Posts

Showing posts from October, 2022

(ಲೇಖನ -75)ಕಲಾ ಮಾಣಿಕ್ಯ ಶ್ರೀ ಸುರೇಶ್ ಸಾಲ್ಯಾನ್ ತುಳುಕೂಟವೆಂಬ ಕಲಾ ಸಾಗರದಲ್ಲಿ

ಕಲಾ ಮಾಣಿಕ್ಯ ಶ್ರೀ ಸುರೇಶ್ ಸಾಲ್ಯಾನ್ ತುಳುಕೂಟವೆಂಬ ಕಲಾ ಸಾಗರದಲ್ಲಿ , ತುಳು ನೌಕೆಯ ನಾವಿಕ. ತುಳುವರಿಂದ, ತುಳುವರಿಗಾಗಿ, ತುಳು ಭಾಷೆ ಸಂಸ್ಕೃತಿಯನ್ನು ಪೂಜಿಸುತ್ತಾ, ಬೆಳೆಸುತ್ತಾ, ಪ್ರಪಂಚದ ಮೂಲೆ ಮೂಲೆಗೂ  ತುಳುವರ ಸಂಸ್ಕೃತಿ ಮತ್ತು ಭಾರತ ದೇಶದ ಸಂಸ್ಕೃತಿಯನ್ನು ದೃಶ್ಯ ರೂಪದಲ್ಲಿ ಸಾದರಪಡಿಸಿ  ಮಕ್ಕಳಿಂದ ಹಿರಿಯರವರೆಗಿನ  ಜನರ ಮೆಚ್ಚುಗೆಗೆ ಪಾತ್ರರಾಗಿ ಮತ್ತೊಮ್ಮೆ  ತಮ್ಮ ಕೀರ್ತಿ ಪತಾಕೆಯನ್ನು  ಮರಳುಗಾಡಿನ  ಊರಿನಲ್ಲಿ ಓಯಸಿಸ್ ನಂತೆ ಭಾರತದ ಪ್ರತಿ ರಾಜ್ಯದ, ಪ್ರತಿ ಜಿಲ್ಲೆಯ ಸಂಸ್ಕೃತಿಯನ್ನು ಅದ್ದೂರಿಯಾಗಿ ಪ್ರದರ್ಶನ ಮಾಡಿ  ಸಾವಿರಾರು ಜನರ ಮೆಚ್ಚುಗೆ ಪಾತ್ರರಾಗಿದ್ದಾರೆ. ಕಲೆ ಎಂಬುದು ದೇವರ ಆಶೀರ್ವಾದ, ಅದನ್ನು  ಒಳ್ಳೆಯ ರೀತಿಯಲ್ಲಿ ಉಪಯೋಗಿಸಿದಾಗ ಯಶಸ್ವಿ ಎಂಬುದು ಕಟ್ಟಿಟ್ಟ ಬುತ್ತಿ . ತುಳುಕುಟ ಎಂಬ ಸಂಘಟನೆಯಲ್ಲಿ ನಾ ಕಂಡಂತೆ ಮಾನ್ಯ ಸುರೇಶ್ ಸಾಲಿಯಾನ್  ರವರು  ಸುಮಾರು 25 ವರ್ಷಗಳಿಂದ ತನ್ನ ಕಲಾ ಸೇವೆಯನ್ನು ನಿಸ್ವಾರ್ಥವಾಗಿ ಮಾಡುತ್ತಾ ಬಂದಿರುತ್ತಾರೆ. ಅವರ ಚಿಂತನೆ, ಅವರಲ್ಲಿರುವ ಭಾವನೆ, ಅವರಲ್ಲಿರುವ ವಿನಯತೆ, ಅವರಲ್ಲಿರುವ ಸೌಜನ್ಯತೆ ಇಷ್ಟಪಡದವರು ಇಷ್ಟಪಡುವಂತೆ ಇರುತ್ತದೆ ಹಾಗೂ ಯಾವುದೇ ಪ್ರಶಸ್ತಿ ಬಯಸದೆ  ಆತ್ಮಾರ್ಥವಾಗಿ ಮಾಡುತ್ತಿರುವ ಕೆಲಸಗಳು ನಡೆಯುತ್ತಲೇ ಇದೆ. ಸುರೇಶ್ ರವರೇ ನಮಗೆ ಈ ವರ್ಷ  ನಿಮ್ಮಿಂದ ಹೊಸ ಕಾರ್ಯಕ್ರಮಗಳು ಬೇಕು ಎಂದು ಹೇಳಿದಾಗಲೇ ಸಂತೋಷದಿಂದ ಸ್ವೀಕರಿಸಿ ಹೇಳಿದ ದಿನದಿಂದಲೇ  ತನ್ನ ಬು

(ಲೇಖನ -74)ಬಿಲ್ಲವ ಸಂಘ, ಕುವೈಟ್ ದೇಶದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ, ಬೈರಾಸ್ ಭಾಸ್ಕರೆ ಎಂಬ ನಾಟಕವನ್ನು ಪ್ರದರ್ಶನವನ್ನು ಮಾಡಿ,

Image
 ಬಿಲ್ಲವ ಸಂಘ,  ಕುವೈಟ್ ದೇಶದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ, ಬೈರಾಸ್ ಭಾಸ್ಕರೆ ಎಂಬ ನಾಟಕವನ್ನು ಪ್ರದರ್ಶನವನ್ನು ಮಾಡಿ, ಇಂದಿನ ದಿನಗಳಲ್ಲಿ ಹಣಕ್ಕೆ ಮತ್ತು ಗುಣಕ್ಕಿರುವ ಮೌಲ್ಯವನ್ನು ಸಾವಿರಾರು ಜನರಿಗೆ ತಿಳಿಯುವಂತೆ ಮಾಡಿರುವ ಆ ಕ್ಷಣಗಳು, ನಾನು ಬರೆಯಲೇ ಬೇಕೆಂಬ ಆಸಕ್ತಿಯೊಂದಿಗೆ!      ಹಲವಾರು ನಾಟಕಗಳನ್ನು  ನನ್ನ ಜೀವನದಲ್ಲಿ ನೋಡಿರುತ್ತೇನೆ!, ಈ ಹಿಂದೆ ನಾಟಕವೆಂದಾಗ ಹೆಚ್ಚಿನವು ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುತ್ತಾ ಸಮಾಜದಲ್ಲಿ ಉತ್ತಮ ವ್ಯಕ್ತಿಗಳನ್ನು ಸೃಷ್ಟಿ ಮಾಡುತ್ತಿತ್ತು,  ಬರಬರುತ್ತಾ ಕೆಲವರ ನಾಟಕ ಬರವಣಿಗೆಗಳು ಅಶ್ಲೀಲ ಮತ್ತು ಅರ್ಥವಿಲ್ಲದ ಸ್ಥಿತಿಗೆ ತಲುಪಿ ಏನೇನೋ ಅವಾಂತರ ಸೃಷ್ಟಿಸಿ ಸಮಾಜವನ್ನು ಕೆಡಿಸುವ ಮಟ್ಟಿಗೆ ಇಳಿದಿದ್ದು ಇದೆ. ಇಂದಿನ ಮೊಬೈಲ್ ಮತ್ತು ಟಿವಿ ಮಾಧ್ಯಮದ ನಡುವೆ ಅಲ್ಲಲ್ಲಿ ಹಲವಾರು ಸಂಘಟನೆಗಳು ಮಾಡುವ ಒಳ್ಳೆಯ ವಿಚಾರಗಳು ಅಲ್ಪ ಜನರಿಗೆ ತಲುಪಿದರೂ, ನಾಟಕದ ಪ್ರತಿಯೊಂದು ದೃಶ್ಯಗಳು ಮನಮುಟ್ಟುವಂತೆ ಇರುತ್ತದೆ.          ಬೈರಾಸ್ ಭಾಸ್ಕರ, ಮುಗ್ದ ಮನಸಿನ ವ್ಯಕ್ತಿ, ತನ್ನ ಅಣ್ಣನನ್ನು ಬೆಳೆಸಲು ಮತ್ತು ಸಮಾಜದಲ್ಲಿ ಉತ್ತಮವಾದ ವ್ಯಕ್ತಿಯನ್ನಾಗಿ ಮಾಡಲು ತನ್ನ ಜೀವನವನ್ನೇ ಮುಡಿಪಾಗಿಟ್ಟ, ಅಣ್ಣನಿಗೆ ಒಂದೊಳ್ಳೆಯ ಕೆಲಸ ಸಿಕ್ಕಿ ಶ್ರೀಮಂತನಾಗುತ್ತಾನೆ. ಅಣ್ಣ ತಮ್ಮನ ಬಾಂಧವ್ಯ ಉತ್ತಮವಾಗಿರುವ ಸಮಯದಲ್ಲಿ ಅತ್ತಿಗೆಯ ರೂಪದಲ್ಲಿ ಮನೆಗೆ ಸೇರಿ, ಆಸ್ತಿಗಾಗಿ ಸಂಸಾರದ ಸಂಬಂಧವನ್ನು ಹಾಳು ಮಾಡಿ