ನ್ಯಾಯಾಲಯ

 ನ್ಯಾಯಾಲಯ
ನ್ಯಾಯಾಲಯ ಒಂದು
ದೇವಾಲಯದಂತೆ
ನ್ಯಾಯಾಧೀಶರು
ದೇವರಿದ್ದಂತೆ
ನ್ಯಾಯವಾದಿಗಳು
ಅರ್ಚಕರಂತೆ
ಜನ ಸಾಮಾನ್ಯರು
ಭಕುತರಂತೆ ....

ದೇವರು ಇರೋ ಜಾಗದಲ್ಲಿ
ಅರ್ಚಕರ ಉದ್ಯೋಗವಷ್ಟೇ
ಭಕುತರ ಬೇಡಿಕೆಯಷ್ಟೇ
ದೇವರು ಒಲಿಯೋದು
ಬಹಳ ವಿರಳ
ಯಾಕೆಂದರೆ ? ಇದು
ಕಲಿಯುಗವಂತೆ...!

ಅರ್ಚಕರೆಲ್ಲರೂ  ,
ಭಕ್ತರ ಬೇಡಿಕೆಯನ್ನು
ದೇವರ ಮುಂದೆ ಸ್ಪಟಿಸೋದು ಮಾತ್ರ
ದೇವರೆಲ್ಲರೂ 
ಕಣ್ಣು ಮುಚ್ಚಿ ಆಲಿಸೋದು ಮಾತ್ರ
ಯಾಕೆಂದರೆ ? ಇದು
ಅಂತ್ಯ ಯುಗವಂತೆ .. !

ನ್ಯಾಯ ಅನ್ಯಾಯ
ದೇವರೂ ಮಾಡಿದ್ದಾರಂತೆ
ಅರ್ಚಕರೂ ಮಾಡುತ್ತಾರಂತೆ
ಭಕ್ತನಿಗೆ ಮಾತ್ರ
ಅರಿವೇ ಆಗೋದಿಲ್ಲ ..
ದೇವರ ಮುಂದೆ ಏನೆಲ್ಲಾ ಸಂತೆ ..
ಯಾಕೆಂದರೆ ,,,,? ಇದು
ಬಲಿಯುಗವಂತೆ ....
                  -ಮಾಧವ ಅಂಜಾರು





Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.