Posts

Showing posts from May, 2022

(ಲೇಖನ -56) ಚಡಪಡಿಸುವ ಮನಸ್ಸುಗಳು, ಹೇಳಲಾಗದ ಸಮಸ್ಯೆಗಳು, ಸಮಾಜ ಏನು ಹೇಳುತ್ತದೆಯೋ ಎನ್ನುವ ಭಯದಿಂದ ಬದುಕುವ ಕೆಲವು ಜನರ ಪಾಡು...

Image
 (ಲೇಖನ -56) ಚಡಪಡಿಸುವ ಮನಸ್ಸುಗಳು, ಹೇಳಲಾಗದ ಸಮಸ್ಯೆಗಳು, ಸಮಾಜ ಏನು ಹೇಳುತ್ತದೆಯೋ ಎನ್ನುವ ಭಯದಿಂದ ಬದುಕುವ ಕೆಲವು ಜನರ ಪಾಡು....       ಪ್ರತಿಯೊಂದು ಜೀವಿಗಳು ಅದರದ್ದೇ ಆದ ಸಮಸ್ಯೆಗೆ ಸಿಕ್ಕಿಕೊಂಡು ಬದುಕುತ್ತವೆ, ಸಮಸ್ಯೆಗಳಿಲ್ಲದ ಜೀವಿಗಳಿಲ್ಲ, ಮನುಷ್ಯನಿಗೆ ಬುದ್ದಿ ಜಾಸ್ತಿಯಾದುದರಿಂದ ಅವನಿಗೆ ಸಮಸ್ಯೆಗಳ ಸರಮಾಲೆ ಹುಟ್ಟುತ್ತಲೇ ಇರುತ್ತದೆ. ಇಂದಿನ ದಿನಗಳಲ್ಲಿ ಯಾರಲ್ಲಿ ವಿಚಾರಿಸಿದರೂ, ಸಂತೋಷದ ಬದುಕಿಲ್ಲ ಅನ್ನುವ ಮಾತುಗಳನ್ನು ಕೇಳಿರಬಹುದು. ಒಂದಲ್ಲ ಒಂದು ರೀತಿಯ ತೊಂದರೆಯಲ್ಲಿ ಸಿಕ್ಕಿಕೊಂಡು ನಿರಾಸೆಯ ಜೀವನ ಮಾಡುವ ಜನರು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಲೇ ಇದ್ದಾರೆ! ಆಕಸ್ಮಿಕವಾಗಿ ಬರುವ         ಆರೋಗ್ಯ ಸಮಸ್ಯೆಗೆ ಒಳಗಾದ ವ್ಯಕ್ತಿ ಒಮ್ಮೆ ನನಗೆ ಆರೋಗ್ಯ ಸರಿಯಾಗಿ ಇದ್ದರೆ ಸಾಕು ಬೇರೇನೂ ಬೇಡವೆಂದು ಪ್ರಾರ್ಥಿಸಿದರೆ. ಎಲ್ಲವೂ ಸುಸ್ಥಿತಿಯಲ್ಲಿದ್ದು ನನ್ನ ಗಂಡ ಸರಿಯಿಲ್ಲ, ನನ್ನ ಹೆಂಡತಿ ಸರಿಯಿಲ್ಲ, ನನ್ನ ಮಕ್ಕಳು ಸರಿಯಿಲ್ಲ , ನನ್ನ ಕುಟುಂಬದ ಜನರೇ ಸರಿಯಾಗಿಲ್ಲ ಎಂಬ ಪಟ್ಟಿಯನ್ನು ಹೊರಗೆ ಹಾಕುತಿರುತ್ತಾರೆ. ಕೆಲವೊಂದು ಸರಿಯಾಗಿದ್ದರೂ ಯಾರಿಗೂ ಹೇಳಲಾಗದ ಪರಿಸ್ಥಿತಿ. ಹೌದು ನಿಜವಾದ ಸಮಸ್ಯೆಗಳಿಗೆ ಒಳಗಾದವರು ಯಾರಿಗೂ ಹೇಳದೆ ಮನದೊಳಗೆ ಕೊರಗುತ್ತಾ ಬದುಕುತಿರುತ್ತಾರೆ.        ಜೀವದ ಪ್ರತಿಯೊಂದು ಅಂಗಾಂಗಗಳು ಸರಿಯಾಗಿ ಕೆಲಸ ಮಾಡುತ್ತಿರುವ ಜನರಿಗೆ ಈ ತರದ ಸಮಸ್ಯೆಗಳು ಇರುತ್ತವೆ , ಅನ್ಯ ಮಹಿಳೆಯ ಸೆರಗು ಹಿಡಿದು

(ಲೇಖನ -55)ಭಾರತವೆಂದರೆ ಸ್ವರ್ಗ, ಭಾರತವೆಂದರೆ ಸಂಸ್ಕೃತಿ, ಭಾರತವೆಂದರೆ ಸೌಭಾಗ್ಯ.... ಭಾರತದಲ್ಲಿ ಹುಟ್ಟಿ ಬದುಕಿರುವವರೆಲ್ಲರೂ ಭಾಗ್ಯವಂತರು!

Image
 ಭಾರತವೆಂದರೆ ಸ್ವರ್ಗ, ಭಾರತವೆಂದರೆ ಸಂಸ್ಕೃತಿ, ಭಾರತವೆಂದರೆ ಸೌಭಾಗ್ಯ.... ಭಾರತದಲ್ಲಿ ಹುಟ್ಟಿ ಬದುಕಿರುವವರೆಲ್ಲರೂ ಭಾಗ್ಯವಂತರು! ಪ್ರಕೃತಿ ಸೌಂದರ್ಯ, ಸಂಸ್ಕಾರ, ಹಲವು ಭಾಷೆ, ವಿವಿಧ ಆಚರಣೆ, ಹಬ್ಬ ಹರಿದಿನ, ಪ್ರೀತಿ, ಗೌರವ, ಮಾನವೀಯತೆ ಹೊಂದಿರುವ ಏಕೈಕ ದೇಶವೆಂದು ಹೇಳಬಹುದು. ನೀಚ ರಾಜಕೀಯದ ಜನರನ್ನು ಹೊರತುಪಡಿಸಿ, ಸಾಮಾನ್ಯವಾಗಿ ಹೆಚ್ಚಿನ ಜನರು ತನ್ನ ಕೆಲಸಗಳನ್ನು ಮಾಡಿ ಯಾವುದೇ ತೊಂದರೆಗಳನ್ನು ಮಾಡಿಕೊಳ್ಳದೆ ಬದುಕಲು ಬಯಸುವ ಜನರು, ಹಾಗಾಗಿ ವಿದೇಶಗಳಲ್ಲಿ ಭಾರತೀಯರೆಂದರೆ ಗೌರವ, ಭಾರತೀಯತೆ ಎಂದರೆ ಪ್ರೀತಿ, ಭಾರತದ ಸಂಸ್ಕೃತಿಗೆ ಎಲ್ಲರೂ ತಲೆಬಾಗುತ್ತಾರೆ. ಅನೇಕ ಇತಿಹಾಸಗಳನ್ನು ಹೊಂದಿರುವ ಮತ್ತು ಅತ್ಯಧಿಕ ವಿಜ್ಞಾನಿಗಳನ್ನು , ವೈದ್ಯಕೀಯ ಮತ್ತು ತಂತ್ರಜ್ಞಾನದ ಜನರನ್ನು ಪ್ರಪಂಚದ ಮೂಲೆ ಮೂಲೆಗೂ ತಲುಪಿಸಿ ತನ್ನ ಹೆಗ್ಗಳಿಕೆಯನ್ನು ಹೆಚ್ಚಿಸಿಕೊಂಡಿರುವ ಏಕೈಕ ದೇಶ. ಭಾರತ ದೇಶ ಇದುವರೆಗೂ ಅನ್ಯ ದೇಶಗಳಿಗೆ ಹಾನಿ ಮಾಡಿದ ಉದಾಹರಣೆಗಲಿಲ್ಲ, ಭಾರತವನ್ನು ಆಕ್ರಮಿಸಿ ಅದರ ಅಸ್ತಿತ್ವ ನಾಶಪಡಿಸಲು ಶ್ರಮಿಸಿದ ದೇಶಗಳು ಇರಬಹುದು, ಅದರಿಂದ ದೇಶದ ಕೆಲವು ಭಾಗವನ್ನು ಕಳೆದುಕೊಂಡ ಉದಾಹರಣೆ ನಮ್ಮ ಇತಿಹಾಸವನ್ನು ನೋಡಿದರೆ ಎಲ್ಲರಿಗೂ ತಿಳಿಯುತ್ತದೆ! ಒಂದಂತೂ ನಿಜ ಭಾರತಕ್ಕೆ ಅನ್ಯರ ತೊಂದರೆಗಳಿಗಿಂತ ಜಾಸ್ತಿ ಒಳಗಿನ ಜನರಿಂದಲೇ ಹೆಚ್ಚಿನ ತೊಂದರೆಗಳು!  ಒಂದಷ್ಟು ಜನರ ವಿಕೃತ ಮನಸಿನಿಂದ ಭಾರತದ ಗೌರವಕ್ಕೆ ತೊಂದರೆ ಕೊಡುವ ಶ್ರಮಗಳು ಹಿಂದಿನಿಂದಲೂ

(ಲೇಖನ -54)ಹೀಗಿತ್ತು ಹಳ್ಳಿ ಜೀವನ... ಹೌದು ಇಂದು ಕಾಣಸಿಗುತ್ತಿಲ್ಲ ಆ ದಿನಗಳು, ಹೇಗಿತ್ತು ಹಳ್ಳಿ ಜೀವನ, ಇಂದು ಹೇಗಾಗಿದೆ,

Image
(ಲೇಖನ -54)ಹೀಗಿತ್ತು ಹಳ್ಳಿ ಜೀವನ...      ಹೌದು ಇಂದು ಕಾಣಸಿಗುತ್ತಿಲ್ಲ ಆ ದಿನಗಳು, ಹೇಗಿತ್ತು ಹಳ್ಳಿ ಜೀವನ, ಇಂದು ಹೇಗಾಗಿದೆ, ನಮ್ಮ  ಬಾಲ್ಯದ ದಿನಗಳಲ್ಲಿ ಅನುಭವಿಸಿರುವ ಹಳ್ಳಿ ಜೀವನ  ನಮ್ಮ ಜೀವನದ ಕೊನೆಯವರೆಗೂ ಮರೆಯಲಾಗದು. ಹಳ್ಳಿಯೆಂದರೆ ಹಸಿರು, ನದಿ, ಮಾಲಿನ್ಯಗಳಿಲ್ಲದೆ ಇರುವ ಪ್ರದೇಶಗಳು, ಅಲ್ಲಿ ಬದುಕಿರುವ ಜೀವಗಳು  ಪುಣ್ಯವಂತ ರಾಗಿರ ಬೇಕು, ದಿನಬೆಳಗಾದರೆ ಹಕ್ಕಿಗಳ ಚಿಲಿಪಿಲಿ, ಕೋಳಿಯ ಕೂಗು, ಮಂಜಿನ ಹನಿ, ಪರಿಶುದ್ಧವಾದ ವಾತಾವರಣ, ಶುಬ್ರ ಗಾಳಿ, ಹುಲ್ಲಿನ ಮನೆ, ಸೆ ಗಣಿ ಸಾರಿರುವ ಅಂಗಳ, ಮನೆಯ ಮುಂದೆ ಕೊಟ್ಟಿಗೆ, ಕರುಗಳ ಅಂಬಾ ಎನ್ನುವ ಕರೆ, ಮನೆಯ ಅಡುಗೆ ಕೋಣೆಯಲ್ಲಿ, ದೋಸೆ ಹುರಿಯುವ ಶಬ್ದ, ಗೋಡೆಯ ಮೇಲೆ ತೂಗು ಹಾಕಿರುವ ರೇಡಿಯೋ  ಇದರ  ಭಕ್ತಿಗೀತೆ ಚಿತ್ರಗೀತೆಗಳು, ವಾರ್ತೆಗಳು.         ಬೆಳಗಾಗುತ್ತಲೇ, ಅಪ್ಪ-ಅಮ್ಮನ  ಕರೆ, ಏಳು ಮಗನೇ  ಬೆಳಗಾಯಿತು, ಬೆಳಗೆದ್ದು  ಮುಖ ತೊಳೆದು  ಕೃಷಿ ಮಾಡಿದ  ಸ್ಥಳಕ್ಕೆ ಹೋಗಿ ಬಾ, ಹೇಳಿದಂತೆ, ಮುಂಜಾನೆ ಕಾಲದಲ್ಲಿ, ಸೂರ್ಯೋದಯಕ್ಕಿಂತ ಮುಂಚೆ, ತೆಂಗು, ಭತ್ತದ ಗದ್ದೆಗಳಲ್ಲಿ ಒಂದು ಮುತ್ತಣ್ಣ ಹಾಕಿ, ಬೆಳಗ್ಗೆ ಬಿತ್ತಿರುವ  ತೆಂಗಿನಕಾಯಿಗಳನ್ನು, ತೆಂಗಿನ ಗರಿಗಳನ್ನು  ಕೂಡಿ ಹಾಕಿ ಮನೆಯಂಗಳದಲ್ಲಿ  ಸೇರಿಸುವ ಕಾಯಕ.  ಹಿಂತಿರುಗಿ ಮನೆಗೆ ಬರುತ್ತಿದ್ದಂತೆ, ಮನೆಯೊಳಗೆ ಅಮ್ಮನ ಕರೆ ಬಾ ಮಗು ದೋಸೆ ಇದೆ, ತಿಂಡಿ-ತಿನಸು ಗಳಿದೆ ತಿನ್ನು. ಖುಷಿಯಾಗಿ ತಿಂದು, ತಂದೆ-ತಾಯಿ  ಕರೆದು  ತಯಾರಿ

(ಲೇಖನ -53)ಚಿನ್ನದಂತಹ ಗೆಳೆಯ, ಗೆಳೆಯರಿದ್ದರೆ ಹೀಗಿರಬೇಕು, ನಮ್ಮ ಜೀವನದಲ್ಲಿ ಹೇಳು ಹೆಚ್ಚು ಮಹತ್ವದ ಜಾಗವನ್ನು ತೆಗೆದುಕೊಳ್ಳುವ ಜನರೆಂದರೆ ನಮ್ಮ ಗೆಳೆಯರು

Image
ಚಿನ್ನದಂತಹ ಗೆಳೆಯ, ಗೆಳೆಯರಿದ್ದರೆ ಹೀಗಿರಬೇಕು, ನಮ್ಮ ಜೀವನದಲ್ಲಿ  ಹೆಚ್ಚು ಮಹತ್ವದ ಜಾಗವನ್ನು ತೆಗೆದುಕೊಳ್ಳುವ ಜನರೆಂದರೆ ನಮ್ಮ ಗೆಳೆಯರು. ಗೆಳೆಯರೆಂದರೆ ನಮ್ಮ ಉಸಿರು, ಗೆಳೆಯರೆಂದರೆ ನಮ್ಮ ಜೀವನ, ಗೆಳೆಯರೆಂದರೆ ನಮ್ಮ ಬದುಕು, ಗೆಳೆಯರೆಂದರೆ ನಮ್ಮ ಸಂಪತ್ತು. ಗೆಳೆಯರನ್ನು ಸಂಪಾದಿಸುವುದು ಅಷ್ಟು ಸುಲಭವಲ್ಲ. ನಮ್ಮ ಜೀವನದಲ್ಲಿ ತಾತ್ಕಾಲಿಕ ಗೆಳೆಯರಿಗೂ ಜೀವನ ಪೂರ್ತಿ ಸಿಗುವ ಗೆಳೆಯರಿಗೂ ಬಹಳ ವ್ಯತ್ಯಾಸವಿದೆ. ನಿಜವಾದ ಗೆಳೆಯರು ಯಾವುದೇ ಸಂಧರ್ಭದಲ್ಲಿ ನಿಮ್ಮ ಸಹಾಯ ಬಯಸುವುದಿಲ್ಲ, ಸಹಾಯ ಬಯಸಿದರೂ, ಸಮಯಕ್ಕೆ ತಕ್ಕಂತೆ ನೀವು ಯಾವುದೇ ತೊಂದರೆಯಲ್ಲಿದ್ದರೂ ಧಾವಿಸುವ ನಿಸ್ಕಲ್ಮಷ ಹೃದಯಗಳು. ಗೆಳೆಯರೆಂದರೆ ನಿಮ್ಮಲ್ಲಿ ಸಿಗುವ ಲಾಭವನ್ನು ಮಾತ್ರವಲ್ಲ, ನಿಮ್ಮ ಜೀವನದಲ್ಲಿ ನಡೆಯು ವ ಪ್ರತೀ ಸಂತೋಷ ಮತ್ತು ದುಃಖದಲ್ಲಿ ಪಾಲ್ಗೊಳುವವರು.       ನಿಮ್ಮ ಜೀವನದಲ್ಲಿ, ಗೆಳೆಯರು ಅತೀ ಎತ್ತರದ ಜಾಗವನ್ನು ಪಡೆದುಕೊಂಡಿರುತ್ತಾರೆ. ನಿಮ್ಮ ತಂಗಿಯ ಮದುವೆಯೋ, ನಿಮ್ಮ ಅಮ್ಮನ ಆರೋಗ್ಯ ವಿಚಾರದಲ್ಲಿ, ತುರ್ತುಪರಿಸ್ಥಿತಿಯಲ್ಲಿ, ಹಗಲು, ರಾತ್ರಿ, ವೈರಿಗಳು, ಸಂಬಂದಿಕರಿಗಿಂತ ಜೀವ ಕೊಡುವ ಜನರೆಂದರೆ ನಮ್ಮ ಮೌಲ್ಯಯುತ ಗೆಳೆಯರು. ಸಾವಿರರು ಜಗಳ ಮಾಡಲಿ, ಸಾವಿರಾರು ಮಾತುಕತೆಗಳಾಗಲಿ ಕೊನೆಗೆ ನೀನು ಎನ್ನ ಜೀವ ಎಂದು ತಬ್ಬಿಕೊಳ್ಳುವ ಜೀವ ಎಂದರೆ ಗೆಳೆಯ.      ಗೆಳೆಯರೆಂದರೆ ನಿನ್ನ ಪ್ರತಿಯೊಂದು ಸಮಸ್ಯೆಗಳು, ಆಸೆಗಳು, ಕನಸುಗಳನ್ನು ಸಮಾನ ರೀತಿಯಲ್ಲಿ ಪ್ರೋತ್