Posts

Showing posts from May, 2023

ಗಿಣಿಯೂ ನೀನೇ

ಆಕಾಶವು ನೀನೇ ಚಂದಿರನೂ ನೀನೇ ಬೆಳದಿಂಗಳ ಬೆಳಕಿಗೆ ಹೊಳೆವ ನಕ್ಷತ್ರವೂ ನೀನೇ, ಹನಿ ಮಳೆಯೂ ನೀನೇ ಓಡಾಡುವ ಮೋಡಗಳೂ ನೀನೇ ರವಿ ಜಾರುವ ಸಮಯಕೆ ಕುಣಿಯೋ ನವಿಲೂ ನೀನೇ ಕೋಗಿಲೆಯೂ ನೀನೇ ಗಿಣಿಯೂ ನೀನೇ ಸವಿ ಸಂಗೀತ ಸ್ವರಗಳ ರಾಗ ತಾಳವು ನೀನೇ ಕನಸು ನೀನೇ ಮನಸೂ ನೀನೇ ಕವಿ ಕಾವ್ಯಕೆ ಸೇರುವ ಪದಗಳೇ ನೀನೇ!        ✍️ಮಾಧವ. ಕೆ. ಅಂಜಾರು 

ಚುನಾವಣಾ ಫಲಿತಾಂಶ ಬಂದ ಕೂಡಲೇ ಪಟಾಕಿ ಸಿಡಿಸಿ ಸಂಭ್ರಮಿಸುವ ಬದಲು, ಜನರ ಸಮಸ್ಯೆಗಳ ಪಟ್ಟಿಯನ್ನು ತೆಗೆದುಕೊಂಡು ಅದರ ಮಾಲೆಯನ್ನು ಹಾಕಿಕೊಂಡು ನಾನು ನಿಮ್ಮ ಸೇವಕನಾಗಿರುತ್ತೇನೆ ಎಂದು ಪ್ರಮಾಣ ಮಾಡಿ

Image
 (ಲೇಖನ -86, ಚುನಾವಣಾ ಫಲಿತಾಂಶ ಬಂದ ಕೂಡಲೇ ಪಟಾಕಿ ಸಿಡಿಸಿ ಸಂಭ್ರಮಿಸುವ ಬದಲು, ಜನರ ಸಮಸ್ಯೆಗಳ ಪಟ್ಟಿಯನ್ನು ತೆಗೆದುಕೊಂಡು ಅದರ ಮಾಲೆಯನ್ನು ಹಾಕಿಕೊಂಡು ನಾನು ನಿಮ್ಮ ಸೇವಕನಾಗಿರುತ್ತೇನೆ ಎಂದು ಪ್ರಮಾಣ ಮಾಡಿ. ಜನರು ಆಯ್ಕೆ ಮಾಡುವ ಜನಪ್ರತಿನಿಧಿ ಜನರ ಸೇವೆ ಮಾಡಲು ಸೂಕ್ತವಾದ ವ್ಯಕ್ತಿಯೇ ಎಂಬುದನ್ನು ಬೇಗನೇ ಅರಿತುಕೊಳ್ಳಬೇಕಾದರೆ ನಾಳೆಯೇ ಪ್ರಜೆಗಳು ತಮ್ಮ ಊರಿನ ಸಮಸ್ಯೆಗಳ ಪಟ್ಟಿಯನ್ನು ತಯಾರಿ ಮಾಡಿಟ್ಟುಕೊಳ್ಳಿ ನಿಜವಾದ ಜನಸೇವಕನು ಸ್ವಲ್ಪ ದಿನವಾದರೂ  ನಿಮ್ಮ ಸಮಸ್ಯೆಗಳ ಬಗ್ಗೆ ಗಮನ ಹರಿಸಬಹುದು, ಒಂದು ವೇಳೆ ಅವನು ಅಧಿಕಾರದ ಆಸೆಗೆ ಬಿದ್ದಿರುವನೆಂದರೆ ನಾಳೆಯಿಂದಲೇ ಅವನೆ ಎಲ್ಲಾ ತರದ ನಡತೆಗಳು ನಿಮ್ಮ ಸೇವೆಯ ಬದಲಾಗಿ ನಿಮ್ಮ ಆಡಳಿತವನ್ನು ಮಾಡಲು ಆರಂಭಿಸಿದಂತೆ ಇರುತ್ತದೆ.           ಅಧಿಕಾರದ ಅಹಂಕಾರದಿಂದ ನಮ್ಮ ವ್ಯವಸ್ಥೆಗಳಲ್ಲಿ ಕೈ ಹಾಕಿ ಸರ್ವಾಧಿಕಾರವನ್ನು ತೋರ್ಪಡಿಸಲು ನಾಳೆಯಿಂದಲೇ ಆರಂಭಿಸುತ್ತಾನೆ. ಮುಗ್ಧ ಜನರು ಮತ್ತೊಮ್ಮೆ ಹಲ್ಲಿಲ್ಲದ ಹಾವಿನಂತೆ ಆಗಿಬಿಡುತ್ತಾರೆ. ನಿಮ್ಮ ಮತದಾನವು ಆಮಿಷಗಳಿಗೆ ಒಳಗಾಗಿದ್ದರೆ ಅದಕ್ಕೆ ತಕ್ಕ ಪ್ರತಿಫಲಗಳನ್ನು ಫಲಿತಾಂಶದ ದಿನದಿಂದಲೇ ಸ್ವೀಕರಿಸಲು ತಯಾರಾಗಿರಿ. ರಾಜ್ಯ ರಾಜಕಾರಣವಾಗಲಿ, ದೇಶದ ರಾಜಕಾರಣವಾಗಲಿ ಪ್ರಜೆಗಳಿಗೆ ಸಹಕಾರವಾಗುವಂತಿರಬೇಕು ಹೊರತು ವಿನಾಶದ ಕಡೆಗೆ ದೂಡುವಂತಿರಬಾರದು. ನಿಮಗೆ ಕೊಟ್ಟಿರುವ ಭರವಸೆಗಳ ಪಟ್ಟಿಯನ್ನು ನಿಮ್ಮ ಮನೆಯ ಗೋಡೆಯೊಳಗೆ ಅಂಟಿಸಿಕೊಳ್ಳಿ ಆ ಭರವಸೆಗಳ

ಬಾನಲ್ಲೂ ನೀನೇ

ಬಾನಲ್ಲೂ ನೀನೇ ಭುವಿಯಲ್ಲೂ ನೀನೇ ನಿನ್ನ ಸವಿಮಾತಿಗೆ ಕವಿಯಾದೆ ನಾನೇ ಆ ರವಿಯಂತೆ ಹೊಳೆಯುವೆ ನನ್ನ ಸವಿ ಜೆನೇ, ಹಗಲಲ್ಲೂ ನೀನೇ ಇರುಳಲ್ಲೂ ನೀನೇ ನಿನ್ನ ಸೇರುವ ಕನಸಲಿ ಬದುಕುವ ನಾನೇ ರಾಜನಾಗಿ ಬರುವೆ ನಿನ್ನ ಮುದ್ದಾಡಲು ಹೂವೆ,             ✍️ಮಾಧವ. ಕೆ. ಅಂಜಾರು.

ಅಲ್ಲೇಕೆ ಕುಳಿತಿರುವೆ

ಮೋಡಗಳ ಓಡಾಟದೊಳು  ಮಿಂಚಿನ ಬೆಳಕಿನೊಳು ನಿನ್ನ ಸೌಂದರ್ಯವ ಅಸ್ವಾದಿಸಲು ನನ್ನೆದೆ ಬಯಕುತಿದೆ ಜಿಂಕೆಯ ನಡೆಯ ನಿನ್ನ ಆ ಹೆಜ್ಜೆಗೆ ಸಾವಿರ ಕನಸುಗಳೆದುರಾಗುತಿದೆ! ಅಲ್ಲೇಕೆ ಕುಳಿತಿರುವೆ ಮೆಲ್ಲನೇ ನಗುತಿರುವೆ ನಕ್ಷತ್ರವೇ ನಾಚುವಂತೆ ಬೆಳ್ಳಿಯಂತೆ ಹೊಳೆಯುತಿರುವೆ ನಿನ್ನ ಪ್ರೀತಿಯ ಮಾತಿಗೆ ಎಂದೂ ಹಾತೋರೆಯುವೆ ಕನಸುಗಳ ನನಸಾಗಿಸುವ ದಿನಗಳಿಗೆ ಕಾಯುತಿರುವೆ!        ✍️ಮಾಧವ. ಕೆ. ಅಂಜಾರು 

( ಲೇಖನ -85- (ಅ) ರಾಜಕೀಯವೆಂಬುದು ಒಬ್ಬರನ್ನೊಬ್ಬರು ಟೀಕೆಮಾಡಿಕೊಂಡು ಸಮಾಜದ ಸ್ವಾಸ್ತ್ಯ ಕಳೆಯುವುದೇ?

Image
 ( ಲೇಖನ -85- (ಅ) ರಾಜಕೀಯವೆಂಬುದು ಒಬ್ಬರನ್ನೊಬ್ಬರು ಟೀಕೆಮಾಡಿಕೊಂಡು ಸಮಾಜದ ಸ್ವಾಸ್ತ್ಯ ಕಳೆಯುವುದೇ? ರಾಜಕೀಯದಲ್ಲಿ ಪ್ರಭುದ್ಧತೆ  ಇಲ್ಲದೆ ಹೋದಲ್ಲಿ, ಪಕ್ಷಗಳು ಒಂದರ ಮೇಲೆ ಒಂದರಂತೆ  ಟೀಕೆ ಟಿಪ್ಪಣಿಗಳನ್ನು ಮಾಡುತ್ತಾ, ನಿಜವಾದ  ರಾಜಕೀಯವನ್ನು ಸಮಾಧಿ ಮಾಡಿದಂತೆ. ರಾಜ್ಯವನ್ನು, ಅಥವಾ ದೇಶವನ್ನಾಳಲು ರಾಜಕೀಯ ಎಂಬುದು ಬಹಳ ಪ್ರಾಮುಖ್ಯ, ಆದರೆ ನಾವೆಲ್ಲರೂ ನೋಡುತ್ತಿರುವಂತೆ ಈ ಹಿಂದೆ ಮತ್ತು ಇಂದಿನ ದಿನಗಳಲ್ಲೂ ಕೆಲವೊಂದು ಪ್ರಸಂಗಗಳನ್ನು  ಅವಲೋಕಿಸಿದಾಗ ಪಕ್ಷ ಪ್ರತಿಪಕ್ಷಗಳ ಉನ್ನತ ಸ್ಥಾನದಲ್ಲಿ ಇದ್ದುಕೊಂಡು ಕೊಡುವ ಕೆಲವು ಭಾಷಣ, ಸಂದೇಶ, ಆರೋಪ ಪ್ರತ್ಯಾರೋಪಗಳು ಜನರ ದಿಕ್ಕನ್ನು  ತಪ್ಪಿಸಲು  ಸಹಕಾರಿ ಆದಂತಿದೆ. ಮೇಲ್ನೋಟಕ್ಕೆ  ಪ್ರಜೆಗಳ  ಭಾವನೆಗಳಿಗೆ ಧಕ್ಕೆ ಬರುವಂತೆ, ಪ್ರಜೆಗಳ ಸಂಸ್ಕಾರಗಳಿಗೆ ಧಕ್ಕೆ ಬರುವಂತೆ, ಧರ್ಮ ಧರ್ಮಗಳ ನಡುವೆ ದ್ವೇಷ ಹಂಚಿಕೆಯ ಭಾಷಣಗಳು, ಒಂದೊಂದು ಬಣಗಳ ನಡುವೆ ದ್ವೇಷಗಳನ್ನು ಹೆಚ್ಚಿಸುವ ಕಾರ್ಯಕ್ಕೆ ಕೆಲವರು ತುದಿಗಾಲಲ್ಲಿ ನಿಂತು ವಿಷ ಬೀಜವನ್ನು ಬಿತ್ತಿ ಸುಮ್ಮನಾಗಿಬಿಡುತ್ತಾರೆ.  ರಾಜರ ಕಾಲದ ರಾಜಕೀಯಕ್ಕೂ ಇಂದಿನ ಕಾಲದ ರಾಜಕೀಯಕ್ಕೂ ಬಹಳ ವ್ಯತ್ಯಾಸವಿದೆ ಎನಿಸುತ್ತದೆ. ರಾಜರುಗಳು  ತನ್ನ ದೇಶಕ್ಕೆ ಆಕ್ರಮಣಗಳಾದಾಗ ತನ್ನ ಜೀವವನ್ನೇ ಬಲಿಕೊಟ್ಟು ಪ್ರಜೆಗಳನ್ನು ಮಕ್ಕಳಂತೆ ನೋಡಿಕೊಳ್ಳುತ್ತಾ ತಪ್ಪಿದರೆ ರಾಜನಾಗಿ ತಾನು ಶಿಕ್ಷೆಗೆ ಒಳಪಡಿಸಿಕೊಳ್ಳುವ ಪ್ರಾಮಾಣಿಕ, ಧೈರ್ಯ, ಮತ್ತು ಧರ್ಮ ಯುದ್ದವನ್ನು ಮ

ಸೆಳೆವ ನೋಟ

ನಿನ್ನೊಲವ ಮಾತಿಗೆ ಮಗುವಾದೆ  ದಣಿದಿಹ ಹೃದಯಕೆ ಹೂವಾದೆ  ಸೂರ್ಯನ ಕಿರಣಕೆ ಹಕ್ಕಿಯ ಚಿಲಿಪಿಲಿ  ನನ್ನಯ ನೋವಿಗೆ ದನಿಯಾದ ಸವಿಜೇನು! ಜಿಂಕೆಯಂತೆ ನಿನ್ನ ಆ ಕಣ್ಣಲಿ ಎನ್ನ ಸೆಳೆವ ನೋಟ ಪ್ರಕೃತಿಯೇ ನಾಚುವ ನಿನ್ನ ಸೌಂದರ್ಯದ ನೋಟ ಎಳೆದೊಯ್ಯುತಿದೆ ಆನಂದ ಸಾಗರಕೆ!     ✍️ಮಾಧವ. ಕೆ. ಅಂಜಾರು.