Posts

Showing posts from April, 2024

(ಲೇಖನ -124) ಹಸಿವೆಂಬುವುದು ಪ್ರತೀ ಜೀವಿಗೆ ಇದೆ, ಹಸಿವಿನ ಅರಿವು ಇರುವ ಪ್ರತೀ ಜೀವಿ ತನ್ನ ಆಹಾರಕ್ಕಾಗಿ ಹುಡುಕಾಟ / ಹೋರಾಟ ಮಾಡಿಯೇ ಮಾಡುತ್ತದೆ

Image
 (ಲೇಖನ -124) ಹಸಿವೆಂಬುವುದು ಪ್ರತೀ ಜೀವಿಗೆ ಇದೆ, ಹಸಿವಿನ ಅರಿವು ಇರುವ ಪ್ರತೀ ಜೀವಿ ತನ್ನ ಆಹಾರಕ್ಕಾಗಿ ಹುಡುಕಾಟ / ಹೋರಾಟ ಮಾಡಿಯೇ ಮಾಡುತ್ತದೆ. ಪ್ರಾಣಿ, ಪಕ್ಷಿ ಸಂಕುಲ, ಮನುಜ ಎಲ್ಲವೂ ಹಸಿವನ್ನು ತಡೆದುಕೊಳ್ಳುವ ಶಕ್ತಿ ಮತ್ತು ಸಾಮರ್ಥ್ಯವನ್ನು ಹೊಂದಲು ಸಾಧ್ಯವಿಲ್ಲ. ಹಸಿದ ಹೊಟ್ಟೆ, ಖಾಲಿ ಕೈ ಕಲಿಸುವ ಪಾಠ ಜೀವನದಲ್ಲಿ ಮನುಷ್ಯರು ಮರೆಯುವುದು ವಿರಳ. ಹಸಿವು ಮನುಷ್ಯನನ್ನು ಹೆಚ್ಚು ಹದ್ದುಬಸ್ತಿನಲ್ಲಿಡುತ್ತದೆ, ಹಸಿವನ್ನು ತಿಳಿದವನು ಹೆಚ್ಚಿನ ಗುಣಗಳನ್ನು ಹೊಂದಿರುತ್ತಾನೆ, ಹಸಿವನ್ನು ನೀಗಿಸಲು ಪ್ರಯತ್ನ ಪಡುತ್ತಾ ಇನ್ನೊಂದು ಜೀವಿಯ ಹಸಿವನ್ನು ನೀಗಿಸಲು ಪ್ರಯತ್ನ ಮಾಡುತ್ತಾನೆ. ಇಂದಿನ ದಿನದಲ್ಲೂ ಹಸಿವಿನಿಂದ ಬಳಲುವ ಮತ್ತು ದಿನದ ಒಂದು ತುತ್ತಿಗಾಗಿ ಹಂಬಲಿಸುವ, ಬೇಡುತ್ತಿರುವ, ಮತ್ತು ಕೆಲಸ ಮಾಡಿಯೂ ದಕ್ಕದೇ ಇರುವ ಹಣದ ಕೊರತೆ, ಇವೆಲ್ಲವೂ ಮನುಜನನ್ನು ಊಹಿಸಲಾಗದ ಕಷ್ಟಕ್ಕೆ ತಳ್ಳುತ್ತ ಇರುತ್ತದೆ. ಹಸಿವನ್ನು ತಿಳಿದವನು ಅಹಂಕಾರವನ್ನು ಹೊಂದಿರುವುದಿಲ್ಲ, ಕಷ್ಟವನ್ನು ತಿಳಿದವನು ಕಷ್ಟವನ್ನು ಕೊಡುವುದೂ ಇಲ್ಲ, ಎಲ್ಲರೂ ಸುಖವಾಗಿ ಇರಲಿ ಇರುವುದರಲ್ಲಿಯೇ ಹಂಚಿ ತಿನ್ನುವ ಅನ್ನುವ ಮನೋಭಾವನೆ ಹೊಂದಿರುತ್ತಾರೆ.              ಒಂದು ಹೊತ್ತಿನ ಊಟಕ್ಕೂ ಕಷ್ಟಪಡುವ ಅದೆಷ್ಟೋ ಜನರು ಬರೇ ನೀರು ಕುಡಿದು, ಅಥವಾ ಹಸಿವನ್ನು ತಾಳಲಾರದೆ ಒದ್ದಾಡುವ ಅನೇಕ ಜನರನ್ನು ನಾವೆಲ್ಲರೂ ನೋಡುತ್ತೇವೆ. ಆದರೆ ಸಾಮರ್ಥ್ಯವಿದ್ದೂ ಹಸಿವನ್ನು ನೀಗಿಸುವ ಕಾರ

ಲೇಖನ -123) ಹೊರದೇಶದಲ್ಲಿರುವ ಉದ್ಯೋಗಸ್ಥರು ಅದೆಷ್ಟು ಸುರಕ್ಷಿತರು?

Image
(ಲೇಖನ -123) ಹೊರದೇಶದಲ್ಲಿರುವ  ಉದ್ಯೋಗಸ್ಥರು  ಅದೆಷ್ಟು  ಸುರಕ್ಷಿತರು? ದೇಶ ಬಿಟ್ಟು  ಹೊರದೇಶಕ್ಕೆ  ಸಾವಿರಾರು ಕನಸುಗಳೊಂದಿಗೆ ಹೆಜ್ಜೆ ಹಾಕಿ  ಸುಂದರ ಬದುಕನ್ನು  ಕಟ್ಟಿಕೊಳ್ಳಲು  ಹರಸಾಹಸ ಪಟ್ಟು ಕೆಲವರು ತನ್ನ ಕನಸನ್ನು ನನಸು ಮಾಡಿಕೊಂಡರೆ, ಇನ್ನು ಕೆಲವರು  ಜೀವನಪರ್ಯಂತ  ವಿದೇಶದಲ್ಲಿ ದುಡಿದು  ಕೊನೆಗಾಲಕ್ಕೆ  ಏನು ಇಲ್ಲದೆ  ಮರುಗುವ ಪರಿಸ್ಥಿತಿಯನ್ನು ಎದುರಿಸುತ್ತಾರೆ. ಒಬ್ಬೊಬ್ಬರಿಗೆ ಒಂದೊಂದು ತರಹದ  ಸಮಸ್ಯೆಗಳು, ಒಂದೊಂದು ತರಹದ  ಜವಾಬ್ದಾರಿಗಳು, ಇನ್ನು ಕೆಲವರಿಗೆ  ಮುಂದಿನ ಬದುಕಿನ  ಅರಿವಿಲ್ಲದೆ  ಸಂಪಾದಿಸಿದ ಹಣವನ್ನು ವ್ಯಯಮಾಡಿ ಕೊನೆಗೆ ಪರಿತಪಿಸುವ  ಅನೇಕ ಮಂದಿ, ತಾನು  ಸಂಪಾದಿಸುವ ಕಾಲದಲ್ಲಿ  ಅನೇಕ ಜನರು  ತನ್ನನ್ನು ಉಪಯೋಗಿಸಿಕೊಳ್ಳಲು ಆರಂಭಿಸುತ್ತಾರೆ. ತನ್ನ ಸಂಪಾದನೆಯಲ್ಲಿ ಬಂದ ಹಣವನ್ನು  ಕುಟುಂಬ, ಸಂಬಂಧಿಗಳು, ಗೆಳೆಯ ಗೆಳತಿಯರು  ಎನ್ನುತ್ತಾ  ಭಾವನೆಗಳಿಗೆ ಅಂಟಿಕೊಂಡು  ಕೈ ಖಾಲಿ  ಮಾಡಿಕೊಂಡು  ಮಾಡಿರುವ ಹಣದ  ಸಹಾಯವನ್ನು ನೆನೆಯುತ್ತಾ  ಕೊರಗಿ  ಬದುಕುವ  ಅದೆಷ್ಟೋ  ಪರದೇಶಿಗಳು.               ಹೊರದೇಶವೆಂದರೆ, ಸುಲಭದಲ್ಲಿ ಹಣ ಸಂಪಾದನೆ ಮಾಡುವ  ಜಾಗವೆಂದು  ತಿಳಿದುಕೊಳ್ಳುವ  ಅನೇಕ ಮಂದಿ  ಹೊರದೇಶಕ್ಕೆ  ಕಾಲಿಟ್ಟಾಗ ಮಾತ್ರ  ಅನುಭವಿಸುತ್ತಾರೆ,  ಅಲ್ಲಿರುವ ವಾತಾವರಣ, ನಿಯಮಗಳನ್ನು ಪಾಲಿಸುತ್ತ ಸರಿಯಾಗಿ ಹೊಟ್ಟೆಗೂ ತಿನ್ನದೇ, ತನ್ನ ಕುಟುಂಬ ಸಂಸಾರಕ್ಕಾಗಿ ಜೀವನಪರ್ಯಂತ ದುಡಿದು  ಹಣವನ್ನು ಕಳುಹಿಸು

ನಿನಗಿನ್ನೂ ತಿಳಿದಿಲ್ಲ

ನಿನಗಿನ್ನೂ ತಿಳಿದಿಲ್ಲ  ನಾನಿನ್ನ ಪ್ರೀತಿಸುವ ರೀತಿ  ನಿನಗಿನ್ನೂ ತಿಳಿದಿಲ್ಲ  ನಾ ನಿನಗಾಗಿ ಹಂಬಲಿಸುವ ರೀತಿ  ತಿಳಿಯುತ್ತಿಲ್ಲ ಎನಗೆ  ಹಗಲು ರಾತ್ರಿ  ನಿನ್ನ ನೆನಪಲ್ಲೇ ಸಾಗುತಿರುವೆ  ದಿನ ದಿನವೂ ನಿನ್ನದೇ ನೆನಪು, ಬರುವೆಯಾ ಜೊತೆಯಾಗಿ  ನನ್ನ ಪ್ರೀತಿಯ ರಾಣಿಯಾಗಿ  ಕಾಯುತಿರುವೆ ನಿನಗಾಗಿ  ಬಿಗಿದಪ್ಪಿ ಮುದ್ದಿನ ಸುರಿಮಳೆಗಾಗಿ  ಓ ನನ್ನ ನಲ್ಲೆ, ನಾನಿರುವೆ ನಿನಗಾಗಿ  ನಿನ್ನ ಪ್ರೀತಿಯ ಕಿವಿ ಮಾತಿಗಾಗಿ        ✍🏿ಮಾಧವ. ಕೆ. ಅಂಜಾರು 

( ಲೇಖನ -122) ಭೂ - ಕೈಲಾಸ

Image
(ಲೇಖನ -122) ಭೂ - ಕೈಲಾಸ, ಕಲಾ ವೈಭವ - ಕುವೈತ್ ಕನ್ನಡ ಕೂಟದಿಂದ ಆಯೋಜಿಸಲ್ಪಟ್ಟ  ದಾಸೋತ್ಸವ ಶೇಕಡಾ ನೂರರಷ್ಟು ಮನ ತಣಿಸಿತು, ಕಲಾ ಮಾತೆಯರು , ಕಲಾಗಾರರು ರೋಮಾಂಚನಗೊಳಿಸಿದ ದೃಶ್ಯಗಳ ಹಿಂದೆ ಸದ್ದಿಲ್ಲದೇ ಶ್ರಮವಹಿಸಿದ "ಶ್ರೀ ಸತೀಶ್ ಆಚಾರ್ಯ "ಇವರ ನಿರ್ದೇಶನ ಪ್ರೇಕ್ಷಕವರ್ಗದ ಹುಬ್ಬೆರಿಸಿತ್ತು,  ಭೂ ಕೈಲಾಸದ ಪ್ರತಿಯೊಂದು ಭಾಗ ಚಪ್ಪಾಳೆಯೊಂದಿಗೆ ಮುಂದುವರಿಯುತಿತ್ತು. ಆರಂಭದಿಂದ ಕೊನೆಯವರೆಗೂ ಅಚ್ಚುಕಟ್ಟಾಗಿ ನಡೆದ ಕಾರ್ಯಕ್ರಮ ಚಿಣ್ಣರಿಂದ ಹಿರಿಯರವರೆಗೂ ಬಹಳಷ್ಟು ಸ್ಪಷ್ಟ ಮತ್ತು ಸಂತಸದ ವಾತಾವರಣದಿಂದ ಕೂಡಿತ್ತು.        ರಾಮಾಯಣ, ಮಹಾಭಾರತದ ತುಣುಕುಗಳೊಂದಿಗೆ,ಭಕ್ತಿ ಮತ್ತು ರಸದೌತಣದ ಹಬ್ಬ ಕುವೈಟ್ ಕನ್ನಡ ಕೂಟದ ಮೆರುಗನ್ನು ಇನ್ನಷ್ಟು ಹೆಚ್ಚುಗೊಳಿಸಿತ್ತು. ಬಣ್ಣ ಬಣ್ಣದ ಉಡುಗೆ ತೊಡುಗೆ, ಪರಸ್ಪರರ ನಗು ಮುಖದ ಸಂಧರ್ಭಗಳೊಂದಿಗೆ ಕಾರ್ಯಕ್ರಮ ತೆರೆಕಂಡಿತು. ಇಲ್ಲಿ ಆಡಳಿತ ಮಂಡಳಿ, ಸರ್ವ ಸದಸ್ಯರ ನಿಸ್ವಾರ್ಥ ಸೇವೆ ಕನ್ನಡ ಕೂಟದ ಗೌರವ ದ್ವಿಗುಣಗೊಳಿಸುತ್ತಲೇ ಇದೆ. ಪ್ರತಿಯೊಬ್ಬರಲ್ಲೂ ಕಲೆಎಂಬುದಿದೆ ಹಾಗಾಗಿ ಪ್ರತೀ ಸದಸ್ಯರು ಮತ್ತು ಅವರ ಮಕ್ಕಳೂ ಒಂದಲ್ಲ ಒಂದು ರೀತಿಯಲ್ಲಿ ಭಾಗವಹಿಸಿ ಕಲೆಯನ್ನು ಉಳಿಸಿ ಬೆಳೆಸಲು ಸಹಾಯವಾಗುತ್ತಿದ್ದಾರೆ. ಭಜನೆ, ನಿರೂಪಣೆ, ಸಾತ್ವಿಕ ಆಹಾರ ಎಲ್ಲವೂ ಅಚ್ಚುಕಟ್ಟಾಗಿ ನಡೆದು ಕೂಟದ ಶಿಸ್ತನ್ನು ತೋರಿಸುತಿತ್ತು.         ಬಾಲ್ಯದ ಸಮಯದಲ್ಲಿ ಕೇಳುತಿದ್ದ ಹರಿಕಥೆಯನ್ನು ವಿಶೇಷ ರೀತಿಯಲ್ಲಿ

ಕಲಶೋತ್ಸವ

ಬ್ರಮ್ಮ ಕಲಶೋತ್ಸವ.... ಬ್ರಮ್ಮ ಕಲಶೋತ್ಸವ  ನಮ್ಮ ಕಾಪುದ ಮಾರ್ಯಮ್ಮನ, ನಮ್ಮೂರ ದೇವೆರೆ ಪೊಸ ಗುಡಿತ  ಸಂಭ್ರಮೋ ಮಾತೆರೆಗ್ಲಾ  ಮಾತೆರ್ಲ ಬಲೆ  ಅಮ್ಮನ ಸೇವೆ ಮಲ್ಪುಲೇ... ಅಮ್ಮನ ಪಾದ ಸೇವೆ  ನಮ್ಮ ಮಾರ್ಯಮ್ಮ ದೇವೆರೆನ  ಮಲ್ಲಿಗೆ ಪೂ ಪರುಂದು  ಭಕ್ತಿ ಸೇವೆ ಕೊರಿಯರೆ  ಮಾತೆರ್ಲ ಸೇರ್ಲೆ  ನಮ್ಮ ಕಾಪು ಕ್ಷೇತ್ರಡು, ಅಮ್ಮ ಮಾರ್ಯಮ್ಮ ನಿನ್ನನೇ ಸುಗಿಪುವ  ಭಯ ಭಕ್ತಿಡು ನಿನ್ನ ಸೇವೆ ಮಲ್ಪುವ  ಊರುನೇ ಕಾಪುನ ಕಾಪುದ ಮಾರ್ಯಮ್ಮ  ಅಭಯೋನು ಕೊರ್ಲೆ  ಅಮ್ಮ, ಅಮ್ಮ ಅಮ್ಮ 🙏🏿       ✍🏿ಮಾಧವ. ಕೆ. ಅಂಜಾರು 

ಕಾಪುಲೆ ಅಮ್ಮ ಮಾರ್ಯಾಮ್ಮ

ಕಾಪುಲೆ ಅಮ್ಮ ಮಾರ್ಯಾಮ್ಮ  ಕಾಪುಲೆ ಅಮ್ಮ ಮಾರ್ಯಮ್ಮ  ಎಂಚಪ್ಪುನಮ್ಮ ನಿನನ್ ಸುಗಿಪಂದೆ  ಎಂಚಪ್ಪುನಮ್ಮ ನಿನ್ನ ಗುಡಿಕ್ ಬರಂದೆ  ಎಂಚಪ್ಪುನಮ್ಮ ನಿನ್ನ ಸೇವೆ ಮಲ್ಪಂದೆ  ಎಂಚಪ್ಪುನಮ್ಮ ನಿನ್ನ ಕಾರುಗ್ ಬೂರಂದೆ, ಕಾಪುಲೆ ಅಮ್ಮ ಮಾರ್ಯಮ್ಮ  ಕಾಪುಲೆ ಅಮ್ಮ ಮಾರ್ಯಮ್ಮ  ಎಂಚಪ್ಪುನಮ್ಮ ನಿನ್ನ ಮೂರುತಿ ತೂವಂದೆ  ಎಂಚಪ್ಪುನಮ್ಮ  ನಿನ್ನ ಭಜನೆ ಮಲ್ಪಂದೆ  ಎಂಚಪ್ಪುನಮ್ಮ ನಿನ್ನ ಪೂಜೆ ಮಲ್ಪಂದೆ  ಎಂಚಪ್ಪುನಮ್ಮ ಅಮ್ಮಾ ಅಮ್ಮಾ ಪನಂದೆ, ಕಾಪುಲೆ ಅಮ್ಮ ಮಾರ್ಯಮ್ಮ  ಕಾಪುದ ಅಮ್ಮ ಅಮ್ಮ ಮಾರ್ಯಮ್ಮ  ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ  ಎಂಕ್ಲೆನ್ ಕಾಪುಲೆ ಅಮ್ಮಾ           ✍🏿ಮಾಧವ. ಕೆ. ಅಂಜಾರು 

ಲೇಖನ 121) ನಿಮ್ಮ ಅಮೂಲ್ಯವಾದ ಒಂದು ಮತ ನಿಮ್ಮ ಊರಿನ ಮತ್ತು ದೇಶದ ಚಿತ್ರಣವನ್ನು ಬದಲಾಯಿಸಬಹುದು

Image
 (ಲೇಖನ 121)   ನಿಮ್ಮ ಅಮೂಲ್ಯವಾದ  ಒಂದು ಮತ ನಿಮ್ಮ ಊರಿನ ಮತ್ತು ದೇಶದ ಚಿತ್ರಣವನ್ನು ಬದಲಾಯಿಸಬಹುದು. ಮತವನ್ನು ನೀಡುವಾಗ 10 ಬಾರಿ  ಆಲೋಚಿಸಿ,  ಅವಲೋಕನವನ್ನು ಮಾಡಿ  ಉತ್ತಮ ಅಭ್ಯರ್ಥಿಗೆ  ಮತವನ್ನು ನೀಡಿ. ಒಂದು ವೇಳೆ ನಮ್ಮ ಕ್ಷೇತ್ರದಲ್ಲಿ  ಯಾವುದೇ ಅಭ್ಯರ್ಥಿಯು  ಸರಿ ಇಲ್ಲ ಎಂದು ತಿಳಿದುಕೊಂಡಿದ್ದರೆ  ನೋಟ NOTA ವನ್ನು  ಉಪಯೋಗಿಸಿಕೊಳ್ಳುವ  ಅಧಿಕಾರ ಚುನಾವಣಾ ಆಯೋಗ  ದೇಶದ ಪ್ರತಿಯೊಬ್ಬ  ನಾಗರಿಕನಿಗೆ  ಅವಕಾಶ ಕಲ್ಪಿಸಿದೆ. ಯಾರೋ ಏನೋ ಹೇಳುತ್ತಾರೆಂದು  ಅವರ ಮಾತಿಗೆ  ಮರುಳಾಗದೆ ವೋಟು ಬಂತು ಮತವನ್ನು ಸುಮ್ಮನೆ ಕಡೆಗಣಿಸಬೇಡಿ. ಸರಿಸುಮಾರು  ಮೊದಲು ನಿಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ  ಶ್ರಮ ಪಟ್ಟ ಅಭ್ಯರ್ಥಿಗೆ  ಇನ್ನಷ್ಟು  ಅವಕಾಶವನ್ನು  ಕಲ್ಪಿಸಿ ಕೊಡಿ. ಒಂದು ವೇಳೆ ತಮ್ಮ ಕ್ಷೇತ್ರದ ಕಡೆಗೆ ಗಮನ ಕೊಡದೇ ಇರುವ ಅಭ್ಯರ್ಥಿಗಳನ್ನು  ಆಯ್ಕೆ ಮಾಡಿದಲ್ಲಿ ಮತದಾರದ ನಾವುಗಳು  ಅಧಿಕಾರವನ್ನು ಕೊಟ್ಟು ಪರಿತಪಿಸುವಂತಾಗುತ್ತದೆ.  ಪ್ರತಿಯೊಂದು  ಪಕ್ಷಕ್ಕೂ  ಅವರದೇ ಆದ  ಸಿದ್ಧಾಂತಗಳನ್ನು  ಮತ್ತು ಧ್ಯೇಯಗಳನ್ನು  ಇಟ್ಟುಕೊಂಡು  ಮತಯಾಚನೆಗೆ ಬರುತ್ತಾರೆ,  ಆದರೆ ಒಬ್ಬ ಅಭ್ಯರ್ಥಿಯನ್ನು  ತುಲನೆ ಮಾಡುವ  ಶಕ್ತಿ  ಪ್ರತಿ ಮತದಾರರಲ್ಲೂ  ಇರುತ್ತದೆ. ಯಾವುದೇ ಆಮಿಷಗಳಿಗೆ ಒಳಗಾಗದೆ  ತಾವು ಬಯಸುವ ಸದೃಢ ಅಭ್ಯರ್ಥಿಗೆ  ಮತವನ್ನು ನೀಡಿ.               ಅಭ್ಯರ್ಥಿಯಲ್ಲಿ ನಾಯಕತ್ವದ ಗುಣ  ಎಷ್ಟರ ಮಟ್ಟಿಗೆ  ಇದೆ? ಅಭ್ಯರ್ಥಿಯ  ಹಿನ್ನಲೆ, ವ

ಲೇಖನ -120) ಅಪ್ಪ ನೆಂಬ ಎರಡಕ್ಷರದ ಶಕ್ತಿ ಜಗತ್ತನ್ನು ಗೆಲ್ಲಿಸುತ್ತದೆ,

Image
 (ಲೇಖನ -120) ಅಪ್ಪ ನೆಂಬ ಎರಡಕ್ಷರದ ಶಕ್ತಿ ಜಗತ್ತನ್ನು ಗೆಲ್ಲಿಸುತ್ತದೆ, ಅಪ್ಪನಿಲ್ಲದ ಬದುಕು ಅಲ್ಲೋಲಕಲ್ಲೋಲ. ನಿಜವಾದ ನೋವನ್ನು ತಿಳಿಯಬೇಕಾದರೆ ಅಪ್ಪನನ್ನು ಬೇಗ ಕಳೆದುಕೊಂಡು ಬದುಕಿದ ಅದೆಷ್ಟೋ ಜನರಲ್ಲಿ ಕೇಳಬಹುದು. ನಿಮ್ಮ ಜೀವನದಲ್ಲಿ ಕೊನೆಯತನಕ ನಿಮ್ಮ ತಂದೆ ತಾಯಿ ಜೊತೆಯಲ್ಲಿ ಇದ್ದಾರೆ ಅಂದರೆ ನಿಮ್ಮ ಪುಣ್ಯವೇ ಸರಿ. ಆದರೆ ತಂದೆ ತಾಯಿಯನ್ನು ಸರಿಯಾಗಿ ನೋಡಿಕೊಳ್ಳದೆ ಇರುವ ಅನೇಕ ಜನರು ಅಲ್ಲಲ್ಲಿ ಕಾಣಸಿಗುತ್ತಾರೆ. ಕಾರಣಗಳು ಹಲವಾರು ಇದ್ದರೂ ಅತೀ ಕಷ್ಟದಲ್ಲಿ ಜೀವನ ತೆಗೆಯುವ ತುಂಬಾ ಜನರು ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಅದೆಷ್ಟು ಆಸ್ತಿ ಅಂತಸ್ತು ಹೊಂದಿದ್ದರೂ ಮುಪ್ಪಾದ ತಂದೆ ತಾಯಿಯರು ಮಕ್ಕಳ ನಿರ್ಲಕ್ಷದಿಂದ ಬೇಗನೆ ಹಾಸಿಗೆ ಹಿಡಿದು, ಅನಾಥಶ್ರಮ ಅಥವಾ ಮನೆಯಿಂದ ಹೊರದಬ್ಬಾಲ್ ಪಡುತ್ತಾರೆ. ಜೀವದ ಅಂತ್ಯ ಭಯಾನಕವಾಗಿ ಅನುಭವಿಸುತ್ತಾರೆ.           ಯಾವುದೊ ಒಂದು ಸಂಧರ್ಭದಲ್ಲಿ ಅಪ್ಪನ ಬೈಗುಳವನ್ನು ಕೇಳುವ ಮಕ್ಕಳು ಅಪ್ಪನ ಒಳ ಮನಸ್ಸನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲರಾಗಿರುತ್ತಾರೆ, ಅಪ್ಪನ ತ್ಯಾಗ, ಸಹಾಯ, ಚಿಕ್ಕಂದಿನಿಂದಲು ಬೆಳೆಯುವ ತನಕ ತನಗಾಗಿ ಮಾಡಿ ಇಡದೆ ಸರ್ವಸ್ವವನ್ನು ತನ್ನ ಹೆಂಡತಿ ಮಕ್ಕಳಿಗಾಗಿ ಬದುಕಿದರು ಕೊನೆಗಾಲದಲ್ಲಿ ಅಪ್ಪನನ್ನು ದೂಷಿಸುವ ಅನೇಕ ಮಂದಿ ಅಪ್ಪನನ್ನು ಕಳೆದುಕೊಂಡಾಗ ಮೊಸಳೆ ಕಣ್ಣೀರು ಹಾಕಿ ಅಪ್ಪ ಮಾಡಿದ ಆಸ್ತಿಯ ಹಿಂದೆ ಓಡಾಡುತ್ತಾರೆ. ಅಪ್ಪ ಬದುಕಿರುವಾಗಲೇ ಅಪ್ಪನನ್ನು ಪ್ರಶ

ಲೇಖನ 119 ) ಒಬ್ಬ ಓದುಗನ ಒಂದು ಸ್ಪೂರ್ತಿದಾಯಕ ಮಾತು ಲೇಖನವನ್ನು ಮುಂದುವರಿಸಲು ಕಾರಣವಾಯಿತು,

Image
( ಲೇಖನ 119 ) ಒಬ್ಬ ಓದುಗನ   ಒಂದು ಸ್ಪೂರ್ತಿದಾಯಕ ಮಾತು ಲೇಖನವನ್ನು  ಮುಂದುವರಿಸಲು ಕಾರಣವಾಯಿತು, ಅದೇನೋ  ಹಲವು ಕಾರಣಗಳಿಂದ ಬರವಣಿಗೆಗೆ  ವಿರಾಮವನ್ನು ನೀಡಿದ್ದ ನಾನು, ಪುನಹ  ಪದಗುಂಚಗಳ ಜೋಡಣೆಯನ್ನು ಆರಂಭಿಸಿದ್ದೇನೆ. ಮರಳುಗಾಡಿನೊಳಗಿನ ಓಯಸಿಸ್ ನಂತೆ ಒಬ್ಬ ಲೇಖಕನಿಗೆ  ಅಥವಾ ಕವಿಗೆ ಓದುಗರು  ಅದೆಷ್ಟು ಬಲವನ್ನು ನೀಡುತ್ತಾರೆ ಅನ್ನುವುದು ತಿಳಿಯಿತು. ಅದೇನು ಇತ್ತೀಚೆಗೆ  ನಿಮ್ಮ ಬರವಣಿಗೆಗಳು  ನಮ್ಮ ಗ್ರೂಪ್ನಲ್ಲಿ  ಬರುತ್ತಿಲ್ಲವಲ್ಲ  ಏನಾದರೂ ಗೀಚುತ್ತಾ ಇರಿ ನಿರಾಶರಾಗಬೇಡಿ ಮುಂದುವರಿಯಿರಿ ಎಂದು ಹೇಳಿದ ಮಾತ್ರಕ್ಕೆ  ನನ್ನ ಮನದೊಳಗೆ  ಇನ್ನಷ್ಟು  ಹಲವು  ಪ್ರೇರಣಾ ಶಕ್ತಿಯ ವ್ಯಕ್ತಿಗಳು.            ಉತ್ತಮ ಕೆಲಸವನ್ನು ಮತ್ತು ಕೆಟ್ಟ ಕೆಲಸವನ್ನು ಪ್ರೇರೇಪಿಸುವ  ಜನರು ನಮ್ಮ ಜೀವನದಲ್ಲಿ ಕಾಣುತ್ತಲೇ ಇರುತ್ತೇವೆ,  ನಮ್ಮ ಸುತ್ತಮುತ್ತಲಿನ ಜನರಲ್ಲಿ ಒಂದಷ್ಟು ಉತ್ತಮವಾದ ವ್ಯಕ್ತಿತ್ವವನ್ನು ಹೊಂದಿರುವ ಜನರು  ಮತ್ತು ಅನಾಚಾರ ಹೊಂದಿರುವ ಜನರು ಕೂಡ  ಸೇರಿರುತ್ತಾರೆ. ಯಾವುದೋ ಒಂದು ವ್ಯಕ್ತಿ  ತನ್ನ ಜೀವನದಲ್ಲಿ  ಸಾಧನೆ ಎಂಬ ಮೆಟ್ಟಿಲನ್ನು ಹತ್ತಬೇಕಾದರೆ  ಅದಕ್ಕೆ  ನಿಷ್ಕಲ್ಮಶ  ಜನರ ಬೆಂಬಲ ಮತ್ತು ಆಶೀರ್ವಾದ ಇದ್ದೇ ಇರುತ್ತದೆ. ಅದು  ತಂದೆ ತಾಯಿ ಬಂಧು ಬಳಗ ಅಥವಾ ಉತ್ತಮ ಗೆಳೆಯರ  ರೀತಿಯಲ್ಲಿ  ಇರುತ್ತದೆ. ಒಂದು ವ್ಯಕ್ತಿಯನ್ನು  ಹೊಂಚು ಹಾಕಿ ನಾಶ ಮಾಡುವ  ಪ್ರಯತ್ನದ ನಡುವೆ  ದೇವರಂತೆ  ಬಂದು  ರಕ್ಷಣೆ ಮಾಡುವ ವ್ಯಕ್ತಿಗಳ