ಏಳು ಸಾಗರದಾಚೆಗೆ

ಬಾಳದೋಣಿಯ ಪಯಣವಾಯಿತು ... ಏಳು ಸಾಗರದಾಚೆಗೆ
ಆ ದೋಣಿಯು ಸಿಲುಕಿಕೊಂಡಿತು ಮರಳರಾಶಿಯೆಡೆಗೆ
ಬಿಸಿಲಲೂ  ಮರಳಲ್ಲೂ ಅನಿವಾರ್ತೆಯ ಪಯಣ
ಸಹಿಸದ ನೋವಲ್ಲೂ ಧೀರ್ಘವಾಯಿತು ಭ್ರಮಣ

ನೂರಾರು ಆಸೆಗಳಿಗು ನಾ ನಡೆದು ಬಂದ ನಡೆಗೂ
ಸಿಗೋದಿಲ್ಲವೇ ಕೊನೆಗೂ ಎನ ಪ್ರೀತಿ ಮಾತಿಗು ಬೆಲೆಯು
ಓ ಗೆಳತಿ , ಮರೆಯಬೇಡ ಎನ್ನ ತುಂಬಾ ಪ್ರೀತಿಸುವೆ ನಿನ್ನ
ಬಿಸಿಲಲ್ಲೂ ಮರಳಲ್ಲೂ ಅನಿವಾರ್ಯತೆಯ   ಪಯಣ
ಆವರಿಸಿತು ಹೃದಯವು ದುಗುಡದ ಭಯವು

ಅಲುಗಾಡದೆ ಇರಬಯಸಿದೆ ಪ್ರೀತಿ ಅಕ್ಕರೆಯ ನೆನೆದು
ಸವಿಸಕ್ಕರೆಯ ನೀಡಲು ದಿನವೆಲ್ಲಾ ದುಡಿದು
ಸಾವಿರ ಕನಸಿನ , ಒಂದು ಅರಮನೆಯ ಕಟ್ಟಲೆಂದು
ಇನ್ನಿರುವ ಬದುಕು ಸಂತೋಷವಾಗಿರಲೆಂದು
ಬಿಸಿಲಲೂ  ಮರಳಲ್ಲೂ ಅನಿವಾರ್ತೆಯ ಪಯಣ

ಓಡೋಡಿ ಬರಲು ಬಯಕೆ , ತಬ್ಬಿ ಕುಣಿಯುವ ಹರುಷಕೆ
ಕಾಡು ನೋಡುತ್ತಿರುವೆ ಆ ದಿನವನು ಬೇಗ ನಡೆಯಲಿ ಹರಕೆ
ಓ ನನ್ನ ನಲ್ಲೆ ನಾನಿರುವೆ ಇಲ್ಲೆ ನನ ಮಾತು ಕೇಳೆ ...
ಮುದ್ದಾಗಿ ನಿನ್ನ ಸದ್ದಾಗದೆ ಬಂದು ಸೇರುವೆ .... 

ಬಾಳದೋಣಿಯ ಪಯಣವಾಯಿತು ... ಏಳು ಸಾಗರದಾಚೆಗೆ
ಆ ದೋಣಿಯು ಸಿಲುಕಿಕೊಂಡಿತು ಮರಳರಾಶಿಯೆಡೆಗೆ
ಬಿಸಿಲಲೂ  ಮರಳಲ್ಲೂ ಅನಿವಾರ್ತೆಯ ಪಯಣ
ಸಹಿಸದ ನೋವಲ್ಲೂ ಧೀರ್ಘವಾಯಿತು ಭ್ರಮಣ

                                    -  ಮಾಧವ ನಾಯ್ಕ್




Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.