Posts

(ಲೇಖನ -129) ನ್ಯಾಯ ಮತ್ತು ಅನ್ಯಾಯದ ಹೋರಾಟ

Image
ಬದುಕೊಂದು ಹೋರಾಟವೇ ಆದರೆ ಇದರ ನಡುವೆ ನಮ್ಮ ಜೀವನದಲ್ಲಿ ಹಲವು ಸಂಧರ್ಭಗಳು ನ್ಯಾಯಕ್ಕಾಗಿ ಹೋರಾಟ, ಜೀವನಕ್ಕಾಗಿ ಹೋರಾಟ, ಯಶಸ್ಸಿಗಾಗಿ ಹೋರಾಟ ಮತ್ತು ಕೆಲವರು ಹೋರಾಡುವವರನ್ನು ಧಮನಿಸಲು ಮಾಡುವ ಕಪಟ ಹೋರಾಟಗಳು ನಡೆಯುತ್ತಿರುತ್ತವೆ.        ಬ್ರಿಟಿಷರು ನಮ್ಮ ದೇಶವನ್ನು ಆಳುತಿದ್ದ ಸಂಧರ್ಭದಲ್ಲಿ ಸ್ವಾತಂತ್ರ್ಯ ಕ್ಕಾಗಿ ಹೋರಾಟ ಮಾಡಿ ತಮ್ಮ ಜೀವನವನ್ನು/ ಜೀವವನ್ನು ಮುಡಿಪಾಗಿಸಿ ಇಂದಿಗೂ ನಾವೆಲ್ಲರೂ ಅವರನ್ನು ಸ್ಮರಿಸುತ್ತ ಸ್ವಾತಂತ್ರ್ಯ ಆಚರಿಸುತ್ತೇವೆ, ಸಿಹಿ ತಿಂಡಿ ಹಂಚುತ್ತೇವೆ, ಒಂದಷ್ಟು ಭಾಷಣಗಳನ್ನು ಮಾಡುತ್ತೇವೆ, ಆದರೂ ಹೋರಾಟ ಮಾಡಿ ಮಡಿದ ಜನರನ್ನು ಬಿಡದೆ ಕೀಳು ರಾಜಕೀಯ ಕೂಡ ಮಾಡುತ್ತಿರುತ್ತೇವೆ. ಮತ್ತು ಪ್ರಸ್ತುತ ಸ್ಥಿತಿಗೆ ಅನುಸಾರವಾಗಿ ಬಾಯಿಗೆ ಬಂದ ಹಾಗೆ ಮಾತನಾಡುವ ಅನೇಕ ನಾಯಕರುಗಳನ್ನು ನಾವು ನೋಡುತ್ತಲೇ ಇದ್ದೇವೆ. ಹೋರಾಟದ ಹಾದಿಯಲ್ಲಿ ಒಂದಷ್ಟು ಜನರು ತನ್ನ ಜೇಬು ತುಂಬಿಸಿಕೊಳ್ಳಲು ಪ್ರಯತ್ನಿಸುತ್ತ ಕಣ್ಣೆದುರು ಸತ್ಯ ಕಾಣುತಿದ್ದರೂ ಸುಳ್ಳನ್ನು ಸೃಷ್ಟಿಮಾಡಿ ಹೋರಾಟದ ಚಿತ್ರಣವನ್ನು ಬದಲಿಸಲು ಪ್ರಯತ್ನಪಡುತ್ತಾರೆ. ಇಲ್ಲಿ ಅವರ ಸ್ವಾರ್ಥ, ಕೆಟ್ಟ ವರ್ತನೆ, ಅಹಂಕಾರ, ದಬ್ಬಾಳಿಕೆ, ಗೂಂಡಾಗಿರಿ, ಶೋಷಣೆ, ಗದರಿಸುವಿಕೆಯ ಅಂಶಗಳು ಮೇಲೆದ್ದು ಕಾಣುತ್ತವೆ.                ಸಾಮಾನ್ಯವಾಗಿ, ಸುಳ್ಳನ್ನು ಶೋಷಣೆಯನ್ನು ಗದರಿಕೆ, ಮತ್ತು ಅನೇಕ ಮಾನಸಿಕ ಹಿ...

ಅಪರಿಚಿತ

ಅಪರಿಚಿತ  ********* ಅಮ್ಮ... ಅಪ್ಪಾ.. ನನಗೆ ಉಡುಪಿಯವರೆಗೆ ಹೋಗ್ಲಿಕ್ಕಿದೆ ನಾನು ನನ್ನ ಮಕ್ಕಳು ಮತ್ತು ಮಡದಿಯೊಂದಿಗೆ ಹೋಗಿ ಬರುತ್ತೇನೆ, ಬರುವಾಗ ಸ್ವಲ್ಪ ತಡವಾಗಬಹುದು. ಏನಿದ್ದರೂ ನಿಮಗೆ ಕರೆ ಮಾಡುತ್ತೇನೆ ಎಂದು ಹೊರಟುಬಿಟ್ಟ ಸುಧೀರ, ತನ್ನ ಹೆಂಡತಿ ಮಕ್ಕಳೊಂದಿಗೆ ದೇವಸ್ಥಾನಕ್ಕೆ ಹೋಗಿ ಹಣ್ಣು ಕಾಯಿ ಮಾಡೋಣ,  ಹೂ, ಹಣ್ಣು ಕಾಯಿಯೊಂದಿಗೆ ನಡೆದರು. ವಿಷ್ಣು ಮತ್ತು ವೃದ್ಧಿ  ಅಪ್ಪಾ ನನಗೆ ಬರುವಾಗ ಚೆಂದದ ಆಟೋಪಕರಣ ಬೇಕೆಂದು ಹೇಳತೊಡಗಿದರು ಮಕ್ಕಳೇ ಬನ್ನಿ ಹೋಗುವ ವಾಹನದಲ್ಲಿ ಕುಳಿತುಕೊಳ್ಳಿ ಮತ್ತೆ ಹೇಳುತ್ತೇನೆ , ನನ್ನದೊಂದು ಷರತ್ತು ನೀವು  ಹೇಳಿದ ಹಾಗೆ ಕೇಳಿದರೆ ಮಾತ್ರ ನಿಮಗೆ ಬರುವಾಗ ಆಟದ ಸಾಮಾನು  ಇಲ್ಲವಾದರೆ ಇಲ್ಲ,  ಏನದು ಷರತ್ತು  ಕೇಳಿಯೇ ಬಿಟ್ಟರು.  ದೇವಸ್ಥಾನಕ್ಕೆ ಹೋಗುತ್ತೇವೆ ದೇವರಲ್ಲಿ ನೀವು ಕಣ್ಣುಮುಚ್ಚಿ ಧ್ಯಾನ ಮಾಡುತ್ತ  ಈ ವರೆಗೂ ಸಿಗದ ವಸ್ತು ನನಗೆ ಕೊಡಿಸು ಎಂದು ದೇವರಲ್ಲಿ ಕೇಳಿಕೊಳ್ಳುವಂತೆ ಹೇಳಿಬಿಟ್ಟ ಸುಧೀರ.  ಹಾಗೆಯೇ ಮಾಡುತ್ತೇವೆ  ಹೇಳಿರುವ ಮಕ್ಕಳು ದೇವಸ್ಥಾನಕ್ಕೆ ಬಂದಂತೆ   ಕೈ ಕಾಲು ತೊಳೆದು ಹಣ್ಣುಕಾಯಿಯನ್ನು ಶುಭ್ರವಾಗಿಸಿ  ದೇವರೇ ನಮ್ಮನ್ನು ಕಾಪಾಡು,  ಹೇಳುತ್ತಾ  ಮೆಟ್ಟಿಲನ್ನು ಏರಿ ದೇವಸ್ಥಾನದ ಒಳಗೆ ಹೋಗುತ್ತಲೇ ತಲೆ ಬಾಗಿ ನಮಸ್ಕರಿಸಿ ಗುಡಿಯಲ್ಲಿ ಕೇಳಿ ಬರುತಿದ್ದ ಘಂಟಾ ನಾದ, ಮತ್ತು ಶ್ರೀ ...

ಸ್ನೇಹದ ಬೆಸುಗೆ

ಕಾಣುವ ಕನಸುಗಳು  ನಿಲ್ಲದಿರಲಿ  ನನಸಾದರೂ  ನನಸಾಗದಿದ್ದರೂ  ಮಿಡಿಯುವ ಮನಸುಗಳು  ಕಡಿಮೆಯಾಗದಿರಲಿ  ಬಡವನಿದ್ದರೂ  ಸಿರಿವಂತನಿದ್ದರೂ  ಸ್ನೇಹದ ಬೆಸುಗೆ  ಕರಗದಿರಲಿ  ದೂರವಿದ್ದರೂ  ಹತ್ತಿರವಿದ್ದರೂ         ✍️ಮಾಧವ. ಕೆ. ಅಂಜಾರು 

ರಾಮ ರಾಮ

ರಾಮ ನಿನ್ನ ನಾಮ ಜಪಿಸಿ  ಮನವು ತುಂಬಿತು  ರಾಮ ರಾಮ ರಾಮನೆನುತಾ  ಬದುಕು ಧನ್ಯವಾಯಿತು  ಸಜ್ಜಜನರ ಬಾಯಲಿ  ನಿನ್ನ ನಾಮ ಹೊರಡಿತು  ರಾಮ ನಿಮಗೆ ಕರುಣಿಸಲಿ  ದಯೆಯೂ ಅನ್ನಿತೂ  ರಾಮನೆಂಬ ನಾಮದೊಳು  ಸಕಲ ವ್ಯಥೆಗಳು  ದೂರವಾಯಿತು  ರಾಮ ರಾಮ ರಾಮನೇನುತಾ  ಹರುಷ ತುಂಬಿತು  ಹಗಲಿರುಳು ರಾಮ ನಾಮ  ರಕ್ಷಾ ಕವಚನೀಡಿತು  ರಾಮ ರಾಮ ರಾಮನೆನುತಾ  ಬದುಕು ಬಂಗಾರವಾಯಿತು         ✍️ಮಾಧವ. ಕೆ. ಅಂಜಾರು.

ಜಯನಿನ್ನದೇ

ಆಡುವ ಮಾತಿನೊಳಗೆ  ಕೊಡುವ ತುತ್ತಿನೊಳಗೆ  ನಿನ್ನ ಮುತ್ತಿನೊಳಗೆ  ಇರದಿರಲಿ ಸಂಶಯ  ಕಾಣುವ ಕನಸಿನೊಳಗೆ  ಇರುವ ಗುರಿಯೊಳಗೆ  ಮಾಡುವ ದಾನದೊಳಗೆ  ಬಾರದಿರಲಿ ಸಂಶಯ  ಇಂದಿಗೂ ನಾಳೆಗೂ  ಭರವಸೆಯ ಹೆಜ್ಜೆಯೊಳು  ನಡೆಯುತ್ತಿರು ಎಂದಿಗೂ  ಜಯನಿನ್ನದೇ ನಿಶ್ಚಯ         ✍️ಮಾಧವ. ಕೆ ಅಂಜಾರು 

ಸುಳ್ಳು

ಸತ್ಯವನ್ನು ಹೇಳುವವರು  ಸುಳ್ಳು ಹೇಳುವವರೊಂದಿಗೆ  ವ್ಯವಹಾರ ಮಾಡಬಾರದು  ಸತ್ಯವನ್ನು ಬಿಡದವರು  ಸುಳ್ಳು ಹೇಳುತ್ತಲಿರುವವರ  ಮಾತನ್ನು ನಂಬಬಾರದು  ಸುಳ್ಳು ಹೇಳುತ್ತಲೇ  ಬದುಕುವವಗೆ  ಸತ್ಯದ ಮಹತ್ವ ತಿಳಿಸುವ  ಕೆಲಸಕ್ಕೆ ಕೈ ಹಾಕಬಾರದು        ✍️ಮಾಧವ. ಕೆ. ಅಂಜಾರು 

ಬೆಂಬಲ

ಕೇವಲ ನೂರು ವರುಷ  ಬಾಳುವ ಮನುಜಗೆ  ಸಾವಿರಾರು ವರುಷ ಬದುಕುವ ಹಂಬಲ  ಶಾಶ್ವತವಲ್ಲದ  ಹುದ್ದೆ,  ಆಸ್ತಿಗಾಗಿ  ಮತ್ತೊಬ್ಬರ ಕತ್ತು ಹಿಸುಕಿ  ತಿನ್ನುವ ಹಂಬಲ  ಹಣಪಡೆದು ಮಾಡುವ   ಒಂದೊಂದು ಸನ್ಮಾನಕೆ  ಒಂದಿಷ್ಟು ಜನರ  ನಾಟಕೀಯ ಬೆಂಬಲ  .      -✍🏻Madhav K Anjar