Posts

Showing posts from October, 2023

(ಲೇಖನ -107)ಕೊರೋನ ಕಾಲದಲ್ಲಿ ಮನೆಯಿಂದ ಕಿತ್ತೊಗೆಸೆದ ಕೇಬಲ್ ಇಂದಿಗೂ ಇಲ್ಲ ಕಾರಣವಷ್ಟೇ, ನಮ್ಮನ್ನು ಅತಿಯಾಗಿ ಭಯಗೊಳಿಸಿ ದಿನಾಲೂ ಸಾಯಿಸುತ್ತಿದ್ದ TV

Image
✍️Madhav. K. Anjar  (ಲೇಖನ -107) ಮೂರ್ಖರ ಪೆಟ್ಟಿಗೆಯೆಂದು ಕರೆಯಲ್ಪಡುವ (TV)ಯನ್ನು ನೋಡುವುದನ್ನೇ ಬಿಟ್ಟಿದ್ದೇನೆ! ಯಾಕೆಂದರೆ ನನ್ನನ್ನು ಇನ್ನಷ್ಟು ವಿಶ್ರಾಂತಿಇಲ್ಲವಾಗಿಸುವುದು ಬೇಡವೆಂದು, ನಮ್ಮ ಇಂದಿನ ಮಾಧ್ಯಮಗಳು ವಿಷಯಗಳನ್ನು ಖಾರ ಪುಡಿ ಮಸಾಲಾ ಹಾಕಿ ರುಬ್ಬುತ್ತಾ ವೀಕ್ಷಕರ ಒಳ್ಳೆಯ ಮನಸ್ಸನ್ನು ವಿಕಾರಗೊಳಿಸಿ ಒಂದಷ್ಟು ಅವಿವೇಕಿಗಳನ್ನು ತನ್ನ ಕ್ಯಾಮೆರ ಮುಂದೆ ಕೂರಿಸಿ ವಿಚಾರವಲ್ಲದ ವಿಚಾರಗಳನ್ನು ಗಂಟೆಗಟ್ಟಲೆ ಮಾತನ್ನಾಡಿ ಸ್ವಲ್ಪ ದಿನ ಜಾಸ್ತಿ ಬದುಕುವವರನ್ನು ಬೇಗನೆ ಮುಗಿಸಿಬಿಡುವ ತಾಕತ್ತು  ಕೆಲವು TV ಮಾಧ್ಯಮಗಳಿಗೆ ಇದೆ. ತನ್ನ ಜಾತಿಗಾಗಿ, ಧರ್ಮಕ್ಕಾಗಿ, ಪಕ್ಷಕ್ಕಾಗಿ ಮತ್ತು ಬೆಂಬಲಿಗರಿಗಾಗಿ ಬೆಳಗ್ಗಿನಿಂದ ಮಧ್ಯರಾತ್ರಿಯವರೆಗೆ ಬಾಯಿಗೆ ಬಂದ ಹಾಗೆ ಮಾತನಾಡುತ್ತ ಮಕ್ಕಳಿಂದ ಹಿರಿಯರವರೆಗಿನ ಮನಸ್ಸನ್ನು ಹಾಳು ಮಾಡುತ್ತಿರುವ ಮಟ್ಟಿಗೆ ಬೆಳೆದು ಹೋಗಿದೆ. ಹತ್ತಿಪ್ಪತು ವರುಷದ ಹಿಂದೆ ಮಾಧ್ಯಮಗಳಿಗೆ ಅದರದ್ದೇ ಆದ ನಿಯಮಗಳಿತ್ತು ಆ ನಿಯಮಗಳನ್ನು ಜನರ ಒಳಿತಿಗಾಗಿ ಪಾಲಿಸುತಿದ್ದ ಚಾನೆಲ್ಗಳು ಇಂದು ಬರೇ ಹಣ ಸಂಪಾದನೆಯ ಗುರಿಯೊಂದಿಗೆ ಸತ್ಯವನ್ನು ಸುಳ್ಳಾಗಿಸಿ, ಸುಳ್ಳನ್ನು ಸತ್ಯವಾಗಿಸಿ ಬಿತ್ತರಿಸುವ ಕೆಲಸವನ್ನು ಮಾಡುತ್ತ ತನ್ನ ಹೊಟ್ಟೆಯನ್ನು ತುಂಬಿಸುತ್ತ ಇದ್ದಾರೆ.       ಕೊರೋನ ಕಾಲದಲ್ಲಿ ಮನೆಯಿಂದ ಕಿತ್ತೊಗೆಸೆದ ಕೇಬಲ್ ಇಂದಿಗೂ ಇಲ್ಲ ಕಾರಣವಷ್ಟೇ, ನಮ್ಮನ್ನು ಅತಿಯಾಗಿ ಭಯಗೊಳಿಸಿ ದಿನಾಲೂ ಸಾಯಿಸುತ್ತಿದ್ದ TV ಮಾಧ್ಯಮ ಮ

(ಲೇಖನ -106)ವಾಯು ಮಾಲಿನ್ಯ , ಜಲ ಮಾಲಿನ್ಯ ಮತ್ತು ಆಹಾರಗಳಲ್ಲಿ ಕಲಬೆರಕೆ ಮತ್ತು ರಾಸಾಯನಿಕ ಸಿಂಪಡಿಸಿ ಬೆಳೆಸಿದ ಮತ್ತು ಶೇಖರಣೆ ಮಾಡಿರುವ ಆಹಾರವನ್ನು ನಮಗೆ ತಿಳಿದು ಮತ್ತು ತಿಳಿಯದೆ ದಿನದಿಂದ ದಿನಕ್ಕೆ ವಿಷವನ್ನು ತಮ್ಮ ಹೊಟ್ಟೆಗೆ ಸೇವಿಸಿ ಕೆಲವು ಸಂಧರ್ಭ

Image
✍️Madhav. K. Anjar  (ಲೇಖನ -106) ಎಲ್ಲವೂ ಇದ್ದು ಆರೋಗ್ಯ ಇಲ್ಲದೇ ಹೋದರೆ ನಾವು ಜೀವನದಲ್ಲಿ ಬಹಳಷ್ಟು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ . .ಆರೋಗ್ಯವೇ ಭಾಗ್ಯ ಆರೋಗ್ಯಕ್ಕಿಂತ ಮಿಗಿಲಾದದ್ದು ಬೇರೇನೂ ಇಲ್ಲ ಅಲ್ಲವೇ ? ನಾವು ಅಥವಾ ನಮ್ಮ ಮನೆಯಲ್ಲಿ ಯಾರಿಗಾದರೂ ಆರೋಗ್ಯ ಸಮಸ್ಯೆಗಳು ಎದುರಾದಾಗ ನಾವು ಮಾನಸಿಕವಾಗಿ,ದೈಹಿಕವಾಗಿ,ಮತ್ತು ಆರ್ಥಿಕವಾಗಿ ಬಹಳಷ್ಟು ಕುಗ್ಗಿಹೋಗುತ್ತೇವೆ . ಇಂದಿನ ದಿನಗಳ ಆಹಾರ ಪದ್ದತಿಯಲ್ಲಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದೇ ದೊಡ್ಡ ಸಾಧನೆ ಆಗಿರುತ್ತದೆ . ನಮಗರಿವಿಲ್ಲದಂತೆ ಎದುರಾಗುವ ಆರೋಗ್ಯ ಸಮಸ್ಯೆಗಳು ದಿನ , ತಿಂಗಳು, ಮತ್ತು ವರ್ಷಾನುಗಟ್ಟಲೆ ನಮ್ಮನ್ನು ಕೊಳೆಯುವಂತೆ ಮಾಡುತ್ತದೆ . ಬದುಕಿನುದ್ದಕೂ ಉತ್ತಮ ಆರೋಗ್ಯ ಕೊಟ್ಟು ನಮ್ಮನ್ನು ಕಾಪಾಡು ದೇವರೇ ಎಂದು ಬೇಡಿಕೊಳ್ಳುವ ನಾವೆಲ್ಲರೂ , ನಮ್ಮ ಆಹಾರ ಪದ್ಧತಿ ಮತ್ತು ಆರೋಗ್ಯವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಲು ಯಾವ ರೀತಿಯಯಲ್ಲಿ ಕಾಳಜಿಯನ್ನು ವಹಿಸುತ್ತೇವೆ ಅನ್ನುವುದು ತಿಳಿದುಕೊಳ್ಳಬೇಕಾಗಿದೆ .           ವಾಯು ಮಾಲಿನ್ಯ , ಜಲ ಮಾಲಿನ್ಯ ಮತ್ತು ಆಹಾರಗಳಲ್ಲಿ ಕಲಬೆರಕೆ  ಮತ್ತು ರಾಸಾಯನಿಕ ಸಿಂಪಡಿಸಿ ಬೆಳೆಸಿದ ಮತ್ತು ಶೇಖರಣೆ ಮಾಡಿರುವ ಆಹಾರವನ್ನು ನಮಗೆ ತಿಳಿದು ಮತ್ತು ತಿಳಿಯದೆ ದಿನದಿಂದ ದಿನಕ್ಕೆ ವಿಷವನ್ನು ತಮ್ಮ ಹೊಟ್ಟೆಗೆ ಸೇವಿಸಿ ಕೆಲವು ಸಂಧರ್ಭದಲ್ಲಿ ನಮ್ಮ ಜೀರ್ಣಾಂಗ ಮತ್ತು ದೇಹದ ಪ್ರಮುಖ ಭಾಗವನ್ನೇ ನಿಷ್ಕ್ರಿಯಗೊಳಿಸಿ ಹಾಸಿಗ

(ಲೇಖನ -105)ಅದೆಷ್ಟು ಜಾಗರೂಕರಾಗಿ ನಡೆಸಿದ ಮದುವೆ ಕೂಡ ಒಂದೆರಡು ತಿಂಗಳಲ್ಲಿ ವಿಚ್ಚೇದನ ಆಗಿರುವ ನಿದರ್ಶನ ಅತಿಯಾಗಿ ಇದೆ, ಯಾವುದೇ ಜಾತಕ ಆಡಂಬರವಿಲ್ಲದೆ ನಡೆಸಿದ ಮದುವೆ ದೀರ್ಘ ಕಾಲ ಉಳಿದ ಉದಾಹರಣೆ ಕೂಡ ಇವೆ.

Image
(ಲೇಖನ -105), ಮದುವೆಯ ವಯಸ್ಸಿಗೆ ಬಂದ ಗಂಡು, ಕಾಣುವ ಕನಸುಗಳು ಸಾವಿರಾರು, ನಾನು ಮದುವೆ ಯಾಗುವ ಹೆಣ್ಣು ಸಿರಿವಂತಳು, ಸುಂದರಿಯಾಗಿರಬೇಕು, ಅವಳ ಕಣ್ಣುಗಳು ಜಿಂಕೆಯ ಕಣ್ಣಿನಂತೆ ಇರಬೇಕು, ಮೈಕಟ್ಟು ಬೇಲೂರ ಶಿ ಲಾಬಾಲಿಕೆಯಂತಿರಬೇಕು, ಬೆಳಗ್ಗಿನಿಂದಲೂ ರಾತ್ರಿಯವರೆಗೂ ಮುದ್ದಾಡಿ ನನ್ನ ಪ್ರತೀ ಆಸೆಯನ್ನು ಈಡೇರಿಸುವಂತೆ ಇರಬೇಕು, ನಾನು ಹೇಳಿದ್ದನೆಲ್ಲ ಕೇಳಿ ನನ್ನ ಸೇವೆಯನ್ನು ಮಾಡಬೇಕು ಹೀಗೆ ಹತ್ತು ಹಲವು ಕನಸುಗಳ ಪಟ್ಟಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡುವ ವಧು ವರರು,    ಹೆಣ್ಣುಮಕ್ಕಳ ಕನಸುಗಳು, ನನ್ನ ಜೀವನ ಸಂಗಾತಿ ನನ್ನ ಮಾತನ್ನು ಕೇಳಿ ನನ್ನನ್ನು ಪ್ರೀತಿಯಿಂದ ನೋಡಬೇಕು, ನನಗೆ ಬೇಕಾದ ಬಂಗಾರ, ಹಣ, ಕಾರು, ಬಂಗಲೆ ಎಲ್ಲವನ್ನೂ ಹೊಂದಿರಬೇಕು, ನನ್ನ ಮೊಗದಲ್ಲಿ ನಗು ಬರಿಸುವ, ಸುಂದರ ಮೈಕಟ್ಟು, ಒಳ್ಳೆಯ ಬುದ್ದಿ, ವಿದ್ಯಾವಂತನು ಆಗಿರಬೇಕು, ನನ್ನನ್ನು ಗೌರವಿಸಿ ರಾಣಿಯಂತೆ ನೋಡಿಕೊಳ್ಳುವವನಾಗಿರಬೇಕು. ಸ್ವಂತ ಮನೆ ಹೊಂದಿರಬೇಕು, ಹೀಗೆ ವಿವಿಧ ತರಹದ ಬೇಕುಗಳ ಪಟ್ಟಿಯಿಂದ ಜೀವನ ಸಂಗಾತಿಯನ್ನು ಹುಡುಕುತ್ತಾರೆ ಮತ್ತು ಮದುವೆ ಮಾಡಿಕೊಳ್ಳುತ್ತಾರೆ. ಇನ್ನು ಕೆಲವರು ದುಷ್ಟ ಚಟಗಳಿಲ್ಲದೆ ಇದ್ದರೆ ಸಾಕು, ಇನ್ನೊಬ್ಬರ ಸಹವಾಸ ಮಾಡದೇ ಇದ್ದರೆ ಸಾಕು, ಆರೋಗ್ಯ, ನಮ್ಮ ಕುಟುಂಬ, ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವ ಸಂಗಾತಿ ಸಿಕ್ಕಿದರೆ ಸಾಕು. ಆಸೆಗಳ ಪಟ್ಟಿಯಲ್ಲಿ ತನ್ನನ್ನು ದೂರವಿಟ್ಟು ನಗುವಿನ ಸಂಸಾರ ನಮ್ಮದಾಗಿರಲಿ ಎಂದು ಬಯಕುವ ಅನ

ಪ್ರಯಾಣಿಕರಿಗಾಗಿ ಹೊಸ ಸೇವೆಯ ಆರಂಭದೊಂದಿಗೆ ಸಾಗರ ಟ್ರಾನ್ಸ್ಪೋರ್ಟ್ - ಕುಂದಾಪುರದಿಂದ - ಬೆಂಗಳೂರಿಗೆ

Image
 ಪ್ರಯಾಣಿಕರಿಗಾಗಿ  ಹೊಸ ಸೇವೆಯ ಆರಂಭದೊಂದಿಗೆ  ಸಾಗರ ಟ್ರಾನ್ಸ್ಪೋರ್ಟ್ - ಕುಂದಾಪುರದಿಂದ - ಬೆಂಗಳೂರಿಗೆ. ನಮ್ಮ ನಿಮ್ಮೆಲ್ಲರ ನೆಚ್ಚಿನ ಶ್ರೀಯುತ ಗೋಕುಲ್ ದಾಸ್ ಭಟ್  ರವರ ಕನಸಿನ ಕೊಡುಗೆ ಸಾಗರ ಟ್ರಾನ್ಸ್ಪೋರ್ಟ್ ಆರಂಭಗೊಂಡಿದ್ದು ಪ್ರಯಾಣಿಕರು ಇದರ ಸದುಪಯೋಗಪಡೆದುಕೊಂಡು ಪ್ರೋತ್ಸಾಹಿಸಿ ತಮ್ಮ ಸುಖಮಯ ಪ್ರಯಾಣವನ್ನು ಮಾಡಬಹುದು.    ಪ್ರಯಾಣಿಕರ ಕೋರಿಕೆಯ ಮೇರೆಗೆ ಕುಂದಾಪುರ -ಕಾರ್ಕಳ - ಬೆಳ್ತಂಗಡಿ - ಧರ್ಮಸ್ಥಳ ಈ ಮಾರ್ಗವಾಗಿ ಸಂಚಾರಿಸುವ ಈ ಬಸ್ಸು ಸುಂದರ ವಿನ್ಯಾಸ ಮತ್ತು ಉತ್ತಮವಾದ ಸೇವೆಯೊಂದಿಗೆ ತನ್ನ ಹೊಸ ಹೆಜ್ಜೆಯನ್ನಿಟ್ಟಿದೆ, ಪ್ರಯಾಣಿಕರು www.sagartransport.co ಈ ವೆಬ್ಸೈಟ್ ನಲ್ಲಿ ಅಥವಾ 8989532929, 8989512929 ಈ ಮೊಬೈಲ್ ನಂಬರ್ ಮುಖಾಂತರ ತಮ್ಮ ಸೀಟನ್ನು ಕಾಯ್ದಿರಿಸಿಕೊಳ್ಳಬಹುದು.      ನಮ್ಮೂರಿಗೆ ಹೊಸ ಮೆರುಗನ್ನು ನೀಡುವ ಸಾಗರ್ ಟ್ರಾನ್ಸ್ಪೋರ್ಟ್ ಜನರಿಗೆ ಉತ್ತಮ ಗುಣಮಟ್ಟದ ಸೇವೆಯನ್ನು ಕೊಡಲು ಸನ್ನದ್ಧವಾಗಿದೆ. ಈ ಬಸ್ಸು  AC ಸ್ಲೀಪರ್ ಕೋಚ್ ವ್ಯವಸ್ಥೆ ಹೊಂದಿದ್ದು ದೂರದ ಪ್ರಯಾಣಕ್ಕೆ ಸೂಕ್ತವಾಗಿದೆ. ಹಲವಾರು ವರುಷದ ಬಸ್ ಸೇವೆಯ ಅನುಭವದೊಂದಿಗೆ ಬೆಂಗಳೂರಿಗೆ ಮೊದಲ ಹೆಜ್ಜೆಯನಿತ್ತು ಪ್ರಯಾಣಿಕರ ಕನಸನ್ನು ನನಸು ಮಾಡಲಿದೆ. ಹೆಚ್ಚಿನ ಮಾಹಿತಿಯನ್ನು ಪಡೆಯಲಿಚ್ಚಿಸುವವರು ದಯವಿಟ್ಟು ಸಂಪರ್ಕಿಸಿ.        

(ಲೇಖನ -104)ಭಾರತೀಯರನ್ನು ಹೆಚ್ಚಾಗಿ ಪ್ರೀತಿಸುವ ಕುವೈಟ್ ಪ್ರಜೆಗಳು, ಕಾರಣ ಭಾರತೀಯರಲ್ಲಿ ನಂಬಿಕೆ ಮತ್ತು ಕ್ರಿಮಿನಲ್ ಚಟುವಟಿಗಳ ಜನರ ಸಂಖ್ಯೆ ಕಡಿಮೆ ಮತ್ತು ಮಾತಿಗೆ ಬೆಲೆ ಕೊಟ್ಟು ನಡೆಯುವ ಜನರು ಎಂಬ ಭಾವನೆ ಇಲ್ಲಿಯ ಜನತೆಯಲ್ಲಿದೆ

Image
✍️Madhav. K. Anjar (ಕೆಲವು ಮಾಹಿತಿಯನ್ನು ಜಾಲತಾಣದಲ್ಲಿ ಸಂಗ್ರಹಣೆ ಮಾಡಲಾಗಿದೆ )  (ಲೇಖನ -104) ಇಸವಿ 2022ರ ಜನನಗಣತಿಯ ಪ್ರಕಾರ  , ಕುವೈತ್ 4.45 ಮಿಲಿಯನ್ ಜನಸಂಖ್ಯೆಯನ್ನು ಹೊಂದಿದೆ ಅದರಲ್ಲಿ 1.45 ಮಿಲಿಯನ್ ಜನರು ಕುವೈಟ್ ಪ್ರಜೆಗಳು ಮತ್ತು ಉಳಿದ 3.00 ಮಿಲಿಯನ್ ಜನರು 100 ಕ್ಕೂ ಹೆಚ್ಚು ದೇಶಗಳ ವಿದೇಶಿ ಪ್ರಜೆಗಳು.  ಕುವೈತ್ ವಿವಿಧ ಪದ್ಧತಿಗಳು ಮತ್ತು ಸಂಪ್ರದಾಯಗಳನ್ನು ಹೊಂದಿದೆ,  ಕುವೈತ್‌ನ ಜನರು ಸಾಹಿತ್ಯ, ರಂಗಭೂಮಿ, ಸಂಗೀತ, ನೃತ್ಯ, ಚಲನಚಿತ್ರಗಳು ಅಥವಾ ಸಮಕಾಲೀನ ಕಲೆಗಳ ಬಗ್ಗೆ ವಿಶೇಷ ಪ್ರೀತಿ ಯನ್ನು   ಹೊಂದಿದ್ದಾರೆ. ಭಾರತವು ಕುವೈಟ್ ದೇಶಕ್ಕೆ ಉತ್ತಮವಾದ ಇಂಜಿನಿಯರ್, ಡಾಕ್ಟರ್, ಮತ್ತು ಅನೇಕ ರೀತಿಯ ಕೆಲಸಗಾರರನ್ನು ಕೊಟ್ಟಿದ್ದು ಭಾರತೀಯರು ತನ್ನ ಕುಟುಂಬಕ್ಕಾಗಿ ಕರ್ಮಭೂಮಿಯಲ್ಲಿ ದುಡಿದು ಆರ್ಥಿಕವಾಗಿ ದೇಶಕ್ಕೆ ಆಧಾರವಾಗಿದ್ದಾರೆ. ಸಣ್ಣ ಮಟ್ಟದ ಕೆಲಸಾಗರರಿಂದ ಹಿಡಿದು ದೊಡ್ಡ ಹುದ್ದೆ ಮತ್ತು ಅನೇಕ ಕಂಪನಿಗಳನ್ನು ಭಾರತೀಯರು ಕುವೈಟ್ ದೇಶದ ಪ್ರಜೆಗಳೊಂದಿಗೆ ಸೇರಿ ನಡೆಸುತ್ತಿದ್ದಾರೆ. ಅನೇಕ ಜನರು ಉತ್ತಮ ಹಣಗಳಿಸಿ ಬದುಕು ಕಟ್ಟಿಕೊಂಡು ಜೀವಿಸುತ್ತಿದ್ದಾರೆ. ಸುಮಾರು ಇಪ್ಪತ್ತು ವರುಷಗಳ ಅವಧಿಯಲ್ಲಿ ಕುವೈಟ್ ದೇಶವು ರಸ್ತೆ ಪಟ್ಟಣಗಳಿಂದ ಅಭಿವೃದ್ಧಿ ಪಥಕ್ಕೆ ಸಾಗಿದೆ. ಅನೇಕ ಭಾರತೀಯ ಶಾಲೆಗಳು ಮತ್ತು ಭಾರತೀಯ ಸಂಸ್ಕೃತಿ ಕಾರ್ಯಕ್ರಮ ನಡೆಸುವ ಅನೇಕ ಸಂಘಟನೆಗಳು ಶಿಸ್ತುಬದ್ದವಾಗಿ ಕುವೈಟ್ ನೆಲದ ಜನರಿಗೆ ಗೌರವಿಸುತ್

ಆಕರ್ಷಣೆ

ನಿನ್ನ ತುಟಿಗಳು ನನ್ನ ತ್ವಚೆಗೆ.... ಆಯಸ್ಕಾಂತವಾಗಿದೆ ಈ ರೀತಿ ಪ್ರೀತಿಸುವುದು  ಅಪರೂಪವೇ ಅನಿಸುತ್ತಿದೆ ಅದಕ್ಕಾಗಿಯೇ ನಾನು " ನಿನಗಾಗಿ ಹಂಬಲಿಸಿದೆ, ಗುರುತಿಸಲಾಗದ ಆನಂದವ ಕಳೆದುಕೊಳ್ಳುವ ಭಯ ನಿನ್ನ ಪ್ರೀತಿಯ ಪ್ರತಿಕ್ರಿಯೆ ನನಗೆ ಸಿಗುವ ಜಯ  ರಥ ಚಕ್ರ  ಮುಂದುವರಿದಂತೆ  ಹೃದಯದಲಿ ನೀ ನಡೆವೆ! ಬಹುಶಃ ಈ ಸಮಯವು ಹೊಸ ಆರಂಭವಾಗಿದೆ ಆಕರ್ಷಣೆ ನಿನ್ನಲಿ  ನಿನಗಾಗಿ ನಾ ಕಾಯುವೆ ಮುದ್ದಾಡುವೆ.... ಹಗಲಿರುಳು ಕಾಯುವೆ.          ✍️ಮಾಧವ. ಕೆ. ಅಂಜಾರು 

(ಲೇಖನ -103) ಗನ್ ಹಿಂಸೆಯು US ನಲ್ಲಿ ಅಕಾಲಿಕ ಮರಣಕ್ಕೆ ಪ್ರಮುಖ ಕಾರಣವಾಗಿದೆ 38,000 ಕ್ಕಿಂತ ಹೆಚ್ಚು ಜನರನ್ನು ಕೊಲ್ಲುತ್ತದೆ ಮತ್ತು ಪ್ರತಿ ವರ್ಷ ಸುಮಾರು 85,000 ಗಾಯಗಳನ್ನು ಉಂಟುಮಾಡುತ್ತದೆ

Image
✍️Madhav. K. Anjar  (ಲೇಖನ -103)  ಗನ್ ಹಿಂಸೆಯು US ನಲ್ಲಿ ಅಕಾಲಿಕ ಮರಣಕ್ಕೆ ಪ್ರಮುಖ ಕಾರಣವಾಗಿದೆ 38,000 ಕ್ಕಿಂತ ಹೆಚ್ಚು ಜನರನ್ನು ಕೊಲ್ಲುತ್ತದೆ ಮತ್ತು ಪ್ರತಿ ವರ್ಷ ಸುಮಾರು 85,000 ಗಾಯಗಳನ್ನು ಉಂಟುಮಾಡುತ್ತದೆ. ಗನ್ ವಯಲೆನ್ಸ್ ಆರ್ಕೈವ್ ಪ್ರಕಾರ, ಈ ವರ್ಷ USನಾದ್ಯಂತ 470 ಕ್ಕೂ ಹೆಚ್ಚು ಸಾಮೂಹಿಕ ಗುಂಡಿನ ದಾಳಿಗಳು ನಡೆದಿವೆ, ಇದು ಸಾಮೂಹಿಕ ಗುಂಡಿನ ದಾಳಿಯನ್ನು ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಜನರು ಗಾಯಗೊಂಡ ಅಥವಾ ಕೊಲ್ಲಲ್ಪಟ್ಟ ಘಟನೆ ಎಂದು ವ್ಯಾಖ್ಯಾನಿಸುತ್ತದೆ. ಅಂಕಿಅಂಶಗಳ ಪ್ರಕಾರ ಮನೆಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ಗುಂಡಿನ ದಾಳಿಗಳನ್ನು ಒಳಗೊಂಡಿವೆ. ಕೆಲವು ಮೂಲಗಳ ಪ್ರಕಾರ ಕಳೆದ ಮೂರು ವರ್ಷಗಳಲ್ಲಿ ಪ್ರತಿಯೊಂದಕ್ಕೂ 600 ಕ್ಕೂ ಹೆಚ್ಚು ಸಾಮೂಹಿಕ ಗುಂಡಿನ ದಾಳಿಗಳು ನಡೆದಿವೆ - ಸರಾಸರಿ ದಿನಕ್ಕೆ ಎರಡು. ಯುನೈಟೆಡ್ ಸ್ಟೇಟ್ಸ್ ವಿಶ್ವದ ಜನಸಂಖ್ಯೆಯ 4% ಅನ್ನು ಹೊಂದಿದೆ, ಆದರೆ ಅದರ ನಾಗರಿಕರು ವಿಶ್ವದ ಬಂದೂಕುಗಳಲ್ಲಿ ಸುಮಾರು 40% ಅನ್ನು ಹೊಂದಿದ್ದಾರೆ. "329 ಮಿಲಿಯನ್ ಜನರಿರುವ ದೇಶದ ಬೀದಿಗಳಲ್ಲಿ 390 ಮಿಲಿಯನ್ ಬಂದೂಕುಗಳಿವೆ"  ಯುನೈಟೆಡ್ ಸ್ಟೇಟ್ಸ್ನಲ್ಲಿ ನಾಗರಿಕ-ಮಾಲೀಕತ್ವದ ಬಂದೂಕುಗಳ ಇತ್ತೀಚಿನ ಅಧ್ಯಯನವು ಹೇಳುತ್ತಿದೆ .  ಗನ್ ಮಾಲೀಕತ್ವದ ದರಗಳು ದೇಶಾದ್ಯಂತ ಗಮನಾರ್ಹವಾಗಿ ಬದಲಾಗುತ್ತವೆ,  ಪ್ರತಿ 100 ಜನರಿಗೆ 120.5 ಬಂದೂಕುಗಳೊಂದಿಗೆ ಯುನೈಟೆಡ್ ಸ್ಟೇಟ್ಸ್ ಅತಿ