ಭಕ್ತಿಯನು ಹುಂಡಿಗೆ ಹಣಹಾಕಿ

ಭಕ್ತಿಯನು ಹುಂಡಿಗೆ ಹಣಹಾಕಿ
ವ್ಯಕ್ತಪಡಿಸಬೇಕಾಗಿಲ್ಲ ..!
ನಿಮ್ಮ ಬೇಡಿಕೆ ಈಡೇರಿಸಲು
ಪ್ರತೀ ಧರ್ಮದವರು
ನಿಮ್ಮ ದೇವರಿಗೆ
ಲಂಚ ಕೊಡಬೇಕಾಗಿಲ್ಲ... !

ನಿಮ್ಮ ಯುಕ್ತಿಯನು -
ಬಡವರ ಮೇಲೆ ತೋರಿಸಬೇಕಾಗಿಲ್ಲ ..!
ಅತೀ ಶಕ್ತಿಯನು
ಕೈಲಾಗದವರ ಮೇಲೆ
ತೋರಿಸೋದು ಸಲ್ಲ
ಅದು , ಜೀವನವೇ ಅಲ್ಲ ..!

ಕೊಡುವವನೇ ದೇವರು ..
ಬೇಡುವವನೇ ಭಕ್ತ ... !
ಕೊಡುವವನು ನೀನಾಗು
ಬೇಡುವವನೂ  ನೀನಾಗು
ಆದರೆ,ಭಕ್ತ ಕೊಟ್ಟ ಕಾಣಿಕೆ
ಹುಂಡಿ ತುಂಬೋದೇ ಇಲ್ಲ ...!
    -ಮಾಧವ ಅಂಜಾರು




Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.

(ಲೇಖನ -100), "ಕುವೈಟ್ ಕಲಾ ಮಾಣಿಕ್ಯ" ಒಬ್ಬ ಕಲಾಗಾರನ ನಿಜವಾದ ಜೀವನ ಕ್ರಮ, ಶ್ರಮ ಮತ್ತು ಸಾಧನೆಯ ಹಾದಿ, ಕಲೆ ಎಂಬುವುದು ಎಲ್ಲರಿಗೂ ಒಲಿಯುವುದಿಲ್ಲ ಆದರೆ ಒಂದಲ್ಲ ಒಂದು ರೀತಿಯ ಕಲೆಯ ಶಕ್ತಿ ಪ್ರತಿಯೊಬ್ಬರಲ್ಲೂ ಇರುತ್ತದೆ