ಭಕುತರೆಲ್ಲರೂ

ಭಕುತರೆಲ್ಲರೂ
ಶಕ್ತಿ ಮೀರಿ ಭಕ್ತಿ ಮಾಡಬೇಕೇ
ಹೊರತು , 
ಅರ್ಚನೆಗೆ ಗಂಧ ಪುಷ್ಪ
ಶೃಂಗಾರ ಮಾಡಲಾಗದಿದ್ದರೆ
ಸಾಲ ಮಾಡಿ
ಆಡಂಭರ ತೋರಿಸಿದರೆ
ಯಾವ ಧರ್ಮದ ದೇವರೂ
ಒಲಿಯೋದಿಲ್ಲ ಖಂಡಿತ ,

ಎಲ್ಲಾ ಧರ್ಮಗಳ
ಭೋದನೆಯೊಂದೇ
ಶಾಂತಿ ಶಾಂತಿ ಶಾಂತಿ
ಸಹಬಾಳ್ವೆಯೇ ನಮ್ಮೆಲ್ಲರ
ಧರ್ಮ , ಕ್ರಮ
ಆದರೆ , ಮಾಡುವದು ಕಂಡರೆ
ಅಧರ್ಮ , ತಿಳಿಯೋದು ಅದರಲ್ಲೇ
ಯಾರಿಗೂ ಗೊತ್ತಿಲ್ಲ ಧರ್ಮ

ಹಿಂದೂ ಗಳ ಯಾತ್ರೆ
ಮುಸ್ಲಿಮರ ಯಾತ್ರೆ
ಕ್ರಿಶ್ಚಿಯನ್ನರ ಯಾತ್ರೆ
ಮತ್ತೆಲ್ಲರ ಯಾತ್ರೆ ...
ಮನ ಶಾಂತಿಗೆ, ಬೇಡಿಕೆ ಈಡೇರಿಕೆಗೆ ... !
ನಾವೆಲ್ಲಾ ಮನುಶ್ಯರು
ಮನುಜರಾಗಿ ಬಾಳೋಣ
ಬೆರೆತು ಜೀವನ ಮಾಡೋಣ ..
          -ಮಾಧವ ಅಂಜಾರು



Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.