ಪಡೆದು ಬಂದ ಭಾಗ್ಯ ನಿನ್ನ ಜೋತೆಯಲಿರುವಾಗ .......

ಹಲವು ಜಾತಿ ಮತ ಪಕ್ಷಗಳು , ಒಂಥರಾ ವಿಚಿತ್ರ
ಸತ್ಯಾಂಶ ತಿಳಿದೂ ಕುರುಡರಾಗಿ ಬಾಳುವರು , ಇದು ಸತ್ಯ...!

ತನ್ನನ್ನು ಹೊಗಳಿಕೊಲ್ಳುವರು ಮೇಧಾವಿ , ಮೇಲ್ಜಾತಿಯೆಂದು
ಪರರನು ತೆಗಳುವರು  ಹುಂಬನು , ಕೀಳ್ಜಾತಿಯೆಂದು

ಸತ್ಯ ನಿತ್ಯ ಬದುಕಲಿ ಎದುರಾಗದು ಅಂತರ
ಕೆಚ್ಚೆದೆಯಿಂದ ಬಾಳುವೆ ನೀ.., ಪ್ರೀತಿ ಹೃದಯದ ಸಂಸಾರ

ತಿಳಿದುಕೋ ತಾ ಮೊದಲು ಮನುಜ ಜನ್ಮವು ನಶ್ವರ
ಒಳಿತಾಗಿ ಬದುಕಲು ಕಲಿ , ಹುಟ್ಟಿ ಬಂದ ಪುಣ್ಯಕ್ಕೆ ..!

ಎಲ್ಲಾ ಜಂಜಾಟಗಳ ತಾ  ಸೃಷ್ಟಿಸಿಕೊಂಡಿರುವೆ
ಅತಿರೇಕಕೆ ಬಲಿಯಾಗದಿರು ದ್ರೋಹಿಸದಿರು ಆತ್ಮಕೆ

ಪಡೆದು ಬಂದ ಭಾಗ್ಯ ನಿನ್ನ ಜೋತೆಯಲಿರುವಾಗ
ವ್ಯರ್ಥ ಪ್ರಯತ್ನಕೆ ಕೈ ಹಾಕದಿರು ಒಳ್ಳೆ ಬುದ್ದಿ ಬಂದಾಗ


                                 - ಅಂಜಾರು ಮಾಧವ ನಾಯ್ಕ್

Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.

(ಲೇಖನ -100), "ಕುವೈಟ್ ಕಲಾ ಮಾಣಿಕ್ಯ" ಒಬ್ಬ ಕಲಾಗಾರನ ನಿಜವಾದ ಜೀವನ ಕ್ರಮ, ಶ್ರಮ ಮತ್ತು ಸಾಧನೆಯ ಹಾದಿ, ಕಲೆ ಎಂಬುವುದು ಎಲ್ಲರಿಗೂ ಒಲಿಯುವುದಿಲ್ಲ ಆದರೆ ಒಂದಲ್ಲ ಒಂದು ರೀತಿಯ ಕಲೆಯ ಶಕ್ತಿ ಪ್ರತಿಯೊಬ್ಬರಲ್ಲೂ ಇರುತ್ತದೆ