Posts

Showing posts from July, 2022

ಲೇಖನ (58) ವ್ಯವಸ್ಥೆಗಳನ್ನೇ ಬುಡಮೇಲು ಮಾಡುತ್ತಿರುವ ಭ್ರಷ್ಟ ರಾಜಕಾರಣ ಮತ್ತು ದುಷ್ಟ ರಾಜಕಾರಣ. ಯಾರೇನು ಉಳಿದರೇನು ಅಳಿದರೇನು ನನ್ನ ದ್ಯೇಯ ಕೋಟಿಗಟ್ಟಲೆ ಹಣಮಾಡುವುದು.

Image
 ಲೇಖನ (58) ವ್ಯವಸ್ಥೆಗಳನ್ನೇ ಬುಡಮೇಲು ಮಾಡುತ್ತಿರುವ ಭ್ರಷ್ಟ ರಾಜಕಾರಣ ಮತ್ತು ದುಷ್ಟ ರಾಜಕಾರಣ. ಯಾರೇನು ಉಳಿದರೇನು ಅಳಿದರೇನು ನನ್ನ ದ್ಯೇಯ ಕೋಟಿಗಟ್ಟಲೆ ಹಣಮಾಡುವುದು, ನಾವು ಜನರ ಉದ್ಧಾರಕ್ಕೆ ಇಳಿದರೆ ನಾಳೆ  ಬದುಕಲು ಕಷ್ಟ ಪಡಬೇಕಾದೀತು, ಸಿಕ್ಕಿದ ಅವಕಾಶಗಳನ್ನು ಉಪಯೋಗಿಸಿ ಎಷ್ಟು ಹಣಗಳಿಸಲು ಸಾಧ್ಯವೋ ಅಷ್ಟು ಹಣವನ್ನು ಮಾಡಿಬಿಡಬೇಕು, ಜನರನ್ನು ಸರಿಮಾಡಲು ಯಾರಿಂದಲೂ ಸಾಧ್ಯವಿಲ್ಲ, ಅದು ಮಾಡುವುದು ಕೂಡ ಸರಿಯಲ್ಲ, ಎಷ್ಟು ಸೇವೆ ಮಾಡಿದರೂ ನಮಗೇನು ಲಾಭ? ಸರ್ಕಾರದ ಹಣ ನಾವೇನು ಜನರಿಂದ ನೇರವಾಗಿ ಪಡೆಯುತ್ತಿಲ್ಲ, 10 ಕೋಟಿ ಅನುದಾನವನ್ನು ಬಿಡುಗಡೆಗೊಳಿಸಿ ಲೆಕ್ಕ ಪತ್ರಗಳನ್ನು ಸರಿಯಾಗಿ ಜೋಡಿಸಿ ಒಂದಷ್ಟು ದಾಖಲೆಗಳನ್ನು ಮಾಡಿ ಎಲ್ಲಾ ಕೆಲಸಗಳು ಸರಿಯಾಗಿ ನಡೆದುಹೋಗಿವೆ, ಸರ್ಕಾರದ ಬೊಕ್ಕಸಕ್ಕೆ ಪಂಗನಾಮ ಹಾಕುವ ಪ್ರಸಂಗಗಳು ನಡೆದಿರಬಹುದು ಅಲ್ಲವೇ! ಇಲ್ಲಿ ಸಾಮಾನ್ಯ ಜನರ ಪಾಲೇನು? ಎಲ್ಲರೂ ಅವರವರ ಕೆಲಸಗಳಲ್ಲಿ ಮಗ್ನ,  ರಾಜಕೀಯ ವ್ಯಕ್ತಿಗಳ ಸುದ್ದಿಗೆ ಹೋಗಬಾರದು ಅವರು ನಮ್ಮನ್ನು ಏನಾದರು ಮಾಡಿದರೆ? ನಾಳೆ ನನ್ನ ಹೆಂಡತಿ ಮಕ್ಕಳಿಗೆ ಯಾರು ಗತಿ? ಅವರು ಏನಾದರು ಮಾಡಿ ಸಾಯಲಿ, ನಮ್ಮ ಕೆಲಸವಾಗಬೇಕಾದ್ರೆ ನಾವು  ಕೊಟ್ಟು ಮಾಡಿ ಬಿಡುವ, ಅಥವಾ ನಮ್ಮ ಪರಿಚಯದ ಜನ ಶಾಸಕರು ಅವರಲ್ಲಿ ಹೇಳಿದರೆ ಮಾಡಿಕೊಡುತ್ತಾರೆ, ಅವರುಗಳು ಮಾಡಲಾಗಲಿಲ್ಲವೆಂದರೆ ನಾವು ನಾಳೆ ಓಟು ಹಾಕುವುದು ಬೇಡ, ಮತ್ತೆ ಕಲಿಸೋಣ ಅವರಿಗೆ ಇಂತಹ ಚಿಂತನೆಗಳಲ್ಲಿಯೇ ಸಾಮಾನ್ಯ ಜನರು

ಲೇಖನ (57) ಹೌದ ಅಪ್ಪಾ? ಒಳ್ಳೆಯ ಕೆಲಸಗಳನ್ನು ಮಾಡಿದ್ರೆ ಬೇಗ ದೇವರತ್ರ ಹೋಗ್ತಿವಂತೆ!

Image
ಹೌದ ಅಪ್ಪಾ? ಒಳ್ಳೆಯ ಕೆಲಸಗಳನ್ನು ಮಾಡಿದರೆ ದೇವರು ಬೇಗ ನಮ್ಮನ್ನು ಕರೆಸಿಕೊಳ್ಳುತ್ತಾನಂತೆ! ಇಲ್ಲ ಮಗು, ನಿನಗೆ ಯಾರು ಹೇಳಿದ್ದು? ಮತ್ತೆ ಅಮ್ಮ ಹೇಳಿದ್ರು, ಪುನೀತ್ ರಾಜಕುಮಾರ್ ದೇವರ ಹತ್ತಿರ ಬೇಗ ಹೋಗಿ ಬಿಟ್ಟರು, ಯಾಕೆ ಕೇಳಿದಾಗ ಅವರು ತುಂಬಾ ಒಳ್ಳೆಯ ಕೆಲ್ಸ ಮಾಡುತಿದ್ದರಂತೆ! ಅದಕ್ಕೆ ಬೇಗನೆ ಹೋಗಿಬಿಟ್ಟರಂತೆ. ಈ ಮಾತು ನನ್ನ ಮಗುವಿನ ಬಾಯಲ್ಲಿ ಕೇಳಿದಾಗ ತಬ್ಬಿಬ್ಬಾದೆ. ಏನು ಹೇಳಬೇಕೆಂದು ತೋಚಲಿಲ್ಲ. ಮಕ್ಕಳ ಮನಸ್ಸು ಬಹಳ ಮುಗ್ದ, ಶುದ್ಧ, ಮಕ್ಕಳೆಂದರೆ ದೇವರು, ಕಲ್ಮಶವಿಲ್ಲದೆ ಜೀವಿಸುವ ಸುಂದರವಾದ ಜೀವನ. ಪುನೀತ್ ರಾಜ್ ಕುಮಾರ್ ರವರು ಅಗಲಿದ ಸಮಯದಲ್ಲಿ ಭಾರತೀಯ ಪ್ರವಾಸಿ ಪರಿಷತ್ ಕುವೈಟ್ ಕರ್ನಾಟಕ ಘಟಕ ಶೃದ್ದಂಜಲಿ ಕಾರ್ಯಕ್ರಮ ನೆರವೇರಿಸಿದಾಗ ಹೆಂಡತಿ ಮಕ್ಕಳೊಂದಿಗೆ ಹೋಗಿದ್ದೆ, ಕಾರ್ಯಕ್ರಮದಲ್ಲಿ ಎಲ್ಲರು ಗೌರವ ಸಮರ್ಪಿಸುವಾಗ ಮಕ್ಕಳು ಕೂಡ  ಹೂವನ್ನು ಹಾಕಿ ಅಗಲಿದ ಆತ್ಮಕ್ಕೆ ಶಾಂತಿ ಸಿಗಲೆಂದು ಕೈ ಮುಗಿದು ಬಂದಿದ್ದಾರೆ.  ಈ ಸಂಧರ್ಭದಲ್ಲಿ 2.5ವರುಷದ ನನ್ನ ಮಗಳು, 6 ವರುಷದ ಮಗ ಪುಷ್ಪವನ್ನು ಹಾಕಿ ಇಟ್ಟಿರುವ ಫೋಟೋಗೆ ಮುತ್ತನ್ನು ತಾನಾಗಿಯೇ ಕೊಟ್ಟಳು, ಇಲ್ಲಿ ಗಮನಿಸಿದರೆ ಮನುಷ್ಯ ಮಾಡುವ ಸತ್ಕಾರ್ಯಗಳು ವಿಶೇಷ ಶಕ್ತಿಯನ್ನು ಹೊಂದುತ್ತದೆ, ಆ ಕೆಲಸಕ್ಕೆ ಭೂಮಿಯಲ್ಲಿರುವ ಪ್ರತೀ ಜೀವಿಗಳು ಸ್ಪಂದಿಸುತ್ತವೆ, ತಾನಾಗಿಯೇ ಎಲ್ಲಾ ಒಳಿತಿನ ಜನರೊಂದಿಗೆ ಗೊತ್ತಿಲ್ಲದೇ ಸೇರಿಬಿಡುತ್ತದೆ.          ನನಗೆ ಹೆಚ್ಚಾಗಿ ಚಲನಚಿತ್ರಗಳನ್ನು ನೋ