Posts

Showing posts from August, 2022

(ಲೇಖನ -66)ಹಣದುಬ್ಬರ ವೆಂದರೆ ಏನೆಂದು ಕೂಡ ತಿಳಿಯದ ಸಾಮಾನ್ಯ ಜನರು ತನ್ನ ಹೊಟ್ಟೆಪಾಡಿಗಾಗಿ ಹರಸಾಹಸ ಪಡುತ್ತಾ ಜೀವನವನ್ನು ಕಳೆಯುತ್ತಿರುತ್ತಾರೆ.

Image
(ಲೇಖನ -66) - ಹಣದುಬ್ಬರ - ಹಣದುಬ್ಬರ ವೆಂದರೆ  ಏನೆಂದು ಕೂಡ ತಿಳಿಯದ ಸಾಮಾನ್ಯ ಜನರು  ತನ್ನ ಹೊಟ್ಟೆಪಾಡಿಗಾಗಿ ಹರಸಾಹಸ ಪಡುತ್ತಾ ಜೀವನವನ್ನು ಕಳೆಯುತ್ತಿರುತ್ತಾರೆ. ದಿನದಿಂದ ದಿನಕ್ಕೆ ದಿನೋಪಯೋಗಿ ವಸ್ತುಗಳ ಬೆಲೆಗಳು ಏರುತ್ತಲೇ ಇದೆ. ಇದಕ್ಕೆ ಕಾರಣ  ಹಲವಾರು, ಆದರೆ ಹಣದುಬ್ಬರವನ್ನು ಹತೋಟಿಯಲ್ಲಿಡುವ  ಜವಾಬ್ದಾರಿ ಸಂಬಂಧಪಟ್ಟ  ಇಲಾಖೆ ಅಥವಾ ಉತ್ತಮ  ಬುದ್ಧಿವಂತ ಮತ್ತು ಜ್ಞಾನವುಳ್ಳ   ಹಣಕಾಸು ಮಂತ್ರಿಗಳಿಗೆ  ಅಥವಾ ಪ್ರಧಾನಮಂತ್ರಿಗಳಿಗೆ ಹಾಗೂ  ಜವಾಬ್ದಾರಿಯುತ ಪ್ರಜೆಗಳಿಂದ  ಕೂಡಿರುತ್ತದೆ. ಹಣದುಬ್ಬರಕ್ಕೆ ನೇರ  ಮತ್ತು ಪರೋಕ್ಷವಾಗಿ ಒಂದಲ್ಲ ಒಂದು ರೀತಿಯಲ್ಲಿ ಎಲ್ಲರೂ ಜವಾಬ್ದಾರರಾಗಿರುತ್ತಾರೆ. ಇದರಲ್ಲಿ  ಸರ್ಕಾರದ ಆಡಳಿತದ ರೀತಿ ಬಹಳ ಹೆಚ್ಚಿನ ಮಹತ್ವವನ್ನು ಹೊಂದಿರುತ್ತದೆ. ಭಾರತೀಯರು ತಾವು ಖರೀದಿಸುವ  ಪ್ರತಿಯೊಂದು ವಸ್ತುಗಳಲ್ಲಿ  ತೆರಿಗೆ  ಮೂಲಕ ಸರ್ಕಾರಕ್ಕೆ ಪಾವತಿ ಮಾಡುತ್ತಿದ್ದಾರೆ ಆದರೆ ಪಾವತಿ ಮಾಡಿದ ತೆರಿಗೆ  ಜನರಿಗೆ ಎಷ್ಟರಮಟ್ಟಿಗೆ  ತಲುಪುತ್ತಿದೆ  ಎನ್ನುವುದು  ನಿಗೂಢವಾಗಿಯೇ ಇರುತ್ತದೆ. ಸರ್ಕಾರ ಹಲವಾರು  ಸವಲತ್ತು ಅಥವಾ ಸಾರ್ವಜನಿಕ ಉದ್ದೇಶಕ್ಕಾಗಿ  ಕೋಟಿಗಟ್ಟಲೆ  ಹಣವನ್ನು ಬಿಡುಗಡೆ ಮಾಡುತ್ತಿರುತ್ತದೆ, ಬಿಡುಗಡೆಯಾದ  ಹಣ ಪೂರ್ಣವಾಗಿ ಪ್ರಜೆಗಳ  ಕೈ ಸೇರುವುದಿಲ್ಲ. ಹಣವು  ಬಿಡುಗಡೆಯಾಗುತ್ತಿದ್ದಂತೆಯೇ ಭ್ರಷ್ಟಾಚಾರ ಮಾಡುವ ರಾಜಕೀಯ ವ್ಯಕ್ತಿಗಳ ಕೈ ಸೇರಿಬಿಡುತ್ತದೆ, ಒಂದು ಯೋಜನೆಯಲ್ಲಿ ಹಣಕ್ಕಾಗಿ  ಆಸೆ

(ಲೇಖನ -65) ನಾಶವಾಗುತ್ತಿರುವ ಅರಣ್ಯ ಪ್ರದೇಶಗಳು, ನವರಂದ್ರಗಳನ್ನು ಮುಚ್ಚಿ ಕುಳಿತುಕೊಳ್ಳುವ ಅರಣ್ಯಾಧಿಕಾರಿಗಳು,

Image
(ಲೇಖನ -65) ನಾಶವಾಗುತ್ತಿರುವ ಅರಣ್ಯ ಪ್ರದೇಶಗಳು, ನವರಂದ್ರಗಳನ್ನು ಮುಚ್ಚಿ ಕುಳಿತುಕೊಳ್ಳುವ ಅರಣ್ಯಾಧಿಕಾರಿಗಳು,ಅರಣ್ಯ ಸಂಪತ್ತು ನಮಗೆ ಅಗತ್ಯವೇ ಇಲ್ಲವೆಂಬಂತೆ ನಡೆದುಕೊಳ್ಳುತ್ತಿರುವ ಇಂದಿನ ಯುವಪೀಳಿಗೆ, ಎಸಿ ಕಾರು, ಬೈಕು ಎಸಿ ಬಸ್ಸು ಎಲ್ಲವೂ ಹವಾನಿಯಂತ್ರಿತ  ವಾಹನಗಳು  ಸುತ್ತಾಡಲು ಇರುವಾಗ ನಮಗೆ ಮರಗಿಡಗಳ ಅವಶ್ಯಕತೆಯಿದೆಯೇ? ಸುಂದರ ಮನೆಗಳ ಕಿಟಕಿ ಬಾಗಿಲನ್ನು ಅಲಂಕರಿಸಲು ತೇಗ ಬೀಟೆ, ಹಲಸಿನ ಮರಗಳು ಎಲ್ಲಿಯಾದರೂ ಸಿಕ್ಕಿದರೆ ಸಾಕು ನನ್ನ ಮನೆ ಸುಂದರವಾಗಿ ಕಾಣಬೇಕೆಂಬ ಆಸೆ ಎಲ್ಲರಲ್ಲೂ ಇದೆ, ಆದರೆ ಖಾಲಿ ಜಾಗಗಳು ಇರುವಲ್ಲಿ  ಒಂದು ಗಿಡ ನೆಡುವ  ಮನಸ್ಸು ಯಾವನು ಮಾಡುತ್ತಿಲ್ಲ! ಪರಿಸರ ಪ್ರೇಮಿಗಳು ಒಂದಷ್ಟು ಗಿಡಗಳನ್ನು ಅರಣ್ಯ ಪ್ರದೇಶದಲ್ಲಿ ಸಸಿ ನೆಟ್ಟು  ಪ್ರಕೃತಿಯ  ಮಡಿಲನ್ನು ಕಾಪಾಡುತ್ತಿರುತ್ತಾರೆ, ಆದರೆ ಸಾಮಾನ್ಯ ಜನರು ಪ್ರಕೃತಿಯ ಬಗ್ಗೆ  ಚಿಂತೆಯಿಲ್ಲದೆ ಬದುಕುತಿದ್ದಾರೆ.  ಎಲ್ಲಿಯೂ ಹೋಗಬೇಕಾಗಿಲ್ಲ, ತಮ್ಮ ತಮ್ಮ ಊರು ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಹೇಗಿತ್ತು ಎಂಬುದನ್ನು ನೆನಪಿಸಿಕೊಳ್ಳಬೇಕು. ನೀವು ನಡೆಯುತ್ತಿದ್ದ, ಅಥವಾ ಹಾದುಹೋಗುತ್ತಿದ್ದ ಪ್ರದೇಶಗಳು ಎಷ್ಟು ಸುಂದರ ಮಯವಾಗಿತ್ತು,  ಅದೆಷ್ಟು ಮರ ಗಿಡಗಳಿದ್ದವು, ಸುತ್ತಲ ಪ್ರದೇಶಗಳು ಎಷ್ಟು ಹಸಿರುಮಯ ವಾಗಿತ್ತು, ನದಿಗಳು ಅದೆಷ್ಟು  ಶುಭ್ರವಾಗಿ ಹರಿಯುತ್ತಿತ್ತು, ನೀರಿನ ಆಶ್ರಯ  ಎಲ್ಲಾ ಪ್ರದೇಶದಲ್ಲೂ ಹೇಗಿತ್ತು? ಆಮ್ಲಜನಕ, ಅರಣ್ಯ ಜೀವಿಗಳು, ಶುಭ್ರ ಗಾಳಿ, ಶ

(ಲೇಖನ -64)ಭೂ ಕಂದಾಯ ಇಲಾಖೆಯಲ್ಲಿ ನಡೆಯುವ ಅವ್ಯವಹಾರಗಳ ಬಗ್ಗೆ ಆದಷ್ಟು ಜಾಗ್ರತರಾಗಿರಿ

Image
(ಲೇಖನ -64) ಭೂ ಕಂದಾಯ ಇಲಾಖೆಯಲ್ಲಿ ನಡೆಯುವ ಅವ್ಯವಹಾರಗಳ ಬಗ್ಗೆ ಆದಷ್ಟು ಜಾಗ್ರತರಾಗಿರಿ, ಅಮಾಯಕ ಜನರ ಜಮೀನು ಹಣದಾಸೆಗಾಗಿ ಭ್ರಷ್ಟ ಅಧಿಕಾರಿಗಳು ನಿಮಗೆ ತಿಳಿಯದಂತೆ ಬೇರೆಯವರ ಹೆಸರಿಗೆ ಮಾರಾಟ ಮಾಡಿದ ಪ್ರಸಂಗಗಳು ಅದೆಷ್ಟೋ ನಡೆದಿರಬಹುದು. ಇದರಲ್ಲಿ ಲ್ಯಾಂಡ್ ಲಿಂಕ್ಸ್, ಭ್ರಷ್ಟ ರಾಜಕೀಯ, ಭ್ರಷ್ಟ ಪೊಲೀಸ್, ಭ್ರಷ್ಟ ವಕೀಲ, ಭ್ರಷ್ಟಚಾರ ಮಾಡುವ ನ್ಯಾಯಾಧೀಶ ಕೂಡ ಸೇರಿ ನಡೆಸುವ ಸಾಧ್ಯತೆಗಳಿವೆ . ನಿಮಗೆ ಭೂಮಿ ಅಥವಾ ಕೃಷಿ ಜಾಗಗಳ ಮೂಲ ದಾಖಲೆ ಬಗ್ಗೆ ಮಾಹಿತಿಗಳು ಇಲ್ಲದೇ ಇದ್ದಲ್ಲಿ ಕೇಳಿ ತಿಳಿದುಕೊಳ್ಳಿ,  ಪ್ರಾಮಾಣಿಕವಾಗಿ ಕೆಲಸ ಮಾಡುವ ಅಧಿಕಾರಿಗಳ ಅಥವಾ ಕಡತಗಳ ಬಗ್ಗೆ ಸಂಪೂರ್ಣ ಮಾಹಿತಿ ಇರುವವರಲ್ಲಿ ಮಾತ್ರ ನಿಮ್ಮ ಸಮಸ್ಯೆಗಳನ್ನು ಹೇಳಿ ಅದಕ್ಕೆ ಪರಿಹಾರವನ್ನು ಪಡೆದುಕೊಳ್ಳಿ. ನಿಮ್ಮ ಸಮಯ ಸರಿಯಾಗಿ ಇಲ್ಲದೇ ಹೋದಲ್ಲಿ ಅಥವಾ ಸರಿಯಾದ ಮಾಹಿತಿಗಳು ಇಲ್ಲದೇ ಹೋದಲ್ಲಿ ಜಮೀನು ತೆಗೆದುಕೊಳ್ಳುವುದು ಅಥವಾ ಮಾರುವ ಕೆಲಸಕ್ಕೆ ಹೋಗಬೇಡಿ. ಇಲ್ಲಿ ಕೆಲವು ನಾನು ಕೇಳಿದ ಪ್ರಸಂಗಗಳನ್ನು  ಗಮನಿಸಿ, ಪಿತ್ರಾರ್ಜಿತ ಆಸ್ತಿ - ಕಾನೂನು ಪ್ರಕಾರ ಹಕ್ಕುದಾರರಿಗೆ ಹಕ್ಕು ಆದರೆ ಅಮಾಯಕ ಮತ್ತು ಅವಿದ್ಯಾವಂತ ಕೃಷಿಕನ ಭೂಮಿಯನ್ನು ಬ್ಯಾಂಕ್ ಮ್ಯಾನೇಜರ್ ಮತ್ತು ಅವರ ಸಂಬಂಧಿಗಳು ಕೃಷಿಕನ ಜಾಗವನ್ನು ಬ್ಯಾಂಕ್ ಎಲಂ ಪ್ರಕ್ರಿಯೆ ಎಂದು ತೋರಿಸಿ, ನ್ಯಾಯಾಲಕ್ಕೂ ತಪ್ಪು ಮಾಹಿತಿಯನ್ನು ಕೊಡಲು ಭ್ರಷ್ಟ ನ್ಯಾಯವಾದಿ ಸಹಕರಿಸಿ ನ್ಯಾಯಾಲಯದ ಕಣ್ಣಿಗೆ ಮಣ್ಣೇರಚಿ ನ್ಯಾಯಾಲಯ

(ಲೇಖನ -63) ಅನಾಥ ಆಶ್ರಮಕ್ಕೆ ಹೆಚ್ಚಿನವರು ಬಡವರ ಮಕ್ಕಳು ಸೇರುತಿದ್ದರೆ, ವೃದ್ದಾಶ್ರಮಕ್ಕೆ ಶ್ರೀಮಂತ ಮಕ್ಕಳ ಪೋಷಕರೇ ಸೇರಿಕೊಳ್ಳುತ್ತಾರೆ!

Image
 (ಲೇಖನ -63) ಅನಾಥ ಆಶ್ರಮಕ್ಕೆ ಹೆಚ್ಚಿನವರು ಬಡವರ ಮಕ್ಕಳು ಸೇರುತಿದ್ದರೆ, ವೃದ್ದಾಶ್ರಮಕ್ಕೆ ಶ್ರೀಮಂತ ಮಕ್ಕಳ ಪೋಷಕರೇ ಸೇರಿಕೊಳ್ಳುತ್ತಾರೆ! ಹಾಗಾದರೆ ಸ್ವಚ್ಛ ಮನಸಿಲ್ಲದೆ ಸಿಕ್ಕಿರುವ ಸಿರಿವಂತಿಕೆ ಕೊನೆಗಾಲಕ್ಕೆ ಸಿರಿವಂತ ಪೋಷಕರಿಗೆ ಶಾಪವೇ? ತುಂಬಾ ಬಡತನ ಉಳ್ಳವರು ಹೇಗಾದರು ಮಾಡಿ ಬದುಕಬೇಕೆಂಬ  ಛಲ ಹಿಡಿದರೆ ಸಿರಿವಂತರ ಮಕ್ಕಳು ಐಷಾರಮದ ಗುಂಗಲ್ಲಿ ತೆಲುತ್ತಾ ಬದುಕುತಿರುತ್ತಾರೆ. ಇಲ್ಲಿ, ಯಾರ ತಪ್ಪುಗಳು ಎಂದು ಹೇಳಲು ಸಾಧ್ಯವಿಲ್ಲ ಆದರೆ ಕಷ್ಟದಿಂದ ಬದುಕಿ ಬಂದವನು ಕೊನೆಗಾಲದವರೆಗೂ ಧೈರ್ಯವಾಗಿ ಬದುಕುತ್ತಾನೆ, ಹೆಚ್ಚಿನ ಕಷ್ಟಗಳನ್ನು ನಮ್ಮ ಭಾಗ್ಯವೆಂದು ತಿಳಿದು ಬದುಕುತ್ತಾನೆ. ಏನೇ ಬರಲಿ ಗೋವಿಂದನ ದಯೆ ಇರಲಿ, ನಾಳೆ ಬೆಳಗಾದರೆ ಉಣ್ಣಲು ಎರಡು ಅನ್ನವ ಕೊಡುವ ದೇವ ಎಂಬ ಭರವಸೆಯಲಿ ನಿದ್ರಿಸುತ್ತಾನೆ.            ತಂದೆ ತಾಯಿಯರು ಮಕ್ಕಳಿಗಾಗಿ ತನ್ನ ಸರ್ವಸ್ವ ತ್ಯಾಗ ಮಾಡಿ, ಓದು ಬರಹ, ಬಟ್ಟೆ ಬರೆಯನ್ನು, ಬೇಕಾದ ತಿಂಡಿ ತಿನಸುಗಳನ್ನು ಯಾವುದೇ ಸಮಸ್ಯೆಗಳಿಲ್ಲದೆ ತಂದು ಕೊಡುತ್ತಾರೆ, ಮಕ್ಕಳನ್ನು ಉನ್ನತ ಶಿಕ್ಷಣ ಕೊಟ್ಟು ದೊಡ್ಡ ಕೆಲಸವನ್ನು ದೇಶ ವಿದೇಶದಲ್ಲಿ ಗಿಟ್ಟಿಸಿಕೊಳ್ಳುವಲ್ಲಿ ಸಫಲರಾಗಿ, ತನ್ನ ಜೀವಿತದ ಹೆಚ್ಚಿನ ಸಮಯಗಳನ್ನು ಗೆಳೆಯರು, ತಿರುಗಾಟ, ಮಾದಕ ವ್ಯಸನ, ಮತ್ತು ಇನ್ನಿತರ ಚಟುವಟಿಗಳಿಗೆ ತೊಡಗಿಸಿಕೊಂಡು, ನಾನೊಬ್ಬ ಸಿರಿವಂತನೆಂಬ ಅಹಂಕಾರದಿಂದ ತನ್ನ ಮದ್ಯವಯಸ್ಸನ್ನು ಕಳೆಯುತ್ತಿರುವಾಗ, ಅವರನ್ನು ಸಾಕಿ ಸಲಹಿದ ಪೋಷಕರನ

(ಲೇಖನ -62)- ಭಾರತೀಯ ಪ್ರಜೆಗಳಿಗೆ ಉಚಿತ ಶಿಕ್ಷಣ ಬೇಕೆಂದು ಹೇಳುವವರು ತೀರಾ ಬಡತನ ಉಳ್ಳವರು ಮತ್ತು ಮಧ್ಯಮ ವರ್ಗದ ಜನರು ಮಾತ್ರ

Image
 (ಲೇಖನ -62)-  ಭಾರತೀಯ ಪ್ರಜೆಗಳಿಗೆ ಉಚಿತ ಶಿಕ್ಷಣ ಬೇಕೆಂದು ಹೇಳುವವರು ತೀರಾ ಬಡತನ ಉಳ್ಳವರು ಮತ್ತು ಮಧ್ಯಮ ವರ್ಗದ ಜನರು ಮಾತ್ರ, ಶಿಕ್ಷಣ ಎಂಬುವುದು ಎಲ್ಲಾ ಪ್ರಜೆಗಳಿಗೆ ಸಿಗಬೇಕು, ಉತ್ತಮವಾದ ಶಿಕ್ಷಣ ಪಡೆದುಕೊಂಡಿರುವ ಹೆಚ್ಚಿನ ಜನರು ಕೆಲಸ ಗಿಟ್ಟಿಸಿಕೊಳ್ಳದಿದ್ದರೂ, ಭಾರತದ ಉತ್ತಮ ಭವಿಷ್ಯಕ್ಕೆ ಅಡಿಪಾಯವಾಗಿ ಮಾರ್ಪಟ್ಟುಗೊಳ್ಳುತ್ತಾರೆ. ಶಿಕ್ಷಣವನ್ನು ಉಚಿತವಾಗಿ ಕೊಟ್ಟರೆ ಪ್ರಜೆಗಳು ಮೈಗಳ್ಳರಾಗುತ್ತಾರೆಂಬ ಮಾತುಗಳನ್ನು ಕೆಲವರು ಹೇಳಬಹುದು, ಆದರೆ ಅಂತಹ ಮಾತುಗಳು ವಿದ್ಯೆ ಇರುವವನ ಬಾಯಲ್ಲಿ ಬರಲು ಸಾಧ್ಯವಿಲ್ಲ! ವಿದ್ಯೆ ಎಂಬುವುದು ಮೇಲ್ಜಾತಿ, ಕೀಲ್ಜಾತಿ, ಮೇಲ್ವರ್ಗ, ಕೆಳವರ್ಗ, ವಿವಿಧ ಧರ್ಮ ದೇಶಗಳನ್ನು ಶಿಸ್ತುಬದ್ದವಾಗಿ ನಡೆಸಲು ಉಪಯೋಗವಾಗುವ ಅತ್ಯುತ್ತಮ ಸಾಧನ. ವಿದ್ಯೆಯಿಂದ ವಂಚಿತಗೊಂಡ ಪ್ರತೀ ಪ್ರಜೆ ಸಮಾಜದಲ್ಲಿ ನಡೆಯುವ ಪ್ರತೀ ದಬ್ಬಾಳಿಕೆ, ಅರಾಜಕತೆ, ಬೇಧ ಭಾವ ಮೋಸ, ವಂಚನೆಗಳನ್ನು ಪ್ರಶ್ನಿಸುವ, ಹೋರಾಟ ಮಾಡುವ ಶಕ್ತಿಯನ್ನು, ಧೈರ್ಯವನ್ನು ಕೊಡುವ ಬಹಳ ದೊಡ್ಡ ಬತ್ತಳಿಕೆ.              ರಾಜಕೀಯ, ಕೆಲಸ, ದೇಶ ವಿದೇಶ,ಹಿತ ಚಿಂತನೆ, ಉತ್ಕೃಷ್ಟ ಮನೋಭಾವನೆ, ಇದೆಲ್ಲವನು ಪಡೆಯಬೇಕಾದರೆ ಶಿಕ್ಷಣ ಬಹಳ ಮಹತ್ತರವಾದ ಪಾತ್ರ ವಹಿಸಿಕೊಂಡಿರುತ್ತದೆ. ಯಾವ ದೇಶ ಅಥವಾ ಊರು ಶಿಕ್ಷಣದಲ್ಲಿ ಹಿಂದೆ ಉಳಿದಿರುತ್ತದೆಯೋ ಅಲ್ಲಿ ಅತೀ ಹೆಚ್ಚು ಸಮಸ್ಯೆಗಳು ಉದ್ಭವಿಸುತ್ತದೆ. ಸಮಾನ ರೀತಿಯಲ್ಲಿ ಜಾತಿ ಧರ್ಮ ಮತಗಳ ಬೇಧ ಭಾವಗಳಿಲ್ಲದ ಶಿಕ್ಷಣ ವ

ತ್ರಿವರ್ಣದೊಳು ನನ್ನುಸಿರು

ಕೇಸರಿ ಬಿಳಿ ಹಸಿರು ತ್ರಿವರ್ಣದೊಳು ನನ್ನುಸಿರು ಈ ಮಣ್ಣಿನ ಋಣ ಎನಗೆ ಭರತ ಖಂಡವೆ ನನ್ನುಸಿರು, ಎದುರಾಳಿಗಳಿರಲಿ ಶತ್ರು ಸಾಮ್ರಾಜ್ಯವೇ ಇರಲಿ ಉಸಿರಿರುವವರೆಗೂ ಪ್ರೀತಿಸುವೆ ಭಾರತವೇ ನನ್ನುಸಿರು, ಇಂದಾದರೂ, ನಾಳೆಯಾದರೂ ಭರತ ಭೂಮಿಯ ಹೆಸರು ಎದೆತಟ್ಟಿ ಹೇಳುವೆ  ಭಾರತವೇ ನನ್ನುಸಿರು ಸದೆಬಡಿಯುವೆ ಶತ್ರುಗಳನು ಪೂಜಿಸುವೆ ಸೈನಿಕರನು ಸ್ವಾತಂತ್ರ್ಯಕೆ ನಿಮ್ಮ ಬಲಿ ಮರೆಯಲಾಗದು ವೀರ ಶೈಲಿ, ಕ್ಷಣ ಕ್ಷಣಕೂ ಪ್ರತೀ ದಿನಕು ಭವ್ಯ ಭಾರತದ ಕನಸು ಜಯವಾಗಲಿ ಜಯವಾಗಲಿ ತ್ರಿವರ್ಣಧ್ವಜವೇ ನನ್ನುಸಿರು.        ✍️ಮಾಧವ ಅಂಜಾರು.

(ಲೇಖನ -61) ದೇವರು ಕೊಟ್ಟ ವರ, ನಿನ್ನ ಬದುಕಿನ ಈ ವರೆಗಿನ ಉಸಿರು- ದೇವರು ಕೊಟ್ಟ ವರ

Image
 (ಲೇಖನ -61) ದೇವರು ಕೊಟ್ಟ ವರ, ನಿನ್ನ ಬದುಕಿನ ಈ ವರೆಗಿನ ಉಸಿರು- ದೇವರು ಕೊಟ್ಟ ವರ, ನಿನ್ನ ಬದುಕಿನ ಈ ವರೆಗಿನ ಶಕ್ತಿ ದೇವರು ಕೊಟ್ಟ ವರ, ನಿನ್ನ ಬದುಕಿನ ಈ ವರೆಗಿನ ಯುಕ್ತಿ ದೇವರು ಕೊಟ್ಟ ವರ, ನಿನ್ನ ಬದುಕಿನ ಈ ವರೆಗಿನ ಸಂಪತ್ತು, ಬುದ್ದಿ, ದೇವರು ಕೊಟ್ಟ ವರ. ಅದನ್ನೆಲ್ಲವ ಪಡೆದುಕೊಂಡು ಇನ್ನೂ ಜೀವಿಸುತ್ತಿರುವೆಯೆಂದರೆ ನಿನ್ನ ತಂದೆ ತಾಯಿಯ ವರ. ಮನುಷ್ಯ ಸಾವಿರಾರು ತಪ್ಪುಗಳನ್ನು ಮಾಡುತ್ತಾನೆ, ಸಾವಿರಾರು ದ್ರೋಹಗಳನ್ನೂ ಮಾಡುತ್ತಾನೆ, ಸಾವಿರಾರು ಪಾಪಗಳನ್ನು ಮಾಡುತ್ತಾನೆ, ಆದರೆ ಯಾವುದನ್ನೂ ನೆನಪಿನಲ್ಲಿಟ್ಟುಕೊಳ್ಳುವುದಿಲ್ಲ, ಎಗ್ಗಿಲ್ಲದೇ ತನ್ನ ಕೈ ಕಾಲುಗಳು ಸರಿಯಾಗಿರುವಾಗ ಮಾಡಬಾರದ್ದನ್ನು ಮಾಡಿ, ಹೇಳಬಾರದ್ದನ್ನು ಹೇಳಿ, ಅತ್ಯಂತ ಕ್ರೂರವಾಗಿ ಜೀವಿಸಿ ಕೊನೆಗಾಲಕ್ಕೆ ನಡೆಯಲು ಆಗದೆ , ಹಾಸಿಗೆ ಹಿಡಿದು ಪರಿತಪಿಸುವ ಕಾಲದಲ್ಲಿ ದೇವರನ್ನು ದೂರುವ ಜನರು, ತಾನು ಯಾವುದೇ ತಪ್ಪುಗಳನ್ನೇ ಮಾಡದೆ ಅನುಭವಿಸುವ ಕಷ್ಟಗಳು ಕೂಡ ದೇವರು ಕೊಟ್ಟ ವರ, ಯಾಕೆಂದರೆ?  ನಿನ್ನ ಆಲೋಚನೆ, ಶಕ್ತಿ, ಸಮಾಧಾನ ಇವೆಲ್ಲವನ್ನು ಪರೀಕ್ಷೆ ಮಾಡುವ ಸಮಯ ಕೂಡ ದೇವರು ಕೊಟ್ಟ ವರ. ಯಾವ ಸಮಯದಲ್ಲಿ ಯಾರನ್ನು ಹೇಗೆ ಉಪಕರಿಸುವೆಯೋ, ಅಪಕರಿಸಿವೆಯೋ ಅದು ನಿನ್ನ ಮೇಲಿದೆ, ಮಾನವೀಯತೆಯ ಮನುಜ ತನ್ನ ಬುದ್ದಿಯನ್ನು ಒಳಿತಿನ ಕೆಲಸಕ್ಕಾಗಿ ಉಪಯೋಗ ಮಾಡುತ್ತಾನೆ , ತನ್ನ ಬುದ್ದಿಯನ್ನು ಇನ್ನೊಬ್ಬನ ಅವನತಿಗಾಗಿ ಉಪಯೋಗಿಸಿ ಜೀವಿಸುವವನು ಮಾನವನಾಗಿರಲು ಅರ್ಹನಲ್ಲ, ತಿಳಿಯದೆ

(ಲೇಖನ -60) ಆಡಂಬರವಾಗುತ್ತಿರುವ ಹಬ್ಬ ಹರಿದಿನಗಳು! ದೇವರೊಬ್ಬ ನಾಮ ಹಲವು

Image
 (ಲೇಖನ -60) ಆಡಂಬರವಾಗುತ್ತಿರುವ ಹಬ್ಬ ಹರಿದಿನಗಳು! ದೇವರೊಬ್ಬ ನಾಮ ಹಲವು, ನಾವು ಪೂಜಿಸಿ, ಆರಾಧಿಸಿ, ಕೈಮುಗಿದು ಬೇಡಿಕೊಳ್ಳುವ ದೇವರನ್ನು ಗೊತ್ತಿದ್ದು, ಗೊತ್ತಿಲ್ಲದೇ ಆಡಂಭರದ ಪ್ರಪಂಚಕ್ಕೆ ಕೊಂಡೋಯುತ್ತಿದ್ದೇವೆ. ಮನುಜ ದಿನದಿಂದ ದಿನಕ್ಕೆ ಬದಲಾಗುತ್ತಾ, ತನಗಿಷ್ಟದಂತೆ ಸಂಸ್ಕಾರ, ಸಂಸ್ಕೃತಿಯ ನಿಜ ರೂಪವನ್ನು ಬದಲಾಯಿಸಿ ಹೊಸ ಹೊಸ ಆಚಾರಗಳನ್ನು ಸೃಷ್ಟಿಸಿ ತನ್ನ ಹೊಟ್ಟೆ ತುಂಬಿಸಲು, ಅತಿಯಾದ ಹಣ ಸಂಪಾದಿಸಲು ನಂಬಿಕೆಯನ್ನು ಅಸ್ತ್ರವಾಗಿಸಿ ಕೆಲವರು ಜೀವಿಸುತಿದ್ದರೆ, ಕೆಲವರು ಇನ್ನಿಲ್ಲದ ಕಥೆಗಳನ್ನು ಸೃಷ್ಟಿಸಿ ದೇವರೆಂಬ ನಂಬಿಕೆಯನ್ನು ನಂಬಿಕಸ್ತನ ಮೇಲೆಯೇ ಪ್ರಯೋಗ ಮಾಡಿ ವಿಲಾಸಿ ಜೀವನವನ್ನು ಮಾಡುತ್ತಿರುವವರನ್ನು ನೀವು ನೋಡುತ್ತಲೇ, ಪೋಶಿಸುತ್ತ, ಜೀವಿಸುತ್ತಿರುವ ಕಾಲವಾಗಿ ಹೋಗಿದೆ.        ಹೌದು, ದೇವರೆಂದರೆ ನಮ್ಮ ಜೀವನವನ್ನು, ಜೀವಿತವನ್ನು ಯಾವುದೇ ತೊಂದರೆಗಳು  ಇಲ್ಲದೆ, ತೊಂದರೆಗಳು ಬಂದಾಗ ಎದುರಿಸಲು ಶಕ್ತಿಕೊಡು, ದೈರ್ಯವಾಗಿ ಬದುಕುವ ಮತ್ತು ಹಣ ವಂತ, ಗುಣವಂತ, ಆರೋಗ್ಯವಂತನನ್ನಾಗಿ, ರಕ್ಷಣೆ ಮಾಡು ಎನ್ನುವ ಬೇಡಿಕೆಗಳನ್ನು ನಾವುಗಳು ನಂಬಿರುವ ಶಕ್ತಿ ಅಥವಾ ದೇವರುಗಳ ಮುಂದಿಡುತ್ತೇವೆ. ಆದರೆ ನಂಬಿಕೆಗಳು ಪ್ರಾಮಾಣಿಕವಾಗಿಲ್ಲದಿದ್ದರೆ ಆಡಂಬರದ ದಾರಿಗೆ ಹೋಗಿಬಿಡುತ್ತದೆ. ಯಾವುದೇ ಹಬ್ಬಗಳು, ಅಥವಾ ದೈವ ದೇವರುಗಳ ಕೆಲಸಗಳು ಕೆಲವೊಂದು ಕಡೆ ಪೈಪೋಟಿಯಲ್ಲಿ ತೊರ್ಪಡಿಕೆಗೆ ನಡೆಯುತ್ತಿದೆ. ಇಂತಹ ಆಚರಣೆಗಳನ್ನು ಯಾರಿಂದಲೂ ನಿಲ್ಲಿಸ

(ಲೇಖನ -59)ನಾವು ಭಾರತೀಯರು, ಇಂದು ಭಾರತೀಯರಾಗಿ ಉಳಿದಿದ್ದೇವೆ ಎಂದರೆ, ನಮ್ಮ ಪೂರ್ವಜರು ಸ್ವಾತಂತ್ರ್ಯಕ್ಕಾಗಿ ಜೀವ ಜೀವನವನ್ನು ಪಣವಿಟ್ಟು ನಮ್ಮ ದೇಶವನ್ನು ಉಳಿಸಿ ನಮ್ಮ ಕೈಗೆ ಕೊಟ್ಟುಬಿಟ್ಟಿದ್ದಾರೆ

Image
(ಲೇಖನ -59)ನಾವು ಭಾರತೀಯರು, ಇಂದು ಭಾರತೀಯರಾಗಿ ಉಳಿದಿದ್ದೇವೆ ಎಂದರೆ, ನಮ್ಮ ಪೂರ್ವಜರು ಸ್ವಾತಂತ್ರ್ಯಕ್ಕಾಗಿ ಜೀವ ಜೀವನವನ್ನು ಪಣವಿಟ್ಟು ನಮ್ಮ ದೇಶವನ್ನು ಉಳಿಸಿ ನಮ್ಮ ಕೈಗೆ ಕೊಟ್ಟುಬಿಟ್ಟಿದ್ದಾರೆ. ಭಾರತವೆಂದರೆ ಸೌಭಾಗ್ಯ, ಭಾರತವೆಂದರೆ ಮೌಲ್ಯ, ಭಾರತವೆಂದರೆ ಪ್ರೀತಿ, ಭಾರತವೆಂದರೆ ಹೆಮ್ಮೆ. ಪ್ರತಿಯೊಬ್ಬ ನೈಜ ಭಾರತೀಯ ನಾನೊಬ್ಬ ಭಾರತೀಯನೆಂದು ಧೈರ್ಯವಾಗಿ ಹೇಳುತ್ತಾನೆ. ನಮ್ಮ ದೇಶದಲ್ಲಿ ಹಲವು ಜಾತಿ ಧರ್ಮ, ಮತ ಪಂಗಡಗಳು, ಹಲವಾರು ಭಾಷೆಗಳು, ಸಂಸ್ಕೃತಿ, ಸಂಸ್ಕಾರಗಳಿದ್ದಾವೆ. ಪ್ರಪಂಚದ ಎಲ್ಲಾ ದೇಶಗಳಿಗೆ ಭಾರತದ ಬಗ್ಗೆ ವಿಶ್ವಾಸ, ಪ್ರೀತಿ ಅಚ್ಚಳಿಯದೆ ಉಳಿದಿದೆ. ಅದಕ್ಕೆ ಕಾರಣ ಭಾರತೀಯರಲ್ಲಿ ಇರುವ ಗೌರವ ಮನೋಭಾವನೆ, ಸೇವಾ ಮನೋಭಾವನೆ, ಪ್ರೀತಿ ಮುಂತಾದವು. ಸಂಸ್ಕಾರವೆಂಬುದು ಭಾರತೀಯರಲ್ಲಿ ಕಲಿಯಬೇಕು, ಬುದ್ದಿವಂತಿಕೆ, ಮತ್ತು ಯಾವುದೇ ಕಠಿಣ ಸಂಧರ್ಭದಲ್ಲಿ ಮೇಲೆದ್ದು ಬರುವ ದೇಶವೆಂದರೆ ಅದು ಭಾರತ ಮಾತ್ರ. ಈ ವಿಷಯಗಳು ಪ್ರಪಂಚದ ಮೂಲೆ ಮೊಲೆಗೂ ತಿಳಿದಿದೆ. ಹಾಗಾಗಿ ಹೆಚ್ಚಿನ ದೇಶಗಳು ಭಾರತದ ತಂಟೆಗೆ ಬರುವುದಿಲ್ಲ. ನಮ್ಮ ದೇಶದೊಳಗೆ ಕುಳಿತು ದೇಶದ ಬಗ್ಗೆ ಬಿನ್ನಾಭಿಪ್ರಾಯ ಸೃಷ್ಟಿಸುವ ಕೆಲವು ಜನರನ್ನು ಹೊರತುಪಡಿಸಿ ಭಾರತೀಯತೆಯ ಘನತೆಯನ್ನು ನಾಶಪಡಿಸಲು ಯಾರಿಗೂ ಸಾಧ್ಯವಿಲ್ಲ, ಇಂದು, ಮುಂದೆ ಕೂಡ. ಬ್ರಿಟಿಷರು ಭಾರತಕ್ಕೆ ವ್ಯಾಪಾರಕ್ಕಾಗಿ ಬಂದು ಭಾರತವನ್ನು ತನ್ನ ಹಿಡಿತದಲ್ಲಿ ಇಡಲು ಶ್ರಮಿಸಿದರು, ಭಾರತದ ಮುಗ್ದ ಜನರನ್ನು ತುಳಿದು,