Posts

Showing posts from March, 2023

(ಲೇಖನ -82) ಅಧಿಕಾರಿಗಳು ಭ್ರಷ್ಟರಾದರೆ ವ್ಯವಸ್ಥೆಗಳು ಭ್ರಷ್ಟವಾಗಿರುತ್ತವೆ

Image
 (ಲೇಖನ -82)  ಅಧಿಕಾರಿಗಳು ಭ್ರಷ್ಟರಾದರೆ  ವ್ಯವಸ್ಥೆಗಳು ಭ್ರಷ್ಟವಾಗಿರುತ್ತವೆ, ಗ್ರಾಮ ಪಂಚಾಯತ್ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳ ಅದೀನದಲ್ಲಿ  ಕೆಲಸ ಮಾಡುತ್ತಿರುವ  ಕೆಲವು ಸರ್ಕಾರಿ ಕೆಲಸಗಾರರು ಬ್ರಷ್ಟಾಚಾರವನ್ನು ದೊಡ್ಡಮಟ್ಟದಲ್ಲಿ ನಡೆಯುವುದಕ್ಕೆ ತಮ್ಮ ತಮ್ಮ ಕೊಡುಗೆಯನ್ನು ನೀಡುತ್ತಾ ಬಂದು ಬರುತ್ತಿರುವುದು ಬಹಳ ದುಃಖಕರವಾದ ಸಂಗತಿ. ಭ್ರಷ್ಟಾಚಾರ ಎಂಬುದನ್ನು ಯಾರಿಂದಲೂ ತೆಗೆದುಹಾಕಲು ಸಾಧ್ಯವಿಲ್ಲವೆಂಬ ಭಾವನೆಯೊಂದಿಗೆ  ತನ್ನ ಸುತ್ತಲೂ ನಡೆಯುತ್ತಿರುವ ಅವ್ಯವಹಾರಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಪಾಲಿಗೆ ಬಂದದ್ದು ಪಂಚಾಮೃತವೆನ್ನುತ್ತಾ ತನ್ನನ್ನು ತಾನು ಭ್ರಷ್ಟಾಚಾರಕ್ಕೆ ತಳ್ಳಿಕೊಂಡು ಐಷಾರಾಮದ ಜೀವನ ಮಾಡಲು ಪ್ರಯತ್ನ ಪಡುತ್ತಿರುವ ಅದೆಷ್ಟು ಸರ್ಕಾರಿ ನೌಕರರು. ಒಂದು ಆಫೀಸಿನಲ್ಲಿ  ಸರಾಸರಿ 25 ಜನ ಕೆಲಸಗಾರರಿದ್ದರೆ ಅದರಲ್ಲಿ 20 ಜನ ತನ್ನನ್ನು ತಾನು ಭ್ರಷ್ಟಾಚಾರದಲ್ಲಿ ತೊಡಗಿಸಿಕೊಳ್ಳುವ ಅಧಿಕಾರಿ. ಕೇವಲ ಕೆಲವೇ ಕೆಲವು ಮಂದಿ ತಾನು ಮಾಡುತ್ತಿರುವ ನೌಕರಿಗೆ ಬೆಲೆ ಕೊಟ್ಟು ನ್ಯಾಯಯುತವಾಗಿ ಬದುಕನ್ನು ಸಾಗಿಸುತ್ತಾರೆ.               ಹಣ ಕಂಡರೆ  ಹೆಣವು ಬಾಯಿ ಬಿಡುತ್ತದೆ ಎಂಬ ಗಾದೆಯಂತೆ  ಹೆಣವಾಗಿ ಅಧಿಕಾರಿಗಳು ಬಾಯ್ ಬಿಡುತ್ತಾ ಭಾರತದ ಸಂಪೂರ್ಣ ವ್ಯವಸ್ಥೆಗೆ  ಮುಳುವಾಗಿ ಜೀವಿಸುತ್ತಿದ್ದಾರೆ. ರಾಜಕಾರಣಿಗಳು, ಐಎಎಸ್, ಐಪಿಎಸ್, ಬ್ಯಾಂಕ್ ವಲಯ, ಪಂಚಾಯತ್ ವ್ಯವಸ್ಥೆಗಳಲ್ಲಿ

(ಲೇಖನ -81) ನಾಳೆ ಎಂಬುದು ಕೊನೆಯ ದಿನವಾದರೆ? ಇಂದು ಆಸೆಗೆ ಕೊನೆಯಿರಬಹುದೇ?

Image
 (ಲೇಖನ -81) ನಾಳೆ ಎಂಬುದು ಕೊನೆಯ ದಿನವಾದರೆ? ಇಂದು ಆಸೆಗೆ ಕೊನೆಯಿರಬಹುದೇ? ಬಯಕೆಗಳು ಸಾವಿರಾರು, ಕನುಸುಗಳು ಸಾವಿರಾರು, ಸಮಸ್ಯೆಗಳು ಸಾವಿರಾರು, ದುಃಖ ದುಮ್ಮಾನಗಳು ನಮ್ಮ ಜೀವನದಲ್ಲಿ ವಿವಿಧ ರೂಪದಲ್ಲಿ ಬರುತ್ತಿರುತ್ತವೆ, ಬಂದು ಹೋಗುತ್ತಿರುತ್ತವೆ. ಯಾವ ಸಂದರ್ಭದಲ್ಲಿ ಯಾವ ವಿಚಾರಗಳು  ನಮ್ಮನ್ನು  ಖುಷಿಗೊಳಿಸುತ್ತದೋ, ಯಾವ ವಿಚಾರಗಳು ನಮ್ಮನ್ನು ಸಂತೋಷಗೊಳಿಸುತ್ತದೆ ಅನ್ನೋದನ್ನ ಒಮ್ಮೊಮ್ಮೆ ನಮಗೆ ಊಹಿಸಲಸಾಧ್ಯ. ನೀವು ಬಯಸಿದ್ದು ಸಿಗದೇ ಇದ್ದಾಗ ಬೇಸರಪಟ್ಟು ಅಲ್ಪ ಸಮಯದ ನಂತರ ತನ್ನನ್ನು ತಾನೇ ಸಮಾಧಾನಪಡಿಸಿಕೊಂಡು ಮುಂದುವರೆಯುವ ಮನಸ್ಥಿತಿ ಕೆಲವರಿಗೆ ಆದರೆ, ಬೇಸರವನ್ನು ತಡೆದುಕೊಳ್ಳಲಾಗದೆ ತನ್ನನ್ನು ತಾನೇ ಶಪಿಸಿಕೊಳ್ಳುವ ಕೆಲವರು, ಸದಾ ಚಂಚಲತೆಯಿಂದ ಕೂಡಿರುವ ಮನಸಿಗೆ ಎಲ್ಲಾ ಬೇಕುಗಳ ನಡುವೆ ತನ್ನ ಹತೋಟಿಯನ್ನು ಕಳೆದುಕೊಳ್ಳುವ ಸ್ಥಿತಿ. ಮಕ್ಕಳಿಗೆ ತಂದೆ ತಾಯಿಯ ಮಮತೆಯ ಕೊರತೆ, ಹೆಂಡತಿಗೆ ಗಂಡನ ಪ್ರೀತಿಯ ಕೊರತೆ, ಗಂಡನಿಗೆ ಹೆಂಡತಿಯ ಆರೈಕೆಯ ಕೊರತೆ, ಗೆಳೆಯ ಗೆಳತಿಯರಿಗೆ ಆಗಾಗ ಬಿಸಿ ತಟ್ಟುವ ವಿಶ್ವಾಸದ ಕೊರತೆ. ಹಾಗೆಯೇ ಸಂಬಂಧಿಗಳಿಗೆ ನನ್ನನ್ನು ಯಾರೂ ಗಮನಿಸುತ್ತಿಲ್ಲ ಎಂಬ ಕೊರತೆ. ಈ ಕೊರತೆಯ ಪಟ್ಟಿಯಲ್ಲಿ ಹೆಚ್ಚಾಗಿ ಎಲ್ಲರೂ ಸಮಾನರು. ಏಕೆಂದರೆ ಒಂದಲ್ಲ ಒಂದು ರೀತಿಯಲ್ಲಿ ಎಲ್ಲಾ ಬಾಂಧವ್ಯದಲ್ಲಿ ಅತಿಯಾದ ನಿರೀಕ್ಷೆಯನ್ನು ಇಟ್ಟು ಬದುಕುವ ನಾವೆಲ್ಲರೂ ಒಂದೊಂದು ಸಲ ವಿಪರೀತ ಮನೋವೇದನೆಗೆ ಒಳಗಾಗಿ ಕೊರ ಗುತ್ತಾ ಬದುಕುತ್ತಿರು