Posts

Showing posts from January, 2022

(ಲೇಖನ =21)ಒಳಗಿನ ಗುಟ್ಟು ಶಿವನೇ ಬಲ್ಲ.......

Image
 ಒಳಗಿನ ಗುಟ್ಟು ಶಿವನೇ ಬಲ್ಲ....            ಈ ಮೇಲಿನ ನುಡಿಮಾತು, ನೀವೆಲ್ಲರೂ ಈ ಹಿಂದೆ ಕೇಳಿರಬಹುದು, ಸಾಮಾನ್ಯವಾಗಿ ದೀರ್ಘಕಾಲದ ಮಾತುಗಳನ್ನಾಡಿ ಕೊನೆಗೆ ಒಳಗಿನ ಗುಟ್ಟು ಶಿವನೇ ಬಲ್ಲ ಎಂದು ಪೂರ್ಣವಿರಾಮ ಹಾಕುವ ಸಂದರ್ಭ, ಅಥವಾ ಸದಾ ಅನ್ಯರ ಬಗ್ಗೆ ಯೋಚಿಸುತ್ತಾ ವ್ಯಂಗ್ಯ ವಾಡಲು  ಉಪಯೋಗಿಸುವ ಈ ವಾಕ್ಯ ಬಹು ಅರ್ಥವನ್ನು ಹೊಂದಿದೆ. ಈ ಪದವು ನಿಮ್ಮ ನಿಮ್ಮ ಯೋಚನೆಗಳಿಗೆ  ಅನುಸಾರವಾಗಿ ಒಂದು ವ್ಯಕ್ತಿಯ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಸೂಚಿಸುವ  ಮಾತಾಗಿ ಕೂಡ ಹೊರಹೊಮ್ಮಬಹುದು.            ನಮ್ಮ ಜೀವನದಲ್ಲಿ ಎಲ್ಲವೂ ಇದ್ದು ಏನೂ ಇಲ್ಲದಂತೆ ಮರುಗುತ್ತಲೇ ಇರುವ  ನಾವು , ಜೀವನಪರ್ಯಂತ  ಆಸೆಗಳ ನಡುವೆ ಸಿಕ್ಕಿಕೊಂಡು ಇರುವುದನ್ನು ಅನುಭವಿಸದೆ ಇಲ್ಲದ್ದನ್ನು ಆಶಿಸುತ್ತಾ ಕೊನೆಯುಸಿರೆಳೆಯುವ ಅಲ್ಪ ಜೀವಿಗಳು.  ನಮ್ಮ ಚಿಂತನೆಗಳು ನಮ್ಮನ್ನು  ಸರಿದಾರಿಯಲ್ಲಿ ಅಥವಾ ಅಡ್ಡ ದಾರಿಯಲ್ಲಿ ಕೊಂಡು ಹೋಗಬಹುದು. ಅವರಿಗಿರುವ ಐಶ್ವರ್ಯ ನಮಗಿಲ್ಲ ವೆಂದು ಕೊರಗುವುದು, ಅವರಿಗಿರುವ ಮನೆ ನಮ್ಮಲ್ಲಿ ಇಲ್ಲವೆಂದು ಕೊರಗುವುದು, ಅವರ ಮನೆಯ ಸಂತೋಷ ನಮ್ಮ ಮನೆಯಲ್ಲಿ ಇಲ್ಲವೆಂದು ಕೊರಗುವುದು, ಅವರು ಮಾಡುತ್ತಿರುವ ಕೆಲಸ ನನ್ನಲ್ಲಿ ಆಗುತ್ತಿಲ್ಲವೆಂದು ಕೊರಗುವುದು, ದೇಹದ ಪ್ರತಿಯೊಂದು ಭಾಗಗಳು ಸರಿಯಾಗಿ ಕೆಲಸ ಮಾಡುತ್ತಿದ್ದಾಗಲೇ ಇಲ್ಲ ಇಲ್ಲಗಳ ಹಿಂದೆ ಬೆನ್ನತ್ತಿ ಹೋಗುತ್ತಿರುವ ನಾವು ನೀವುಗಳು! ಬದುಕಿನಲ್ಲಿ ತೃಪ್ತಿ ಇಲ್ಲದೇ ಮಣ್ಣಾಗಿ ಹೋಗುತ್ತಾ, ನಿರಂತರ

(ಲೇಖನ -23)ಟಿಪ್ ಟಾಪ್ ಮೋಸಗಾರರು

Image
ಟಿಪ್ ಟಾಪ್ ಮೋಸಗಾರ  ಕೆಲವರು ಬದುಕಲು ಶ್ರಮಿಸಿದರೆ , ಕೆಲವರು ಅನ್ಯರ ಬದುಕನ್ನು ನಾಶಪಡಿಸಲು ಶ್ರಮಿಸುತ್ತಿರುತ್ತಾರೆ. ಪ್ರತಿಯೊಬ್ಬನ ಜೀವನದಲ್ಲೂ ನಮ್ಮ ಈ ಸಮಾಜದಲ್ಲಿ ಒಳ್ಳೆಯವರು ಮತ್ತು ಕೆಟ್ಟವರು ಆಗಾಗ ನಮಗೆ ಸಿಗುತ್ತಿರುತ್ತಾರೆ. ಅದರಲ್ಲಿ  ಸಜ್ಜನರು  ನಮ್ಮ ಜೀವನದಲ್ಲಿ ನೆಮ್ಮದಿಯನ್ನು ತಂದರೆ, ದುರ್ಜನರು ನೆಮ್ಮದಿಯನ್ನು ಕೆಡಿಸುತ್ತಾರೆ. ಈ ಪ್ರಪಂಚದಲ್ಲಿ ಕೆಲವರ ಜನ್ಮ  ಉನ್ನತಿಗಾಗಿ ಇರುವುದಾದರೆ, ಕೆಲವರ ಜನ್ಮ  ರಕ್ತ ಹೀರುವ ತಿಗಣೆಗಳಂತೆ. ಇಂದಿನ ದಿನಗಳಲ್ಲಿ ಯಾರನ್ನು ಯಾವ ರೀತಿ ನಂಬಬೇಕು ಯಾವ ರೀತಿ ನಂಬಬಾರದು ಎಂಬುದನ್ನು ಕೂಡ ನಿರ್ಧರಿಸಲು ಅಸಾಧ್ಯ. ಆದರೆ ನಿನ್ನ ಜೀವನದಲ್ಲಿ ಏನೇ ಕಷ್ಟಕಾರ್ಪಣ್ಯಗಳು ಬಂದರೂ  ಮೋಸ ವಂಚನೆ ಮಾಡಬೇಡ, ಸತ್ಯ ಧರ್ಮವನ್ನು ಬಿಟ್ಟು  ಅಧರ್ಮವನ್ನು ಮಾಡಬೇಡ  ಎಂಬ ಕಿವಿಮಾತು ನನ್ನ ತಂದೆ  ಇಂದಿಗೂ ಹೇಳುತ್ತಿದ್ದಾರೆ. ಸತ್ಯವಂತನಿಗೆ ಕಷ್ಟಗಳು ಜಾಸ್ತಿ  ಆದರೆ ಕೊನೆಗೆ ಜಯಿಸುವುದು ಸತ್ಯ ಮಾತ್ರವೆಂದು ಅದೆಷ್ಟೋ ಬಾರಿ ನನ್ನಲ್ಲಿ ಹೇಳಿರುವ ಮಾತು ಇಂದು ನನ್ನ ಜೀವನದಲ್ಲಿ ಧೈರ್ಯದಿಂದ ಬದುಕಲು ಮುಖ್ಯ ಕಾರಣವಾಗಿದೆ.      ತಂದೆ-ತಾಯಿಗಳು  ಮಕ್ಕಳ ಜೀವನ ಸುಖಮಯವಾಗಿರಬೇಕು,ಉತ್ತಮವಾದ ವ್ಯಕ್ತಿ ಆಗಬೇಕು, ಜೀವನದಲ್ಲಿ ಏನಾದರೂ ಸಾಧನೆ ಮಾಡುವ ಮಕ್ಕಳು ನಮ್ಮದಾಗಲಿ ಎನ್ನುತ್ತಾ ಸಂಪೂರ್ಣ ಜೀವನವನ್ನು ತನ್ನ ಮಕ್ಕಳಿಗಾಗಿ ಸರ್ವಸ್ವ ತ್ಯಾಗಮಡುತ್ತ  ಬದುಕುತಿರುತ್ತಾರೆ. ಬೆಳೆಯುವ ಮಕ್ಕಳಿಗಾಗಿ ಗುಣ, ನಡತೆ, ಶಿಸ್ತು

(ಲೇಖನ -22)ಸ್ವಯಂ- ದಿಗ್ಬಂದನ (ಜೀವನ ಪಾಠ )

Image
Self Quarantine - ಸ್ವಯಂ ದಿಗ್ಬಂದನ   ಜೀವನವೇ ಹಾಗೆ ಯಾವ ಸಮಯದಲ್ಲಿ ಏನಾಗುತ್ತದೆ ಎಂಬುದು ನಮಗೆ ತಿಳಿಯದು, ಇವಾಗ  ಸರಿ ಇದ್ದರೆ, ಮರುಗಳಿಗೆಯಲ್ಲಿ ಏನಾಗುತ್ತದೆ ಎಂಬುದಷ್ಟು ತಿಳಿಯದ ಎಲ್ಲಾ ಮನುಷ್ಯರು, ಪ್ರಾಣಿಗಳು ಹಾಗೂ ಸಕಲ ಜೀವರಾಶಿಗಳು ಆದರೆ ನಮ್ಮ ಜೀವನದಲ್ಲಿ ನಡೆಯುವ ಎಲ್ಲಾ ಘಟನೆಗಳಲ್ಲಿ ಒಂದಲ್ಲ ಒಂದು ರೀತಿಯ ಪಾಠಗಳನ್ನು ನಾವು ಕಲಿಯುತ್ತಲೇ ಇರುತ್ತೇವೆ. ಹೊಸ ಹೊಸ ಅಧ್ಯಾಯಗಳು, ಸಂದರ್ಭಗಳು, ಘಟನೆಗಳು ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಕೆಲವೊಂದು ಘಟನೆಗಳು ಒಪ್ಪಿಕೊಳ್ಳಲು ಅಸಾಧ್ಯ ಮತ್ತು ಜೀವನವನ್ನೇ ಸಂಪೂರ್ಣವಾಗಿ ನಾಶ ಪಡಿಸುವಂತಹ ಮಟ್ಟಕ್ಕೆ ತಲುಪಿಸಿ ಬಿಡುತ್ತದೆ. ಆದರೆ ನಮಗರಿವಿಲ್ಲದಂತೆ  ಎಲ್ಲಾ ಸಂದರ್ಭಗಳನ್ನು ಎದುರಿಸುವ ಶಕ್ತಿ ತಾನಾಗಿಯೇ ಹುಟ್ಟಿಕೊಳ್ಳುವುದು. ಬಂದಂತಹ ತೊಂದರೆಗಳನ್ನು ನಿಭಾಯಿಸುವ ಶಕ್ತಿ ವೃದ್ಧಿಸಿ ಕೊಳ್ಳುತ್ತೇವೆ ಅಥವಾ ಇದು ನಮ್ಮ ಭಾಗ್ಯವೆಂದು ದೇವರ ಬಳಿ ಮೊರೆಹೋಗುತ್ತೇವೆ. ದೇವರೇ ನನಗ್ಯಾಕೆ ಈ ಶಿಕ್ಷೆಯನ್ನು ಕೊಟ್ಟಿರುವೆ ಎಂದು ಪ್ರಶ್ನಿಸುತ್ತ  ಕಣ್ಣೀರು ಹಾಕಿ ಕೊನೆಗೆ ನಮ್ಮನ್ನು ನಾವು ಹತೋಟಿಗೆ ತಂದುಕೊಳ್ಳಲು ಪ್ರಯತ್ನಪಡುತ್ತೇವೆ.  ಒಂದೆರಡು ವರ್ಷದಿಂದ, ಜಗತ್ತನ್ನೇ ತತ್ತರಿಸಿ ಬಿಟ್ಟಿರುವ ಮಹಾಮಾರಿ ಕೊರೊನ ವೈರಸ್ ಎಂಬ ಹೆಸರೊಂದಿಗೆ, ಲಕ್ಷಲಕ್ಷ ಜನರ ಜೀವವನ್ನು ಬಲಿ ತೆಗೆದುಕೊಂಡು ಇನ್ನೂ ರೂಪಾಂತರದ ಹೆಸರೊಂದಿಗೆ ತನ್ನ ಆಟವನ್ನು ಮುಂದುವರಿಸುತ್ತಿರುವ ಒಮಿಕ್ರೋನ್ ವೈರಸ್ ಮನುಷ್ಯನ  ಉ

(ಲೇಖನ -24)ರಾಜಕೀಯ ಮತ್ತು ಭ್ರಷ್ಟಾಚಾರ

Image
ರಾಜಕೀಯ ಮತ್ತು ಭ್ರಷ್ಟಾಚಾರ ಒಂದು ನಾಣ್ಯದ ಎರಡು ಮುಖಗಳೇ? , ಈ ಮಾತು ಎಲ್ಲರ ಮನಸಲ್ಲಿ ನಿಜವಾಗ್ಲೂ ತೋರಬಹುದು. ರಾಜಕೀಯವೆಂಬುದು ಪಿಡುಗಲ್ಲ, ಭ್ರಷ್ಟಾಚಾರವೆಂಬುದು ಕೂಡ ಪಿಡುಗಲ್ಲ. ಆದರೆ 90% ವಿವೇಕವಿಲ್ಲದಿರುವ ರಾಜಕೀಯ ನಾಯಕರು ಮತ್ತು ಕೈತುಂಬಾ ಸಂಬಳವಿದ್ದರೂ ಗಿಂಬಳ ಎಂಬ ಹೆಸರಲ್ಲಿ ಸಾರ್ವಜನಿಕರನ್ನು ಪೀಡಿಸುವ  ಸರಕಾರಿ ಉದ್ಯೋಗಿಗಳು ಹಣಕ್ಕಾಗಿ ಕೈ ಚಾಚಿ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಒಂದು ವ್ಯವಸ್ಥಿತ ಪಂಗಡ . ಇವೆಲ್ಲಾ ನೋಡುವಾಗ ನಿಜವಾಗಲೂ ಪ್ರತಿಯೊಂದು ಕ್ಷೇತ್ರದಲ್ಲಿ ಅಭಿವೃದ್ಧಿ ಅನ್ನೋದು ಮರೀಚಿಕೆಯಾಗುತ್ತಿದೆ. ರಾಜಕೀಯ ಮತ್ತು ಭ್ರಷ್ಟಾಚಾರ ಕಬ್ಬಿಣದ ಸಂಕೋಲೆಯಂತೆ, ಅವೆರಡು  ಒಂದಾಗಿ ಕೆಲಸ ಮಾಡಿದಾಗ ಸಾಮಾನ್ಯ ಜನರ ಪರಿಸ್ಥಿತಿ ಊಹಿಸಲು ಅಸಾಧ್ಯ. ನನ್ನ ಕಣ್ಣಾರೆ ಕಂಡ ಅದೆಷ್ಟು ನಿದರ್ಶನ, ಅದು ನೀವು ಕೂಡ ಅನುಭವಿಸಿರಬಹುದು. ಇಂದೂ ಅನುಭವಿಸುತ್ತಿರಬಹುದು!!       ಒಂದೊಂದುಸಲ ನನಗನಿಸುತ್ತದೆ ನಿಜವಾಗಲೂ ನಮ್ಮ ವ್ಯವಸ್ಥೆಗಳ ಅವಶ್ಯಕತೆ ಸಾಮಾನ್ಯ ಜನರಿಗೆ ಉಪಯೋಗವಿದೆಯಾ? ನ್ಯಾಯಾಂಗ, ಕಾರ್ಯಂಗ, ಶಾಸಕಾಂಗದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ರಾಜಕೀಯ ಮತ್ತು ಭ್ರಷ್ಟಾಚಾರ ತನ್ನ ಪೌರುಷ ತೋರುತ್ತಲಿದೆ. ಅದಕ್ಕೆ ಕಾರಣ ನಮ್ಮಲಿರುವ ವಿದ್ಯಾವಂತರೆಂದು ಕರೆದುಕೊಳ್ಳುತ್ತಿರುವ ಅದೆಷ್ಟು ಅಧಿಕಾರಿಗಳು, ಅದೆಷ್ಟು ರಾಜಕೀಯ ನಾಯಕರು ದೇಶ, ಊರು, ವ್ಯವಸ್ಥೆ ಇದರ ಬಗ್ಗೆ ಅಲ್ಪವೂ ಕಾಳಜಿವಹಿಸದೆ ತನ್ನಿಷ್ಟ ನೆರವೇರಿಸಲು ಎಲ್ಲಾ ವ್ಯವಸ್ಥೆಯಲ