Posts

Showing posts from November, 2023

(ಲೇಖನ -113) ತುಳುನಾಡು ಮತ್ತು ತುಳು ಸಂಸ್ಕೃತಿ, ತುಳುವರು ಪ್ರಪಂಚದ ಎಲ್ಲಾ ಕಡೆಯಲ್ಲೂ ಸಿಗುತ್ತಾರೆ

Image
✍️Madhav. K. Anjar  (ಲೇಖನ -113) ತುಳುನಾಡು ಮತ್ತು ತುಳು ಸಂಸ್ಕೃತಿ,  ತುಳುವರು ಪ್ರಪಂಚದ ಎಲ್ಲಾ ಕಡೆಯಲ್ಲೂ ಸಿಗುತ್ತಾರೆ, ತುಳುನಾಡಿನ ಜನರಲ್ಲಿನ ಜೀವನ ಪದ್ಧತಿ, ಧೈರ್ಯ, ಬುದ್ದಿವಂತಿಕೆ, ಸೌಂದರ್ಯ ಎ ಭಾಷಾ ಗೌರವ, ವ್ಯಕ್ತಿ ಗೌರವ, ದೇಶ ಭಕ್ತಿ ಹಾಗೂ ಅನೇಕ ತರಹದ ವಿಶೇಷತೆ ತುಳುನಾಡಿನ ಜನರಲ್ಲಿ ನೋಡಬಹುದು. ಅದು ಹೇಗೆ, ತುಳುವರು ಯಾಕೆ ಅಷ್ಟು ಬುದ್ದಿವಂತರು ಅನ್ನುವ ಪ್ರಶ್ನೆ ಮೂಡ ಬಹದು. ತುಳು ಭಾಷೆ ಪುರಾತನ ಭಾಷೆ, ಶೇಕಡಾ 99 % ಜನರು ತುಳು ಬಲ್ಲವರು, ಇತ್ತೀಚಿನ ದಿನದ ಇಂಗ್ಲಿಷ್ ಪ್ರಭಾವದ ಕಾರಣಕ್ಕೂ ತುಳು ಭಾಷೆ ತಲೆಬಾಗುತ್ತಿಲ್ಲ ಯಾಕೆಂದರೆ ತುಳು ಭಾಷೆಗೆ ಯಾವ ಭಾಷೆಯೂ ಪೈಪೋಟಿ ನೀಡಲು ಸಾಧ್ಯವಿಲ್ಲ. ತುಳು ಭಾಷೆಯನ್ನು ಬಲ್ಲವರು ಮಾತ್ರ ಭಾಷೆಯ ವಿಶೇಷತೆಯ ಬಗ್ಗೆ ತಿಳಿದಿರುತ್ತಾರೆ.         ಉದಾಹರಣೆಗೆ, " ನಮಸ್ಕಾರ ಈರ್ ಎಂಚ ಉಲ್ಲರ್ " ಇದರ ಅರ್ಥ ಕನ್ನಡದಲ್ಲಿ " ನಮಸ್ಕಾರ ನೀವು ಹೇಗಿದ್ದೀರಿ " ಇಲ್ಲಿ ಈ ವಾಕ್ಯವನ್ನು ಕನ್ನಡದಲ್ಲಿ ಕೇವಲ ಹಿರಿಯರಿಗೆ ಉಪಯೋಗಿಸುತ್ತಾರೆ, ಆದರೆ ತುಳು ಭಾಷೆಯಲ್ಲಿ ಹಿರಿಯರಿಗೂ, ಕಿರಿಯರಿಗೂ ಉಪಯೋಗಿಸುತ್ತಾರೆ ಯಾಕೆಂದರೆ ತುಳು ಭಾಷೆ ಕಿರಿಯರಿಂದ ಹಿರಿಯರವರೆಗೂ  ಗೌರವವನ್ನು ಕೊಡುವ ಶಬ್ದ ಅತೀ ಹೆಚ್ಚಾಗಿ ಉಪಯೋಗಿಸುತ್ತಾರೆ. ಅದು ಕೂಡ ಒಬ್ಬರಿಗೆ ಬೈಗುಳ ಕೊಡುವ ಸಂಧರ್ಭದಲ್ಲೂ ಗೌರವ ಶಬ್ದದ ಉಪಯೋಗ ಮಾಡುತ್ತಾರೆ. ಬೇರೆ ಭಾಷೆಗಳಲ್ಲಿ ಉಪಯೋಗಿಸುವ ಅತೀ ಕೆಟ್ಟ ಶಬ್ದದ ಉಪಯ

(ಲೇಖನ -112)ಗಲ್ಫ್ ರಾಜ್ಯದಲ್ಲಿ ದೀಪಾವಳಿ ಹಬ್ಬವನ್ನು ಹೇಗೆ ಆಚರಿಸುತ್ತಾರೆ?

(ಲೇಖನ -112) ಗಲ್ಫ್ ರಾಜ್ಯದಲ್ಲಿ ದೀಪಾವಳಿ ಹಬ್ಬವನ್ನು ಹೇಗೆ ಆಚರಿಸುತ್ತಾರೆ? ನಿಮ್ಮ ಕುತೂಹಲಕ್ಕೆ ನನ್ನೆರಡು ಮಾಹಿತಿ. ಹಬ್ಬದ ಸಮಯಬಂದಾಗ ಕುಟುಂಬ, ಗೆಳೆಯ, ಗೆಳತಿ ಸಮಾಜದಲ್ಲಿ ಸಂತೋಷ ಸಡಗರ, ಹೊಸ ಬಟ್ಟೆ, ವಾಹನ, ಇನ್ನಿತರ ಆಸೆಗಳ ಅನಾವರಣ. ಹಬ್ಬ ನಮ್ಮ ಕನಸುಗಳನ್ನು ನನಸುಮಾಡುವ ಶಕ್ತಿಯನ್ನು ಹೊಂದಿರುತ್ತವೆ ಎಂದು ಹೇಳಬಹುದು. ಯಾಕೆಂದರೆ ಪ್ರತೀ ವರುಷದ ಹಬ್ಬದ ದಿನದಂದು ನಾವುಗಳು ತೆಗೆದುಕೊಳ್ಳುವ ನಿರ್ಧಾರ ನನಸಾಗಿರುತ್ತದೆ. ಉದಾಹರಣೆಗೆ ವರುಷದ ಮೊದಲನೆಯ ಹಬ್ಬ ಯುಗಾದಿ, ಅಂದು ನಾವುಗಳು ಹೊಸ ಮನೆಯನ್ನು ಕಟ್ಟುವ, ಹೊಸ ವಾಹನ ತೆಗೆದುಕೊಳ್ಳೋಣ ಅಥವಾ ಇನ್ನಿತರ ವಿವಿಧ ಆಸೆಗಳ ಪಟ್ಟಿಯನ್ನು ನಮ್ಮ ಮನಸ್ಸಿನೊಳಗೆ ಇಟ್ಟುಕೊಂಡು ನಮಗೆ ಗೊತ್ತಿಲ್ಲದೆಯೇ ಸಾಕಾರಗೊಳ್ಳಲು ಪ್ರಯತ್ನಿಸಿ ಹೊಸ ವರುಷ ಬರುತ್ತಿದ್ದಂತೆ ನಮ್ಮ ಯೋಜನೆ ಕಾರ್ಯರೂಪಕ್ಕೆ ಬಂದಿರುತ್ತದೆ. ಹಬ್ಬದ ವಾತಾವರಣದೊಂದಿಗೆ ನಮ್ಮ ಮನೆ ಮನ ಖುಷಿಯಾಗಿರುತ್ತದೆ.        ಸಂಸ್ಕಾರ, ಸಂಸಾರ ಇವೆರಡನ್ನು ಸಂತೋಷದಿಂದ ನೋಡಿಕೊಂಡಾಗ ನಮಗೆ ಉನ್ನತಿಎಂಬುದು ತಾನಾಗಿಯೇ ಬರುತ್ತದೆ ಅನ್ನುವ ಅಭಿಪ್ರಾಯ. ಸಾಗರದಾಚೆಯ ದೇಶ ಅದೂ ಗಲ್ಫ್ ರಾಜ್ಯದಲ್ಲಿ ಎಲ್ಲರೂ ಹಬ್ಬಗಳನ್ನು ಆಚರಿಸುತ್ತಾರೆ, ದೀಪಾವಳಿಯ ಸಂಧರ್ಭದಲ್ಲಿ ಮನೆಗೆ ದೀಪಾಲಂಕಾರ, ಹೊಸ ಬಗೆಯ ತಿಂಡಿ ತಿನಸು, ಭೋಜನ ಮತ್ತು ಕೆಲವರು ವಿಶಿಷ್ಟ ರೀತಿಯಲ್ಲಿ ಸುಂದರವಾದ ಬಟ್ಟೆಗಳನ್ನು ಧರಿಸಿ ದೇವರಿಗೆ ನಮಿಸಿ ಸಿಹಿ ತಿಂಡಿಯನ್ನು ಹಂಚಿಕೊಂಡು ಸಂಭ್ರಮ

ಜಯಗಳಿಸುವನು

ಎಲ್ಲವೂ ಸರಿಯಾಗಿರುವಾಗ ಅಳುವವರು ಎಲ್ಲವನ್ನೂ ಕಳೆದುಕೊಂಡಾಗ ಬದುಕಲಾರರು, ಎಲ್ಲವೂ ಸರಿಯಾಗಿರುವಾಗ ಹೆದರುವವರು ಎಲ್ಲವನ್ನೂ ಕಳೆದುಕೊಂಡಾಗ ಮತ್ತೆ ಮೇಲೆ ಬರರು, ಏನೂ ಇಲ್ಲದೇ ಬದುಕಿದವನು ಹೆದರಿಕೆಯನ್ನೇ ಮರೆಯುವನು ಎಲ್ಲವನ್ನೂ ಗಳಿಸುತ್ತಾ ಜಯಗಳಿಸುವನು.        ✍️ಮಾಧವ. ಕೆ. ಅಂಜಾರು.

ಕೇವಲ ಅಲ್ಪ ದಿನವೆಂದು ಮರೆತಿರುತ್ತಾರೆ!

ಬದುಕಿನ ಪಯಣದಲಿ ಒಂದಷ್ಟು ಜನ ಸಂತೋಷವನ್ನು ಕೊಡುತ್ತಾರೆ ಒಂದಷ್ಟು ಜನ ನೋವನ್ನು ಕೊಡುತ್ತಾರೆ ಒಂದಷ್ಟು ಜನ ಪ್ರೀತಿಯನ್ನು ತೋರಿಸುತ್ತಾರೆ  ಒಂದಷ್ಟು ಜನ ಅಸೂಯೆ ಪಡುತ್ತಾರೆ ಒಂದಷ್ಟು ಜನ ಪ್ರೋತ್ಸಾಹ ಕೊಡುತ್ತಾರೆ ಒಂದಷ್ಟು ಜನ ಕಾಲೆಲೆಯುತ್ತಾರೆ ಬದುಕುವುದು ಕೇವಲ ಅಲ್ಪ ದಿನವೆಂದು ಮರೆತಿರುತ್ತಾರೆ!         ✍️ಮಾಧವ ಕೆ ಅಂಜಾರು.

(ಲೇಖನ -110)ಹೊಸ ಕನಸುಗಳ ಸುರಿಮಳೆ ದಿನ ಬಿಡದೆ ಕಾಡುತ್ತಿರಲು ನಿನ್ನ ಆಕರ್ಷಣೆ ಕಾರಣವಾಯಿತೇ?

( ಲೇಖನ- 110 ) ಪೂರ್ಣ ಚಂದಿರನ ಬೆಳಕಿನೊಳು ನಿನ್ನ ಸುಂದರ ಮೊಗವ ಕಾಣುವ ತವಕ ಚಂದಿರನ ಆಯುಷ್ಯದಷ್ಟು ನನ್ನ ಪ್ರೀತಿ ನಿನ್ನ ಜೊತೆಯಲಿರಲಿ, ದಿನದ 24 ಗಂಟೆಯ ಪ್ರತೀ ನಿಮಿಷ ನಿನ್ನ ಪ್ರೀತಿಯ ನಗು ಮೊಗವ ಕಾಣಲು  ಆಸೆಎನಗೆ , ನಿನ್ನಲಿರುವ ಆಕರ್ಷಣೆಯು ನಿದ್ದೆಗೆಡಿಸುತ್ತಿದೆ, ಆ ನಗು, ಮಾತುಗಳು ಕಿವಿಯೊಳಗೆ ಗುನುಗುತ್ತಿವೆ, ನಿನ್ನ ಕಾಲ್ಗೆಜ್ಜೆ ಶಬ್ದದೊಳು ಸುಂದರ ನಡಿಗೆ ಭೂಮಿಯೇ ನಾಚುತ್ತಿರುವಾಗ ನನ್ನ ಹೃದಯದ ವೇಗ ಹೆಚ್ಚುತ್ತಿರಲು ಕಾರಣ ನಿನ್ನ ಆಕರ್ಷಣೆಯೇ ಸರಿ. ಬದುಕು ನಾಲ್ಕು ದಿನ ಜೀವನದ ಏರಿಳಿತ ಅಲ್ಲಿ ಕುಳಿತುಕೊಳ್ಳಬೇಕೋ ಇಲ್ಲಿ ಸಮಯ ವೆಂಬ ವೇಗ ಬಹಳಷ್ಟು ಬೇಗ ಓಡುತ್ತಿದೆ ನಿನ್ನ ಕನಸು ಕಾಣುತ್ತಲೇ...! ಬೇಲೂರ ಶೀಲಾಬಾಲೆಯು ನಿನ್ನ ನೋಡಿ ಕೆತ್ತಲಾಗಿದೆಯೋ, ರಂಬೆ ಊರ್ವಶಿಯ ಸೌಂದರ್ಯಕೆ ನಿನ್ನ ಸೌಂದರ್ಯ, ಸಮನಾಗಿ ಕಾಡುತ್ತಿರುವ ಹೊಸ ಕನಸುಗಳ ಸುರಿಮಳೆ ದಿನ ಬಿಡದೆ ಕಾಡುತ್ತಿರಲು ನಿನ್ನ ಆಕರ್ಷಣೆ ಕಾರಣವಾಯಿತೇ?         ಸಮ್ಮಿಲನದ ಆಕರ್ಷಣೆ, ನಿನ್ನ ಸೇರಲು ಬಯಕೆ, ಎತ್ತಿ ಮುತ್ತನೀಯಲು, ಸುತ್ತಿ ಬಿಗಿದಪ್ಪಿಕೊಳ್ಳಲು ಆ ಕೆಟ್ಟ ದೃಷ್ಟಿ ಬೀಳದಿರಲಿ, ಮಗುವಿನ ನಗುವಿಗೆ, ಪ್ರಣಯದ ಆಸೆಗೆ, ಎದುರಾಗದಿರಲಿ ಕರಿ ಮೋಡ, ಕಾಮನಬಿಲ್ಲಿನ ಬಣ್ಣಕ್ಕೆ ಮರುಳಾಗಿ ಕುಣಿಯುವ ನವಿಲಿನಂತೆ, ವಸಂತ ಋತುವಿನ ಕೋಗಿಲೆಯ ಸ್ವರ ಮಾಧುರ್ಯ ನಿನ್ನ ಕಂಠದೊಳು ಹೊರ ಹೊಮ್ಮತ್ತಲೇ ಹಾಯಾಗಿ ಜೋಗುಳವ ಹಾಡಿ ಮಲಗಿಬಿಡುವೆ ಮಗುವಂತೆ. ಪ್ರಪಂಚದ ಅತೀ ಹೆಚ್ಚು ಬೆಳೆಯುಳ್ಳ ವಸ

(ಲೇಖನ -109) ಗ್ರಂಥಾಲಯ, ಈ ಗ್ರಂಥಾಲಯ ಎಂಬ ಶಬ್ದವನ್ನು ಕೇಳುವಾಗಲೇ ಮೈ ನವಿರೇಳುವುದು ಗ್ರಂಥದ ಆಲಯ

Image
 (ಲೇಖನ -109) ಗ್ರಂಥಾಲಯ, ಈ ಗ್ರಂಥಾಲಯ ಎಂಬ ಶಬ್ದವನ್ನು ಕೇಳುವಾಗಲೇ ಮೈ ನವಿರೇಳುವುದು ಗ್ರಂಥದ ಆಲಯ - ಗ್ರಂಥಾಲಯ, ಸಾವಿರಾರು ಕವಿಗಳ, ವಿಜ್ಞಾನಿಗಳ, ಇತಿಹಾಸಕಾರರ, ತಂತ್ರಜ್ಞಾನ, ಕೃಷಿ, ಸಂಸ್ಕೃತಿ , ಧರ್ಮಗಳನ್ನು ಕಲಿಯುವ ಏಕೈಕ ಸ್ಥಳ ಗ್ರಂಥಾಲಯ. ಗ್ರಂಥಾಲಯವೆಂಬುವುದು ದೇವಾಲಯಕ್ಕಿಂತಲೂ ಮಿಗಿಲು, ನಮ್ಮ ಬದುಕಿನ ಉತ್ತಮವಾದ ದಿನಗಳನ್ನು ಕಾಣಬೇಕಿದ್ದರೆ ಪುಸ್ತಕಗಳನ್ನು ಓದಬೇಕು, ಪ್ರಪಂಚವನ್ನು ತಿಳಿಯಬೇಕಿದ್ದರೆ ಪುಸ್ತಕಗಳನ್ನು ಓದಿ ಜ್ಞಾನವನ್ನು ಹೆಚ್ಚಿಸಿಕೊಂಡರೆ ಬದುಕಿನ ಕಷ್ಟದ ಸ್ಥಿತಿಯನ್ನು ಮತ್ತು ಉತ್ತಮ ಸ್ಥಿತಿಯನ್ನು  ಒಂದೇ ರೀತಿಯಲ್ಲಿ ನೋಡಿಕೊಳ್ಳುವ ಶಕ್ತಿಯನ್ನು ಯುಕ್ತಿಯನ್ನೂ ಪಡೆಯಲು ಸಾಧ್ಯವಿದೆ. ಪುಸ್ತಕಗಳನ್ನು ಓದುವ ಹವ್ಯಾಸ ಎಲ್ಲರಲ್ಲೂ ಇರುವುದಿಲ್ಲ, ನಮ್ಮ ಶಾಲಾ ಕಾಲೇಜುಗಳಲ್ಲಿ ಓದುವ ಪುಸ್ತಕ ಮತ್ತು ಜ್ಞಾನವೃದ್ಧಿಗೊಳಿಸುವ ಪುಸ್ತಕಗಳಿಗೆ ತುಂಬಾನೇ ವ್ಯತ್ಯಾಸಗಳಿರುತ್ತವೆ. ನಮ್ಮ ತರಗತಿಯಲ್ಲಿ ಓದುವ ಪಾಠವು ಹೆಚ್ಚಾಗಿ ಉದ್ಯೋಗನಿಮಿತ್ತ ಮತ್ತು ಸಂಪಾದನೆಯ ಮಾರ್ಗದರ್ಶನ ಮತ್ತು ಅಲ್ಪ ಸ್ವಲ್ಪ ಇತಿಹಾಸ, ತಂತ್ರಜ್ಞಾನವನ್ನು ಕಲಿಸಿಕೊಡುತ್ತದೆ. ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಮತ್ತು ಮೇಧಾವಿ ಎಂಬ ಸ್ಥಾನಕ್ಕೆ ಹೋಗಬೇಕಾದರೆ ಅವನು ತನ್ನ ಜೀವನ ಪಾಠಕ್ಕಿಂತಲೂ ಜಾಸ್ತಿಯಾಗಿ ಅತೀ ಉತ್ತಮವಾದ ಪುಸ್ತಕಗಳನ್ನು ಓದಬೇಕು, ಉತ್ತಮವಾದ ಪುಸ್ತಕವನ್ನು ಓದಿದಾಗ ಜ್ಞಾನ ವೃದ್ಧಿಯಾದಂತೆ ಅವನ ಗುಣ ನಡತೆ ಶಕ್ತಿ ಯುಕ್ತಿ, ತೇಜಸ್ಸು ಎಲ್ಲವ

ಭಾರತವೆಂದರೆ ಸಂಸ್ಕೃತಿ, ಭಾರತವೆಂದರೆ ಗೌರವ, ಭಾರತವೆಂದರೆ ವೈಭವ, ಭಾರತವೆಂದರೆ ಶಕ್ತಿ, ಶಾಂತಿ ಭಾರತವೆಂದರೆ ಯುಕ್ತಿ,

Image
✍️Madhav. K. Anjar  (ಲೇಖನ-108) ಭಾರತವೆಂದರೆ  ಸಂಸ್ಕೃತಿ, ಭಾರತವೆಂದರೆ ಗೌರವ, ಭಾರತವೆಂದರೆ ವೈಭವ, ಭಾರತವೆಂದರೆ ಶಕ್ತಿ, ಶಾಂತಿ ಭಾರತವೆಂದರೆ ಯುಕ್ತಿ, ಭಾರತವೆಂದರೆ ಭವ್ಯ ಪರಂಪರೆ, ಕೌಶಲ್ಯ, ವಿಜ್ಞಾನ. ಭಾರತವೆಂದರೆ ಒಗ್ಗಟ್ಟು, ಎಲ್ಲವನ್ನು ಪಡೆದಿರುವ ಭಾರತೀಯರು ಜಗತ್ತಿಗೆ ಸಂಪತ್ತು, ಜಗತ್ತಿನಲ್ಲಿ ಇನ್ನೊಬ್ಬರನ್ನು ನೋಯಿಸದೆ ಬದುಕುವ ರಾಷ್ಟ್ರವೆಂದರೆ ಭಾರತವೊಂದೆ, ಇತಿಹಾಸದಲ್ಲಿ ಭಾರತೀಯರ ಮೇಲೆ ದಬ್ಬಾಳಿಕೆಗಳಾದ ಉದಾಹರಣೆ ಸಾಕಷ್ಟಿದೆ ಆದರೆ ಭಾರತೀಯರು ಆಕ್ರಮಣ ಮಾಡಿರುವ ಯಾವ ಇತಿಹಾಸದಲ್ಲೂ ಇಲ್ಲ. ಅದಕ್ಕೆ ಕಾರಣ ನಮ್ಮಲ್ಲಿರುವ ಸಂಸ್ಕೃತಿ, ಬಾಂಧವ್ಯ, ಮತ್ತು ವಿವೇಚನೆ ಎಲ್ಲವೂ ಭಾರತೀಯ ಮಣ್ಣಲ್ಲಿ ಉತ್ತಮ ರೀತಿಯಲ್ಲಿ ಬೇರೂರಿದೆ. ಸರ್ವಧರ್ಮದವರು ಕೂಡಿ ಒಗ್ಗೂಡಿ ಬಾಳುವ ಏಕೈಕ ದೇಶ ನಮ್ಮ ಭಾರತ.        ಭಾರತೀಯರ  ಶಕ್ತಿಯನ್ನು ಕುಗ್ಗಿಸಲು ಯಾರಿಂದಲೂ ಸಾಧ್ಯವಿಲ್ಲ, ಭಾರತದ ವಿಜ್ಞಾನ, ಬುದ್ದಿವಂತಿಕೆಯನ್ನು ಪಡೆಯಲು ಕೂಡ ಯಾರಿಂದಲೂ ಸಾಧ್ಯವಿಲ್ಲ. ಜಗತ್ತಿನಲ್ಲಿ ವಿಜ್ಞಾನ ಎಷ್ಟು ಮುಂದುವರಿದಿದ್ದರೂ ಭಾರತೀಯರಿಲ್ಲದ ವಿಜ್ಞಾನನಕ್ಕೆ ಬೆಲೆಯಿಲ್ಲ. ಹಾಗಾಗಿ ಭಾರತ ದೇಶದ ಬಗ್ಗೆ ಅಸೂಯೆಪಡುವ ಕೆಲವರು ಆಂತರಿಕ ಮತ್ತು ಬಾಹ್ಯ ದುಷ್ಟರ ಸಹಾಯದೊಂದಿಗೆ ಭಾರತವನ್ನು ನಾಶಮಾಡಲು ಶ್ರಮಿಸುತ್ತಿದ್ದಾರೆ. ಇಲ್ಲಿ ಉದ್ದೇಶಗಳು ಬೇರೆ ಬೇರೆ. ಭಾರತದ ಉನ್ನತಿಯನ್ನು ಬಯಸುವ ಜನರ ಸಂಖ್ಯೆಯನ್ನು ಕಡಿಮೆಗೊಳಿಸಲು ಶತಮಾನದಿಂದಲೂ ಶ್ರಮಿಸಿ ಸುಸ್ತಾಗಿ ಹೋಗ