ದೇಶ ಬಿಟ್ಟು ವಿದೇಶ


ದೇಶ ಬಿಟ್ಟು ವಿದೇಶ
ಕಾಲಿಟ್ಟ ದಿನವೇ ವಿಷ
ಕನಸು ಹೊತ್ತು ಪ್ರವೇಶ
ನನಸಾಗಲಿಲ್ಲ ಈಶ..

ಮೋಸದ ಬಲೆಗೆ ತುತ್ತಾದೆ
ದುಷ್ಟರ ಆಟಕೆ ಬಲಿಯಾದೆ
ಕಷ್ಟದ ದಿನಕೆ ಗುರಿಯಾದೆ
ದೇಶವ ನೆನೆದು ಕೈಮುಗಿದೆ,

ಅನ್ನವ ಅರಸಿ ಬಂದವನಿಗೆ
ಕೈ ಕೊಳ ತೊಡಿಸುವರೆಂದಾಗ
ನನ್ನ ಮನೆಮಂದಿಯರೆನಿಸಿ
ಕಣ್ಣೀರ ಹರಿಸಿ ಸ್ಥಿರವಾದೆ..

ಶಪಿಸುವೆ ನಾನು ಬಲವಾಗಿ
ನನ್ನ ಖುಷಿಯನ್ನು
ನಶಿಸಿದ ದುಷ್ಟರಿಗೆ
ದೇವರೇ ಶಿಕ್ಷಿಸು ಸರಿಯಾಗಿ

ನಮ್ಮನು ರಕ್ಷಿಸು ಸುಳಿಯಿಂದ
ತಾಯ್ನಾಡಿಗೆ ಮರಳಿಸು
ನಾ ನಿನ್ನ ಕಂದ
ನನ್ನ ಕೂಗನು ಕೇಳುವೆಯ
ಮರಳಿ ತಾಯ್ನಾಡಿಗೆ ಸೇರಿಸು
ನಮ್ಮೆಲ್ಲರನು ಉಳಿಸು
-ಮಾಧವ ಅಂಜಾರು

Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.