Posts

Showing posts from February, 2022

(ಲೇಖನ -18)ವಿಷವಾಗುತ್ತಿದೆ ಅತಿಯಾಗಿ ಸೇವಿಸಿದ ಅಮೃತ.....!

Image
ವಿಷವಾಗುತ್ತಿದೆ ಅತಿಯಾಗಿ ಸೇವಿಸಿದ ಅಮೃತ.....!      ಪ್ರತಿಯೊಬ್ಬರ ಜೀವನವು, ಸುಖ ಶಾಂತಿ ನೆಮ್ಮದಿಯಿಂದಿರಬೇಕೆನ್ನುವ ಆಸೆಆಕಾಂಕ್ಷೆಗಳು  ಸಹಜವಾಗಿರುತ್ತದೆ. ಅದಕ್ಕಾಗಿ ಹುಟ್ಟಿದಂದಿನಿಂದ ಬೆಳೆದು ದೊಡ್ಡವರಾಗುವವರೆಗೆ, ಸಂಪ್ರದಾಯ, ಸಂಸ್ಕಾರ, ಆಚಾರ, ವಿಚಾರಗಳನ್ನು ಕ್ರಮಬದ್ಧವಾಗಿ ಪಾಲಿಸಲು ಧರ್ಮಶಾಲೆಗಳು,  ವಿದ್ಯಾಮಂದಿರ, ಕಾಲೇಜು, ಮತ್ತಿತರ ವ್ಯವಸ್ಥೆ ಮನುಜರು ಮಾಡಿಕೊಂಡಿರುತ್ತಾರೆ. ವ್ಯವಸ್ಥೆಯನ್ನು ಮಾಡಿಕೊಂಡು ಒಂದಷ್ಟು ಜನರು ಯಾವುದೇ ತೊಂದರೆಗಳುoಟಾಗದಂತೆ ನೋಡಿಕೊಳ್ಳುತ್ತಾ ಎಲ್ಲವನ್ನೂ ಸರಿದೂಗಿಸಿಕೊಂಡು ಜೀವನ ಮಾಡಿ ಬದುಕಿಗೊಂದು ಅರ್ಥವನ್ನು ಸೃಷ್ಟಿ ಮಾಡುತ್ತಾರೆ.      ಮನೆಯಿಂದ ಕಲಿಯುವ ಪಾಠ, ಶಾಲೆ ಕಾಲೇಜುಗಳಿಂದ ಕಲಿಯುವ ಪಾಠ,  ಆ ವ್ಯಕ್ತಿಯಲ್ಲಿ ಅಡಗಿರುವ ಸಂಪ್ರದಾಯ ಮತ್ತು ಗೌರವವನ್ನು  ತೋರಿಸುತ್ತದೆ. ಆ ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ತಿಳಿಯಲು ಸಾಧ್ಯವಾಗುತ್ತದೆ. ಏನಿದ್ದರೂ ಶಾಲೆ, ಕಾಲೇಜು, ಮನೆ ಇವೆಲ್ಲವೂ ನಮ್ಮ ಭವಿಷ್ಯದ ಅಡಿಗಲ್ಲಾಗಿರುತ್ತದೆ. ಇನ್ನೊಂದು ಅರ್ಥದಲ್ಲಿ ನಮ್ಮ ಮನೆಕಟ್ಟುವ ಪಂಚಾಂಗಕ್ಕೆ ಹಾಕುತ್ತಿರುವ ಗಟ್ಟಿಯಾದ ಅಡಿಪಾಯವಾಗಿರುತ್ತದೆ. ನಾವು ನಮ್ಮ ಸಮಾಜದಲ್ಲಿ ಎಷ್ಟು ಪ್ರಮಾಣದಲ್ಲಿ ಒಳಿತನ್ನು ಬಯಸುತ್ತೇವೆ, ಎಷ್ಟು ಕೆಡುಕನ್ನು ಬಯಸುತ್ತೇವೆ ಎಂಬುದು ತಿಳಿಯುತ್ತದೆ.  ನಾವು ನಮ್ಮ ಜೀವನದಲ್ಲಿ ಯಾವುದು ಅತಿಯಾಗಿ ಹಚ್ಚಿಕೊಳ್ಳುತ್ತೇವೆಯೋ ಅದರ ಅಂತ್ಯ ದುಃಖಕರವಾಗಿರುತ್ತದೆ ಅಥವಾ ನಮಗೆ ಸಿಗುವುದಕ್

(ಲೇಖನ -19)ಮೌನ ಮಾತು - ಪ್ರೀತಿ ಮಾತು

Image
ಮೌನ ಮಾತು - ಪ್ರೀತಿ ಮಾತು ನಮಸ್ಕಾರ, ಮಾತು ಬೆಳ್ಳಿ ಮೌನ ಬಂಗಾರ - ಈ ಗಾದೆ ಮಾತು ಕೇಳಿದ್ದಿರಬಹುದು. ಒಂದೊಂದು ಗಾದೆ ಮಾತುಗಳು ಆಳವಾದ ಅರ್ಥವನ್ನು ಹೊಂದಿರುತ್ತದೆ. ಗಾದೆ ರೂಪದಲ್ಲಿ ಬಂದ ವಾಕ್ಯಗಳು, ಅಥವಾ ನುಡಿಗಳು ಒಬ್ಬ ಯೋಗಿ, ವಿದ್ವಾಂಸ, ಕವಿ, ಅಪಾರ ಜ್ಞಾನವುಳ್ಳ ವ್ಯಕ್ತಿಗಳಿಂದ ಶೃಷ್ಟಿಯಾಗಿರುತ್ತದೆ. ಸಾವಿರಾರು ಪದಗಳನ್ನು ಒಂದು ವಾಕ್ಯದಲ್ಲಿ ಉಲ್ಲೇಖ ಮಾಡುವ ಸಾಮರ್ಥ್ಯ ಕೆಲವೇ ಕೆಲವರಲ್ಲಿ ಬರುತ್ತದೆ.        ಹೌದು, ನಿನ್ನ ಪ್ರತಿಯೊಂದು ಮಾತು, ಮೌನ, ಪ್ರೀತಿ, ಕರುಣೆ ನಿನ್ನ ವ್ಯಕ್ತಿತ್ವ ತಿಳಿಸುತ್ತದೆ. ನಿನ್ನ ಭಾವನೆಗಳು ಕೆಲವೊಮ್ಮೆ ಮಾತಿನ ಮೂಲಕ ಹೊರಹೊಮ್ಮಿದರೆ, ಮೌನ, ಕೋಪದಲ್ಲೂ ವ್ಯಕ್ತವಾಗುತ್ತದೆ.  ನೀನಾಡುವ ಮಾತು ನಿನಗೆ ಖುಷಿಕೊಟ್ಟರೆ ಸಾಲದು, ನಿನ್ನೆದುರಿನ ಜನರಿಗೆ ಬೇಸರ ತರಿಸದಂತೆ ಜಾಗ್ರತೆ ಹಿಸಿಕೊಳ್ಳಬೇಕಾಗುತ್ತದೆ. ಅದರರ್ಥ ಸಮಯಕ್ಕೆ ತಕ್ಕಂತೆ ಮಾತನಾಡಬೇಕೆಂದೇನಿಲ್ಲ, ಅಥವಾ ಎದುರಿಗೆ ನಿಂತವನ ಓಲೈಕೆ ಮಾಡುವ ಮಾತನ್ನಾಡುವ ಅಭ್ಯಾಸ ಮಾಡಿಕೊಳ್ಳಬೇಡ. ನಾವೆಷ್ಟೋ ಸಂಧರ್ಭಗಳನ್ನು ನೋಡುತ್ತೇವೆ, ಮನಸಾರೆ ಮಾತನಾಡುವ, ಅಥವಾ ಕಲ್ಮಶವಿಲ್ಲದೆ ಮಾತನಾಡುವ ಮಾತುಗಳು ಸದಾ ನಗು, ಪ್ರಾಮಾಣಿಕತೆಯಿಂದಿರುತ್ತದೆ , ಸತ್ಯವಾಗಿರುತ್ತದೆ. ಮುಖದ ಭಾವನೆಗಳು ಇನ್ನಷ್ಟು ಮಾತನ್ನು ಮುಂದುವರಿಸಲು ಅನುವು ಮಾಡಿಕೊಡುತ್ತದೆ. ಸದಾ ನಗುತ್ತಾ ಮಾತನಾಡುವ ಜನರು ಹೆಚ್ಚು ನೋವಿನಿಂದ ಇರುತ್ತಾರೆ ಮತ್ತು ಅಂಥವರು ಇನ್ನೊಬ್ಬರಿಗೆ ನೋವನ್ನು ಬಯಸುವ

(ಲೇಖನ -20)ದುಷ್ಟರ ಸಾಮ್ರಾಜ್ಯದಲ್ಲಿ ಶಿಸ್ತಿನ ಸಿಪಾಯಿ!

Image
ದುಷ್ಟರ ಸಾಮ್ರಾಜದಲ್ಲಿ ಶಿಸ್ತಿನ ಸಿಪಾಯಿ, ತಾಳು ಮನವೇ ತಾಳು ನೀನೊಬ್ಬ ಶಿಸ್ತಿನ ಸಿಪಾಯಿ, ನಿನಗೇನು ಕಷ್ಟ ಬಂದರೂ ನಿನ್ನ ಪ್ರಾಮಾಣಿಕತೆಗೆ ಧಕ್ಕೆ ಬರದು, ಯಾರೇನು ಹಂಗಿಸಿ, ದೂಷಿಸಿದರೂ ನಿನ್ನನು ನೀನು ಬಿಟ್ಟು ಕೊಡದೆ ತಾಳ್ಮೆಯಿಂದ ಕೇಳಿ ಇನ್ನಷ್ಟು ಸದೃಢಗೊಳ್ಳುತ್ತ ನಾನೊಬ್ಬ ಶಿಸ್ತಿನ ಸಿಪಾಯಿಯೆಂದು ಧೈರ್ಯದಲಿ ಮುನ್ನುಗ್ಗುಗುವೆ. ಆದರೆ ನೀನೆದುರಿಸುವ ಕಷ್ಟಪಾಡುಗಳೇನು!     ಹೌದು, ನಿನ್ನ ಉದ್ಯೋಗ ನಿನ್ನ ಹೊಟ್ಟೆಪಾಡಿಗಾಗಿ, ಕನಸುಗಳನ್ನು ಹೊತ್ತು ಸದಾ ನಗುಗುತ್ತಾ ಬದುಕಲು ಹವಣಿಸುವ ನಿನಗೆ ಅಲ್ಲಿ ಇಲ್ಲಿ ಸಿಗುವ, ಪರಿಚಯವಾಗುವ, ಹೊಗಳುವ,ತೆಗಳುವ ಜನರ ನಡುವೆ ನಿನ್ನ ಬದುಕ ಬಂಡಿ ಮುನ್ನುಗ್ಗುಲು ಹರಸಾಹಸಪಡುತ್ತದೆ!     ನೀನೊಬ್ಬ, ರೈತನಾದರೂ, ವಾಹನ ಚಾಲಕನಾದರೂ, ಅಡುಗೆಯವನಾದರೂ, ಅಧ್ಯಾಪಕನಾದರೂ, ವೈದ್ಯನಾದರೂ, ತಾಂತ್ರಿಕ ಕೆಲಸ ಮಾಡುವವನಾದರೂ, ಬ್ಯಾಂಕ್ ನೌಕರನಾದರೂ, ವಕೀಲನಾದರೂ, ಪೊಲೀಸಾದರೂ, ನ್ಯಾಯಾಧೀಶ ಅಥವಾ ಯಾವ ಹುದ್ದೆಯಲ್ಲಿದ್ದರೂ ನಿನ್ನಲ್ಲಿ ಅಹಂಕಾರದ ಮನೋಭಾವನೆ ಇದ್ದು, ಅಧಿಕಾರದ ಮದದಲ್ಲಿ ನೀನೆಂದುಕೊಂಡಂತೆ ನಡೆದುಕೊಳ್ಳುತ್ತಾ ನಿನ್ನ ಜೊತೆಯಲಿರುವ ಜನರಿಗೆ ಬೆನ್ನಹಿಂದೆ ಚೂರಿ ಹಾಕಿಬದುಕುವ ಚಾಳಿ, ನಿನಗಿಂತ ಕಡಿಮೆ ಸಾಮರ್ಥ್ಯ ಹೊಂದಿರುವ ಜನರ ಮೇಲೆ ಸವಾರಿ, ನಿನಗಾಗಿ ನಿಸ್ವಾರ್ಥ ಸೇವೆ ಮಾಡುವ ಜನರಮೇಲೂ ನಿನ್ನ ಕೆಂಗಣ್ಣು, ನಿನ್ನ ಸಂಗಡಿಗರನ್ನು ಮೋಸಮಾಡಿ ನಾಶಪಡಿಸುವ ಬುದ್ದಿ, ಇವೆಲ್ಲವೂ ಶಿಸ್ತಿನ ಜೀವನ ನಡೆಸುವ ಜೀವದ ರ