Posts

Showing posts from September, 2022

(ಲೇಖನ -69)ಸ್ನೇಹದಲ್ಲಿ ನ ವಿಶ್ವಾಸ, ಸಂಬಂಧದಲ್ಲಿನ ವಿಶ್ವಾಸ, ಪ್ರೀತಿಯಲ್ಲಿನ ವಿಶ್ವಾಸ ಉಳಿಸಿಕೊಳ್ಳುವ ಯೋಗ್ಯತೆ ಕೆಲವರಿಗೆ ಮಾತ್ರ ಇರುತ್ತದೆ, ವಿಶ್ವಾಸಘಾತ ವಾಗಲು ಅವಕಾಶವನ್ನು ಮಾಡಿಕೊಡಬಾರದು

Image
✍️ Madhav. K. Anjar  ( ಲೇಖನ 69 ) ರಾತ್ರಿ 9:30 ಸಮಯ,  ಇವತ್ತು ಎನಗೆ ಹೆಚ್ಚು ಮಾತನಾಡಲು ಸಮಯವಿಲ್ಲ,  ಥಟ್ಟನೆ  ಇವತ್ತಿನ ಲೇಖನ ಬರೆಯಲು ಒಂದು ವಿಷಯ ಕೊಡಿ ಎಂದು ನನ್ನ ಅತ್ಯಂತ ಪ್ರೀಯ ಗೆಳೆಯನೊಬ್ಬನಿಗೆ ಕರೆ ಮಾಡಿದಾಗ,  ವಂಚನೆ, ವಿಶ್ವಾಸಘಾತದ ಬಗ್ಗೆ  ಬರೆದುಬಿಡಿ ಎಂದುಬಿಟ್ಟರು!  ಓಹ್,  ವಿಶ್ವಾಸಘಾತವೆ ..... ಇಂದಿನ ಪ್ರಪಂಚದಲ್ಲಿ, ವಿಶ್ವಾಸ ಘಾತುಕರ ಸಂಖ್ಯೆ ಬಹಳಷ್ಟಿದೆ, ಮುತ್ತಿನಂಥಹ ಮನುಷ್ಯರನ್ನು ಹುಡುಕಲು ಹರಸಾಹಸ ಪಡಬೇಕಾಗುತ್ತದೆ, ನಾವೆಷ್ಟು  ಎಚ್ಚರಿಕೆಯಿಂದಿದ್ದರೂ, ವಿದ್ಯಾವಂತರಾಗಿದ್ದರೂ, ಬುದ್ಧಿವಂತರಾಗಿದ್ದರೂ ಒಂದಲ್ಲ ಒಂದು ರೀತಿಯಲ್ಲಿ ವಂಚನೆಗೆ ಒಳಗಾಗುತ್ತೇವೆ ಅಲ್ಲವೇ?  ವಂಚಕರ ತಂಡ , ವಿಶ್ವಾಸ ಘಾತುಕರ ತಂಡ ಯಾವುದೇ ಮುಲಾಜಿಲ್ಲದೆ  ತನ್ನ ಕಾಯಕದಲ್ಲಿ ತಲ್ಲೀನರಾಗಿರುತ್ತಾರೆ . ಅವರಿಗೆ, ಗೌರವ, ನಾಚಿಕೆ, ಮಾನ ಮರ್ಯಾದೆ, ಸಮಾಜದ ಬಗ್ಗೆ ಯಾವುದೇ ಹೆದರಿಕೆ ಗಳಿಲ್ಲದೆ ಧೈರ್ಯವಾಗಿ ನಡೆಸುವ ಕಾಯಕ. ನಿಮ್ಮ ಜೀವನದಲ್ಲಿ ಅದೆಷ್ಟೋ ಸಂದರ್ಭಗಳನ್ನು ಅನುಭವಿಸಿರಬಹುದು,  ವ್ಯಕ್ತಿಯ ವಿಶ್ವಾಸ ಮಾಡುವುದಕ್ಕೂ,  ವಿಶ್ವಾಸ ಗಳಿಸುವುದಕ್ಕೂ ತುಂಬಾ ಸಮಯವನ್ನು ತೆಗೆದುಕೊಳ್ಳುತ್ತೇವೆ, ಆದರೆ ಗಳಿಸಿದ ವಿಶ್ವಾಸವನ್ನು  ಉಳಿಸಿಕೊಳ್ಳುವವರು ಬಹಳಷ್ಟು ಕಡಿಮೆ,  ಸರಾಸರಿ ಸ್ನೇಹ, ಪ್ರೀತಿ, ವಿಶ್ವಾಸ, ಬಾಂಧವ್ಯವನ್ನು  ಗಟ್ಟಿಗೊಳಿಸಲು ಸಾಕಷ್ಟು ಸಮಯವನ್ನು ತೆಗೆದುಕೊಳ್ಳುತ್ತೇವೆ. ಬಹಳಷ್ಟು ಗಟ್ಟಿಯಾಗಿರುವ ಸ್ನೇಹ ಮುರಿದು ಹೋಗಲ

(ಲೇಖನ -68)ಸಂಸಾರವೆಂದ ಕೂಡಲೇ , ನನ್ನ ಮನದಲ್ಲಿ ಸಾವಿರಾರು ವ್ಯಾಖ್ಯಾನ, ಮೂಡಿಬರತೊಡಗಿತು

Image
✍️ Madhav. K. Anjar  (ಲೇಖನ -68) ದಿನಚರಿ, ಎಂದಿನಂತೆ  ಬೆಳಗೆದ್ದು  ಎಲ್ಲಾ ಕೆಲಸಗಳನ್ನು ಮಾಡಿ ಮುಗಿಸಿ, ದುಡಿಮೆಗಾಗಿ ಮನೆಯಿಂದ ಹೊರಟ ನನ್ನೊಂದಿಗೆ ಮಲಯಾಳಿ ಸಂಗಡಿಗ, ಆತನ ಕೆಲಸ ಚಿಕ್ಕದಾದರೂ, ಚೊಕ್ಕ ಮತ್ತು ಪ್ರಾಮಾಣಿಕತೆಯಿಂದ ಬದುಕುವ ವ್ಯಕ್ತಿಯೊಂದಿಗೆ.....ಇವತ್ತು ಯಾವುದರ ಬಗ್ಗೆ ಲೇಖನ ಬರೆಯುವುದು ತಿಳಿಯುತ್ತಿಲ್ಲವೆಂದು ಹೇಳಿದಾಗ, ಸರ್ ನೀವು ಇವತ್ತು ಸಂಸಾರದ ಬಗ್ಗೆ ಬರೆಯಿರಿ ಅಂದುಬಿಟ್ಟರು.....           ಸಂಸಾರವೆಂದ ಕೂಡಲೇ , ನನ್ನ ಮನದಲ್ಲಿ ಸಾವಿರಾರು ವ್ಯಾಖ್ಯಾನ, ಮೂಡಿಬರತೊಡಗಿತು, ಇಲ್ಲಿ ಅಕ್ಷರ ರೂಪದಲ್ಲಿ ನಿಮ್ಮ ಮುಂದಿಡುತಿದ್ದೇನೆ. ಕೆಲವರ ಸಂಸಾರ ಆನಂದ ಸಾಗರ, ಹಲವರ ಸಂಸಾರ ಸಮಸ್ಯೆಗಳ ಆಗರ, ಇನ್ನು ಕೆಲವರ ಸಂಸಾರ ನಗು, ಪ್ರೀತಿ, ಕಷ್ಟ ಸುಖವನ್ನು ಸಮಾನ ರೀತಿಯಲ್ಲಿ ನೋಡುವುದು, ಇನ್ನು ಕೆಲವರು ಏನಾದರಾಗಲಿ ಎಂಜಾಯ್ ಮಾಡಬೇಕೆಂದು ಹಾಸಿಗೆಗೆಗಿಂತ ಜಾಸ್ತಿ ಕಾಲು ಚಾಚಿ ಅತ್ಯಂತ ಕನಿಷ್ಠ ಗುಣಮಟ್ಟದಲ್ಲಿ ಇನ್ನೊಬ್ಬರಿಗೆ ಭಾರವಾಗಿ ಬದುಕುವುದು .          ಅಂದಿನ ಕಾಲದಲ್ಲಿ ಸುಮಾರು ಮೂರ್ನಾಲ್ಕು ತಲೆಮಾರಿನ  ಕುಟುಂಬದ ಸದಸ್ಯರೆಲ್ಲರೂ ಒಂದೇ ಮನೆಯಲ್ಲಿ  ವಾಸಮಾಡುತ್ತಿದ್ದರು, ಮನೆಗೊಬ್ಬ ಹಿರಿಯ ವ್ಯಕ್ತಿ, ಯಜಮಾನ ನಾಗಿ ಮನೆ ಪತಿ ಸದಸ್ಯರ ಆಗುಹೋಗುಗಳನ್ನು ನೋಡಿಕೊಳ್ಳುತ್ತಾ, ಹಬ್ಬ-ಹರಿದಿನಗಳನ್ನು  ಚಿಕ್ಕ ಮಕ್ಕಳಿಂದ ಹಿಡಿದು  ಮನೆಯ ಹಿರಿಯ ಸದಸ್ಯರು ತುಂಬಾ ಸಂತೋಷದಿಂದ  ಮಾಡಿಕೊಳ್ಳುತ್ತಿದ್ದರು. ಗಂಡ-ಹೆಂಡತಿಯ ಸ

(ಲೇಖನ -67)-ಮೌನ - ನಾನು ಮತ್ತು ನನ್ನ ಗೆಳೆಯನೊಬ್ಬನ ದೀರ್ಘವಾದ ಸಂಭಾಷಣೆಯಲ್ಲಿ ಆಯ್ಕೆಯಾದ ಮೌನ ಶಬ್ದದ ಲೇಖನ ಎನ್ನ ಬಾಳಿನ ಪುಟದಲಿ

Image
 ( ಲೇಖನ -67 )- ಮೌನ  - ನಾನು ಮತ್ತು ನನ್ನ ಗೆಳೆಯನೊಬ್ಬನ ದೀರ್ಘವಾದ ಸಂಭಾಷಣೆಯಲ್ಲಿ ಆಯ್ಕೆಯಾದ ಮೌನ ಶಬ್ದದ ಲೇಖನ ಎನ್ನ ಬಾಳಿನ ಪುಟದಲಿ......           ಮೌನಕ್ಕೆ ಅದೆಷ್ಟು ಶಕ್ತಿ ಇದೆ ಎಂಬುದನ್ನು ಹಲವಾರು ಸಂದರ್ಭಗಳಲ್ಲಿ ನಾವೆಲ್ಲರೂ ಅನುಭವಿಸಿರುತ್ತೇವೆ, ಮೌನ  ಅಸ್ತ್ರ ವಾಗಬಹುದು, ಮೌನ  ಉತ್ತರ ವಾಗಬಹುದು, ಮೌನ ಮಾತಾಗಲೂ ಬಹುದು, ಮೌನವೆಂಬುದು ತಂತಿ ಯೊಳಗಿನ ವಿದ್ಯುತ್ತಿನಂತೆ, ನಿರ್ದಿಷ್ಟ ಜಾಗಕ್ಕೆ ಸೇರಿ  ಅದನ್ನು ಬೆಳಗಲು ಬೇಕಾಗುವ ಸಾಮಗ್ರಿಗಳು ಸಿಕ್ಕಾಗ ಬೆಳಕನ್ನು  ನೀಡಬಹುದು ಅಥವಾ ಬೆಂಕಿಯ ಜ್ವಾಲೆ ಯಾಗಲು ಬಹುದು. ನಮ್ಮ ಜೀವನದಲ್ಲಿ ಬರುವ ಹಲವಾರು ಸಂದರ್ಭಗಳಲ್ಲಿ ಕೆಲವೊಮ್ಮೆ ಮೌನವಾಗಿ ಉತ್ತರವನ್ನು ಕೊಡುವ ಸಂದರ್ಭಗಳನ್ನು  ರೂಢಿ ಮಾಡಿಕೊಳ್ಳುತ್ತೇವೆ. ಅಜ್ಞಾನಿಗೆ ಮೌನವೆಂಬುದು ಹೇಡಿಯ ಲಕ್ಷಣವೆಂದು ಕಂಡರೂ, ಜ್ಞಾನಿಗೆ  ಮೌನವೆಂಬುದು ಪ್ರಬುದ್ಧತೆಯ   ಲಕ್ಷಣವಾಗಿ ಕಾಣುತ್ತದೆ. ನಮ್ಮ ಸಂಸ್ಕಾರಗಳಲ್ಲಿ ವೃತ, ಪ್ರಾರ್ಥನೆಯನ್ನು ಮಾಡುತ್ತಿರುವಾಗ ಮೌನವಾಗಿ ಶ್ರದ್ಧೆಯಿಂದ  ಆಚರಿಸುವ ಕಾರ್ಯಕ್ರಮಗಳು  ಅದೆಷ್ಟೋ ಇದೆ. ದೇವಸ್ಥಾನ, ಮಂದಿರ ಮಸೀದಿಗಳಲ್ಲಿ, ಪ್ರಾರ್ಥನೆಯ ನಂತರ ಒಂದೆರಡು ನಿಮಿಷ ಮೌನವಾಗಿ ಪ್ರಾರ್ಥನೆಯನ್ನು ಸಲ್ಲಿಸುವ ವಿಧಗಳು ನಮ್ಮ ಮನಸ್ಸಿಗೆ ಅತ್ಯಂತ ಪ್ರಬಲ ಶಕ್ತಿಯನ್ನು ನೀಡುತ್ತದೆ. ಮೌನಕ್ಕೆ ಇರುವಷ್ಟು ಶಕ್ತಿ  ಬೇರೆ ಯಾವುದಕ್ಕೂ ಇಲ್ಲ, ಮೌನ ನಿಮ್ಮನ್ನು, ದೊಡ್ಡ ಸಮಸ್ಯೆಯಿಂದ  ಹೊರ ಗೆಳೆಯ ಬಹುದು, ಮೌನ ನ