Posts

Showing posts from April, 2023

ಲೇಖನ -84, ಹಸಿರು - ಉಸಿರು ನಿಲ್ಲಿಸಿದ ನೇತ್ರಾವತಿ ನದಿ

Image
 ( ಲೇಖನ -84, ಹಸಿರು - ಉಸಿರು ನಿಲ್ಲಿಸಿದ ನೇತ್ರಾವತಿ ನದಿ )          ಕಾಡನ್ನು ಕಡಿದು ನದಿಯ ದಿಕ್ಕು ತಪ್ಪಿಸಿ ನೀರಿನ ಅಭಾವವನ್ನೇ ಹೆಚ್ಚಿಸಿದ ಯೋಜನೆ..,! ಪಶ್ಚಿಮ ಘಟ್ಟವನ್ನು ಮುಟ್ಟಬೇಡಿ, ಮುಂದಿನ ದಿನಗಳಲ್ಲಿ ಬಹಳಷ್ಟು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ, ನೀರು, ಹಸಿರು, ಉಸಿರು ಎಲ್ಲವದಕ್ಕೂ ಪರಿತಪಿಸುವ ಕಾಲ ಬರುತ್ತದೆ ಎಂಬ ಮಾತನ್ನು ಸಾವಿರಾರು ಬಾರಿ ಉತ್ತಮ ತಜ್ಞರು ಹೇಳಿಕೆಗಳನ್ನು ಕೊಟ್ಟಿದ್ದರೂ ಯಾವುದನ್ನೂ ಲೆಕ್ಕಿಸದೇ ಹಣವೆಂಬ ಆಸೆಗೆ ಒಳಗಾಗಿ ಪ್ರಕೃತಿಯನ್ನು ನಾಶ ಮಾಡಿ ಸಾವಿರಾರು ಕೋಟಿಯ ಯೋಜನೆಯನ್ನು ತಂದು ವನ,ಪ್ರಾಣಿ, ಪಕ್ಷಿ ಸಂಕುಲವನ್ನೇ ನಾಶ ಮಾಡಿ ತನ್ನ ತಿಜೋರಿಯನ್ನು ತುಂಬಿಸಿ ಬಾಯಿಗೂ ಗುದಕ್ಕೂ ಹಣದ ಕಂತೆ ತುರುಕಿಸಿ ಕುಳಿತುಕೊಂಡು ಎಸಿ ಕಾರಿನಲ್ಲಿ ತಿರುಗುತ್ತಿರುವ ಅಧಿಕಾರಿಗಳ ಘನ ಕಾರ್ಯಕ್ಕೆ ಏನೂ ತಪ್ಪು ಮಾಡದ ಸಾಮಾನ್ಯ ಪ್ರಜೆಗಳು, ಪ್ರಾಣಿಗಳು, ಪಕ್ಷಿ ಸಂಕುಲ, ಪ್ರಕೃತಿ ಎಲ್ಲವು ನಾಶದ ಹಾದಿ ಹಿಡಿಯುತ್ತಿದೆ.             ಅಭಿವೃದ್ಧಿಯ ಹರಿಕಾರ, ಧರ್ಮ ರಕ್ಷಕ, ನಮ್ಮದೇ ಪಕ್ಷ ಗೆಲ್ಲಲಿ ಹೇಳುವ ಕಾರ್ಯಕರ್ತರು,ಅಧಿಕಾರಿಗಳು, ಅನ್ಪಡ್ ನೇತಾರರು ದಿನಬೆಳಗಾದರೆ ಬಿಳಿ ಅಂಗಿಯ ಮೊರೆ ಹೋಗಿ ಅಲ್ಲಲ್ಲಿ ಬಿಟ್ಟಿಪತ್ರ ಹಂಚುವಾಗ ಭೂಮಿಯ ಚಿತ್ರಣವನ್ನೇ ಬದಲಾಯಿಸುವ ಜನಪ್ರತಿನಿಧಿಗಳ ಜೊತೆಗೆ ಸೇರಿ ನಡೆಸುವ ಬಲಾತ್ಕಾರದ ಯೋಜನೆಗೆ ತುಪ್ಪ ಸುರಿದು ನೆಕ್ಕಿದ ಪರಿಣಾಮ ಇಂದು ಮಂಗಳೂರು, ಉಡುಪಿ, ಕಾರ್ಕಳ ಮುಂತಾದ ಕಡೆಗಳಿ

(ಲೇಖನ 83- ಸಮಯ)ಸಮಸ್ಯೆಗಳ ನಡುವೆ ನಮಗಾಗಿ ನಮ್ಮದೇ ಸಮಯವನ್ನು ಉಪಯೋಗಿಸಿಕೊಳ್ಳಲು ಪ್ರಯತ್ನ ಮಾಡಬೇಕು

Image
 ( ಲೇಖನ 83- ಸಮಯ)   ಎಲ್ಲಾ ಓದುಗರಿಗೆ ನಮಸ್ಕಾರಗಳು , ಸಮಯ ಬಂದಾಗ ಎಲ್ಲವೂ ಸರಿಯಾಗುತ್ತದೆ ಎಂಬುದನ್ನು ನಾವೆಲ್ಲರೂ   ಕೆಲವು ಕ್ಷಣಗಳಲ್ಲಿ ಹೇಳುವುದಿದೆ , ಆದರೆ ಇವತ್ತಿನ ಲೇಖನದಲ್ಲಿ ಬರುವ ಸಮಯಕ್ಕಿಂತ  ಈಗಿರುವ(ವರ್ತಮಾನ ) ಸಮಯಕ್ಕೆ ನಾವೆಷ್ಟು ಮೌಲ್ಯ ಕೊಟ್ಟಿರುತ್ತೇವೆ ಎಂಬುವುದನ್ನು ಗಮನಿಸಬೇಕಾದ ವಿಷಯ.ಭೂತ, ವರ್ತಮಾನ, ಭವಿಷ್ಯತ್ಕಾಲದಲ್ಲಿಯೂ ಸಮಯವನ್ನು ಯಾವ ರೀತಿಯಲ್ಲಿ ಉಪಯೋಗಿಸಿಕೊಂಡು ಬದುಕಿರುತ್ತೇವೆಯೋ ಅದರಂತೆ ನಮ್ಮ ಜೀವನದ ಸಮಯವನ್ನು ಕಳೆದುಕೊಳ್ಳುತ್ತಾ ಇರುತ್ತೇವೆ.       ಈಗಿನ ಸಮಯ ಮತ್ತೆ ಸಿಗದು, ಕಳೆದ ಸಮಯ ಮತ್ತೆ ಬರದು, ಬರುವ ಸಮಯ ನಮಗೆ ತಿಳಿಯದು. Precious time (ಅತ್ಯಮೂಲ್ಯ ಸಮಯ) ನಮ್ಮ ಜೀವನದಲ್ಲಿ ಮತ್ತೆ ಮತ್ತೆ ಬರದು. ಅವಕಾಶ - ಸಮಯ ಇವೆರಡೂ ಒಂದು ನಾಣ್ಯದ ಮುಖದಂತೆ. ಯಾವುದೇ ಕೆಲಸವನ್ನು ಸಾಧಿಸಲು ಅವಶ್ಯವಾಗಿ ಸಮಯ ಮತ್ತು ಅವಕಾಶಗಳು ಸರಿಸಮನಾಗಿ ಸೇರಿ ಬಂದಾಗ ಸಾಧನೆಎಂಬ ಮೆಟ್ಟಿಲನ್ನು ಏರಲು ಸಾಧ್ಯ. ಕೆಲವೊಮ್ಮೆ ನಮ್ಮ ಜೀವನದಲ್ಲಿ ಬರುವ ಅವಕಾಶಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸದೆ, ಕಳೆದು ಹೋದ ನಂತರ ಪಶ್ಚಾತಾಪಪಡುವ ಅದೆಷ್ಟೋ ಉದಾಹರಣೆಗಳು. ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರ ನಮ್ಮನ್ನು ಮೆಲ್ಲೆತ್ತಬಹುದು.    ಸಮಸ್ಯೆಗಳ ನಡುವೆ ನಮಗಾಗಿ ನಮ್ಮದೇ ಸಮಯವನ್ನು ಉಪಯೋಗಿಸಿಕೊಳ್ಳಲು ಪ್ರಯತ್ನ ಮಾಡಬೇಕು, ನಿಮ್ಮ ಉದ್ದಾರ, ಸಂತೋಷ, ಅವನತಿ, ಜಗಳ, ಕೋಪ, ಶಾಪ, ಪಾಪ, ಕರ್ಮಗಳಿಗೂ ಉಪಯೋಗಿಸುವ ಅತ್ಯಮೂಲ್ಯ ಸ