Posts

ನನಗೆ ನೀನೇ ಎಲ್ಲವೂ

ನನಗಾಗಿ ಮರುಗುವವರು  ನಾಳೆ ಇರುತ್ತಾರೋ ಇಲ್ಲವೋ  ನಡೆಯಲಾಗದೆ ಇದ್ದರೆ  ತುತ್ತು ತಿನ್ನಲಾಗದಿದ್ದರೆ  ತನ್ನ ಕೆಲಸ ತಾನೇ ಮಾಡಲಾಗದಿದ್ದರೆ!  ಎನ್ನ ಹೊಗಳುವವರು  ಎನ್ನ ದೂಷಿಸುವವರು  ಸಂತಸದಲಿ ಇದ್ದರೆ ಸಾಕು  ಅವರಿಗೆ ತಪ್ಪಿಯೂ ಬರದಿರಲಿ ಕಷ್ಟ ನಷ್ಟ  ನಾಳೆ ನಾನಿರುತ್ತೇನೋ ಇಲ್ಲವೋ ನಾಳೆಯನು ಬಲ್ಲವ ನೀನು  ಜೊತೆಯಲಿ ಇರುವವರೆಲ್ಲರು  ಹಲವು ತಪ್ಪನು ಮಾಡಿರಲೂ ಬಹುದು  ಮನ್ನಿಸಿ ಮುನ್ನಡೆಸು  ಜಗದೊಡೆಯ ನನಗೆ ನೀನೇ ಎಲ್ಲವೂ.             ✍️ಮಾಧವ. ಕೆ. ಅಂಜಾರು 

ಮೈ ಪರಚುತ್ತಲೇ ಇರಲಿ

ಹೇಳುವವರು ಹೇಳುತ್ತಿರಲಿ  ನಿನ್ನ ಬೆನ್ನ ಹಿಂದೆ  ನಿನ್ನ ಕಣ್ಣ ಮುಂದೆ  ಹೇಳುತ್ತಾ ಹೇಳುತ್ತಾ  ಬೇಸತ್ತು ಹೋಗುವವರೆಗೂ  ಹೇಳುತ್ತಲೇ ಇರಲಿ,  ದೂರುವವರು ದೂರುತ್ತಿರಲಿ  ನಿನ್ನ ಬೆನ್ನ ಹಿಂದ  ನಿನ್ನ ಕಣ್ಣ ಮುಂದೆ  ದೂರು ಹೇಳುತ್ತಾ  ಬೇಸತ್ತು ಹೋಗುವವರೆಗೂ  ದೂರುತ್ತಾ ಇರಲಿ, ನಿನ್ನತನವ ನಿನ್ನಲಿರಲಿ  ಹೃದಯದೊಳು ಸತ್ಯವಿರಲಿ  ಹೇಳುವವರೂ,ದೂರುವವರೂ  ಇಂದಲ್ಲ ನಾಳೆ ನಿನನ್ನ ನೋಡಿ  ಏನೂ ಮಾಡಲಾಗದೆ  ಮೈ ಪರಚುತ್ತಲೇ ಇರಲಿ           ✍️ಮಾಧವ. ಕೆ. ಅಂಜಾರು.

ಗೆಲ್ಲಬೇಕೆಂದಾದರೂ

ಗೆಲ್ಲಬೇಕೆಂಬ ಹಠವಿರಲಿ  ಯಾವಾಗಲೂ  ಗೆಲ್ಲುತ್ತಲೇ ಇರುವೆನೆಂಬ  ಕನಸು ಕಾಣದೆ ಇರಲಿ,  ಸೋಲುತ್ತಲೇ ಇರುವೆನೆಂಬ  ಭಯ ದೂರವಿರಲಿ  ಒಮ್ಮೆಯಾದರೂ ಗೆಲುವೆ  ಎಂಬ ಕನಸು ಕಾಣುತ್ತಿರಲಿ,  ಗೆಲ್ಲಬೇಕೆಂದಾದರೂ  ಸೋಲಬೇಕೆಂದಾದರೂ  ಭಗವಂತನ ನೆನೆಯದ  ದಿನವೇ ಇಲ್ಲದಿರಲಿ,           ✍️ಮಾಧವ. ಕೆ. ಅಂಜಾರು.

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ

Image
( ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ, ಜಿಲ್ಲಾವಾರು ಅಥವಾ ಪ್ರಾಂತ್ಯಕ್ಕ್ಕೆ ಅನುಸಾರವಾಗಿ ಮಾಡುವ ಯಾವುದೇ ಕಾರ್ಯಕ್ರಮಗಳ ಹಿಂದೆ ಕಾಣದ ಕೈಗಳ ಹಗಲಿರುಳಿನ ಪರಿಶ್ರಮ ಇದ್ದೆ ಇರುತ್ತದೆ. ಅದರಲ್ಲೂ ನಿರ್ದಿಷ್ಟ ಪಂಗಡದ ಅಥವಾ ಜಾತಿ ಮತ್ತು ಧರ್ಮದ ಬಗ್ಗೆ ನಡೆಯುವ ಸಮಾವೇಶಗಳಲ್ಲಿ ಅದೆಷ್ಟು ಜಾಗರೂಕರಾಗಿದ್ದರೂ ಅಲ್ಲೊಂದು ಇಲ್ಲೊಂದು ತಿಳಿದು, ತಿಳಿಯದ ತಪ್ಪುಗಳು ಆಗುವುದು ಸಹಜವಾಗಿ ನಡೆಯುತ್ತದೆ. ತಿಳಿದು ನಡೆಯುವ ಮತ್ತು ಪೂರ್ವ ಯೋಜಿತ ತಪ್ಪುಗಳು ಕೂಡ ನಡೆಯಲು ಸಾಧ್ಯತೆ ಕೂಡ ಅಲ್ಲಗಳೆಯುವಂತೆ ಇಲ್ಲ. ಸಾಮಾನ್ಯವಾಗಿ ದೊಡ್ಡ ಸಮಾವೇಶದ ಪೂರ್ವ ತಯಾರಿ ಸರಿ ಸುಮಾರು 7 ರಿಂದ 8 ತಿಂಗಳು ಎಲ್ಲಾ ಸದಸ್ಯರು ತಮ್ಮ ಪರಿಶ್ರಮವನ್ನು ಹಾಕಿಕೊಳ್ಳುತ್ತಾ ಬರುತ್ತಾರೆ. ಸಮಾವೇಶ ಸಮೀಪಗೊಳ್ಳುತ ಆಯೋಜಕರ ಎದೆ ಬಡಿತ ಜಾಸ್ತಿ ಯಾಗುತ್ತ ಕಡಿಮೆಯಾಗುತ್ತಲು ಇರುತ್ತದೆ.     ವೇದಿಕೆ, ಆಸನ, ದೀಪಾಲಂಕಾರ, ವಾಹನ ವ್ಯವಸ್ಥೆ, ಆಮಂತ್ರಣ ಪತ್ರಿಕೆ, ಊಟ ಉಪಚಾರ ವ್ಯವಸ್ಥೆ, ವಾಹನ ನಿಲುಗಡೆಯ ವ್ಯವಸ್ಥೆ, ಮುಖ್ಯ ಅಥಿತಿ ಮತ್ತು ಸಮಾರಂಭದ ಪ್ರತೀ ಆಹ್ವಾನಿತ ವ್ಯಕ್ತಗಳನ್ನು ಗೌರವಿಸುವ ಮತ್ತು ಅವರನ್ನು ಕ್ಷೇಮವಾಗಿ ನೋಡಿಕೊಳ್ಳುವ ಜವಾಬ್ದಾರಿ ಹಾಗೆಯೇ ಸಾಂಸ್ಕೃತಿಕ ಕಾರ್ಯಕ್ರಮ ದ ಎಲ್ಲಾ ತಯಾರಿ ಇಂತಹ ಅನೇಕ ಜವಾಬ್ದಾರಿಗಳು ಸದಸ್ಯರು ಮಾಡುತ್ತಲೆ ಇರುತ್ತಾರೆ.          ಸಮಾಜಕ್ಕೆ ಒಳಿತನ್ನು ಮಾಡುವ ಯಾವುದೇ ಕೆಲಸ ಕಾರ್ಯವನ್ನು ಬ

ಇನ್ನು ನಾವು ಯಾವ ಲೆಕ್ಕ?

ಪ್ರಪಂಚವನ್ನು  ಸಂತುಷ್ಟಗೊಳಿಸುವ ಕೆಲಸ  ಬಿಟ್ಟುಬಿಡು, ಯಾಕೆಂದರೆ? ಪ್ರಪಂಚವನ್ನು ಸಂತೋಷಗೊಳಿಸಲು  ಶ್ರೀ ರಾಮನಿಗೂ ಆಗಲಿಲ್ಲ  ಶ್ರೀ ಕೃಷ್ಣ ದೇವನೂ  ಅಪವಾದ ಕೇಳಬೇಕಾಯಿತು, ಇನ್ನು ನಾವು ಯಾವ ಲೆಕ್ಕ? ಸಂತೋಷಗೊಳಿಸಲು ಮನಸಿದ್ದರೆ  ನಿನ್ನ ಮನಸ್ಸನ್ನು  ಮೊದಲು ಸಂತೋಷಗೊಳಿಸು  ಶ್ರೀ ರಾಮ ನಾಮವ ಪಠಿಸಿ  ಶ್ರೀ ಕೃಷ್ಣ ದೇವನ ನಮಿಸಿ, ತಂದೆ ತಾಯಿಯ ಸೇವೆ ಮಾಡಿ,          ✍️ಮಾಧವ. ಕೆ ಅಂಜಾರು.

(ಲೇಖನ -126) ಚಕ್ರವ್ಯೂಹ

 ನಮಗೆ ನಮ್ಮದೇ ಬದುಕು ಕಲಿಸುವ ಪಾಠ ಅನೇಕ, ದಿನಗಳು ಕಳೆದಂತೆ ಹೊಸ ಹುರುಪು, ಜೀವನದ ಏರಿಳಿತ, ಸುಖ ದುಃಖ ದುಮ್ಮಾನ, ಎಲ್ಲದರ ನಡುವೆ ಒಂದಿಷ್ಟು ಸಂತೋಷ, ಹಲವು ಕನಸು ಇವೆಲ್ಲವೂ ಪ್ರತಿಯೊಬ್ಬರ ಜೀವನದಲ್ಲಿ ಮಿಂಚಿನಂತೆ ಬಂದು ಹೋಗುತ್ತದೆ. ಕೊನೆಗೆ ಎಲ್ಲವೂ ಕ್ಷಣಿಕ ಎಂಬ ಭಾವನೆಗಳ ಪುಟಕ್ಕೆ ಸೇರಿಕೊಳ್ಳುತ್ತದೆ. ಪ್ರಪಂಚವನ್ನು ತಿಳಿಯುವ ಹೊತ್ತಿಗೆ ಜೀವನಚಕ್ರ ಮುಗಿದುಹೋಗುತ್ತದೆ.            ಹುಟ್ಟು ಸಾವಿನ ನಡುವೆ ಎದುರಾಗುವ ಅನೇಕ ಸಂಧರ್ಭಗಳು ಕೆಲವರನ್ನು ಬಹಳಷ್ಟು ದೃಢವಾಗಿಸಿದರೆ, ಇನ್ನು ಕೆಲವರನ್ನು ಪ್ರಪಾತಕ್ಕೆ ತಳ್ಳುತ್ತದೆ. ಅದರಲ್ಲೂ ನಿಜ ಜೀವನದಲ್ಲಿ ಚಟವೆಂಬ ಚಕ್ರವ್ಯೂಹಕ್ಕೆ ಸಿಕ್ಕಿ ಬಿದ್ದಲ್ಲಿ ಹೊರಗೆ ಬರಲಾರದೆ ಮನುಷ್ಯ ಸೋತುಬಿಡುತ್ತಾನೆ.           ನಾಟಕೀಯವಾಗಿ ಇರುವ ಈ ಜಗತ್ತಿನಲ್ಲಿ, ಪ್ರೀತಿ, ವಾತ್ಸಲ್ಯ, ಭರವಸೆ, ನಂಬಿಕೆ, ಸಹಾಯ, ಇವೆಲ್ಲವೂ ಹುಸಿಯಾಗಿರುತ್ತದೆ. ಹೆಚ್ಚಿನ ಪ್ರಸಂಗಗಳು ತನ್ನ ತಟ್ಟೆಯಲ್ಲಿ ಚಿನ್ನ ಹಾಕಿಕೊಳ್ಳುವುದೇ ಆಗಿರುತ್ತದೆ. ಸ್ವಾರ್ಥ ಬದುಕಿನ ಭರದಲ್ಲಿ ಕತ್ತೆಯನ್ನು ಕುದುರೆಯಾಗಿಸಿ, ನರಿಯನ್ನು ಹುಲಿಯೆಂದು ಬಿಂಬಿಸುವ ಈ ಕಾಲದಲ್ಲಿ ಎಲ್ಲಿ ಎಡವಿ ಬೀಳುತ್ತೇವೆ ಎಂಬುವುದೇ ತಿಳಿಯದು. ಅದಕ್ಕೂ ಮುನ್ನ ಬಲೆ ಬೀಸುವ ಜನರ ಮದ್ಯೆ ಬದುಕಿ ತೋರಿಸುವುದೇ ಬಹಳ ದೊಡ್ಡ ಸಾಧನೆ.       ಹೆಜ್ಜೆ ಹೆಜ್ಜೆಗೂ ಸಿಗುವ , ಮಾದಕ ದ್ರವ್ಯ, ಸಿಗರೇಟು, ಗಾಂಜಾ, ಸೆಕ್ಸ್ ರ್ಯಾಕೆಟ್, ಕೆಟ್ಟ ರಾಜಕೀಯದ ಚಕ್ರವ್ಯೂಹದೊಳಗೆ ಸಿ

ಕಾಲ ಕಳೆದಂತೆ

ಕಾಲ ಕಳೆದಂತೆ  ನಿನ್ನ ಪ್ರೇಮಿಸುತಲೇ  ಹೃದಯ ವೀಣೆತಂತಿಯು  ಮಿಡಿಯುತ್ತಿದೆ  ಹಾಯಾಗಿ ಜೊತೆಯಾಗಿರು  ಪ್ರಿಯೇ ನಿನಗಾಗಿ  ಜೀವ ಹಾತೊರೆಯುತ್ತಿದೆ, ಮುಸ್ಸಂಜೆಯ ಸವಿಮಾತು  ಕಿವಿಯೊಳಗೆ ಗುನುಗುತ್ತಲು  ಹಕ್ಕಿಗಳ ಚಿಲಿಪಿಲಿಗೆ  ಹೊಸ ಕನಸು ಚಿಗುರುತ್ತಿದೆ  ದಿನಕಳೆಯುತ್ತಿದ್ದಂತೆ  ನಮ್ಮಿಬ್ಬರ ಪ್ರೀತಿ  ಹೊಸ ಜೀವನ ನೀಡುತಲಿದೆ  ✍️ಮಾಧವ. ಕೆ. ಅಂಜಾರು