳನ್ನು ಉಳಿಸಿಕೊಳ್ಳಲು ಹೆಣಗಾಡುವವನು ತನ್ನ ಆಸೆಗಳನ್ನು ಬದಿಗಿಟ್ಟು ಎಲ್ಲರ ಒಳಿತಿಗಾಗಿ ಶ್ರಮಿಸುವನು. ಆದರೆ ಕೆಲವೊಂದು ಸಂದರ್ಭಗಳಲ್ಲಿ ನಾವಂದುಕೊಂಡಂತೆ ಯಾವುದೂ ನಡೆಯುವುದಿಲ್ಲ ನಂಬಿಕಸ್ತ ರೇ ನಮ್ಮನ್ನು ಮೋಸ ಮಾಡುವ ಸಂದರ್ಭಗಳು ನಡೆದುಹೋಗುತ್ತವೆ. ಅತಿ ಹತ್ತಿರದವರೇ ಅಂದರೆ ಮಕ್ಕಳು ಹೆಂಡತಿ, ತಮ್ಮ ಅಣ್ಣ, ಅಕ್ಕ ತಂಗಿ ಎಲ್ಲರೂ ಒಂದೇ ತಾಯಿಯ ಮಡಿಲಲ್ಲಿ ಬೆಳೆದಿದ್ದರೂ ಭಾವನೆಗಳ ಕೊರತೆಯಿಂದ ಅಲ್ಲೋಲಕಲ್ಲೋಲ ವಾಗಿ ಅತಿ ಆಸೆಗೆ ಬಿದ್ದು ಅವನತಿ ಹೊಂದುತ್ತಾರೆ. ಇತ್ತೀಚಿನ ದಿನಗಳಲ್ಲಿ ಮಾನವೀಯತೆಯ ಕೊರತೆಗಳು ಹೆಚ್ಚಾಗುತ್ತಿರುವುದರಿಂದ ಬಾಂಧವ್ಯಗಳು ಕೂಡ ಕಡಿಮೆಯಾಗುತ್ತಿದೆ. ಪರಿಸ್ಥಿತಿ ಎಲ್ಲಿಂದ ಎಲ್ಲಿವರೆಗೆ ಅಂದರೆ ತನ್ನ ಗೆಳೆಯನಿಗೆ ಕಷ್ಟಕಾಲದಲ್ಲಿ ದುಡ್ಡಿನ ಅವಶ್ಯಕತೆ ಇದ್ದಾಗ ನಿಜವಾದ ಗೆಳೆಯನೊಬ್ಬ ಹಿಂದೆ ಮುಂದೆ ನೋಡದೆ ತನ್ನಲ್ಲಿರುವ ಸಹಾಯವನ್ನು ಮನಃಪೂರ್ವಕ

(ಲೇಖನ -30)ನಾ ನಿನ್ನ ನಿಜವಾಗಿ ಪ್ರೀತಿಸುವೆ

Image
ನಾ ನಿನ್ನ ನಿಜವಾಗಿ ಪ್ರೀತಿಸುವೆ ಪ್ರೀತಿ ಪ್ರೇಮವೆಂದರೆ ಸಹಜವಾಗಿ ನಮ್ಮ ಮನಸ್ಸು ನೇರ ಯವ್ವನದ ಕಡೆ ಕೊಂಡು ಹೋಗಬಹುದು, ಆದರೆ ನಿಜವಾದ ಪ್ರೀತಿ ಅಂದರೆ  ಹೃದಯಯಾಂತರಾಳದಲಿ ಇನ್ನೊಬ್ಬರಿಗಾಗಿ ತಾವು ತೋರಿಸುತ್ತಿರುವ ನಯ ವಿನಯತೆ,  ಸಹಕಾರ,  ಗೌರವ.  ಪ್ರೀತಿಯನ್ನು ಒಂದೇ ವಾಕ್ಯದಲ್ಲಿ ಹೇಳಲಾಗದು ಮತ್ತು ವ್ಯಕ್ತಪಡಿಸಲೂ ಆಗದು.   ಅಮ್ಮನ ಪ್ರೀತಿ ತನ್ನ ಮಕ್ಕಳು ಮನೆಯವರ ಮೇಲೆ ಅದೆಷ್ಟು ಇರುತ್ತದೆ,  ಹೆಂಡತಿಯ ಪ್ರೀತಿಯು ಗಂಡನ ಮೇಲೆ ಅತಿಯಾಗಿರುತ್ತದೆ,  ಗಂಡನ ಪ್ರೀತಿಯು ತನ್ನ ಹೆಂಡತಿಯ ಮೇಲೆ ಅದಕ್ಕಿಂತಲೂ ಜಾಸ್ತಿನೇ ಇರುತ್ತದೆ.  ಆದ್ರೆ ವ್ಯಕ್ತ ಪಡಿಸಲು ಕೆಲವರು ಶಕ್ತರಾಗಿದ್ದಾರೆ, ಕೆಲವರಿಗೆ ತಾನು ಪ್ರೀತಿಸುತ್ತಿದ್ದೇನೆ ಎಂದು ಹೇಳುವಷ್ಟು ಕೂಡ ಹೊಳೆಯುವುದಿಲ್ಲ ಮತ್ತು ಕೆಲವರಿಗೆ ಅದಕ್ಕೆ ಬೇಕಾದ ಹಾವಭಾವಗಳನ್ನು ಮಾಡಿ ತೋರಿಸಲು ಬರೋದಿಲ್ಲ. ಪ್ರೀತಿ ಅನ್ನೋದು ಪ್ರತಿಯೊಂದು ಮನುಷ್ಯ ಹಾಗು ಪ್ರಾಣಿಗಳಲ್ಲಿ ಇದೆ,  ಪ್ರೀತಿಯಿಂದ ಸರ್ವ ಜೀವಿಗಳು ಜೀವಿಸುತ್ತವೆ. ನಿಮಗೆ ಗೊತ್ತಿಲ್ಲದೆಯೇ ಪ್ರೀತಿಸುವವರು ಅದೆಷ್ಟು ಜನಗಳು ಇರಬಹುದು.  ತಾಯಿಯೊಬ್ಬಳು ತಾನು ತಿನ್ನದೆ ಮಕ್ಕಳಿಗಾಗಿ ಸಂಸಾರಕ್ಕಾಗಿ  ಶ್ರಮಪಟ್ಟು ಯಾವುದೇ ಕಷ್ಟಗಳನ್ನು ವ್ಯಕ್ತಪಡಿಸದೆ ಇರುವುದು,   ಯಾವತ್ತೂ ಆಶೀರ್ವದಿಸುವುದು,  ಒಬ್ಬಳೇ ಕಣ್ಣೀರು ಹಾಕಿ ಏನಿಲ್ಲ ಮಗು ಅನ್ನೋದು,  ತಂದೆಯೊಬ್ಬ ತನ್ನ ಮಕ್ಕಳಿಗಾಗಿ,  ಮನೆಯ ಅನ್ನಕ್ಕಾಗಿ ಒಂದು ತುತ್ತು ಅನ್ನವ ತಿನ್ನುವಾಗ ಕೂಡ ಮನೆಯ

(ಲೇಖನ -31)ಮನಸುಗಳು ಕಿರಿದಾಗುತ್ತಿವೆ -ಹೃದಯಗಳು ಕಲ್ಲಾಗುತ್ತಿವೆ

Image
  ಮನಸುಗಳು ಕಿರಿದಾಗುತ್ತಿವೆ - ಹೃದಯಗಳು ಕಲ್ಲಾಗುತ್ತಿವೆ ಪ್ರೀತಿಗಾಗಿ ಬದುಕುವವರು,  ಸಮಾಜಕ್ಕಾಗಿ ಬದುಕುವವರು,  ಸ್ವಾರ್ಥವಿಲ್ಲದೆ ಬದುಕುವವರು,  ತೊಂದರೆಕೊಡುತ್ತಲೇ  ಬದುಕುವವರು ನಮ್ಮ ಸುತ್ತಮುತ್ತ ಇರಬಹುದು.  ಬದುಕೊಂದು ಸುಂದರ ತೋಟ ಅದರಲ್ಲಿ ಹೂ ಮೂಡಿ ಬರಬೇಕಿದ್ದರೆ ಸುತ್ತಲಿನ  ವಾತಾವರಣ ಚೆನ್ನಾಗಿಯೇ  ಇರಬೇಕು ಅಥವಾ ಆರೈಕೆ ಚೆನ್ನಾಗಿರಬೇಕು,  ಗಿಡಗಳ ಪೋಷಣೆ ಸರಿಯಾಗಿರಬೇಕು. ನಮ್ಮ ಬದುಕು ಕೂಡ ಅದರಂತೆಯೇ ನಾವು ಬೆಳೆದು ಬರುವ ವಾತಾವರಣ,  ಸಮಯ, ಸಂಧರ್ಭ,  ಸೋಲು,  ಗೆಲುವು ಮುಂತಾದವೆಲ್ಲ ಒಬ್ಬ  ಮನುಷ್ಯನ ಉನ್ನತಿಗೆ ಅಥವಾ ಅವನತಿಗೆ ಕಾರಣವಾಗುತ್ತದೆ. ವಿಶಾಲ ಹೃದಯ ನಿಮ್ಮಲ್ಲಿದ್ದರೆ ಅದರ ಕೊಡುಗೆ ನಿಮ್ಮ,  ತಂದೆ ತಾಯಿಯ,  ಗುರು ಹಿರಿಯರ ಆಶೀರ್ವಾದವೇ ಆಗಿರುತ್ತದೆ.  ನೀವು ಎಷ್ಟೇ ಕಷ್ಟದಲ್ಲಿದ್ದರೂ ಬೆರೆತು ಖುಷಿಯಾಗಿ ಜೀವನ ಮಾಡುವ ಬುದ್ದಿ ನಿಮ್ಮಲ್ಲಿದ್ದರೆ ಅದು ನಿಮ್ಮೊಬ್ಬರ ಗುಣವಲ್ಲ,  ನಿಮಗೆ ಹುಟ್ಟಿದಂದಿನಿಂದ ತಂದೆ ತಾಯಿ,  ಬಂಧು ಬಳಗ ನೀಡಿದ ಕೊಡುಗೆಯಾಗಿರುತ್ತದೆ. ಹೌದು ಕೆಲವರಿಗೆ ಅದೆಷ್ಟು ಬುದ್ದಿ ಹೇಳಿದರೂ ಅರ್ಥವೇ ಆಗೋದಿಲ್ಲ,  ಒಬ್ಬ  ಮನುಜ ತನ್ನದೇ ಬುದ್ದಿಯಲ್ಲಿ ಬದುಕುವವರೆಗೂ ತಾನು ಮಾಡಿದ ಕೆಟ್ಟಕೆಲಸ,  ಒಳ್ಳೆಯ ಕೆಲಸಗಳನ್ನು ತುಲನೆ ಮಾಡುವಷ್ಟು ಶಕ್ತಿಯನ್ನು ಸಾಯುವ ವರೆಗೂ ಹೊಂದಿರುವುದಿಲ್ಲ ಅದಕ್ಕೆ ಕಾರಣ ಅವರ ಜೀವನದ ಪ್ರತಿಯೊಂದು ಘಟನೆಗಳು ಅಥವಾ ನೋವುಗಳು. ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಿರುವ ಮನ

(ಲೇಖನ -32)ಯಾರೂ ನಮ್ಮ ಆಳುಗಳಲ್ಲ -ಸೇವಕರಲ್ಲ

Image
  ಯಾರೂ ನಮ್ಮ ಆಳುಗಳಲ್ಲ - ಸೇವಕರಲ್ಲ.  ಮಾನವನೊಬ್ಬನೇ ಬೇಧ ಭಾವ,  ಕೀಳರಿಮೆ,  ಮೇಲ್ಜಾತಿ, ಕೀಳು ಜಾತಿ,  ವಿವಿಧ ಧರ್ಮ, ಕಚ್ಚಾಟ, ಮದ ಮತ್ಸರ ಜಾಸ್ತಿನೇ ಬೆಳೆಸಿಕೊಂಡಿದ್ದಾನೆ.  ಹುಟ್ಟಿಬರುವಾಗ ಭುವಿಯ 100% ಜನರು ಒಳ್ಳೆಯವರೆ,  ದುರದೃಷ್ಟ ಹುಟ್ಟಿದ ಮೇಲೆ ಬೆಳೆಸುವ ರೀತಿಗಳು ಮಾನವ ಕುಲಕ್ಕೆ ಕೆಟ್ಟಹೆಸರು ಬರುವಷ್ಟರಮಟ್ಟಿಗೆ ಬೆಳೆದು ಕೊನೆಗೆ ಅರ್ಧ ದಾರಿಯಲ್ಲಿ ಸಾಯುವವರೇ ಜಾಸ್ತಿಯಾಗಿದ್ದಾರೆ.  ನಾವು ಮಾಡುವ ಉದ್ಯೋಗದಲ್ಲಿ,  ಸಂಘ ಸಂಸ್ಥೆ,  ಸಮಾಜದಲ್ಲಿ ಬೇಧ ಭಾವಗಳ ಸರಮಾಲೆ ಜೀವಂತವಾಗಿ ಇದ್ದು ಒಬ್ಬರ ಉನ್ನತಿಯ ಬದಲಾಗಿ ಅಳಿವಿಗಾಗಾಗಿ ಶ್ರಮಿಸುವ ಜನರು ಎಲ್ಲಾ ಕಡೆ ಕಾಣಲು ಸಿಗುತ್ತಾರೆ.  ಇದಕ್ಕೆ ಕಾರಣ ತಾನೊಬ್ಬನೇ ಬದುಕಿದರೆ ಸಾಕು,  ಬೇರೆಯವರು ಏನಾದರೂ ನನಗೆ ಬೇಕಾಗಿಲ್ಲ ಅನ್ನೋ ಮನೋಭಾವನೆ.  ಕೆಲವರಿಗೊಂದು ಪೊಗರು,  ಉನ್ನತ ಹುದ್ದೆ  ಅಥವಾ ಅಧಿಕಾರಕ್ಕೆ ಹೋದಮೇಲೆ ತನ್ನ ಕೆಳ ಹುದ್ದೆಯಲ್ಲಿರೋ ಜನರು ಸೇವಕರು ಅನ್ನೋ ರೀತಿ ನಡೆಯುತ್ತಾರೆ.  ಹೌದು ನೈಜ ಘಟನೆ,  ನಾನೊಂದು ಕಡೆ ಕೆಲಸ ಮಾಡುತಿದ್ದಾಗ ಒಬ್ಬ ಕೂಲಿ ಕೆಲಸಗಾರ, ಪೈಂಟ್,  ಗಾರೆ,  ಇನ್ನಿತರ ಕೆಲಸ ಮಾಡುವವನ ಮುಂದೆ ಸಿವಿಲ್ ಸೂಪರ್ವೈಸರ್ ಒಬ್ಬ ಬಡಪಾಯಿ ಕೆಲಸಗಾರನಿಗೆ ಏರುದನಿಯಿಂದಲೇ ಕೆಲಸವನ್ನು ಕೊಡುತಿದ್ದ,  ಅವನ ಹಾವಬಾವ  ಬಡಪಾಯಿ ಕೆಲಸಗಾರ ಅಡಿಯಾಳಂತೆ ನೋಡಿಕೊಳ್ಳುತ್ತಿದ್ದುದನು ಅರಿತಾಗ.  ರಾಜಸ್ಥಾನದಿಂದ ಕುವೈಟ್ ಮಣ್ಣಲಿ ಬಿಸಿ ಬೇಗೆಯೆ ನಡುವೆ ಅನ್ನಕ್ಕಾಗಿ ಪರಿತಪಿಸು

(ಲೇಖನ -34)ಕುವೈಟ್ ಸಮುದ್ರಕಿನಾರೆಯಲ್ಲಿ -ಪ್ರಕೃತಿ ಪ್ರೀತಿ

Image
 ಕುವೈಟ್ ಸಮುದ್ರಕಿನಾರೆಯಲ್ಲಿ - ಪ್ರಕೃತಿ ಪ್ರೀತಿ  ನಾವು ಹೋದಲ್ಲಿ ಬಂದಲ್ಲಿ, ನಿಂತಲ್ಲಿ ಕೂತಲ್ಲಿ ನಮ್ಮ ಅನುಕೂಲಕ್ಕಾಗಿ ಮೋಜು ಮಸ್ತಿಗಾಗಿ ತಿಂಡಿ ತಿನಸುಗಳನ್ನು  ಪ್ಲಾಸ್ಟಿಕ್ ಚೀಲ ಅಥವಾ ತಂಪು ಪಾನೀಯಗಳನ್ನು ಒಯ್ಯೋದು ಸಾಮಾನ್ಯವಾಗಿಬಿಟ್ಟಿದೆ.  ಅದೆಷ್ಟೋ ಜನರು ತನ್ನ ಸಂತೋಷದ ಕ್ಷಣಗಳನ್ನು ಅನುಭವಿಸಿ ಹೊತ್ತೊಯ್ದ ಎಲ್ಲಾ ವಸ್ತುಗಳನ್ನು ಕಸದ ತೊಟ್ಟಿಗಳಲ್ಲಿ ಹಾಕದೆ ಸಮುದ್ರ ಕಿನಾರೆಯಲ್ಲಿ ಬಿಸಾಕಿ ಹೋಗುತ್ತಾರೆ.  ಇದರಿಂದ ಪ್ರಕೃತಿ ಮಾಲಿನ್ಯ ಮಾಡುತ್ತಿರುವ ಬುದ್ದಿವಂತರೇ ಜಾಸ್ತಿ.    ಹೌದು ನಾನು  ಕೂಡ ನಮ್ಮ  ಮಕ್ಕಳೊಂದಿಗೆ  ಸೂರ್ಯಾಸ್ತದ ಸಮಯಕ್ಕೆ ತಂಗಾಳಿ ಸವಿಯಲು ಕುವೈಟ್ ಪಟ್ಟಣ ಬದಿಯಲ್ಲಿರೋ ಸಮುದ್ರ ಕಿನಾರೆಗೆ ಹೋಗಿದ್ದೆವು.   ನನ್ನೊಂದಿಗೆ ನನ್ನೆರಡು ಮಕ್ಕಳು,  ಹೆಂಡತಿ ಮತ್ತು  ಬಾರಕೂರಿನ ದಂಪತಿಗಳು ಕೂಡ ಇದ್ದರು.  ಕೊರೊನ ಭಯದಿಂದ ಎಲ್ಲರ ಮುಖದಲ್ಲಿ ಇದ್ದ  ಮಾಸ್ಕ್ ಗಳು ಸಮುದ್ರ ಕಿನಾರೆಯಲ್ಲಿ ನಮ್ಮ ಕಿಸೆಯೊಳಗೆ ಸೇರಿಬಿಟ್ಟಿತು.  ಇನ್ನೇನು ನಮ್ಮ ಚಪ್ಪಲಿಗಳನ್ನು ತೆಗೆದು ನೀರಂಚಲಿ ಆಡುವ ಹೆಜ್ಜೆಯನ್ನಿಡಬೇಕು ಅನ್ನುವಷ್ಟರಲ್ಲಿ ಕುವೈಟ್ ಪ್ರಜೆಯೊಬ್ಬಳು ತನ್ನ ಕೈಯಲ್ಲಿ ಹೊಯ್ಗೆ ಅಂಟಿದ್ದ ಒಂದು ಪ್ಲಾಸ್ಟಿಕ್ ಲೋಟವನ್ನು ಎತ್ತಿ ತೋರಿಸುತ್ತಲೇ,  ಹೇಳಿ ಬಿಟ್ಟರು "  humans are spoiling mother earth " ನಾವೆಲ್ಲರೂ ಸೇರಿ ಈ ಭೂಮಿಯನ್ನು ಸ್ವಚ್ಛ ಸುಂದರವಾಗಿಸಲು ಸಣ್ಣ ಪ್ರಯತ್ನ ಮಾಡಿದರೂ ಸಾಕು ಅಂತ ಹೇಳಿದ

ವಿದ್ಯಾವಂತ (ಕವನ -92)

ವಿದ್ಯಾವಂತ ******** ಓದುಬರಹ ಕಲಿತು ಅವಿದ್ಯಾವಂತನಿಗೆ ಮೋಸಮಾಡುವವಗೆ ವಿದ್ಯಾವಂತನೆಂದು ಹೇಳಲಾಗದು ! ಅವಿದ್ಯಾವಂತನೆದುರಿಗೆ ಉದ್ದುದ್ದ ಬರೆದು ಹೇಳಿಕೊಳ್ಳುವವಗೆ ವಿದ್ಯಾವಂತನೆಂದು ಹೇಳಲಾಗದು ! ದೊಡ್ಡ ಭಾಷಣ ವೇಷಭೂಷಣ ಮಾಡುತ ಅಮಾಯಕರ ತುಳಿಯುವವ ವಿದ್ಯಾವಂತನೆಂದು ಹೇಳಿಕೊಳ್ಳಬಾರದು ! ವಿದ್ಯೆ ಎಂದರೆ ಜೀವನದ ಪ್ರತಿಯೊಂದು ಸಮಯ ಸಂದರ್ಭದಲ್ಲಿ ವಿವೇಕತೆ, ವಿಧೇಯತೆ ತೋರ್ಪಡಿಸುವವರೆಂದು ಮರೆಯಬಾರದು ! ✍️ಮಾಧವ ನಾಯ್ಕ್ ಅಂಜಾರು 🌹

ದೇವ ನೀನೊಬ್ಬನೇ (ಕವನ -93)

ದೇವ ನೀನೊಬ್ಬನೇ  ************* ನಿನ್ನ ಅವಮಾನಿಸುವವರು  ಎನ್ನ ಅವಮಾನಿಸುವರು  ಕಣ್ಣಮುಂದೆ ನಟಿಸುವವರು  ಬೆನ್ನಹಿಂದೆ ಹಾರಾಡುವರು  ಉರಿಯುತ್ತಿದ್ದ ದೀಪಕೆ  ತಣ್ಣನೆಯ ನೀರೆರಚಿ  ಮತ್ತೆ ಉರಿಸುವ ಪ್ರಯತ್ನ  ಮಾಡುವ ಮನುಜರು  ನೀನಿದ್ದರೆ ಹೃದಯ ಬಡಿಯಲಿ  ನಾನಿದ್ದರೆ ದಿನವು ನಿನ್ನ ಬಳಿ  ಹೇಳದೆ, ಬೇರೆ  ದಾರಿಯಿಲ್ಲ  ದೇವ ನೀನೊಬ್ಬನೇ ಎನ್ನ ಬಳಿ  ✍️ಮಾಧವ ಅಂಜಾರು 😭

ಸಂತೋಷ (ಕವನ -94)

ಸಂತೋಷ  ******** ಎನ್ನ ನಂಬಿದವಗೆ  ಅನ್ನವ ಕೊಡು  ಎನ್ನ ತುಳಿದವಗೆ  ಹೊನ್ನನು ಕೊಡು  ನಿನ್ನ ನಂಬಿರುವೆನಗೆ  ಪಾದದ ಧೂಳನು ಕೊಡು  ದೇವನೇ ಎನ್ನ ಬಾಯಾರಿಕೆಗೆ  ನಿನ್ನ ಕಾಲನು ತೊಳೆದ  ನೀರನು ಕೊಡು  ದಿವ್ಯ ದೃಷ್ಟಿ ಬೇಡವೆನಗೆ  ಇರುವ ದೃಷ್ಟಿಯು ಸಾಕೆನಗೆ  ಕಣ್ಣು ಮುಚ್ಚಿಸು ಎನ್ನ  ಲೋಕದ ಲೋಪ  ತೋರಿಸಲೇ ಬೇಡವೆನಗೆ  ಈ ಜನುಮ ಸಾಕೆನಗೆ  ಕರೆದುಬಿಡು ನಿನ್ನ ಬಳಿಗೆ  ಇಲ್ಲವೆಂದಾದರೆ  ನನ್ನೆದೆಗೂಡಲಿ ಬಂದು ನೆಲೆ  ಬದುಕಲಾರೆ ನಿನ್ನ ಬಿಟ್ಟು  ನಗಲಾರೆನು ನಿನ್ನ ಹೊರತು  ಉಸಿರಾಡಲಾರೆನು  ನಡೆದಾಡಲಾರೆನು ದೇವ ಕಣ್ಣೀರ  ಅಭಿಷೇಕ ನಿನಗೆ  ನಿನ್ನ ಸಂತೋಷವೇ  ತೃಪ್ತಿ ನೀಡಲೆನಗೆ  ಎಲ್ಲಿದ್ದರೂ ನೀ ಬಂದು  ಮುಕ್ತಿಯನು ಕೊಡು ಎನಗೆ  ✍️ಮಾಧವ ನಾಯ್ಕ್ ಅಂಜಾರು 🌹