ಎಲ್ಲರಂತೆ ಮದ್ವೆಯಾದ

ಎಲ್ಲರಂತೆ ಮದ್ವೆಯಾದ
ಸ್ವಲ್ಪ ದಿನ ಚಂದಿರನಾದ
ಅಮಾವಾಸ್ಯ ಬರುತ್ತಿದ್ದಂತೆ
ಚಂದಿರನೇ ಮಾಯವಾದ

ನೀನೇ  ನನ್ನ ಬಾಳು ಅಂದ
ನಿನ್ನನೆಂದೂ  ಬಿಡೆನು ಅಂದ
ಭೂಮಿಯಲ್ಲೂ  ಆಕಾಶದಲ್ಲೂ
ನಿನಗಿಂತ ಸುಂದರಿ ಇಲ್ಲವೆಂದ

ಸ್ವಲ್ಪ ವರುಷ ಕಳೆದು ಹೇಳಿದ
ಮದ್ವೆ ಯಾಕೆ ಬೇಕಿತೆಂದ
ನಿನಗೆ ಮದುವೆ ಬೇಡ ಅಂದ
ಆರಂಭ ಮಾತ್ರ ಚೆಂದ ವೆಂದ

ಒಂದೊಂದೇ ಆರಂಭಿಸಿದ
ನಾನು ರಾಜನಂತಿದ್ದೆ ಅಂದ
ನಿನ್ನ ವರಿಸಿ ಬೆವರು ಸುರಿಸಿ
ಪ್ರಯೋಜನವೇ ಇಲ್ಲವೆಂದ

ತಂದೆ ತಾಯಿಯ ಕಡೆಗೆ ಬಂದ
ಹೆಂಡತಿಯೆನಗೆ ಬೇಡವೆಂದ
ತಾಯಿ ಮಮತೆ ತೋರಿದರು
ತಂದೆ, ಕೆನ್ನೆಗೆ ಕೊಡುವೆನೆಂದ

ಚಿನ್ನಾ ನಿನ್ನ ಬಿಡೆನು ಅಂದ
ನೀನೇ ಮುದ್ದು ಕಂದಾ ಅಂದ
ನೀನಿಲ್ಲದಿದ್ದರೆ, ನಾನೆ ಇಲ್ಲವೆಂದ
ಇಂದಿನಿಂದ ಇರಲಿ ಬಂಧವೆಂದ
             -ಮಾಧವ ಅಂಜಾರು








Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.