Posts

Showing posts from September, 2018

ಮಾನಾದಿಗೆ ಕೊರೊಡು

ಮಾನಾದಿಗೆ ಕೊರೊಡು ಒರಿತೋನಕ್ಲೆಗ್ ಮಣ್ಣ್ ಮುಕ್ಕಾವೋಡು ರಾಪುನಕ್ಲೆಗ್ ಅಯ್ಯೋ ಸ್ವಾಮಿ ಪಾತೆರ ಕೇಂಡಿಜಿಡ ಅಕಲ್ ರಟ್ಟಾವೊಡು ... ಅತ್ರಾಣದಕ್ಲೆಗ್       -ಮಾಧವ ಅಂಜಾರು

ಮುತ್ತು ಕೊಟ್ಟು

ಮುತ್ತು ಕೊಟ್ಟು ಸ್ವತ್ತೂ ಕೊಟ್ಟ ಮುತ್ತು ಕೊಡುತ್ತಲೇ ಪೂರ್ಣ ಕೆಟ್ಟ ಮುತ್ತಿಗೆ ಬೆಲೆ ತಿಳಿಯದವ ಮುತ್ತಿಗಾಗಿ ಹತ್ತಿದ ಬೆಟ್ಟ ಮುತ್ತು ಮತ್ತನ್ನು ತಂದಿತ್ತು ಸ್ವತ್ತೂ, ಮತ್ತನ್ನು ಒಯ್ದಿತ್ತು ಇವೆರಡರ ಅಹಂಕಾರದಲ್ಲಿ ತುತ್ತು ಕೂಡ ಸಿಗದೇ ಸತ್ತ                 -ಮಾಧವ ಅಂಜಾರು

ಎಲ್ಲರಂತೆ ಮದ್ವೆಯಾದ

ಎಲ್ಲರಂತೆ ಮದ್ವೆಯಾದ ಸ್ವಲ್ಪ ದಿನ ಚಂದಿರನಾದ ಅಮಾವಾಸ್ಯ ಬರುತ್ತಿದ್ದಂತೆ ಚಂದಿರನೇ ಮಾಯವಾದ ನೀನೇ  ನನ್ನ ಬಾಳು ಅಂದ ನಿನ್ನನೆಂದೂ  ಬಿಡೆನು ಅಂದ ಭೂಮಿಯಲ್ಲೂ  ಆಕಾಶದಲ್ಲೂ ನಿನಗಿಂತ ಸುಂದರಿ ಇಲ್ಲವೆಂದ ಸ್ವಲ್ಪ ವರುಷ ಕಳೆದು ಹೇಳಿದ ಮದ್ವೆ ಯಾಕೆ ಬೇಕಿತೆಂದ ನಿನಗೆ ಮದುವೆ ಬೇಡ ಅಂದ ಆರಂಭ ಮಾತ್ರ ಚೆಂದ ವೆಂದ ಒಂದೊಂದೇ ಆರಂಭಿಸಿದ ನಾನು ರಾಜನಂತಿದ್ದೆ ಅಂದ ನಿನ್ನ ವರಿಸಿ ಬೆವರು ಸುರಿಸಿ ಪ್ರಯೋಜನವೇ ಇಲ್ಲವೆಂದ ತಂದೆ ತಾಯಿಯ ಕಡೆಗೆ ಬಂದ ಹೆಂಡತಿಯೆನಗೆ ಬೇಡವೆಂದ ತಾಯಿ ಮಮತೆ ತೋರಿದರು ತಂದೆ, ಕೆನ್ನೆಗೆ ಕೊಡುವೆನೆಂದ ಚಿನ್ನಾ ನಿನ್ನ ಬಿಡೆನು ಅಂದ ನೀನೇ ಮುದ್ದು ಕಂದಾ ಅಂದ ನೀನಿಲ್ಲದಿದ್ದರೆ, ನಾನೆ ಇಲ್ಲವೆಂದ ಇಂದಿನಿಂದ ಇರಲಿ ಬಂಧವೆಂದ              -ಮಾಧವ ಅಂಜಾರು

ಮದುವೆಯಾಗಿ

ಮದುವೆಯಾಗಿ ಮೂರು ತಿಂಗಳು ಪತಿಯನ್ನು ಪೂಜಿಸಿದಳು ನಾಲ್ಕನೇ ತಿಂಗಳು ಆರಂಭದಲ್ಲೇ ಅತ್ತೆ ಮಾವನ ದೂಷಿಸಿದಳು ಕಳೆದು ಹೋಯ್ತು ಆರು ತಿಂಗಳು ಸ್ವಂತ ಮನೆ ಬೇಕೆಂದಳು ಆ ಕಳೆದ ಎಂಟು ತಿಂಗಳು ಗಂಡನ ದಿನಾ  ಕಾಡಿದಳು ಮದ್ವೆಯಾಗಿ ಹನ್ನೆಡರು ತಿಂಗಳು ಈಗ ಮಗು ಬೇಡವೆಂದಳು ಹದಿಮೂರನೇ ತಿಂಗಳು ನಾದಿನಿಯ ಬೈಯೋಕೆ ನಿಂತಳು ಹದಿನಾಲ್ಕನೇ  ತಿಂಗಳು ಕಾದಳು ಬಟ್ಟೆ ಬರೆ ಕಟ್ಟಿದಳು ನಾನು ಇನ್ನು ಬರಲ್ಲ ...ಅಂತಾನೆ ತಾಯಿ ಮನೆಗೆ ಹೋದಳು ಮಗಳ ಪೆಟ್ಟಿಗೆ ನೋಡಿಯೇ ತಾಯಿ ಕರಗಿ ಹೋದಳು ತಂದೆ ಸ್ವಲ್ಪ ಗಟ್ಟಿಯಾಗಿ ನೀ ನಮ್ಮ ಮಗಳಾಗಿದ್ದರೂ ಗಂಡನೇ ನಿನಗೆ ಕಾವಲು ಆತುರ ಬೇಡ ಸುಮ್ಮನೆ ತಿರುಗಿ ಹೋಗು ಹೇಳಿದರು ಹೋದವಳಿಗೇನೋ ಕಸಿವಿಸಿ ತಲೆಯಾಯ್ತು ಬಿಸಿ ಬಿಸಿ ಅಪ್ಪ ಅಮ್ಮ ಬೇಕು ನನಗೆ ಗಂಡನಂತೂ ಬೇಕೇ ಎನಗೆ ಇನ್ನು ಸುಮ್ಮನಾದರೆ ಬಹಳ ಕಷ್ಟ ಇನ್ನೂ ಕೊನೆಗೆ ಪತಿ ಪತ್ನಿಯ ಮುಗುಳು ನಗೆ ಸಿಹಿ ಕಹಿಯಂತೆ ಬಗೆ ಬಗೆ .            - ಮಾಧವ ಅಂಜಾರು  

ಹೆಣ್ಣು ಸಂಸಾರದ ಕಣ್ಣು

ಹೆಣ್ಣು ಸಂಸಾರದ ಕಣ್ಣು ಹೆಣ್ಣಂತೆ ಬದುಕಿದರೆ,   ಗಂಡು ಸಂಸಾರದ ಹೊನ್ನು ಗಂಡಂತೆ ಇದ್ದರೆ, ಕಣ್ಣು ಹೊನ್ನನ್ನು ಬಯಸಿ ಪ್ರೀತಿಯಿಂದ  ಬಾಳಿದರೆ ಸುಖಮಯ ಸಂಸಾರ ... ! ಹೆಣ್ಣೊಂದು ಗಂಡಂತೆ ಗಂಡೊಂದು ಹೆಣ್ಣಂತೆ ಬಾಳನ್ನು ನಡೆಸಿದರೆ ... ಕಣ್ಣೂ ಹೊನ್ನೂ ಬೇಗ ಮಣ್ಣು ಪ್ರತಿದಿನವೂ ಕೆಂಗಣ್ಣು....  ದ್ವೇಷವೆ ಬದುಕಾದರೆ ಸುಖವಿರುವುದೇ ಸಂಸಾರ ...!       -ಮಾಧವ ಅಂಜಾರು

ಕಳ್ಳ ವ್ಯಾಪಾರಿಗೆ

ಕಳ್ಳ ವ್ಯಾಪಾರಿಗೆ ಅದೇನೋ ಸಂತೋಷ ಮೂವತ್ತರ ಕುಂಬಳಕಾಯಿ ಅರುವತ್ತಕೆ ಮಾರಿದೆ ಗ್ರಾಹಕನಿಂದ ಇನ್ನಷ್ಟು ಗಳಿಸಿದೆನೆಂದು ಸ್ವಲ್ಪ ದಿನಗಳಲ್ಲೇ ... ವ್ಯಾಪಾರ ಕಡಿಮೆಯಾಗುತ್ತಿದ್ದಂತೆ ಅದೇನೋ ತಳಮಳ ಮೂವತ್ತರ ಕುಂಬಳಕಾಯಿ ಹತ್ತರಲ್ಲೂ ಮಾರಿದರೆ ಸಾಕು ಗ್ರಾಹಕನಿದ್ದರೆ ನಾ ಬದುಕುವೆನೆಂದು ....             - ಮಾಧವ ಅಂಜಾರು

ನಮಗೇನು ಪ್ರಯೋಜನ ಹೇಳಿ

ನಮಗೇನು ಪ್ರಯೋಜನ ಹೇಳಿ ಅವರಲ್ಲಿ ಇದ್ದರೆ ಅವರಿಗಾಯ್ತು ಅನ್ನೋ ಅತಿಬುದ್ದಿವಂತ ...! ತನ್ನಿಂದ ಮತ್ತವರಿಗೇನು ಪ್ರಯೋಜನ ಅನ್ನೋದನ್ನ ಒಂದುಬಾರಿಯೂ  ಯೋಚಿಸಿರಲಿಕ್ಕಿಲ್ಲ ...! ಅವರಲ್ಲಿತ್ತು, ಲೋಕವೆಲ್ಲ ಸುತ್ತಾಡಿದರು ಅವರಿಗೇನು ಕಮ್ಮಿ ಅನ್ನೋ ಮಿತ ಬುದ್ದಿವಂತ ...! ಮತ್ತವರ ಸುಖ ನೋಡುತ್ತಲೇ ಹಲ್ಲುಕಡಿದುಕೊಂಡು ಸರಿ ನಿದ್ದೆಯೂ ಮಾಡಿರಲಿಕ್ಕಿಲ್ಲ ...!          -ಮಾಧವ ಅಂಜಾರು  

ಗಂಡನಿಂದ ತೃಪ್ತಿ

ಗಂಡನಿಂದ ತೃಪ್ತಿ ಇಲ್ಲವೆಂದು ನಡು ದಾರಿಯಲ್ಲೇ ಬಿಟ್ಟು ಇನೊಬ್ಬ ಗಂಡನ ಹುಡುಕಾಟಕ್ಕೆ ತಡಕಾಡಿದ ಹೆಣ್ಣು ಹೆಂಡತಿಯು ಸುಂದರಿಯಲ್ಲವೆಂದು ತಾಳಿಯನು ಕಿತ್ತುಕೊಂಡು ಮತ್ತೊಂದು  ಮದುವೆಗೆ ತಯಾರಾದ ಗಂಡು ಇಬ್ಬರಲೂ ತೃಪ್ತಿಗೆ ಮಾತ್ರ ಕೊರತೆ ಅತೃಪ್ತಿಗೆ ಮಾತ್ರ ಮಹತ್ವ ತೃಪ್ತಿಯನ್ನು ಬಯಸಿ ನಡೆದ ಇಬ್ಬರಲು  ಮತ್ತದೇ ತೃಪ್ತಿಯ ಕೊರತೆ ಜೀವನದ ದಾರಿಯುದ್ದಕ್ಕೂ ತೃಪ್ತಿಯೇ ಲಬಿಸೋಲ್ಲವೆಂದು  ಗೊತ್ತಾಗೋ ಸಮಯಕ್ಕೆ ಮುಗಿದೋಯ್ತು ಅವರ ಮಹತ್ವವುಳ್ಳ  ಸಮಯ ಸತ್ತು .                    -ಮಾಧವ ಅಂಜಾರು .                

ತಂಗಡಿ ಬುಲಿತುದು

ಹೊ... ಹೊ.....  ಹೊಹೊಹೊ .... ಹೊಹೊ ಹೊ ಹೊ ......೧ ತಂಗಡಿ  ಬುಲಿತುದು ಪನೀಯೊಲು  ಇಂಚ ಪರಯೆ ದಾಯೆಗ್ ಇಂಚ ಉಡಲ್ದ  ಬೆನೇನ್ ಪನ್ಪಿನೆ ಎಂಚ ಕನೋತ ದಿನನೇ ಇಂಚ.... ಅಪ್ಪನ್  ಅಮ್ಮನ್  ನೆಂತೊಂದೆ ಮೂಲು ಪರ್ಬದ ದಿನೊಲ ಬೆನಿಯರೇ ಸಾಲ್ ತಂಗಡಿನ  ಮದಿಮೆಗೆ ಯಾನಿಜ್ಜಿ ಅವುಲು ಅವೇನ್  ಪನ್ಪಿನ ಎಂಚ .. ಮುಚ್ಚಿದ್ ದೀಪಿನಿ ಎಂಚ ....! (ಪನಂದೆ ಕುಲ್ಲುನೆ ಎಂಚ ) ಸಂಸಾರದ ಮೊನೆಡು ಇಪ್ಪೊಡು ತೆಲಿಕೆ ತಂಗಡಿ ಬದುಕುಡು ಇಪ್ಪೊಡು ನಲಿಕೆ ಪರವೂರ ಜೀವನ ತೂವೆರೆ ಪೊರ್ಲು ಊರುದ ನೆಂಪುಡೆ ದಿನಕಳೆವೊಡು  ಮೂಲು ಅವೆನ್ ಪನ್ಪಿನಿ ಎಂಚ ... ಲೋಕದ ಕತೇನೇ ಇಂಚ .. ೨                    -ಮಾಧವ ಅಂಜಾರು