ಹೆಸರುಗಳಿಸೋ ಭರದಲ್ಲಿ


ಹೆಸರುಗಳಿಸೋ ಭರದಲ್ಲಿ
ಜವಾಬ್ದಾರಿ ಮರೆಯಬೇಡಿ
ಉಪಕಾರ ಮಾಡೋ ನೆಪದಲ್ಲಿ
ಉಪದ್ರವನ್ನ ಮಾಡಲೇಬೇಡಿ,

ದಾನ ಧರ್ಮ ಮಾಡೋದಿದ್ದರೆ
ನಯವಿನಯತೆ ರೂಡಿಸಿಕೊಳ್ಳಿ
ಧನವಂತರಾದ ಮಾತ್ರಕೆ
ನಿಮ್ಮ ಕೆಟ್ಟಗುಣವನ್ನು ತೋರಿಸಬೇಡಿ,

ಉಸಿರಿದ್ದರೆ ಹೆಸರು
ಗುಣವಿರದಿದ್ದರೂ ಹೆಸರೇ
ಹಣವಿದ್ದರೆ ಮತ್ತೂ ಹೆಸರೇ
ಇದೆಲ್ಲದರ ನಡುವೆ ನಿಲ್ಲದಿರಲಿ ಉಸಿರೇ...
-ಮಾಧವ ಅಂಜಾರು

Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.