Posts

Showing posts from November, 2022

(ಲೇಖನ -70)12 ವರುಷದ ಹುಡುಗಿ ಕಾಣೆಯಾಗಿದ್ದಾರೆ! ,ನನ್ನ ಗೆಳೆಯನ ಕರೆ ಬಂದಾಗ ಕಾಣೆಯಾದವರ ವಾಸ ಸ್ಥಳ ಅರಿತ ಕೂಡಲೇ

Image
    12 ವರುಷದ ಹುಡುಗಿ  ಕಾಣೆಯಾಗಿದ್ದಾರೆ! ,ನನ್ನ ಗೆಳೆಯನ ಕರೆ ಬಂದಾಗ ಕಾಣೆಯಾದವರ ವಾಸ ಸ್ಥಳ ಅರಿತ ಕೂಡಲೇ,ಬಂದ ಮಾಹಿತಿಯನ್ನು ನನಗೆ ತಿಳಿದಿರುವ ವಾಟ್ಸಪ್ಪ್ ಗ್ರೂಪ್ ಮತ್ತು ಸ್ನೇಹಿತರಿಗೆ ಕಳುಹಿಸಿ, ಕೂಡಲೇ ಹುಡುಕಾಟ ಆರಂಭಿಸಿ ನನ್ನ ಪ್ರಯತ್ನ ಮತ್ತು ಸಹಾಯಕ್ಕೆ ಅಣಿಯಾದೆ,  ಸಂಜೆಯ ಹೊತ್ತಿಗೆ ಮನೆಯಿಂದ ಕಾಣೆಯಾದ ಹುಡುಗಿ, ಒಂದು ತರ ಎಲ್ಲರನ್ನೂ  ಆತಂಕಕ್ಕೀಡು ಮಾಡಿತ್ತು, ಕುವೈಟ್ ದೇಶದ ಅಬಾಸಿಯ ಎಂಬ ನಗರದಲ್ಲಿ, ಜನನಿಭಿಡ ಪ್ರದೇಶದಲ್ಲಿ ಮನೆಯವರ ಬುದ್ದಿಮಾತಿಗೆ ಸಿಟ್ಟುಗೊಂಡು ಮನೆಯ ಹೊರಗೆ ನಡೆದ ಹುಡುಗಿಯ ಪತ್ತೆ ಯಾಗದೆ ಇದ್ದಾಗ, ಕೂಡಲೇ ಎಚ್ಚತ್ತುಕೊಂಡು ಸುಮಾರು 50 ತಂಡಕಿಂತಲೂ ಜಾಸ್ತಿ ಮಲಯಾಳಿ ಜನರು   ತನ್ನ ತನ್ನ ವಾಹನದಲ್ಲಿ ಹುಡುಕಾಟದಲ್ಲಿ ತೊಡಗಿಕೊಂಡರು. ಅವರಂತೆ ನಾನೂ ಒಬ್ಬ ನನ್ನ ವಾಹನದಲ್ಲಿ ಹೊರಟು, ನಾಪತ್ತೆಯಾದ ಸ್ಥಳದಿಂದ ಹುಡುಕಾಟ, ಪ್ರತೀ ಗುಂಪಿನ ಹುಡುಕಾಟದ ಮಾಹಿತಿ ವಾಟ್ಸಪ್ಪ್ ನಲ್ಲಿ ಕಳುಸುತೀದ್ದ ತಂಡ,  ಹೆಚ್ಚಿನ ಕಟ್ಟಡ, ಮನೆ, ಅಂಗಡಿಗಳಲ್ಲಿ ಸಿಸಿ ಟಿವಿ ಅಳವಡಿಸಿರುವ ಕಾರಣ ಹುಡುಗಿಯ ಛಲನವಲನದ ಮಾಹಿತಿಯನ್ನು ಆಧರಿಸಿ ನಗರದ ಮೂಲೆ ಮೂಲೆಯನ್ನು ತಡಾಕಡಿ ಸುಸ್ತಾಗಿ ಹೋದ ಎಲ್ಲರೂ, ಇನ್ನಷ್ಟು ಭಯಗೊಳ್ಳಲು ಆರಂಭಿಸಿದರು,  ಪೋಷಕರ ಭಯ ಇಮ್ಮಡಿಯಾಗಿ ಕಣ್ಣೀರುಹಾಕುತಿದ್ದರು.  7 ರಿಂದ ರಾತ್ರಿ 11.30 ರ ವರೆಗೂ ಸಿಗದ ಸಮಯದಲ್ಲಿ ನಿರಾಶೆಗೊಳ್ಳುತಿದ್ದ ನಾವೆಲ್ಲರೂ ನಮ್ಮ ಹುಡುಕಾಟದ ದಿಕ್ಕನ್ನು ಬದಲಾಯಿಸುವ  ನಿರ್ಧಾರಕ್ಕೆ

(ಲೇಖನ-71) ನನ್ನ ನಂಬಿ ಊರು ಸುತ್ತಿದ ಮಾತು ಬರದ ಮಾರ್ಜಾಲ, ಮನುಷ್ಯರಿಗಿಂತ ಪ್ರಾಣಿಗಳು ಎಷ್ಟು ವಾಸಿ

Image
ನನ್ನ ನಂಬಿ ಊರು ಸುತ್ತಿದ ಮಾತು ಬರದ ಮಾರ್ಜಾಲ, ಮನುಷ್ಯರಿಗಿಂತ ಪ್ರಾಣಿಗಳು ಎಷ್ಟು ವಾಸಿ , ನಂಬಿಕೆ ವಿಶ್ವಾಸ ಎನ್ನುವುದು ಪ್ರಾಣಿಗಳಲ್ಲಿರುವಷ್ಟು  ಮನುಷ್ಯ ಜೀವಿಯಲ್ಲಿ ಇರುವುದಿಲ್ಲ. ಅದೊಂದು ದಿನ, ನಮ್ಮ ಪಿಕಪ್ವಾಹನದ ಹಿಂದುಗಡೆ ಖಾಲಿ  ರಟ್ಟಿನ ಪೆಟ್ಟಿಗೆ ಒಳಗೆ ಗಾಢ ನಿದ್ರೆಯಲ್ಲಿದ್ದ ಮಾರ್ಜಾಲ, ನಾನು ಗಮನಿಸದೆ  ವಾಹನವನ್ನು ಸುಮಾರು ಒಂದುವರೆ ಕಿಲೋಮೀಟರ್ ದೂರ ಇಂಧನ ತುಂಬಿಸಲು ನಿಲ್ಲಿಸಿದಾಗ  ಒಮ್ಮೆಲೇ  ಹಿಂದುಗಡೆಯಿಂದ ಮೇಲ್ಚಾವಣಿಯ ಮೇಲೇರಿ ಕಾರಿನ ಬಾನೆಟ್ ಎದುರುಗಡೆ  ಬಂದು ನಿಂತಿತು, ಆ ದಿನ ನನ್ನ ಮಗು ಕಿವಿಯೊಳಗೆ  ಯಾವುದೋ ವಸ್ತುವನ್ನು ಹಾಕಿದ ಪರಿಣಾಮ  ಆಸ್ಪತ್ರೆಗೆ  ಅಗತ್ಯವಾಗಿ ನನ್ನ ಹೆಂಡತಿ ಮಕ್ಕಳೊಂದಿಗೆ ಹೋಗುವ ದಾರಿಯಲ್ಲಿದ್ದೆ,  ನಮ್ಮ ಕಟ್ಟಡದ ಕೆಳಗಡೆ ವಾಸವಾಗುತ್ತಿದ್ದ ಈ ಮರಿ ಬೆಕ್ಕು  ಇನ್ನು ಅಲ್ಲೇ ಬಿಟ್ಟರೆ ಯಾವುದಾದರೂ ಕೆಳಗಡೆ  ಬಿದ್ದು ಸಾಯೋದು ಖಚಿತವೆಂದು  ನನ್ನ ಮನದಲ್ಲಿ ಮೂಡಿದಾಗ, ಅದೇ ಕ್ಷಣ  ಬೆಕ್ಕನ್ನು  ನಮ್ಮ ಕಾರಿನೊಳಗಡೆ  ಸೇರಿಸಿಬಿಟ್ಟೆ, ಅಲ್ಪ ಹೆದರಿಕೆಯಾದರೂ, ಬೆಕ್ಕಿನ ಸ್ಪಂದನೆ ನೋಡಿ ಮಿಯಾವ್ ಹೇಳುತ್ತಾ ಹಿಂದುಗಡೆ ಸಿಟಿನ ಕೆಳಗಡೆ ಕೂರಿಸಿಬಿಟ್ಟೆ. ಸಾಧಾರಣವಾಗಿ ಬೆಕ್ಕುಗಳು  ಎಲ್ಲಾ ಬಾಗಿಲನ್ನು ಮುಚ್ಚಿದಾಗ ಗಲಿಬಿಲಿಗೊಂಡು ಜಾಸ್ತಿ ಓಡಾಟ ಮಾಡುತ್ತವೆ. ನಾ ಇನ್ಯಾವುದೋ   ಪ್ರದೇಶಕ್ಕೆ ಬಂದು ಸಿಕ್ಕಿಬಿದ್ದಿದ್ದೇನೆ ಎಂದು ಅರಿತ  ಬೆಕ್ಕು, ಸುಮ್ಮನೆ ಕುಳಿತುಕೊಂಡಿತು. ಆ ಬೆಕ್ಕಿನೊಂದಿಗೆ ಆಸ್ಪತ

(ಲೇಖನ -72)ಕುವೈತ್ ಕನ್ನಡ ಕೂಟವೆಂಬ ಪ್ರಭುದ್ದ ಸಂಘಟನೆ, ಕನ್ನಡಿಗರ ಗೌರವವನ್ನು ಇನ್ನಷ್ಟು ಹೆಚ್ಚಿಸುತ್ತಾ ಬಂದಿದೆ,

Image
ಕನ್ನಡವೇ ಸತ್ಯ ಕನ್ನಡವೇ ನಿತ್ಯ, ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು, ಜೈ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ, ಕನ್ನಡವೇ ನನ್ನುಸಿರು ಹೀಗೆ ಹತ್ತು ಹಲವು ವ್ಯಾಖ್ಯಾನಗಳಿಂದ, ಕವಿಗಳು ಮೇಧಾವಿಗಳು,  ಕನ್ನಡಾಂಬೆಯ ವರ್ಣನೆಯನ್ನು ಮಾಡುತ್ತಾ, ಕನ್ನಡ ಭಾಷೆಯ, ಕರ್ನಾಟಕ ರಾಜ್ಯದ, ಕನ್ನಡ ಜನತೆಯ ಹೆಸರನ್ನು ಶಿಖರದೆತ್ತರಕ್ಕೆ ಕೊಂಡೊಯ್ತಿದ್ದಾರೆ. ಕನ್ನಡ ನೆಲದಲ್ಲಿ ಹುಟ್ಟಿ ಬಂದಿರುವಂತಹ ಪ್ರಬಲ  ಕವಿಗಳು ಕವಿಯತ್ರಿಗಳು ಕನ್ನಡ ಭಾಷೆಗೆ ಮರೆಯಲಾಗದ ಕೊಡುಗೆಯನ್ನು  ಕೊಡುತ್ತಾ ಬಂದಿರುತ್ತಾರೆ.              ಕುವೈತ್ ಕನ್ನಡ ಕೂಟವೆಂಬ ಪ್ರಭುದ್ದ ಸಂಘಟನೆ, ಕನ್ನಡಿಗರ ಗೌರವವನ್ನು  ಇನ್ನಷ್ಟು ಹೆಚ್ಚಿಸುತ್ತಾ ಬಂದಿದೆ, ಈ ಸಂಘಟನೆಯ  ಅತ್ಯಂತ ಹಿರಿ ಸಂಘಟನೆಯಾಗಿದ್ದು, ಹೆಚ್ಚು ಮೌಲ್ಯಯುತ ವ್ಯಕ್ತಿಗಳನ್ನು ಹೊಂದಿರುವ ಗೌರವಾನ್ವಿತ ಜನರ ಗುಂಪು. ಪ್ರತಿಯೊಂದು ಕಾರ್ಯಕ್ರಮಗಳು ಅತ್ಯುತ್ತಮ ಮತ್ತು ಬಹಳ ಅಚ್ಚುಕಟ್ಟಾಗಿ ನಡೆಸಿಕೊಡಲು ಪ್ರಯತ್ನಪಡುವ ಸಂಘದ ಪ್ರತಿ ಸದಸ್ಯರು ಮತ್ತು ಆಡಳಿತ ಸಮಿತಿ. ಪ್ರತಿವರ್ಷ ನಡೆಯುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಪ್ರೇಕ್ಷಕರ ಮನ ಗೆಲ್ಲುವಂತಿರುತ್ತದೆ. ಈ ಸಲವೂ, ರಾಜ್ಯೋತ್ಸವವನ್ನು ಕರ್ನಾಟಕದ ಪ್ರತಿ ಜಿಲ್ಲೆಯ ಸಾಂಸ್ಕೃತಿಕ ಕಲಾವೈಭವನ್ನು ವಿಭಿನ್ನ ರೀತಿಯಲ್ಲಿ ಪ್ರದರ್ಶನ ಮಾಡಿ  ಜನ ಮೆಚ್ಚುಗೆಗೆ ಪಾತ್ರರಾಗಿಬಿಟ್ಟಿತು.         &quo

(ಲೇಖನ -73)ದೈವ ಶಕ್ತಿಯನ್ನು ನಂಬಿ ನಡೆಸಿದ ಕುವೈಟ್ ಬ್ಯಾಡ್ಮಿಂಟನ್ ಪಂದ್ಯ

Image
(ಲೇಖನ -ದೈವ ಶಕ್ತಿಯನ್ನು ನಂಬಿ ನಡೆಸಿದ  ಕುವೈಟ್ ಬ್ಯಾಡ್ಮಿಂಟನ್ ಪಂದ್ಯ,  ಆ ಒಂದು ತಿಂಗಳು ಹೇಗೆ ಹೋಯಿತು ಎಂಬುದೇ ಗೊತ್ತಾಗಲಿಲ್ಲ, ಸಾಧಾರಣವಾಗಿ  ನನ್ನ ಕೆಲಸ ಮುಗಿಸಿ  ಮನೆಗೆ  ಆಗಮಿಸುವ ನಾನು, ಎಂದಿನಂತೆ  ತನ್ನ ಮಕ್ಕಳೊಂದಿಗೆ ಕಟ್ಟಡದ ಕೆಳಗೆ  ಆಟವಾಡಲು  ಹೋಗುತ್ತಿದ್ದೆ, ಸಮಯ ಸಿಕ್ಕಾಗ  ಲೇಖನಗಳನ್ನು ಬರೆಯುತ್ತಲು ಇದ್ದೆ, ನಾವು ವಾಸ ಮಾಡುತ್ತಿರುವ ಕಟ್ಟಡದಲ್ಲಿ  ನನ್ನ ಕಣ್ಣೆದುರಿಗೆ  ಬ್ಯಾಡ್ಮಿಂಟನ್ ಆಡುವ ಆಟದ ಬ್ಯಾಟನ್ನು ಎತ್ತಿಕೊಂಡು ಬರುತ್ತಿದ್ದ, ಮುಖ ಪರಿಚಯ ಇರುವ ಅವರಲ್ಲಿ, ಎಲ್ಲಿ ಆಟವಾಡಲು ಹೋಗುತ್ತಿದ್ದೀರಿ ಎಂದು ಕೇಳಿ ಬಿಟ್ಟೆ, ಹೋ ಇಲ್ಲಿ ಹತ್ತಿರದ ಶಾಲೆಯಲ್ಲಿ ನಾನು ನಾಲ್ಕು ಜನ ಸೇರಿ ಆಟವಾಡುತ್ತೇವೆ ಅಂದುಬಿಟ್ಟರೆ, ಹೌದಾ ಇಲ್ಲಿ ಬ್ಯಾಡ್ಮಿಂಟನ್ ಕೂಡ ಆಡುತ್ತಾರೆಯೇ, ಎಂದು ಕೇಳಿದ್ದಕ್ಕೆ, ಹೌದು ಅಂದುಬಿಟ್ಟರು. ಅದೇ ಕ್ಷಣದಲ್ಲಿ  ನಾನು ಎದುರು ನೋಡುತ್ತಿದ್ದ ಚಿಕ್ಕ ಮತ್ತು ಮೊದಲ ಪ್ರಯತ್ನದ  ಪಂದ್ಯವನ್ನು  ಯಾಕೆ ಮಾಡಿಸಬಾರದು ಎಂಬ  ಯೋಚನೆಯೊಂದಿಗೆ ಮಾರನೆಯ ದಿನ ನಾವು ಒಂದು ಟೂರ್ನಮೆಂಟ್ ಮಾಡಿದರೆ ಹೇಗೆ ಅಂದುಬಿಟ್ಟೆ, ಅವರ ಉತ್ತರ ಮಾಡಬಹುದಲ್ಲವೇ, ಹೌದು ಅನ್ನುವಷ್ಟರಲ್ಲಿಯೇ, ಅದೇ ಕ್ಷಣದಿಂದ ಕಾರ್ಯಪ್ರವೃತ್ತನಾದ ಎನಗೆ ಎಲ್ಲಿ ಆರಂಭ ಮಾಡಬೇಕೆಂಬುದೇ  ತಿಳಿದಿರಲಿಲ್ಲ, ಆದರೆ ನನ್ನ ಕೆಲವು ಗೆಳೆಯರೊಂದಿಗೆ  ವಿಚಾರ ಮಾಡಿದಾಗ, ಹಲವು ಸಲಹೆಗಳನ್ನು ಕೊಟ್ಟುಬಿಟ್ಟರೆ, ಕೆಲವರು, "ನಿಕ್ಕು ದಾಯಗ ಮಾರಾಯ  ಅವುಮಾತ &