Posts

(ಲೇಖನ -125) ನಾನು ಕಂಡಂತೆ ಕುವೈತ್ ಕನ್ನಡ ಕೂಟ

Image
 (ಲೇಖನ -125) ನಾನು ಕಂಡಂತೆ ಕುವೈತ್ ಕನ್ನಡ ಕೂಟ,  ಕನ್ನಡವೇ ಸತ್ಯ ಕನ್ನಡವೇ ನಿತ್ಯ, ಕುವೈತ್ ಕನ್ನಡಕೂಟದ ಎಲ್ಲಾ ಸದಸ್ಯರು ಕನ್ನಡ ಭಾಷೆಗೆ ಕೊಡುತ್ತಿರುವ ಗೌರವ,ಪ್ರೀತಿಯಂತೂ ನಿತ್ಯ ಸತ್ಯ. ಹಲವಾರು ವರುಷಗಳಿಂದ ಕನ್ನಡಾಂಬೆಯ ಸೇವೆಯನ್ನು ಮಾಡುತ್ತಿರುವ ಕನ್ನಡಿಗರ ಕೂಟ,  ಕುವೈಟ್ ಕನ್ನಡ ಕೂಟ ವಿವಿಧ ರೀತಿಯಲ್ಲಿ ಪ್ರಾಮಾಣಿಕವಾಗಿ ಕೆಲಸವನ್ನು ಮಾಡುತ್ತಲೇ ಬರುತ್ತಿದೆ. ಈ ಸುಂದರವಾದ ಕೂಟ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮಾಡುತ್ತ ಹೆಸರುವಾಸಿಯಾಗುತ್ತಿದೆ. ನಾನು ಕಂಡಂತೆ ಕುವೈಟ್ ಕನ್ನಡ ಕೂಟ ಹೇಗೆ ಕೆಲಸ ಮಾಡುತ್ತಿದೆ? ಅದರ ಶಿಸ್ತು ನಿಯಮಗಳೇನು? ಯಾವ ಮನೋಭಾವದ ಸದಸ್ಯರು ಮತ್ತು ಆಡಳಿತ ಮಂಡಳಿ ಇದೆ? ಸಮಾಜಕ್ಕೇನು ಕೊಡುತ್ತಿದೆ, ಕನ್ನಡದ ಪೋಷಣೆಯೊಂದಿಗೆ ಭಾರತೀಯ ಸಂಸ್ಕೃತಿಯನ್ನು ಹೇಗೆ ಉಳಿಸಿ ಬೆಳೆಸುತ್ತಿದ್ದಾರೆ? ಆಟೋಟ ಮತ್ತು ವಿವಿಧ ಕಾರ್ಯಕ್ರಮ ಹೇಗೆಲ್ಲ ನಡೆಸುತ್ತಾರೆ? ಸಾಹಿತ್ಯ ಮತ್ತು ಸಂಗೀತ, ಕನ್ನಡ ಬರವಣಿಗೆ ಬಗ್ಗೆ ಎಷ್ಟು ಕಾಳಜಿಯಿಂದ ಕೆಲಸಮಾಡುತ್ತಾರೆ? ಎಂಬುವುದನ್ನು ಹಲವಾರು ವರುಷದಿಂದ ಕಣ್ಣಾರೆ ನೋಡುತ್ತಾ ಅದರೊಂದಿಗೆ ಸೇರಿ ಸಂತೋಷದ ಕಾರ್ಯಕ್ರಮಗಳನ್ನು ಅನುಭವಿಸಿಕೊಂಡು ಬರುತ್ತಿದ್ದೇನೆ.             ಹೌದು, ಒಂದು ಸಂಘಟನೆ ನಡೆಸುವುದು ಸುಲಭವಾದ ಕೆಲಸವಲ್ಲ ಮತ್ತು ಸಂಘಟನೆಯನ್ನು ಉಳಿಸಿ ಬೆಳೆಸುವುದು ಕೂಡ ಅಷ್ಟೇ ಜವಾಬ್ದಾರಿಯಿಂದ ಕೂಡಿರುತ್ತದೆ. ಆಡಳಿತ ಮಂಡಳಿ ಮತ್ತು ಸದಸ್ಯರ ಒಪ್ಪಿಗೆಯ ಮೇರೆಗೆ ಇಷ್ಟಪಡುವ ಕಾರ್

(ಲೇಖನ -124) ಹಸಿವೆಂಬುವುದು ಪ್ರತೀ ಜೀವಿಗೆ ಇದೆ, ಹಸಿವಿನ ಅರಿವು ಇರುವ ಪ್ರತೀ ಜೀವಿ ತನ್ನ ಆಹಾರಕ್ಕಾಗಿ ಹುಡುಕಾಟ / ಹೋರಾಟ ಮಾಡಿಯೇ ಮಾಡುತ್ತದೆ

Image
 (ಲೇಖನ -124) ಹಸಿವೆಂಬುವುದು ಪ್ರತೀ ಜೀವಿಗೆ ಇದೆ, ಹಸಿವಿನ ಅರಿವು ಇರುವ ಪ್ರತೀ ಜೀವಿ ತನ್ನ ಆಹಾರಕ್ಕಾಗಿ ಹುಡುಕಾಟ / ಹೋರಾಟ ಮಾಡಿಯೇ ಮಾಡುತ್ತದೆ. ಪ್ರಾಣಿ, ಪಕ್ಷಿ ಸಂಕುಲ, ಮನುಜ ಎಲ್ಲವೂ ಹಸಿವನ್ನು ತಡೆದುಕೊಳ್ಳುವ ಶಕ್ತಿ ಮತ್ತು ಸಾಮರ್ಥ್ಯವನ್ನು ಹೊಂದಲು ಸಾಧ್ಯವಿಲ್ಲ. ಹಸಿದ ಹೊಟ್ಟೆ, ಖಾಲಿ ಕೈ ಕಲಿಸುವ ಪಾಠ ಜೀವನದಲ್ಲಿ ಮನುಷ್ಯರು ಮರೆಯುವುದು ವಿರಳ. ಹಸಿವು ಮನುಷ್ಯನನ್ನು ಹೆಚ್ಚು ಹದ್ದುಬಸ್ತಿನಲ್ಲಿಡುತ್ತದೆ, ಹಸಿವನ್ನು ತಿಳಿದವನು ಹೆಚ್ಚಿನ ಗುಣಗಳನ್ನು ಹೊಂದಿರುತ್ತಾನೆ, ಹಸಿವನ್ನು ನೀಗಿಸಲು ಪ್ರಯತ್ನ ಪಡುತ್ತಾ ಇನ್ನೊಂದು ಜೀವಿಯ ಹಸಿವನ್ನು ನೀಗಿಸಲು ಪ್ರಯತ್ನ ಮಾಡುತ್ತಾನೆ. ಇಂದಿನ ದಿನದಲ್ಲೂ ಹಸಿವಿನಿಂದ ಬಳಲುವ ಮತ್ತು ದಿನದ ಒಂದು ತುತ್ತಿಗಾಗಿ ಹಂಬಲಿಸುವ, ಬೇಡುತ್ತಿರುವ, ಮತ್ತು ಕೆಲಸ ಮಾಡಿಯೂ ದಕ್ಕದೇ ಇರುವ ಹಣದ ಕೊರತೆ, ಇವೆಲ್ಲವೂ ಮನುಜನನ್ನು ಊಹಿಸಲಾಗದ ಕಷ್ಟಕ್ಕೆ ತಳ್ಳುತ್ತ ಇರುತ್ತದೆ. ಹಸಿವನ್ನು ತಿಳಿದವನು ಅಹಂಕಾರವನ್ನು ಹೊಂದಿರುವುದಿಲ್ಲ, ಕಷ್ಟವನ್ನು ತಿಳಿದವನು ಕಷ್ಟವನ್ನು ಕೊಡುವುದೂ ಇಲ್ಲ, ಎಲ್ಲರೂ ಸುಖವಾಗಿ ಇರಲಿ ಇರುವುದರಲ್ಲಿಯೇ ಹಂಚಿ ತಿನ್ನುವ ಅನ್ನುವ ಮನೋಭಾವನೆ ಹೊಂದಿರುತ್ತಾರೆ.              ಒಂದು ಹೊತ್ತಿನ ಊಟಕ್ಕೂ ಕಷ್ಟಪಡುವ ಅದೆಷ್ಟೋ ಜನರು ಬರೇ ನೀರು ಕುಡಿದು, ಅಥವಾ ಹಸಿವನ್ನು ತಾಳಲಾರದೆ ಒದ್ದಾಡುವ ಅನೇಕ ಜನರನ್ನು ನಾವೆಲ್ಲರೂ ನೋಡುತ್ತೇವೆ. ಆದರೆ ಸಾಮರ್ಥ್ಯವಿದ್ದೂ ಹಸಿವನ್ನು ನೀಗಿಸುವ ಕಾರ

ಲೇಖನ -123) ಹೊರದೇಶದಲ್ಲಿರುವ ಉದ್ಯೋಗಸ್ಥರು ಅದೆಷ್ಟು ಸುರಕ್ಷಿತರು?

Image
(ಲೇಖನ -123) ಹೊರದೇಶದಲ್ಲಿರುವ  ಉದ್ಯೋಗಸ್ಥರು  ಅದೆಷ್ಟು  ಸುರಕ್ಷಿತರು? ದೇಶ ಬಿಟ್ಟು  ಹೊರದೇಶಕ್ಕೆ  ಸಾವಿರಾರು ಕನಸುಗಳೊಂದಿಗೆ ಹೆಜ್ಜೆ ಹಾಕಿ  ಸುಂದರ ಬದುಕನ್ನು  ಕಟ್ಟಿಕೊಳ್ಳಲು  ಹರಸಾಹಸ ಪಟ್ಟು ಕೆಲವರು ತನ್ನ ಕನಸನ್ನು ನನಸು ಮಾಡಿಕೊಂಡರೆ, ಇನ್ನು ಕೆಲವರು  ಜೀವನಪರ್ಯಂತ  ವಿದೇಶದಲ್ಲಿ ದುಡಿದು  ಕೊನೆಗಾಲಕ್ಕೆ  ಏನು ಇಲ್ಲದೆ  ಮರುಗುವ ಪರಿಸ್ಥಿತಿಯನ್ನು ಎದುರಿಸುತ್ತಾರೆ. ಒಬ್ಬೊಬ್ಬರಿಗೆ ಒಂದೊಂದು ತರಹದ  ಸಮಸ್ಯೆಗಳು, ಒಂದೊಂದು ತರಹದ  ಜವಾಬ್ದಾರಿಗಳು, ಇನ್ನು ಕೆಲವರಿಗೆ  ಮುಂದಿನ ಬದುಕಿನ  ಅರಿವಿಲ್ಲದೆ  ಸಂಪಾದಿಸಿದ ಹಣವನ್ನು ವ್ಯಯಮಾಡಿ ಕೊನೆಗೆ ಪರಿತಪಿಸುವ  ಅನೇಕ ಮಂದಿ, ತಾನು  ಸಂಪಾದಿಸುವ ಕಾಲದಲ್ಲಿ  ಅನೇಕ ಜನರು  ತನ್ನನ್ನು ಉಪಯೋಗಿಸಿಕೊಳ್ಳಲು ಆರಂಭಿಸುತ್ತಾರೆ. ತನ್ನ ಸಂಪಾದನೆಯಲ್ಲಿ ಬಂದ ಹಣವನ್ನು  ಕುಟುಂಬ, ಸಂಬಂಧಿಗಳು, ಗೆಳೆಯ ಗೆಳತಿಯರು  ಎನ್ನುತ್ತಾ  ಭಾವನೆಗಳಿಗೆ ಅಂಟಿಕೊಂಡು  ಕೈ ಖಾಲಿ  ಮಾಡಿಕೊಂಡು  ಮಾಡಿರುವ ಹಣದ  ಸಹಾಯವನ್ನು ನೆನೆಯುತ್ತಾ  ಕೊರಗಿ  ಬದುಕುವ  ಅದೆಷ್ಟೋ  ಪರದೇಶಿಗಳು.               ಹೊರದೇಶವೆಂದರೆ, ಸುಲಭದಲ್ಲಿ ಹಣ ಸಂಪಾದನೆ ಮಾಡುವ  ಜಾಗವೆಂದು  ತಿಳಿದುಕೊಳ್ಳುವ  ಅನೇಕ ಮಂದಿ  ಹೊರದೇಶಕ್ಕೆ  ಕಾಲಿಟ್ಟಾಗ ಮಾತ್ರ  ಅನುಭವಿಸುತ್ತಾರೆ,  ಅಲ್ಲಿರುವ ವಾತಾವರಣ, ನಿಯಮಗಳನ್ನು ಪಾಲಿಸುತ್ತ ಸರಿಯಾಗಿ ಹೊಟ್ಟೆಗೂ ತಿನ್ನದೇ, ತನ್ನ ಕುಟುಂಬ ಸಂಸಾರಕ್ಕಾಗಿ ಜೀವನಪರ್ಯಂತ ದುಡಿದು  ಹಣವನ್ನು ಕಳುಹಿಸು

ನಿನಗಿನ್ನೂ ತಿಳಿದಿಲ್ಲ

ನಿನಗಿನ್ನೂ ತಿಳಿದಿಲ್ಲ  ನಾನಿನ್ನ ಪ್ರೀತಿಸುವ ರೀತಿ  ನಿನಗಿನ್ನೂ ತಿಳಿದಿಲ್ಲ  ನಾ ನಿನಗಾಗಿ ಹಂಬಲಿಸುವ ರೀತಿ  ತಿಳಿಯುತ್ತಿಲ್ಲ ಎನಗೆ  ಹಗಲು ರಾತ್ರಿ  ನಿನ್ನ ನೆನಪಲ್ಲೇ ಸಾಗುತಿರುವೆ  ದಿನ ದಿನವೂ ನಿನ್ನದೇ ನೆನಪು, ಬರುವೆಯಾ ಜೊತೆಯಾಗಿ  ನನ್ನ ಪ್ರೀತಿಯ ರಾಣಿಯಾಗಿ  ಕಾಯುತಿರುವೆ ನಿನಗಾಗಿ  ಬಿಗಿದಪ್ಪಿ ಮುದ್ದಿನ ಸುರಿಮಳೆಗಾಗಿ  ಓ ನನ್ನ ನಲ್ಲೆ, ನಾನಿರುವೆ ನಿನಗಾಗಿ  ನಿನ್ನ ಪ್ರೀತಿಯ ಕಿವಿ ಮಾತಿಗಾಗಿ        ✍🏿ಮಾಧವ. ಕೆ. ಅಂಜಾರು 

( ಲೇಖನ -122) ಭೂ - ಕೈಲಾಸ

Image
(ಲೇಖನ -122) ಭೂ - ಕೈಲಾಸ, ಕಲಾ ವೈಭವ - ಕುವೈತ್ ಕನ್ನಡ ಕೂಟದಿಂದ ಆಯೋಜಿಸಲ್ಪಟ್ಟ  ದಾಸೋತ್ಸವ ಶೇಕಡಾ ನೂರರಷ್ಟು ಮನ ತಣಿಸಿತು, ಕಲಾ ಮಾತೆಯರು , ಕಲಾಗಾರರು ರೋಮಾಂಚನಗೊಳಿಸಿದ ದೃಶ್ಯಗಳ ಹಿಂದೆ ಸದ್ದಿಲ್ಲದೇ ಶ್ರಮವಹಿಸಿದ "ಶ್ರೀ ಸತೀಶ್ ಆಚಾರ್ಯ "ಇವರ ನಿರ್ದೇಶನ ಪ್ರೇಕ್ಷಕವರ್ಗದ ಹುಬ್ಬೆರಿಸಿತ್ತು,  ಭೂ ಕೈಲಾಸದ ಪ್ರತಿಯೊಂದು ಭಾಗ ಚಪ್ಪಾಳೆಯೊಂದಿಗೆ ಮುಂದುವರಿಯುತಿತ್ತು. ಆರಂಭದಿಂದ ಕೊನೆಯವರೆಗೂ ಅಚ್ಚುಕಟ್ಟಾಗಿ ನಡೆದ ಕಾರ್ಯಕ್ರಮ ಚಿಣ್ಣರಿಂದ ಹಿರಿಯರವರೆಗೂ ಬಹಳಷ್ಟು ಸ್ಪಷ್ಟ ಮತ್ತು ಸಂತಸದ ವಾತಾವರಣದಿಂದ ಕೂಡಿತ್ತು.        ರಾಮಾಯಣ, ಮಹಾಭಾರತದ ತುಣುಕುಗಳೊಂದಿಗೆ,ಭಕ್ತಿ ಮತ್ತು ರಸದೌತಣದ ಹಬ್ಬ ಕುವೈಟ್ ಕನ್ನಡ ಕೂಟದ ಮೆರುಗನ್ನು ಇನ್ನಷ್ಟು ಹೆಚ್ಚುಗೊಳಿಸಿತ್ತು. ಬಣ್ಣ ಬಣ್ಣದ ಉಡುಗೆ ತೊಡುಗೆ, ಪರಸ್ಪರರ ನಗು ಮುಖದ ಸಂಧರ್ಭಗಳೊಂದಿಗೆ ಕಾರ್ಯಕ್ರಮ ತೆರೆಕಂಡಿತು. ಇಲ್ಲಿ ಆಡಳಿತ ಮಂಡಳಿ, ಸರ್ವ ಸದಸ್ಯರ ನಿಸ್ವಾರ್ಥ ಸೇವೆ ಕನ್ನಡ ಕೂಟದ ಗೌರವ ದ್ವಿಗುಣಗೊಳಿಸುತ್ತಲೇ ಇದೆ. ಪ್ರತಿಯೊಬ್ಬರಲ್ಲೂ ಕಲೆಎಂಬುದಿದೆ ಹಾಗಾಗಿ ಪ್ರತೀ ಸದಸ್ಯರು ಮತ್ತು ಅವರ ಮಕ್ಕಳೂ ಒಂದಲ್ಲ ಒಂದು ರೀತಿಯಲ್ಲಿ ಭಾಗವಹಿಸಿ ಕಲೆಯನ್ನು ಉಳಿಸಿ ಬೆಳೆಸಲು ಸಹಾಯವಾಗುತ್ತಿದ್ದಾರೆ. ಭಜನೆ, ನಿರೂಪಣೆ, ಸಾತ್ವಿಕ ಆಹಾರ ಎಲ್ಲವೂ ಅಚ್ಚುಕಟ್ಟಾಗಿ ನಡೆದು ಕೂಟದ ಶಿಸ್ತನ್ನು ತೋರಿಸುತಿತ್ತು.         ಬಾಲ್ಯದ ಸಮಯದಲ್ಲಿ ಕೇಳುತಿದ್ದ ಹರಿಕಥೆಯನ್ನು ವಿಶೇಷ ರೀತಿಯಲ್ಲಿ

ಕಲಶೋತ್ಸವ

ಬ್ರಮ್ಮ ಕಲಶೋತ್ಸವ.... ಬ್ರಮ್ಮ ಕಲಶೋತ್ಸವ  ನಮ್ಮ ಕಾಪುದ ಮಾರ್ಯಮ್ಮನ, ನಮ್ಮೂರ ದೇವೆರೆ ಪೊಸ ಗುಡಿತ  ಸಂಭ್ರಮೋ ಮಾತೆರೆಗ್ಲಾ  ಮಾತೆರ್ಲ ಬಲೆ  ಅಮ್ಮನ ಸೇವೆ ಮಲ್ಪುಲೇ... ಅಮ್ಮನ ಪಾದ ಸೇವೆ  ನಮ್ಮ ಮಾರ್ಯಮ್ಮ ದೇವೆರೆನ  ಮಲ್ಲಿಗೆ ಪೂ ಪರುಂದು  ಭಕ್ತಿ ಸೇವೆ ಕೊರಿಯರೆ  ಮಾತೆರ್ಲ ಸೇರ್ಲೆ  ನಮ್ಮ ಕಾಪು ಕ್ಷೇತ್ರಡು, ಅಮ್ಮ ಮಾರ್ಯಮ್ಮ ನಿನ್ನನೇ ಸುಗಿಪುವ  ಭಯ ಭಕ್ತಿಡು ನಿನ್ನ ಸೇವೆ ಮಲ್ಪುವ  ಊರುನೇ ಕಾಪುನ ಕಾಪುದ ಮಾರ್ಯಮ್ಮ  ಅಭಯೋನು ಕೊರ್ಲೆ  ಅಮ್ಮ, ಅಮ್ಮ ಅಮ್ಮ 🙏🏿       ✍🏿ಮಾಧವ. ಕೆ. ಅಂಜಾರು 

ಕಾಪುಲೆ ಅಮ್ಮ ಮಾರ್ಯಾಮ್ಮ

ಕಾಪುಲೆ ಅಮ್ಮ ಮಾರ್ಯಾಮ್ಮ  ಕಾಪುಲೆ ಅಮ್ಮ ಮಾರ್ಯಮ್ಮ  ಎಂಚಪ್ಪುನಮ್ಮ ನಿನನ್ ಸುಗಿಪಂದೆ  ಎಂಚಪ್ಪುನಮ್ಮ ನಿನ್ನ ಗುಡಿಕ್ ಬರಂದೆ  ಎಂಚಪ್ಪುನಮ್ಮ ನಿನ್ನ ಸೇವೆ ಮಲ್ಪಂದೆ  ಎಂಚಪ್ಪುನಮ್ಮ ನಿನ್ನ ಕಾರುಗ್ ಬೂರಂದೆ, ಕಾಪುಲೆ ಅಮ್ಮ ಮಾರ್ಯಮ್ಮ  ಕಾಪುಲೆ ಅಮ್ಮ ಮಾರ್ಯಮ್ಮ  ಎಂಚಪ್ಪುನಮ್ಮ ನಿನ್ನ ಮೂರುತಿ ತೂವಂದೆ  ಎಂಚಪ್ಪುನಮ್ಮ  ನಿನ್ನ ಭಜನೆ ಮಲ್ಪಂದೆ  ಎಂಚಪ್ಪುನಮ್ಮ ನಿನ್ನ ಪೂಜೆ ಮಲ್ಪಂದೆ  ಎಂಚಪ್ಪುನಮ್ಮ ಅಮ್ಮಾ ಅಮ್ಮಾ ಪನಂದೆ, ಕಾಪುಲೆ ಅಮ್ಮ ಮಾರ್ಯಮ್ಮ  ಕಾಪುದ ಅಮ್ಮ ಅಮ್ಮ ಮಾರ್ಯಮ್ಮ  ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ  ಎಂಕ್ಲೆನ್ ಕಾಪುಲೆ ಅಮ್ಮಾ           ✍🏿ಮಾಧವ. ಕೆ. ಅಂಜಾರು