Posts

ಅಪರಿಚಿತ

ಅಪರಿಚಿತ  ********* ಅಮ್ಮ... ಅಪ್ಪಾ.. ನನಗೆ ಉಡುಪಿಯವರೆಗೆ ಹೋಗ್ಲಿಕ್ಕಿದೆ ನಾನು ನನ್ನ ಮಕ್ಕಳು ಮತ್ತು ಮಡದಿಯೊಂದಿಗೆ ಹೋಗಿ ಬರುತ್ತೇನೆ, ಬರುವಾಗ ಸ್ವಲ್ಪ ತಡವಾಗಬಹುದು. ಏನಿದ್ದರೂ ನಿಮಗೆ ಕರೆ ಮಾಡುತ್ತೇನೆ ಎಂದು ಹೊರಟುಬಿಟ್ಟ ಸುಧೀರ, ತನ್ನ ಹೆಂಡತಿ ಮಕ್ಕಳೊಂದಿಗೆ ದೇವಸ್ಥಾನಕ್ಕೆ ಹೋಗಿ ಹಣ್ಣು ಕಾಯಿ ಮಾಡೋಣ,  ಹೂ, ಹಣ್ಣು ಕಾಯಿಯೊಂದಿಗೆ ನಡೆದರು. ವಿಷ್ಣು ಮತ್ತು ವೃದ್ಧಿ  ಅಪ್ಪಾ ನನಗೆ ಬರುವಾಗ ಚೆಂದದ ಆಟೋಪಕರಣ ಬೇಕೆಂದು ಹೇಳತೊಡಗಿದರು ಮಕ್ಕಳೇ ಬನ್ನಿ ಹೋಗುವ ವಾಹನದಲ್ಲಿ ಕುಳಿತುಕೊಳ್ಳಿ ಮತ್ತೆ ಹೇಳುತ್ತೇನೆ , ನನ್ನದೊಂದು ಷರತ್ತು ನೀವು  ಹೇಳಿದ ಹಾಗೆ ಕೇಳಿದರೆ ಮಾತ್ರ ನಿಮಗೆ ಬರುವಾಗ ಆಟದ ಸಾಮಾನು  ಇಲ್ಲವಾದರೆ ಇಲ್ಲ,  ಏನದು ಷರತ್ತು  ಕೇಳಿಯೇ ಬಿಟ್ಟರು.  ದೇವಸ್ಥಾನಕ್ಕೆ ಹೋಗುತ್ತೇವೆ ದೇವರಲ್ಲಿ ನೀವು ಕಣ್ಣುಮುಚ್ಚಿ ಧ್ಯಾನ ಮಾಡುತ್ತ  ಈ ವರೆಗೂ ಸಿಗದ ವಸ್ತು ನನಗೆ ಕೊಡಿಸು ಎಂದು ದೇವರಲ್ಲಿ ಕೇಳಿಕೊಳ್ಳುವಂತೆ ಹೇಳಿಬಿಟ್ಟ ಸುಧೀರ.  ಹಾಗೆಯೇ ಮಾಡುತ್ತೇವೆ  ಹೇಳಿರುವ ಮಕ್ಕಳು ದೇವಸ್ಥಾನಕ್ಕೆ ಬಂದಂತೆ   ಕೈ ಕಾಲು ತೊಳೆದು ಹಣ್ಣುಕಾಯಿಯನ್ನು ಶುಭ್ರವಾಗಿಸಿ  ದೇವರೇ ನಮ್ಮನ್ನು ಕಾಪಾಡು,  ಹೇಳುತ್ತಾ  ಮೆಟ್ಟಿಲನ್ನು ಏರಿ ದೇವಸ್ಥಾನದ ಒಳಗೆ ಹೋಗುತ್ತಲೇ ತಲೆ ಬಾಗಿ ನಮಸ್ಕರಿಸಿ ಗುಡಿಯಲ್ಲಿ ಕೇಳಿ ಬರುತಿದ್ದ ಘಂಟಾ ನಾದ, ಮತ್ತು ಶ್ರೀ ...

ಸ್ನೇಹದ ಬೆಸುಗೆ

ಕಾಣುವ ಕನಸುಗಳು  ನಿಲ್ಲದಿರಲಿ  ನನಸಾದರೂ  ನನಸಾಗದಿದ್ದರೂ  ಮಿಡಿಯುವ ಮನಸುಗಳು  ಕಡಿಮೆಯಾಗದಿರಲಿ  ಬಡವನಿದ್ದರೂ  ಸಿರಿವಂತನಿದ್ದರೂ  ಸ್ನೇಹದ ಬೆಸುಗೆ  ಕರಗದಿರಲಿ  ದೂರವಿದ್ದರೂ  ಹತ್ತಿರವಿದ್ದರೂ         ✍️ಮಾಧವ. ಕೆ. ಅಂಜಾರು 

ರಾಮ ರಾಮ

ರಾಮ ನಿನ್ನ ನಾಮ ಜಪಿಸಿ  ಮನವು ತುಂಬಿತು  ರಾಮ ರಾಮ ರಾಮನೆನುತಾ  ಬದುಕು ಧನ್ಯವಾಯಿತು  ಸಜ್ಜಜನರ ಬಾಯಲಿ  ನಿನ್ನ ನಾಮ ಹೊರಡಿತು  ರಾಮ ನಿಮಗೆ ಕರುಣಿಸಲಿ  ದಯೆಯೂ ಅನ್ನಿತೂ  ರಾಮನೆಂಬ ನಾಮದೊಳು  ಸಕಲ ವ್ಯಥೆಗಳು  ದೂರವಾಯಿತು  ರಾಮ ರಾಮ ರಾಮನೇನುತಾ  ಹರುಷ ತುಂಬಿತು  ಹಗಲಿರುಳು ರಾಮ ನಾಮ  ರಕ್ಷಾ ಕವಚನೀಡಿತು  ರಾಮ ರಾಮ ರಾಮನೆನುತಾ  ಬದುಕು ಬಂಗಾರವಾಯಿತು         ✍️ಮಾಧವ. ಕೆ. ಅಂಜಾರು.

ಜಯನಿನ್ನದೇ

ಆಡುವ ಮಾತಿನೊಳಗೆ  ಕೊಡುವ ತುತ್ತಿನೊಳಗೆ  ನಿನ್ನ ಮುತ್ತಿನೊಳಗೆ  ಇರದಿರಲಿ ಸಂಶಯ  ಕಾಣುವ ಕನಸಿನೊಳಗೆ  ಇರುವ ಗುರಿಯೊಳಗೆ  ಮಾಡುವ ದಾನದೊಳಗೆ  ಬಾರದಿರಲಿ ಸಂಶಯ  ಇಂದಿಗೂ ನಾಳೆಗೂ  ಭರವಸೆಯ ಹೆಜ್ಜೆಯೊಳು  ನಡೆಯುತ್ತಿರು ಎಂದಿಗೂ  ಜಯನಿನ್ನದೇ ನಿಶ್ಚಯ         ✍️ಮಾಧವ. ಕೆ ಅಂಜಾರು 

ಸುಳ್ಳು

ಸತ್ಯವನ್ನು ಹೇಳುವವರು  ಸುಳ್ಳು ಹೇಳುವವರೊಂದಿಗೆ  ವ್ಯವಹಾರ ಮಾಡಬಾರದು  ಸತ್ಯವನ್ನು ಬಿಡದವರು  ಸುಳ್ಳು ಹೇಳುತ್ತಲಿರುವವರ  ಮಾತನ್ನು ನಂಬಬಾರದು  ಸುಳ್ಳು ಹೇಳುತ್ತಲೇ  ಬದುಕುವವಗೆ  ಸತ್ಯದ ಮಹತ್ವ ತಿಳಿಸುವ  ಕೆಲಸಕ್ಕೆ ಕೈ ಹಾಕಬಾರದು        ✍️ಮಾಧವ. ಕೆ. ಅಂಜಾರು 

ಬೆಂಬಲ

ಕೇವಲ ನೂರು ವರುಷ  ಬಾಳುವ ಮನುಜಗೆ  ಸಾವಿರಾರು ವರುಷ ಬದುಕುವ ಹಂಬಲ  ಶಾಶ್ವತವಲ್ಲದ  ಹುದ್ದೆ,  ಆಸ್ತಿಗಾಗಿ  ಮತ್ತೊಬ್ಬರ ಕತ್ತು ಹಿಸುಕಿ  ತಿನ್ನುವ ಹಂಬಲ  ಹಣಪಡೆದು ಮಾಡುವ   ಒಂದೊಂದು ಸನ್ಮಾನಕೆ  ಒಂದಿಷ್ಟು ಜನರ  ನಾಟಕೀಯ ಬೆಂಬಲ  .      -✍🏻Madhav K Anjar

ಬೇಲಿಯೇ ಎದ್ದು

ಬೇಲಿಯೇ ಎದ್ದು  ಹೊಲ ಮೇದಾಗ  ನ್ಯಾಯಾಲಯವೂ  ನರಕವಾಗಬಹುದು, ನ್ಯಾಯವಾದಿಯೇ  ಅನ್ಯಾಯ ಮಾಡಿದಾಗ  ನ್ಯಾಯಕೇಳುವವನು  ಅನ್ಯಾಯಕ್ಕೆ ಬಲಿಯಾಗಬಹುದು  ನ್ಯಾಯಾಲಯದ  ನ್ಯಾಯಾಧಿಶನೇ  ಹಣದ ದಾಸನಾದಾಗ  ನ್ಯಾಯಾಂಗ ವ್ಯವಸ್ಥೆ  ಸಜ್ಜನರನ್ನು ಅಳಿಸಬಹುದು,       ✍️ಮಾಧವ ಕೆ ಅಂಜಾರು